ಖಾಸಗಿ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ಶೇ.25ರಷ್ಟು ರಿಯಾಯಿತಿ

ಚಿಕ್ಕಮಗಳೂರು, ಆ.11- ಖಾಸಗಿ ಬಸ್ಸುಗಳಲ್ಲಿ
ಹಿರಿಯ ನಾಗರಿಕರಿಗೆ ಶೇ.25ರಷ್ಟು ಪ್ರಯಾಣ
ದರದಲ್ಲಿ ರಿಯಾಯಿತಿ ನೀಡಲು ಖಾಸಗಿ
ಬಸ್ಗಳ ಮಾಲೀಕರು ಒಪ್ಪಿಗೆ
ನೀಡಿದ್ದಾರೆಂದು ಜಿಲ್ಲಾ ನಿವೃತ್ತ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ
ಎಂ.ಎಸ್. ನಂಜುಂಡಸ್ವಾಮಿ
ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ
ಇತ್ತೀಚೆಗೆ ನಡೆದ ಜಿಲ್ಲಾ ಸಾರಿಗೆ
ಸಭೆಯಲ್ಲಿ ಚರ್ಚಿಸಿ ಹಿರಿಯ ನಾಗರಿಕರಿಗೆ
ರಿಯಾಯಿತಿ ನೀಡಲು ನಿರ್ಧರಸಿದ್ದು, ಈ
ಬಗ್ಗೆ ನಿವೃತ್ತ ನೌಕರರ ಸಂಘ ಮಾಡಿದ ಮನವಿಗೆ
ಮನ್ನಣೆ ದೊರೆತಂತಾಗಿದೆ
ಎಂದರು.
ಖಾಸಗಿ ಬಸ್ ಮಾಲೀಕರ ಸಂಘದ
ಅಧ್ಯಕ್ಷ ಜಯಪ್ರಕಾಶ್, ಅನ್ನಪೂರ್ಣೇಶ್ವರಿ ಬಸ್
ಮಾಲೀಕ ಕೆ.ಕೆ.ಬಾಲಕೃಷ್ಣ, ಡಿ.ಎನ್.ಮಹೇಶ್
ಸೇರಿದಂತೆ ಹಲವರು ಈ ಬಗ್ಗೆ
ಆ.15ರಿಂದಲೆ ವ್ಯವಸ್ಥೆ ಜಾರಿಗೆ ಬರಲು
ಕ್ರಮ ಕೈಗೊಳ್ಳಲಾಗುವುದೆಂದು
ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಿರಿಯ
ನಾಗರಿಕರು ತಮಗೆ ನೀಡಿರುವ ಗುರುತಿನ
ಚೀಟಿಯನ್ನು ಬಸ್ಸಿನ ನಿರ್ವಾಹಕರಿಗೆ ತೋರಿಸಿ
ರಿಯಾಯಿತಿ ಪಡೆಯಬಹುದಾಗಿದ್ದು, ಇದೇ
ರೀತಿಯಲ್ಲಿ ಅಂಗವಿಕಲರಿಗೂ
ರಿಯಾಯಿತಿ ನೀಡಲಾಗುತ್ತಿದೆ ಎಂದು
ತಿಳಿಸಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023