ಮೇ1ರಿಂದ ಹೊಸ ರೇಷನ್ ಕಾರ್ಡ್​ಗೆ ಅರ್ಜಿ


ಬೆಂಗಳೂರು: ರಾಜ್ಯಾದ್ಯಂತ ಹೊಸ ಪಡಿತರ ಚೀಟಿಗೆ ಮೇ 1 ರಿಂದ ಸರ್ಕಾರ ಅರ್ಜಿ ಆಹ್ವಾನಿಸಲಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಮೇಲ್ಮನೆಗೆ ಈ ಕುರಿತು ಮಾಹಿತಿ ನೀಡಿದರು. ರಾಜ್ಯದಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿಗಾಗಿ 39,23,607 ಅರ್ಜಿ ಸ್ವೀಕರಿಸಲಾಗಿದೆ. ಇದರಲ್ಲಿ 18,87,870 ಪಡಿತರ ಚೀಟಿ ವಿತರಿಸಲಾಗಿದೆ. ಬಾಕಿ ಇರುವ 5,05,340 ಅರ್ಜಿದಾರರು ಮಾತ್ರ ತಮ್ಮ ಕುಟುಂಬದ ಅರ್ಹ ಸದಸ್ಯರ ಎಪಿಕ್ ಸಲ್ಲಿಸಿದ್ದು ಈ ಅರ್ಜಿಗಳನ್ನು ಅದ್ಯತೆ ಮೇಲೆ ವಿತರಿಸಲಾಗುವುದು ಎಂದರು.

ಅಧಿವೇಶನದ ಪ್ರಮುಖಾಂಶಗಳು

* ಸರ್ಕಾರಿ ಆಸ್ಪತೆಗಳಲ್ಲಿ ಪರಿಶಿಷ್ಟ ರೋಗಿಗಳಿಗೆ

ಚಿಕಿತ್ಸಾ ವಿವರ ಫಲಕ ಅಳವಡಿಕೆ

* ದರಪಟ್ಟಿ ಪ್ರಕಟಿಸಲು ಖಾಸಗಿ ಆಸ್ಪತ್ರೆಗಳಿಗೆ

3 ತಿಂಗಳ ಗಡುವು: ಸಚಿವ ಖಾದರ್

* ಕುಣಬಿ ಜನಾಂಗ ಎಸ್​ಟಿ ಪಟ್ಟಿ ಸೇರ್ಪಡೆಗೆ

ವರದಿ ಬಂದ ನಂತರ ಕ್ರಮ: ಸಚಿವ ಆಂಜನೇಯ

* ಕೊಳವೆ ಬಾವಿಗಳಿಗೆ 6 ತಿಂಗಳಲ್ಲಿ ವಿದ್ಯುತ್ ಸಂಪರ್ಕ

* ರಾಜ್ಯದ ಎಲ್ಲ ನಗರಗಳಲ್ಲೂ ನಗರಸಾರಿಗೆ

* ಹಳೆ ಭೂ ಸ್ವಾಧೀನ ಕಾಯ್ದೆ ಪ್ರಕಾರವೇ ಪರಿಹಾರ

* ಹನ್ನೊಂದು ಹೊಸ ಉಪ ವಿಭಾಗಾಧಿಕಾರಿ ಕಚೇರಿಗಳ ಆರಂಭಕ್ಕೆ ನಿರ್ಧಾರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023