ಸುಪ್ರೀಂ ಕೋರ್ಟ್ ತೀರ್ಪು: "ಮತದಾರರ ಚೀಟಿ-ಆಧಾರ್ ಸಂಖ್ಯೆ ಜೋಡಣೆ ಯೋಜನೆ "ಕೈಬಿಟ್ಟ ಚುನಾವಣಾ ಆಯೋಗ
ನವದೆಹಲಿ (ಪಿಟಿಐ): ಸುಪ್ರೀಂಕೋರ್ಟ್
ಇತ್ತೀಚೆಗೆ ನೀಡಿದ
ತೀರ್ಪಿನಿಂದ, ಮತದಾರರ ಗುರುತಿನ
ಚೀಟಿ ಜತೆಗೆ ಆಧಾರ್
ಸಂಖ್ಯೆಯನ್ನು ಜೋಡಿಸುವ ಯೋಜನೆಯನ್ನು
ಚುನಾವಣಾ ಆಯೋಗ ಕೈಬಿಟ್ಟಿದೆ.
ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳು,
ಸಾಮಾಜಿಕ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್
ಕಡ್ಡಾಯವಲ್ಲ ಎಂದು
ಸುಪ್ರೀಂಕೋರ್ಟ್ ಇತ್ತೀಚೆಗೆ
ಹೇಳಿತ್ತು. ಇದು ಚುನಾವಣಾ ಆಯೋಗ
ಹಮ್ಮಿಕೊಂಡಿದ್ದ 'ಆಧಾರ್–
ಮತದಾರರ ಗುರುತಿನ ಚೀಟಿ ಜೋಡಣೆ'
ಯೋಜನೆಗೆ ತಡೆಯೊಡ್ಡಿದೆ.
ಮತದಾರರ ಗುರುತಿನ ಚೀಟಿ ಜತೆಗೆ ಆಧಾರ್
ಸಂಖ್ಯೆಯನ್ನು ಜೋಡಿಸುವುದರಿಂದ,
ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ
ಹೆಚ್ಚು ಬಾರಿ ಒಂದೇ ವ್ಯಕ್ತಿಯ ಹೆಸರು
ಸೇರ್ಪಡೆಗೊಳ್ಳುವುದನ್ನು
ತಡೆಯಬಹುದು, ಇಡೀ ಮತದಾರರ
ಪಟ್ಟಿಯನ್ನೇ ಪರಿಷ್ಕರಿಸಬಹುದು ಎಂದು
ಆಯೋಗ ಹೇಳಿತ್ತು. ಆದರೆ, ಸುಪ್ರೀಂ
ತೀರ್ಪಿನ ಹಿನ್ನೆಲೆಯಲ್ಲಿ ಈ
ಯೋಜನೆಯನ್ನು ಕೈಬಿಡಲೇಬೇಕಾದ ಅನಿವಾರ್ಯತೆ ಈಗ
ಆಯೋಗದ ಮುಂದಿದೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ
'ರಾಷ್ಟ್ರೀಯ ಮತದಾರರ ಪಟ್ಟಿ
ಪರಿಷ್ಕರಣೆ ಮತ್ತು ಖಾತರಿಗೊಳಿಸುವಿಕೆ
ಯೋಜನೆ (ಎನ್ಇಆರ್ಪಿಎಪಿ) ಕೈಬಿಡುವಂತೆ,
ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಮುಖ್ಯ
ಚುನಾವಣಾ ಅಧಿಕಾರಿಗಳಿಗೆ ಸುತ್ತೋಲೆಯನ್ನೂ
ಹೊರಡಿಸಿದೆ. ಮುಂದಿನ ಆದೇಶ
ಬಂದ ನಂತರವೇ ಯೋಜನೆ
ಕೈಗೆತ್ತಿಕೊಳ್ಳಿ ಎಂದು
ಸ್ಪಷ್ಟಪಡಿಸಿದೆ.
Comments
Post a Comment