Karnatakada CHIRAPUNJI - BANAKAL, Moodigere Tq, Chikkamagalur District (1743 NM rain)
ಕರ್ನಾಟಕದ ಚಿರಾಪುಂಜಿ ಹುಲಿಕಲ್ ಅಲ್ಲ, ಬಣಕಲ್
ಉದಯವಾಣಿ, Jul 05, 2015, 3:45 AM IST
image: http://www.udayavani.com/sites/default/files/images/go.png
ಬೆಂಗಳೂರು: ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜೂನ್ನಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲಾಗಿದೆ.
ಜೂನ್ 1ರಿಂದ 30ರವರೆಗೆ ಬಣಕಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ 1,743 ಮಿ.ಮೀ. ಮಳೆಯಾಗಿದೆ. ಇಲ್ಲಿನ ವಾಡಿಕೆ ಮಳೆ 632.1 ಮಿ.ಮೀಟರ್. ಅಂದರೆ ಇಲ್ಲಿ ವಾಡಿಕೆಗಿಂತ ಹೆಚ್ಚು-ಕಡಿಮೆ ಮೂರುಪಟ್ಟು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬಣಕಲ್ನಲ್ಲಿ 705 ಮಿ.ಮೀ. ಮಳೆ ಬಿದ್ದಿತ್ತು ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ತಿಳಿಸಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾಗುತ್ತಿದ್ದ ಕಾರಣಕ್ಕೆ ಆಗುಂಬೆಯನ್ನು ಕರ್ನಾಟಕದ ಚಿರಾಪುಂಜಿ' ಎಂದು ಕರೆಯಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಗುಂಬೆಯನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ಹೋಬಳಿಯ ಹುಲಿಕಲ್ ಹಿಂದಿಕ್ಕಿತ್ತು. ಈಗ ಆ ಹುಲಿಕಲ್ ಅನ್ನು ಬಣಕಲ್ ಹಿಂದೂಡಿದೆ.
ಹುಲಿಕಲ್ನಲ್ಲಿ ಜೂನ್ ಅಂತ್ಯಕ್ಕೆ 1,577 ಮಿ.ಮೀ. ಮಳೆಯಾಗಿದೆ. ಅಲ್ಲಿನ ವಾಡಿಕೆ ಮಳೆ 740 ಮಿ.ಮೀಟರ್. 2014ರ ಜೂನ್ನಲ್ಲಿ ಈ ಗ್ರಾಮದಲ್ಲಿ 875.1 ಮಿ.ಮೀ. ಮಳೆಯಾಗಿತ್ತು ಎಂದು ಕೆಎಸ್ಎನ್ಡಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ಮಲೆನಾಡಿನಲ್ಲಿ ಮುಂಗಾರು ಚುರುಕಾಗಿದೆ. ಅದರಲ್ಲೂ ಜೂನ್ 18ರಿಂದ 25ರ ಅವಧಿಯಲ್ಲಿ ಬಣಕಲ್ನಲ್ಲಿ ಭಾರಿ ಪ್ರಮಾಣದ ಮಳೆ ಸುರಿದಿದೆ. ಇದೇ ಗ್ರಾಮದಲ್ಲಿ ಯಾಕೆ ಇಷ್ಟು ಮಳೆ ಎಂದು ನಿಖರವಾಗಿ ಹೇಳುವುದು ಕಷ್ಟ. ಮಲೆನಾಡಿನಲ್ಲೇ ಇವೆರಡೂ ಗ್ರಾಮಗಳು ಬರುತ್ತವೆ. ಮಳೆ ಕೂಡ ಆ ಭಾಗದಲ್ಲಿ ಹೆಚ್ಚು-ಕಡಿಮೆ ಒಂದೇ ಪ್ರಮಾಣದಲ್ಲಿ ಸುರಿಯುತ್ತದೆ. ಕೆಲವೊಮ್ಮೆ ಅದರಲ್ಲಿ ವ್ಯತ್ಯಾಸ ಆಗಬಹುದಷ್ಟೇ ಎಂದು ಹೆಸರು ಹೇಳಲಿಚ್ಛಿಸದ ಕೆಎಸ್ಎನ್ಡಿಎಂಸಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
Comments
Post a Comment