Posts

Showing posts from June, 2015

SDA/FDA EXAM PATTERN 2015

Image

Test

ಎನ್ಬಿಎ ಟೂರ್ನಿಯಲ್ಲಿ ಆಡಿದ ಭಾರತದ ಮೊದಲ ಆಟಗಾರ ಸತ್ನಾಮಸಿಂಗ್

Image
ನ್ಯೂಯಾರ್ಕ್/ಮುಂಬೈ/ನವದೆಹಲಿ (ಪಿಟಿಐ/ ಐಎಎನ್ಎಸ್): ಯುವ ಬ್ಯಾಸ್ಕೆಟ್ಬಾಲ್ ಆಟಗಾರ ಸತ್ನಾಮ್ ಸಿಂಗ್ ಭಾಮರ ಶುಕ್ರವಾರ ಐತಿಹಾಸಿಕ ಸಾಧನೆಗೆ ಕಾರಣರಾಗಿದ್ದಾರೆ. ನ್ಯಾಷನಲ್ ಬ್ಯಾಸ್ಕೆಟ್ಬಾಲ್ (ಎನ್ಬಿಎ) ಟೂರ್ನಿಯಲ್ಲಿ ಆಡಿದ ಭಾರತದ ಮೊದಲ ಆಟಗಾರ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ. 19 ವರ್ಷದ ಸತ್ನಾಮ್ ಪಂಜಾಬ್ನವರು. ಈ ಆಟಗಾರ ಏಳು ಅಡಿ ಎರಡು ಇಂಚು ಎತ್ತರವಾಗಿದ್ದಾರೆ. ಮುಂದಿನ ಋತುವಿನಲ್ಲಿ ನಡೆಯಲಿರುವ ಎನ್ಬಿಎ ಟೂರ್ನಿಯಲ್ಲಿ 60 ಯುವ ಆಟಗಾರರೂ ಕಣಕ್ಕಿಳಿಯಲಿದ್ದಾರೆ. ಸತ್ನಾಮ್ ಎನ್ಬಿಎ ಲೀಗ್ನಲ್ಲಿ ದಲ್ಲಾಸ್ ಮಾವರಿಕ್ಸ್ ತಂಡದಲ್ಲಿ ಆಡಲಿದ್ದಾರೆ. ಭಾರತದ ಆಟಗಾರ ಇತ್ತೀಚೆಗೆ ಐಎಂಜಿ ಅಕಾಡೆಮಿ ತಂಡದ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶ್ರೇಷ್ಠ ಟೂರ್ನಿಗಳಲ್ಲಿ ಒಂದಾದ ಎನ್ಬಿಎಯಲ್ಲಿ ಆಡುವ ಮೂಲಕ ಸತ್ನಾಮ್ ಭಾರತದ ಬ್ಯಾಸ್ಕೆಟ್ಬಾಲ್ ರಂಗದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಭರವಸೆ ಹೆಚ್ಚಿದೆ: ಮಹತ್ವದ ಟೂರ್ನಿಯಲ್ಲಿ ಆಡಲು ಅವಕಾಶ ಸಿಕ್ಕಿರುವುದಕ್ಕೆ ಸತ್ನಾಮ್ ಹರ್ಷ ವ್ಯಕ್ತಪಡಿಸಿದ್ದಾರಲ್ಲದೇ ಈ ಬೆಳವಣಿಗೆ ಭಾರತದಲ್ಲಿ ಹೊಸ ಭರವಸೆ ಮೂಡಿಸಿದೆ. 'ನನಗಾಗಿರುವಸಂತೋಷ ಅಷ್ಟಿಷ್ಟಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ. ಎನ್ಬಿಎ ಟೂರ್ನಿಯಲ್ಲಿ ಆಡುವ ಮೊದಲು ಸತ್ನಾಮ್ ಫ್ಲೋರಿಡಾಕ್ಕೆ ತೆರಳಿ ತರಬೇತಿ ಪಡೆದಿದ್ದರು. 'ಎನ್ಬಿಎನಲ್ಲಿ ಆಡುತ್ತಿರುವುದಕ್ಕೆ ತುಂಬ

Guidelines for Primary and Secondary School Teachers Transfers through computerised Counselling for the year 2015-16.

Image
Share via ImgCreator

ಕೆನಡಾದ ಟೊರೊಂಟೊದಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ

ಕೆನಡಾದ ಟೊರೊಂಟೊದಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ (PSGadyal Teacher Vijayapur ) ಹೃದಯವಾಹಿನಿ ಮಂಗಳೂರು, ಕನ್ನಡ ಕಸ್ತೂರಿ ರೇಡಿಯೊ ಟೊರೊಂಟೊ ಮತ್ತು ಬಿ.ವಿ.ನಾಗ್ ಕಮ್ಯುನಿಕೇಷನ್ ಇಂಕ್. ಟೊರೆಂಟೊದ ಸಂಯುಕ್ತವಾಗಿ 2 ದಿನಗಳ 11ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಟೊರೊಂಟೊ ಒಂಟಾರಿಯೋದಲ್ಲಿರುವ ಗ್ರಾಂಡ್‌ ವಿಕ್ಟೋರಿಯನ್ ಕನ್ವೆಷನ್ ಸೆಂಟರ್‌ನಲ್ಲಿ ಜೂನ್ 27 ಮತ್ತು 28ರಂದು ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕವಿಗೋಷ್ಠಿ, ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಜರುಗಲಿವೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಯಕ್ಷಗಾನ ಮುಂತಾದ ಕಲೆಗಳು ಪ್ರದರ್ಶನಗೊಳ್ಳಲಿವೆ. World Kannada Culture Conference in Toronto, Canada ಈ ಹಿಂದೆ 2004 ಮತ್ತು 2012ರಲ್ಲಿ ಅಬುಧಾಬಿ, 2005 ಮತ್ತು 2010ರಲ್ಲಿ ಸಿಂಗಪುರ, 2006 ಮತ್ತು 2011ರಲ್ಲಿ ಬಹರೇನ್, 2007ರಲ್ಲಿ ಕುವೈಟ್, 2008ರಲ್ಲಿ ಕತಾರ್, 2009ರಲ್ಲಿ ದುಬೈ, ಮತ್ತು 2013ರಲ್ಲಿ ಆಫ್ರಿಕಾದ ಕೀನ್ಯಾದಲ್ಲಿ ಅನುಕ್ರಮವಾಗಿ 10 ಸಮ್ಮೇಳನಗಳು ನಡೆದಿವೆ. ಸಮ್ಮೇಳನ ನಡೆಯಲಿರುವ ಸಭಾಂಗಣದ ಹೊರವಲಯದಲ್ಲಿ ವಸ್ತು ಪ್ರದರ್ಶನ, ಪುಸ್ತಕಮೇಳವನ್ನು ಏರ್ಪಡಿಸಲಾಗುವುದು. ಕೆನಡಾದಲ್ಲಿ 1000ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಕೆನಡಾದ ಅಮೆರಿಕಾ ಗಡಿ ಪ್ರದೇಶ

ಮೊದಲ ಆಧುನಿಕ ಅಂಗನವಾಡಿ ಸೋನೆಪತ್, ಹರಿಯಾಣದಲ್ಲಿ ಆರಂಭ ೨೪/೬/೧೫:

ದೇಶದ ಮೊದಲ ಆಧುನಿಕ ಅಂಗನವಾಡಿ ಕೇಂದ್ರಕ್ಕೆ ಇಲ್ಲಿನ ಹಸನ್ಪುರ ಗ್ರಾಮದಲ್ಲಿ ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಬುಧವಾರ ಚಾಲನೆ ನೀಡಿದರು. ದೇಶದ ವಿವಿಧೆಡೆ ಇದೇ ರೀತಿಯ 4,000 ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಖಾಸಗಿ ಗಣಿಗಾರಿಕೆ ಕಂಪೆನಿ ವೇದಾಂತದ ಸಹಯೋಗದೊಂದಿಗೆ ಸುಮಾರು 12 ಲಕ್ಷ ವೆಚ್ಚದಲ್ಲಿ ಸೋನೆಪತ್ನಲ್ಲಿ ಈ ಅಂಗನವಾಡಿ ಕೇಂದ್ರವನ್ನು ಕಟ್ಟಲಾಗಿದೆ. ಅಂಗನವಾಡಿ ಕೇಂದ್ರಗಳ ಸುಧಾರಣೆ ಉದ್ದೇಶವನ್ನೊಳಗೊಂಡ ಕೇಂದ್ರ ಸರ್ಕಾರದ ನಂದ ಘರ್ ಯೋಜನೆಯಡಿ ಇದನ್ನು ನಿರ್ಮಿಸಲಾಗಿದೆ. ಈ ಅಂಗನವಾಡಿ ಕೇಂದ್ರದಲ್ಲಿ ಆಧುನಿಕ ಸೌಲಭ್ಯದೊಂದಿಗೆ ಪ್ರತಿದಿನ ಐವತ್ತು ಮಕ್ಕಳಿಗೆ ವಸತಿ, ಊಟ ಒದಗಿಸಲಾಗುವುದು. 'ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಹಾಗೂ ತಾಯಂದಿರ ಸಮುದಾಯ ಕೇಂದ್ರವನ್ನಾಗಿ ಮಾಡಬೇಕು ಎಂಬುದು ನಮ್ಮ ಉದ್ದೇಶ. ಈ ಕೇಂದ್ರಗಳಿಗೆ ಸೌರಶಕ್ತಿ ವ್ಯವಸ್ಥೆ, ಟಿ.ವಿಯನ್ನು ಒದಗಿಸಲಾಗುತ್ತದೆ' ಎಂದು ಮೇನಕಾ ಗಾಂಧಿ ತಿಳಿಸಿದ್ದಾರೆ.

 ತುರ್ತು ಪರಿಸ್ಥಿತಿ 1975ರ ಕರಾಳ ನೆನಪು...  25 ಜೂನ್ 1975– 21 ಮಾರ್ಚ್ 1977

ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಎಂದೂ ಮಾಸಲಾರದ ಕಪ್ಪುಚುಕ್ಕೆ.1975ರ ಜೂನ್ 25ರ ಮಧ್ಯರಾತ್ರಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆಣತಿಯಂತೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ನಿರ್ಧಾರಕ್ಕೆ ಸಹಿ ಹಾಕಿದಾಗ ದೇಶ ಕ್ಷಣಮಾತ್ರದಲ್ಲಿ ಜನತಂತ್ರ ವ್ಯವಸ್ಥೆಯಿಂದ ದೂರ ಸರಿದು 'ಸರ್ವಾಧಿಕಾರಿ' ಮಾದರಿಯ ಆಡಳಿತಕ್ಕೆ ಒಳಪಟ್ಟಿತು. ತುರ್ತು ಪರಿಸ್ಥಿತಿಯ ನಾಲ್ಕು ದಶಕಗಳ ನಂತರ ಅದಕ್ಕೆ ಕಾರಣವಾದ ಸನ್ನಿವೇಶಗಳನ್ನು ಹುಡುಕುತ್ತ ಹೋದರೆ 73–75ರ ಸಮಯದಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಕಾಡುತ್ತಿದ್ದ ಅಭದ್ರತೆ ಕಣ್ಣಿಗೆ ಬೀಳುತ್ತದೆ. 1973–74ರಲ್ಲಿ ಗುಜರಾತ್ನಲ್ಲಿ ನಡೆದ ವಿದ್ಯಾರ್ಥಿ ಚಳವಳಿ, 1975ರ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು, 1974ರ ಮಾರ್ಚ್– ಏಪ್ರಿಲ್ನಲ್ಲಿ ಬಿಹಾರ ಸರ್ಕಾರದ ವಿರುದ್ಧ 'ಬಿಹಾರ ಛಾತ್ರ ಸಂಘರ್ಷ ಸಮಿತಿ' ಜಯಪ್ರಕಾಶ್ ನಾರಾಯಣ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಚಳವಳಿ, ಆನಂತರ ನಡೆದ ರೈಲ್ವೆ ನೌಕರರ ರಾಷ್ಟ್ರವ್ಯಾಪಿ ಮುಷ್ಕರ ಎಲ್ಲವೂ ಇಂದಿರಾ ಪ್ರಭಾವವನ್ನು ಕುಗ್ಗಿಸಿತ್ತು. 1971ರ ಚುನಾವಣೆಯಲ್ಲಿ ರಾಯಬರೇಲಿಯಲ್ಲಿ ಇಂದಿರಾ ವಿರುದ್ಧ ಸ್ಪರ್ಧಿಸಿ ಸೋತಿದ್ದ ರಾಜ್ ನಾರಾಯಣ್, ಇಂದಿರಾ ವಾಮಮಾರ್ಗದಿಂದ ಗೆದ್ದ

☝ 2015-16ನೇ ಸಾಲಿನ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸುವ ಕುರಿತ ಸುತ್ತೋಲೆ (2 pages)

Image

ಕೇರಳ ಆಯುರ್ವೇದ ಉತ್ಪನ್ನಗಳ ರಾಯಭಾರಿಯಾಗಿ ಸ್ಟೆಫ್ಫಿ ಗ್ರಾಫ್ ನೇಮಕ

Image
ತಿರುವನಂತಪುರ: ಟೆನ್ನಿಸ್ ದಂತಕತೆ ಸ್ಟೆಫ್ಪಿಗ್ರಾಫ್, ಕೇರಳ ಆಯುರ್ವೇದ ಉತ್ಪನ್ನಗಳ  ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಒಮನ್ ಚಾಂಡಿ ಹೇಳಿದ್ದಾರೆ, ಕೇರಳ ಭೇಟಿ ಯೋಜನೆಯಡಿ ಕೇರಳ ಪ್ರವಾಸೋದ್ಯಮ ಇಲಾಖೆ ಸ್ಟೆಫ್ಪಿಗ್ರಾಫ್ ಅವರನ್ನು ಆಯುರ್ವೇದ ಉತ್ಪನ್ನಗಳ ರಾಯಭಾರಿಯನ್ನಾಗಿ ನೇಮಕ ಮಾಡಿದ್ದು, ಶೀಘ್ರವೇ ಅವರಿಂದ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಗುವುದು ಎಂದು ಚಾಂಡಿ ತಿಳಿಸಿದ್ದಾರೆ. ಹೀಗಾಗಲೇ ಪ್ರವಾಸೋದ್ಯಮ ಇಲಾಖೆ ಜರ್ಮನಿ ಆಟಗಾರ್ತಿ ಸ್ಟೆಫ್ಪಿಗ್ರಾಫ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಒಪ್ಪಂದದ ಬಗ್ಗೆ ಅವರಿಗೆ ವಿವರಿಸಲಾಗಿದೆ ಎಂದು ಹೇಳಿದರು. ಟೆನ್ನಿಸ್ ನಲ್ಲಿ 22 ಗ್ರಾಂಡ್ ಸ್ಲಾಮ್ ಗಳನ್ನು ಪಡೆದುಕೊಂಡಿರುವ 46 ವರ್ಷದ ಸ್ಟೆಫ್ಪಿಗ್ರಾಫ್1999 ರಲ್ಲಿ ಟೆನ್ನಿಸ್ ನಿಂದ ನಿವೃತ್ತಿಯಾದರು, ನಂತರ 2001 ಅಕ್ಟೋಬರ್ ನಲ್ಲಿ ವಿಶ್ವದ ನಂಬರ್.1 ಟೆನ್ನಿಸ್ ಆಟಗಾರ ಆಂಡ್ರೆ ಆಗಾಸೆ ಅವರನ್ನು ವಿವಾಹವಾಗಿದ್ದಾರೆ.

ಕನ್ನಡದ ವಿಜ್ಞಾನಿ ಬಾಳಿಗಾಗೆ ರಷ್ಯಾ ದೇಶದ ಪ್ರತಿಷ್ಠಿತ ‘ಗ್ಲೋಬಲ್ ಎನರ್ಜಿ’ ಪ್ರಶಸ್ತಿ

Image
Wed , 06 / 24 / 2015 - 01 :00 ರಷ್ಯಾ ದೇಶದ ಪ್ರತಿಷ್ಠಿತ 'ಗ್ಲೋಬಲ್ ಎನರ್ಜಿ' ಪ್ರಶಸ್ತಿ ಸೇಂಟ್ ಪೀಟರ್ಸ್ಬರ್ಗ್ ( ಐಎಎನ್ಎಸ್ ) : ಅಮೆರಿಕದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ವಿಜ್ಞಾನಿ ಬಿ . ಜಯಂತ್ ಬಾಳಿಗಾ ಅವರು ರಷ್ಯಾ ದೇಶವು ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ಪಡೆದಿದ್ದಾರೆ . ರಷ್ಯಾ ನೀಡುವ ಈ ಪ್ರಶಸ್ತಿಯನ್ನು ನೊಬೆಲ್ ಗೌರವಕ್ಕೆ ಸರಿಸಮಾನವಾಗಿ ಪರಿಗಣಿಸಲಾಗುತ್ತದೆ . ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ಬೆಳೆದ ಬಾಳಿಗಾ ಅವರಿಗೆ ಪ್ರತಿಷ್ಠಿತ 'ಗ್ಲೋಬಲ್ ಎನರ್ಜಿ' ಪ್ರಶಸ್ತಿ ನೀಡಿ ಗೌರವಿಸಿದೆ . ಬಾಳಿಗಾ ಜತೆ ಜಪಾನ್ ಮೂಲದ ವಿಜ್ಞಾನಿ ಶುಜಿ ನಕಮುರ ಅವರಿಗೂ ಈ ಗೌರವ ದೊರೆತಿದೆ . ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರ ಇಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರಿಗೂ ಪ್ರಶಸ್ತಿ ಪ್ರದಾನ ಮಾಡಿದರು . ನಾರ್ತ್ ಕೆರೊಲಿನಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಬಾಳಿಗಾ ಅವರು 2011ರಲ್ಲಿ ಅಮೆರಿಕ ಸರ್ಕಾರದ ರಾಷ್ಟ್ರೀಯ ವಿಜ್ಞಾನ ಪದಕ ಪಡೆದಿದ್ದರು . ಈ ಪದಕವನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪ್ರಧಾನ ಮಾಡಿದ್ದರು . 'ಸೆಮಿಕಾಂಡಕ್ಟರ್ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣರಾದ ಎಂಟು ಹೀರೊಗಳಲ್ಲಿ ಒಬ್ಬರು

'ಟೈಟಾನಿಕ್' ಸಂಗೀತ ನಿರ್ದೇಶಕ ಜೇಮ್ಸ್ ಹಾರ್ನರ್ ಇನ್ನಿಲ್ಲ.:

Image
ಲಾಸ್ ಏಂಜಲೀಸ್: 'ಟೈಟಾನಿಕ್', 'ಅವತಾರ್' ಮುಂತಾದ ಚಿತ್ರಗಳ ಸಂಗೀತ ನಿರ್ದೇಶಕ, ಎರಡು ಆಸ್ಕರ್ ಪ್ರಶಸ್ತಿ ಪುರಸ್ಕೃತ ಪ್ರಖ್ಯಾತ ಗೀತೆ ರಚನೆಕಾರ ಜೇಮ್ಸ್ ಹಾರ್ನರ್ (61) ವಿಮಾನ ಅಪಘಾತವೊಂದರಲ್ಲಿ ಮೃತರಾಗಿದ್ದಾರೆ. ಸಂತಾ ಬರ್ಬರಾದ ಹಳ್ಳಿಯೊಂದರಲ್ಲಿ ಸಣ್ಣ ವಿಮಾನವೊಂದನ್ನು ಹಾರಿಸುತ್ತಿದ್ದಾಗ, ಅಪಘಾತಕ್ಕೀಡಾಗಿ ಹಾರ್ನರ್ ಸೋಮವಾರ ಮೃತಪಟ್ಟಿದ್ದಾರೆ. ಈ ವಿಷಯವನ್ನು ಅವರ ಸಹಾಯಕರಾದ ಸಿಲ್ವಿಯಾ ಪಜ್ರಿಸ್ಜಾ ಫೇಸ್ಬುಕ್ನಲ್ಲಿ ದೃಢಪಡಿಸಿದ್ದಾರೆ. ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಟೈಟಾನಿಕ್' ಚಿತ್ರದ ಸಂಗೀತ ಹಾಗೂ ಅದೇ ಚಿತ್ರದ ಸೆಲಿನ್ ಡಿಯೋನ್ ಹಾಡಿದ 'ಮೈ ಹಾರ್ಟ್ ವಿಲ್ ಗೋ ಆನ್' ಹಾಡಿನ ಸಾಹಿತ್ಯಕ್ಕಾಗಿ ಹಾರ್ನರ್ ಆಸ್ಕರ್ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿಯನ್ನು ಪ್ರಸಿದ್ಧ ಗೀತ ರಚನೆಕಾರ ವಿಲ್ ಜೆನ್ನಿಂಗ್ಸ್ ಅವರೊಂದಿಗೆ ಹಂಚಿಕೊಂಡಿದ್ದರು. 'ಬ್ಯೂಟಿಫುಲ್ ಮೈಂಡ್', 'ಫೀಲ್ಡ್ ಆಫ್ ಡ್ರೀಮ್ಸ್', 'ಅಪೋಲೋ 13', 'ಬ್ರೇವ್ ಹಾರ್ಟ್' ಸೇರಿದಂತೆ ಅನೇಕ ಪ್ರಸಿದ್ಧ ಚಿತ್ರಗಳಿಗೆ ಅವರು ಗೀತೆ ರಚಿಸಿದ್ದರು.

ಮದರ್ ತೆರೆಸಾ ಉತ್ತರಾಧಿಕಾರಿ ಸಿಸ್ಟರ್ ನಿರ್ಮಲಾ ವಿಧಿವಶ

Image
Tue, 06 /23 /2015 - 12 :15 2 ಕೋಲ್ಕತ್ತ ( ಪಿಟಿಐ ) : ಮದರ್ ತೆರೆಸಾ ಅವರ ಉತ್ತರಾಧಿಕಾರಿ ಮತ್ತು ಮಿಷನರಿಸ್ ಆಫ್ ಚಾರಿಟಿ ಸಂಸ್ಥೆಯ ಮುಖ್ಯಸ್ಥೆಯಾಗಿದ್ದ ಸಿಸ್ಟರ್ ನಿರ್ಮಲಾ ಜೋಶಿ (81 ) ಅವರು ಮಂಗಳವಾರ ಬೆಳಗಿನ ಜಾವ ಇಲ್ಲಿ ನಿಧನರಾದರು. ರಾಂಚಿಯಲ್ಲಿ ಹಿಂದೂ ಕುಟುಂಬವೊಂದರಲ್ಲಿ ಹುಟ್ಟಿದ ನಿರ್ಮಲಾ ಅವರು ನಂತರ ಕ್ರೈಸ್ಥ ಧರ್ಮಕ್ಕೆ ಮತಾಂತರಗೊಂಡಿದ್ದರು . ಸ್ನಾತಕೋತ್ತರ ಪದವಿ ಪಡೆದ ನಂತರ ಅವರು ಮಿಷನರಿಸ್ ಆಫ್ ಚಾರಿಟಿ ಸಂಸ್ಥೆ ಸೇರಿ ಕ್ರೈಸ್ಥ ಸನ್ಯಾಸಿನಿಯಾಗಿದ್ದರು. ಮದರ್ ತೆರೆಸಾ ಅವರು ನಿಧನರಾಗುವ ಆರು ತಿಂಗಳು ಮೊದಲು ಅಂದರೆ 1997 ರಲ್ಲಿ ಸಿಸ್ಟರ್ ನಿರ್ಮಲಾ ಅವರು ಮಿಷನರಿಸ್ ಆಫ್ ಚಾರಿಟಿ ಸಂಸ್ಥೆಯ ಸುಪಿರಿಯರ್ ಜನರಲ್ ಆಗಿ ನೇಮಕಗೊಂಡಿದ್ದರು . ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಬೆಳಿಗ್ಗೆ ನಿಧನರಾದರು. ಮೃತರ ಅಂತ್ಯಕ್ರಿಯೆ ಮೊರೊದಲ್ಲಿರುವ ಮದರ್ ಹೋಂನಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ . 'ಸಿಸ್ಟರ್ ನಿರ್ಮಲಾ ಅವರ ಬದುಕು ಬಡವರು ಮತ್ತು ದುರ್ಬಲರ ಸೇವೆಗೆ ಮೀಸಲಾಗಿತ್ತು . ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ .

After 53 years, Nathu La pass opens for Yatra today | 53 ವರ್ಷಗಳ ನಂತರ ನಾಥು-ಲಾ ಮಾರ್ಗ ಸಂಚಾರಕ್ಕೆ ಮುಕ್ತ

Image
ಗಾಂಗ್ ಟಾಕ್(ಸಿಕ್ಕಿಂ): ಕೈಲಾಸ ಮಾನಸರೋವರ ಯಾತ್ರೆ ಆರಂಭವಾಗಿದ್ದು, 53 ವರ್ಷಗಳ ನಂತರ ನತು ಲ ಮಾರ್ಗವನ್ನು ಈ ವರ್ಷ ಯಾತ್ರಿಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಚೀನಾದ ಭಾರತೀಯ ರಾಯಭಾರಿ ಲಿ ಯುಚೆಂಗ್ ಅವರು ಯಾತ್ರಿಗರ ಮೊದಲ ತಂಡವನ್ನು ನಾಳೆ ಬೆಳಗ್ಗೆ ಟಿಬೆಟ್ ನಲ್ಲಿ ಬರಮಾಡಿಕೊಂಡು ನತು ಲಾ ಮಾರ್ಗವನ್ನು ತೆರವುಗೊಳಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಮ್ಲಿಂಗ್ ಅವರನ್ನು ಭೇಟಿ ಮಾಡಿ ಮಾನಸ ಸರೋವರ ಯಾತ್ರೆಯ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದರು. ಯುಚೆಂಗ್ ಅವರು, ನತು ಲಾ ಮಾರ್ಗದ ಮೂಲಕ ಟಿಬೆಟ್ ಗೆ ಇತರ ನಾಲ್ಕು ಮಂದಿ ಅಧಿಕಾರಿಗಳೊಂದಿಗೆ ತೆರಳಿದ್ದು, ನಾಳೆ ಬೆಳಗ್ಗೆ 39 ಯಾತ್ರಿಗರ ಮೊದಲ ತಂಡವನ್ನು ಬರಮಾಡಿಕೊಳ್ಳಲಿದ್ದಾರೆ. ತಂಡದಲ್ಲಿ ಬಿಜೆಪಿ ಸಂಸದ ತರುಣ್ ವಿಜಯ್ ಮತ್ತು ಅವರ ಪತ್ನಿಯೂ ಇದ್ದಾರೆ. ನತು ಲ ಹಿಮಾಲಯ ಪರ್ವತದಲ್ಲಿರುವ ಹಾದಿಯಾಗಿದ್ದು, ಇದು ಭಾರತದ ಸಿಕ್ಕಿಂ ರಾಜ್ಯ ಮತ್ತು ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶವನ್ನು ಸಂಪರ್ಕಿಸುತ್ತದೆ. ಭಾರತ-ಚೀನಾ ಗಡಿಭಾಗವಾದ ನತು ಲ ಮಾರ್ಗವನ್ನು 1962ರಲ್ಲಿ ನಡೆದ ಭಾರತ-ಚೀನಾ ಯುದ್ಧದ ನಂತರ ಮುಚ್ಚಲಾಗಿತ್ತು. ಇದೀಗ 53 ವರ್ಷಗಳ ಬಳಿಕ ಈ ಮಾರ್ಗವನ್ನು ಕೈಲಾಸ ಯಾತ್ರೆಗೆ ತೆರವುಗೊಳಿಸಲಾಗುತ್ತಿದೆ. ಇದುವರೆಗೆ ಉತ್ತರಾಖಂಡ್ ನ ಲಿಪುಲೇಖ್ ಪಾಸ್ ಮೂಲಕ ಕೈಲಾಸ

ಗೌರವ ಧನ ಹೆಚ್ಚಳ ಮಾಡಿ ಆದೇಶ: ಅಂಗನವಾಡಿ ಕಾರ್ಯಕರ್ತೆಯರಿಗೆ 500 ರೂ, ಸಹಾಯಕಿಯರಿಗೆ 250 ರೂ.

Image

China Launches World's First Electric Plane- BX1E

ಮೊದಲ ವಿದ್ಯುತ್ಚಾಲಿತ ವಿಮಾನ ಬೀಜಿಂಗ್(ಪಿಟಿಐ): ಪ್ರಪಂಚದ ಮೊದಲ ವಿದ್ಯುತ್ಚಾಲಿತ ವಿಮಾನವನ್ನು ಚೀನಾ ನಿರ್ಮಿಸಿದ್ದು, ಇದು ವಾಯುಯಾನಕ್ಕೆ ಯೋಗ್ಯ ಎಂಬ ಪ್ರಮಾಣ ಪತ್ರವನ್ನು ಪಡೆದಿದೆ. ಬಿಎಕ್ಸ್1ಇ ವಿಮಾನವು 14.5 ಮೀಟರ್ ಅಗಲದ ರೆಕ್ಕೆಗಳನ್ನು ಹೊಂದಿದ್ದು ಗರಿಷ್ಠ 230 ಕೆಜಿ ಭಾರ ಹೊರುವ ಸಾಮರ್ಥ್ಯವನ್ನು ಹೊಂದಿದೆ. 3 ಸಾವಿರ ಮೀಟರ್ ಎತ್ತರಕ್ಕೆ ಹಾರಬಲ್ಲ ವಿಮಾನ ಇದಾಗಿದೆ. ಎರಡು ಗಂಟೆಯಲ್ಲಿ ವಿಮಾನವು ಪೂರ್ಣವಾಗಿ ಚಾರ್ಜ್ ಆಗುತ್ತದೆ, ಹಾಗೂ ಒಂದು ಗಂಟೆಗೆ 45 ನಿಮಿಷದಿಂದ ಗರಿಷ್ಠ 160 ಕಿ.ಮೀ ವೇಗದಲ್ಲಿ ವಿಮಾನ ಹಾರಾಟ ನಡೆಸುತ್ತದೆ. ಈ ವಿಮಾನಕ್ಕೆ ಶೆನಿಯಾಂಗ್ ಏರೋಸ್ಪೇಸ್ ವಿಶ್ವವಿದ್ಯಾಲಯ ಹಾಗೂ ಲಿಯೊನಿಂಗ್ ಜನರಲ್ ಏವಿಯೇಷನ್ ಅಕಾಡೆಮಿ ವಿನ್ಯಾಸವನ್ನು ರೂಪಿಸಿದೆ. ವಿಮಾನ ಚಾಲಕ ತರಬೇತಿ, ಪ್ರವಾಸ, ರಕ್ಷಣಾ ಕಾರ್ಯಾಚರಣೆಗಳಲ್ಲಿ ಈ ವಿಮಾನವನ್ನು ಬಳಸಬಹುದಾಗಿದೆ.

CNR Rao gets Japan's highest civilian award - Order of the Rising Sun

ಸಿ.ಎನ್.ಆರ್ ರಾವ್ಗೆ ಜಪಾನ್ನ ಅತ್ಯುನ್ನತ ಗೌರವ ನವದೆಹಲಿ (ಪಿಟಿಐ): ಖ್ಯಾತ ವಿಜ್ಞಾನಿ ಸಿ.ಎನ್.ಆರ್ ರಾವ್ ಅವರಿಗೆ ಜಪಾನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವಣ ಕೊಡುಕೊಳುವಿಕೆಗೆ ನೀಡಿದ ಕೊಡುಗೆಗೆ ಈ ಗೌರವ ನೀಡಲಾಗಿದೆ. 'ಆರ್ಡರ್ ಆಫ್ ರೈಸಿಂಗ್ ಸನ್, ಗೋಲ್ಡ್ ಎಂಡ್ ಸಿಲ್ವರ್' ಪ್ರಶಸ್ತಿ ಪ್ರಮಾಣಪತ್ರವನ್ನು ಭಾರತಕ್ಕೆ ಜಪಾನ್ನ ರಾಯಭಾರಿ ತಕೇಶಿ ಯಾಗಿ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು. 'ಭಾರತ ಮತ್ತು ಜಪಾನ್ನ ಭವಿಷ್ಯ ಪರಸ್ಪರ ಸಂಬಂಧ ಹೊಂದಿವೆ. ಏಷ್ಯಾದಲ್ಲಿ ಭಾರತಕ್ಕೆ ಜಪಾನ್ ಅತ್ಯಂತ ದೊಡ್ಡ ಶಕ್ತಿ ಎಂಬುದನ್ನು ಭಾರತ ತಿಳಿದುಕೊಳ್ಳಬೇಕಿದೆ. ಭಾರತ ಅತ್ಯಂತ ದೊಡ್ಡ ಗೆಳೆಯ ಎಂಬುದನ್ನು ಜಪಾನ್ ಅರಿತುಕೊಳ್ಳಬೇಕಿದೆ' ಎಂದು ಪ್ರಶಸ್ತಿ ಸ್ವೀಕರಿಸಿ ರಾವ್ ಹೇಳಿದರು. ವಿದ್ವಾಂಸರು, ರಾಜಕಾರಣಿಗಳು ಮತ್ತು ಸೇನೆಯ ಅಧಿಕಾರಿಗಳಿಗೆ ಜಪಾನ್ನ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲಾಗುತ್ತದೆ. ಜಪಾನ್ ಅಕಾಡೆಮಿಯ ವಿದೇಶಿ ಸದಸ್ಯರಾಗಿ ಆಯ್ಕೆಯಾಗಿರುವ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಯೂ ರಾವ್ ಅವರಿಗೆ ಇದೆ.

40 village accountant posts callformed in Koppal(District) ..Qualification :PUC2:: Apply from 22/6/15 to 21/7/15 koppal-va.kar.nic.in

Image
click here to apply http://koppal-va.kar.nic.in/MainPrev.aspx

ಸಂವಿಧಾನಗಳ ತಾಯಿ 'ಮ್ಯಾಗ್ನಕಾರ್ಟಾ'

Jun 19, 2015, 04.00AM IST ಲೇಖನ ಮನುಷ್ಯನ ಸ್ವಾತಂತ್ರ್ಯ ಮತ್ತು ಇತರ ಹಕ್ಕುಗಳ ರಕ್ಷಣೆಯೆಲ್ಲ ಇಂದು ಜಗತ್ತಿನ ಬಹುಭಾಗದಲ್ಲಿ ಸಂವಿಧಾನದತ್ತವಾಗಿದೆ. ಆದರೆ ಇದಕ್ಕೆ ನಾಂದಿ ಹಾಡಿದ್ದು ಇಂಗ್ಲೆಂಡಿನಲ್ಲಿ 800 ವರ್ಷಗಳ ಹಿಂದೆ ಮೈದಾಳಿದ ಒಂದು ಸನ್ನದು. ಅದೇ 'ಮ್ಯಾಗ್ನ ಕಾರ್ಟಾ'! ಇದರಲ್ಲಿ ಮನುಕುಲದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮನುಷ್ಯನ ವೈಯಕ್ತಿಕ ಘನತೆಯನ್ನು ಎತ್ತಿಹಿಡಿಯಲಾಯಿತು. ನಂತರ ಇದೇ ಇಂಗ್ಲೆಂಡ್, ಅಮೆರಿಕ ಸೇರಿದಂತೆ ಹಲವು ದೇಶಗಳ ಸಂವಿಧಾನಕ್ಕೆ ಅಸ್ತಿಭಾರವಾಯಿತು. 1215ರ ಜೂನ್ 15ರಂದು ನಡೆದ ಈ ಘಟನೆಗೆ ಈಗ ಅಷ್ಟ ಶತಮಾನೋತ್ಸವದ ಸಂಭ್ರಮ. ----- * ಏನಿದು ಮ್ಯಾಗ್ನ ಕಾರ್ಟಾ? 'ಮ್ಯಾಗ್ನ ಕಾರ್ಟಾ' ಎನ್ನುವುದು ಒಂದು ಲ್ಯಾಟಿನ್ ಪದ. 'ಮಹಾಸನ್ನದು' ಎನ್ನುವುದು ಇದಕ್ಕಿರುವ ಅರ್ಥ. ಮನುಷ್ಯನ ಸ್ವಾತಂತ್ರ್ಯವನ್ನು ಎತ್ತಿಹಿಡಿದ ಮೊಟ್ಟಮೊದಲ ದಾಖಲೆ ಇದು. ಹೀಗಾಗಿಯೇ ಇದಕ್ಕೆ 'ದಿ ಗ್ರೇಟ್ ಚಾರ್ಟರ್ ಆಫ್ ಲಿಬರ್ಟೀಸ್' (ಮ್ಯಾಗ್ನ ಕಾರ್ಟಾ ಲಿಬರ್ಟ್ಯಾಟಂ) ಎನ್ನುವ ಇನ್ನೊಂದು ಹೆಸರೂ ಇದೆ. 1215ರ ಜೂನ್ 15ರಂದು ಮೊದಲ ಬಾರಿಗೆ ಅಂತಿಮರೂಪ ಪಡೆದ ಈ ಚಾರಿತ್ರಿಕ ದಾಖಲೆಗೆ ಈಗ ಎಂಟುನೂರು ವರ್ಷಗಳ ಸಂಭ್ರಮ! ಇವತ್ತು ಬ್ರಿಟನ್ ಮತ್ತು ಅಮೆರಿಕಗಳಲ್ಲಿ ಚಾಲ್ತಿಯಲ್ಲಿರುವ ಸಂವಿಧಾನಗಳಿಗೆ ಇದೇ ಅಡಿಗಲ್ಲು ಎನ್ನಲಾಗುತ್ತದೆ. ಆದರ

ಕೆಎಸ್ಒಯು ಕೋರ್ಸ್ಗಳ ಮಾನ್ಯತೆ ರದ್ದು (ಪ್ರಜಾವಾಣಿ)

ಮೈಸೂರು: 2012–13ನೇ ಶೈಕ್ಷಣಿಕ ವರ್ಷದ ನಂತರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಮೈಸೂರು) ಎಲ್ಲಾ ಕೋರ್ಸ್ಗಳ  ಮಾನ್ಯತೆಯನ್ನು ಅಸಿಂಧುಗೊಳಿಸಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಸಾರ್ವಜನಿಕ ಆದೇಶ ಹೊರಡಿಸಿದೆ. ನಿಯಮ, ನಿರ್ದೇಶನ ಹಾಗೂ ದೂರ ಶಿಕ್ಷಣ ಮಾರ್ಗಸೂಚಿಗಳನ್ನು ಪಾಲಿಸದ, ಭೌಗೋಳಿಕ ವ್ಯಾಪ್ತಿ ಕೆಲವು ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್ಗಳನ್ನು ಆರಂಭಿಸಿದ್ದಕ್ಕಾಗಿ 2011ರ ಜೂನ್ 10ರಂದು ಷೋಕಾಸ್ ನೋಟಿಸ್ ನೀಡಿದ ಬಳಿಕ ಹಾಗೂ ವಿ.ವಿಯ ಅಧಿಕಾರಿಗಳೊಡನೆ ಮಾತುಕತೆ ನಡೆಸಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಯುಜಿಸಿ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ. ಭಯ ಬೇಡ: ಆದರೆ, ಈ ಸಂಬಂಧ ಪ್ರತಿಕ್ರಿಯಿಸಿರುವ ವಿ.ವಿ ಕುಲಪತಿ ಪ್ರೊ. ಎಂ.ಜಿ.ಕೃಷ್ಣನ್, ಈ ಬಗ್ಗೆ ಪದವಿ ಪಡೆದವರಿಗೆ ಭಯವೇನೂ ಬೇಡ. ಇದೇ ಬಗೆಯ ಪ್ರಕರಣದಲ್ಲಿ ಸಿಕ್ಕಿಂ ಹೈಕೋರ್ಟ್ ಒಂದು ತೀರ್ಪು ನೀಡಿದ್ದು, ಕೋರ್ಸ್ಗಳ ವಿಷಯದಲ್ಲಿ ಯುಜಿಸಿ ಮಧ್ಯಪ್ರವೇಶಿಸಬಾರದು ಎಂದು ಹೇಳಿದೆ. ಅದನ್ನು ಇಟ್ಟುಕೊಂಡು ನಾವು ನ್ಯಾಯಾಲಯದ ಮೊರೆ ಹೋಗುತ್ತವೆ' ಎಂದು ತಿಳಿಸಿದ್ದಾರೆ. ಈನಡುವೆ, 2012–13ನೇ ಸಾಲಿನ ಬಳಿಕ ಕೆಎಸ್ಒಯುನಿಂದ ಸುಮಾರು 3 ಲಕ್ಷ ಜನರು ಕೋರ್ಸುಗಳ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಯುಜಿಸಿ ಶಾಕ್: ಕೆಎಸ್ಒಯು ಮಾನ್ಯತೆ ರದ್ದು?:

ಬೆಂಗಳೂರು, ಜೂ. 18: ನೀವು ಕರ್ನಾಟಕ ಮುಕ್ತ ವಿಶ್ವದ್ಯಾಲಯದಲ್ಲಿ 2012-13ರ ನಂತರ ಡಿಗ್ರಿ ಪಡೆದುಕೊಂಡಿದ್ದೀರಾ? ಹಾಗಾದರೆ ಈ ಸುದ್ದಿಯನ್ನು ಗಮನವಿಟ್ಟು ಓದಿ. ಕೆಎಸ್ ಒಯು ಕೆಲ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಹೇಳಿರುವ ಯುಜಿಸಿ ವಿಶ್ವವಿದ್ಯಾಲಯ ನೀಡಿದ್ದ ಪದವಿಗಳ ಮಾನ್ಯತೆಯನ್ನು ರದ್ದು ಮಾಡಿದೆ. ದೂರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯುಜಿಸಿಯ ನಿಯಮಗಳನ್ನು ಕೆಎಸ್ಒಯು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ 2012 -2013 ರ ನಂತರದ ಮುಕ್ತ ವಿಶ್ವವಿದ್ಯಾನಿಲಯದ ಎಲ್ಲಾ ಕೋರ್ಸ್ ಗಳ ಮಾನ್ಯತೆ ರದ್ದುಗೊಳಿಸಲಾಗಿದೆ ಎಂದು ಯುಜಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. [ಮಾನಸ ಗಂಗೋತ್ರಿ ವಿವಿ ಘಟಿಕೋತ್ಸವದ ಚಿತ್ರಗಳು] ವಿದ್ಯಾರ್ಥಿಗಳು ಕೆಎಸ್ಒಯು ವಿವಿಯಲ್ಲಿ 2012 -13 ನಂತರದ ಯಾವುದೇ ವೃತ್ತಿಪರ/ ತಾಂತ್ರಿಕ ಕೋರ್ಸ್ ಗಳಿಗೂ ನೋಂದಣಿ ಮಾಡದಂತೆ ಯುಜಿಸಿ ಎಚ್ಚರಿಕೆ ನೀಡಿದೆ. ವಿಶ್ವವಿದ್ಯಾನಿಲಯ ಮಾನ್ಯತೆ ರದ್ದು ಬಗ್ಗೆ ಸ್ಪಷ್ಟನೆ ನೀಡಿರುವ ಕುಲಪತಿ ಪ್ರೊ. ಎಂ.ಜಿ ಕೃಷ್ಣನ್, ಮಾನ್ಯತೆ ರದ್ದುಗೊಡಿರುವುದರಿಂದ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ, ಯುಜಿಸಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗುವುದು. ಯಾವುದೇ ನಿಯಮಾವಳಿಗಳನ್ನು ಮೀರಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಕೋರ್ಸ್ ಮುಂದುವರಿಸುತ್ತಿರುವ ಮತ್ತು ಕಳೆದ ವರ್ಷಗಳಲ್ಲಿ ಪದವಿ ಪಡೆದುಕೊಂಡವರು ಆತಂಕಕ್ಕೆ ಸಿಲುಕಿ

ಬನ್ನೇರುಘಟ್ಟ ಉದ್ಯಾನಕ್ಕೆ ಐಎಸ್ಒ ಮಾನ್ಯತೆ:

ಪ್ರಜಾವಾಣಿ ವಾರ್ತೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಂಗ್ರಹ ಚಿತ್ರ ಬೆಂಗಳೂರು: ಪ್ರಾಣಿ ಸಂಗ್ರಹಾಲಯದ ವೈಜ್ಞಾನಿಕ ನಿರ್ವಹಣೆ ಹಾಗೂ ಸಮರ್ಪಕ ಆಡಳಿತಕ್ಕಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವು 'ಐಎಸ್ಒ 9001: 2008' ಪ್ರಮಾಣಪತ್ರವನ್ನು ಪಡೆದಿದೆ. 'ಅಂತರರಾಷ್ಟ್ರೀಯ ಮಾನ್ಯತೆ ಸಂಸ್ಥೆ (ಐಎಎಫ್), ಭಾರತ ಗುಣಮಟ್ಟ ಮಂಡಳಿ ಮತ್ತು ಟಿಯುವಿ ಇಂಟರ್ಸರ್ಟ್ ಸಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜತೆಯಾಗಿ ಜೈವಿಕ ಉದ್ಯಾನದಲ್ಲಿ ನಾಲ್ಕು ತಿಂಗಳ ಕಾಲ ಪರಿಶೀಲನೆ ನಡೆಸಿ, ಗುಣಮಟ್ಟ ಖಚಿತಪಡಿಸಿಕೊಂಡ ಬಳಿಕ ಈ ಪ್ರಮಾಣ ಪತ್ರವನ್ನು ನೀಡಿವೆ' ಎಂದು ಉದ್ಯಾನದ ನಿರ್ದೇಶಕ ರಂಗೇಗೌಡ 'ಪ್ರಜಾವಾಣಿ'ಗೆ ತಿಳಿಸಿದರು. 'ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿ ಪಾಲನೆ, ಪ್ರಾಣಿಗಳಿಗೆ ಒದಗಿಸಲಾದ ಸೌಲಭ್ಯ, ಸ್ವಚ್ಛತಾ ವ್ಯವಸ್ಥೆ ನಿರ್ವಹಣೆ, ವೈದ್ಯರ ವ್ಯವಸ್ಥೆ, ಪ್ರವಾಸಿಗರಿಗೆ ಒದಗಿಸಲಾದ ಸೌಲಭ್ಯ ಇವೇ ಮೊದಲಾದ ಸಂಗತಿಗಳನ್ನು ಪರಿಶೀಲಿಸಿ ಗುಣಮಟ್ಟ ಖಚಿತ ಮಾಡಿಕೊಳ್ಳಲಾಗಿದೆ' ಎಂದು ಮಾಹಿತಿ ನೀಡಿದರು. 'ಎರಡು ತಿಂಗಳ ಹಿಂದೆ ಪರಿಶೀಲನೆ ನಡೆಸಿದ ತಜ್ಞರು ಮಾರ್ಗಸೂಚಿ ಪಾಲನೆಯಲ್ಲಿ ಕೆಲವು ನ್ಯೂನತೆಗಳು ಇರುವುದನ್ನು ಪತ್ತೆ ಮಾಡಿದರು. ಆ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸಲಹೆ ನೀಡಿದ್ದರು. ಅದರಂತೆ ಅಗತ್ಯ ಮಾರ್ಪಾಡು ಮಾಡಿಕೊಂಡೆವು' ಎಂದು ಅವರ

Waterloo War: 18June 1815..read complete story here...

ನೆಪೋಲಿಯನ್ ಬೋನಾಪಾರ್ಟೆ ಎಂದರೆ ಯೂರೋಪ್ ಕಂಡ ಪ್ರಚಂಡ ಪರಾಕ್ರಮಿಗಳಲ್ಲಿ ಒಬ್ಬ. ಅವನ ಸಮರೋತ್ಸಾಹಕ್ಕೆ ಎಣೆಯೇ ಇರಲಿಲ್ಲ . ಆದರೆ ಅಂಥ ಸಾಹಸಶೀಲನು ಕೂಡ ಒಂದು ಮಹಾಪತನವನ್ನು ಕಂಡ. ಅದೇ ವಾಟರ್ಲೂ ಕದನ! ಈ ಯುದ್ಧವಾಗಿ ಇಂದಿಗೆ 200 ವರ್ಷ. ಆದರೆ ಇಂದಿಗೂ ಅದು ಕಂಡುಕೇಳರಿಯದಂಥ ಸೋಲಿಗೆ ಇನ್ನೊಂದು ಹೆಸರಾಗಿದೆ. --- -ವಾಟರ್ಲೂ ಕದನಕ್ಕೆ 200 ವರ್ಷ- -ಯೂರೋಪ್ ಇತಿಹಾಸ ಬದಲಿಸಿದ ಧೀಮಂತ- 1815ರ ಜೂನ್ 18 -ಇದು ಯೂರೋಪ್ನ ಇತಿಹಾಸ ಬದಲಿಸಿದ ದಿನ. ಇಂದಿಗೆ(ಜೂ.18) ಅಂದರೆ, ಬರೋಬ್ಬರಿ 200 ವರ್ಷಗಳ ಹಿಂದೆ ಬೆಲ್ಜಿಯಂನ ವಾಟರ್ಲೂ ಕದನದಲ್ಲಿ ಫ್ರಾನ್ಸ್ ನ ಚಕ್ರವರ್ತಿ ನೆಪೋಲಿಯನ್ ಬೋನಾಪಾರ್ಟೆ ಸೋತು, ಬ್ರಿಟನ್ ಮೈತ್ರಿಪಡೆಯ ನಾಯಕ ವೆಲ್ಲಿಂಗ್ಟನ್ಗೆ ಶರಣಾಗಿದ್ದ. ಬಹುಶಃ ವಾಟರ್ಲೂ ಕದನದಲ್ಲಿ ನೆಪೋಲಿಯನ್ ಸೋಲದಿದ್ದರೆ ಇಂದಿನ ಯೂರೋಪ್ನ ಚಿತ್ರಣವೇ ಬೇರೆಯದೇ ಆಗಿರುತ್ತಿತ್ತೇನೋ? ಆದರೆ ಯೂರೋಪ್ ಖಂಡದಲ್ಲೇ ಅತಿ ದೊಡ್ಡ ಸಾಮ್ರಾಜ್ಯ ಸ್ಥಾಪಿಸಿದ್ದ ನೆಪೋಲಿಯನ್ಗೆ ಬೆಲ್ಜಿಯಂನ ಬ್ರಸೆಲ್ಸ್ ಅನ್ನು ವಶಪಡಿಸಿಕೊಳ್ಳಲು ಮಾತ್ರ ಸಾಧ್ಯವಾಗಲಿಲ್ಲ. 'Impossible is a word to be found only in the dictionary of fools. ' ಎನ್ನುತ್ತಿದ್ದ ನೆಪೋಲಿಯನ್ ಯೂರೋಪ್ ಕಂಡ ಅತ್ಯಂತ ಮಹತ್ವಾಕಾಂಕ್ಷಿ ನಾಯಕ. 1804ರಿಂದ 1814ರವರೆಗೆ(1813ರ ಯುದ್ಧದಲ್ಲಿ ಸೋತ ನೆಪೋಲಿಯನ್ನನ್

Waterloo war: 18 June 1815

Read details here....

PM launches 'Narendra Modi Mobile App(download from playstore) ಆಂಡ್ರಾಯ್ಡ್ ಜಗತ್ತಿಗೆ ಕಾಲಿರಿಸಿದ ಪ್ರಧಾನಿ ನರೇಂದ್ರ ಮೋದಿ

Posted by: Mahesh | Wed, Jun 17, 2015, 18:57 [IST] ನವದೆಹಲಿ, ಜೂ.17: ಡಿಜಿಟಲ್ ಇಂಡಿಯಾ ಕನಸು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಂತ್ರಜ್ಞಾನ ಸದ್ಬಳಕೆ ನಿಪುಣರಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಟ್ವಿಟ್ಟರ್, ಫೇಸ್ ಬುಕ್ ನಂತರ ಈಗ ಆಂಡ್ರಾಯ್ಡ್ ಲೋಕಕ್ಕೆ ಕಾಲಿರಿಸಿದ್ದಾರೆ. ನರೇಂದ್ರ ಮೋದಿ ಹೆಸರಿನ ಆಂಡ್ರಾಯ್ಡ್ ಅಪ್ಲಿಕೇಷನ್ ಬುಧವಾರದಿಂದ ಸಾರ್ಜವನಿಕರಿಗೆ ಲಭ್ಯವಾಗಿದೆ. ಈ ಅಪ್ಲಿಕೇಷನ್ ಮೂಲಕ ಪ್ರಧಾನಿ ಮೋದಿ ಅವರ ಚಟುವಟಿಕೆಗಳ ವಿವರ ಕಾಲ ಕಾಲಕ್ಕೆ ಸಿಗಲಿದೆ. ಜೊತೆಗೆ ಮೋದಿ ಅವರ ಜೊತೆಗೆ ನೇರ ಸಂಪರ್ಕ ಹೊಂದಲು ಸಾರ್ವಜನಿಕರಿಗೆ ನೆರವಾಗಲು ಅನುಕೂಲ ಕಲ್ಪಿಸಲಾಗಿದೆ. ನರೇಂದ್ರ ಮೋದಿ ಮೊಬೈಲ್ ಅಪ್ಲಿಕೇಷನ್ ಲೋಕಾರ್ಪಣೆ ಮಾಡಿ, ನಾವೆಲ್ಲರೂ ಮೊಬೈಲ್ ನಲ್ಲಿ ಸಂಪರ್ಕದಲ್ಲಿರೋಣ, ಆಪ್ ನಲ್ಲಿ ನವೀನ ವೈಶಿಷ್ಟ್ಯಗಲಿದ್ದು, ಪ್ಲೇ ಸ್ಟೋರ್ ಮೂಲಕ ಇದನ್ನು ಡೌನ್ ಲೋಡ್ ಮಾಡಬಹುದಾಗಿದೆ, ಪ್ರತಿಕ್ರಿಯೆಗಳಿಗೆ ಸ್ವಾಗತ ಎಂದು ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಅಪ್ಲಿಕೇಷನ್ ನಲ್ಲಿ ಮನ್ ಕಿ ಬಾತ್ ಆಡಿಯೋಗಳು ಕೂಡಾ ಸಿಗುತ್ತದೆ. ಮಿಕ್ಕಂತೆ ಸರ್ಕಾರದ ಯೋಜನೆಗಳು, ಮೋದಿ ಅವರ ವೆಬ್ ಸೈಟ್ ನಲ್ಲಿರುವ ವಿವರಗಳೆಲ್ಲ ಸಿಗುತ್ತದೆ. 4.2ಎಂಬಿ ತೂಕದ ಈ ಅಪ್ಲಿಕೇಷನ್ ನಿಮ್ಮ ಮೊಬೈಲ್ ಫೋನಿನಲ್ಲಿ ಇಳಿಸಿಕೊಳ್ಳಲು ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ವರ್ಷ

Famous Architect Charles Lori's Passes away in Mumbai, He was 83

Image
ಅವರು ಕಟ್ಟಡಗಳಿಗೆ ಒಂದು ಪ್ಲಾನ್ ಹಾಕಿದರೆ ಅದರಲ್ಲೊಂದು ಕಲಾತ್ಮಕ ಸ್ಪರ್ಶವಿರುತ್ತಿತ್ತು, ಅದು ಮೈದಾಳಿದ ಬಳಿಕ ಒಂದು ಹೆಗ್ಗುರುತಾಗುವುದು ಖಚಿತವಾಗಿರುತ್ತಿತ್ತು. ಹಾಗೆಯೇ ಅರಳಲಿರುವ ನಗರದ ನೀಲನಕ್ಷೆ ಬಿಡಿಸಿದರೆ ಅದರಲ್ಲೊಂದು ನಂದನವನವನ್ನು ಅವರು ಕಾಣುತ್ತಿದ್ದರು. ಅಂಥ ಮೇಧಾವಿ ಚಾರ್ಲ್ಸ್ ಕೊರಿಯಾ ಇನ್ನಿಲ್ಲ. ಮುಂಬೈ: ಸ್ವಾತಂತ್ರ್ಯೋತ್ತರ ಭಾರತದ ಶ್ರೇಷ್ಠ ವಾಸ್ತುಶಿಲ್ಪಿ ಚಾರ್ಲ್ಸ್ ಕೊರಿಯಾ ಇನ್ನು ನೆನಪಷ್ಟೆ. ಬೆಂಗಳೂರಿನ ವಿಧಾನಸೌ'ದ ಬಳಿ ಇರುವ 'ವಿಶ್ವೇಶ್ವರಯ್ಯ ಗೋಪುರ' ಬಹುಮಹಡಿ ಕಟ್ಟಡ ಸೇರಿದಂತೆ 'ಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಕಟ್ಟಡಗಳ ನಿರ್ಮಾಣದ ಮೂಲಕ ಚಾರ್ಲ್ಸ್ ವಿಶ್ವವಿಖ್ಯಾತರಾಗಿದ್ದರು. 84ರ ಹರೆಯದ ಚಾರ್ಲ್ಸ್, ಮುಂಬೈನ ತಮ್ಮ ನಿವಾಸದಲ್ಲಿ ಮಂಗಳವಾರ ರಾತ್ರಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಕುಟುಂಬದ ಮೂಲಗಳ ಪ್ರಕಾರ ಚಾರ್ಲ್ಸ್ ಅಂತ್ಯಕ್ರಿಯೆ ಗುರುವಾರ ನಡೆಯುವ ಸಾ'್ಯತೆಯಿದೆ. ಸ್ವಾತಂತ್ರ್ಯಾನಂತರದ 'ಾರತದಲ್ಲಿ ಅತ್ಯಂತ ಶ್ರೇಷ್ಠವೆನಿಸುವಂತಹ ನಿರ್ಮಾಣಗಳನ್ನು ಮಾಡಿದ ಚಾರ್ಲ್ಸ್ ಕೊರಿಯಾ, ಗುಜರಾತ್ನ ಸಾಬರಮತಿಯಲ್ಲಿ ಮಹಾತ್ಮ ಗಾಂ ಸ್ಮಾರಕ, ಮ'್ಯಪ್ರದೇಶದ ವಿ'ಾನಸೌ' 'ವನ, ಜೈಪುರದ ಜವಾಹರಲಾಲ್ ಕಲಾಕೇಂದ್ರ ಸೇರಿದಂತೆ ಹಲವು ಪ್ರತಿಷ್ಠಿತ ಕಟ್ಟಡಗಳ ನಿರ್ಮಾಣಗಳೊಂದಿಗ

Jurassic World takes $511m in record opening weekend - BBC

Published: 16 Jun 2015 05:17 PM IST | Updated: 16 Jun 2015 05:18 PM IST ಜುರಾಸಿಕ್ ವರ್ಲ್ಡ್ ಲಾಸ್ ಏಂಜಲೀಸ್: ಜುರಾಸಿಕ್ ಪಾರ್ಕ್ ಸರಣಿಯ ಚಿತ್ರಗಳು ದಾಖಲೆ ಕಲೆಕ್ಷನ್ ಮಾಡಿರುವುದು ತಿಳಿದಿರುವ ಸಂಗತಿ. ಇದೇ ಸರಣಿಯಲ್ಲಿ ಬಂದ ಜುರಾಸಿಕ್ ವಲ್ಡ್ ಚಿತ್ರ ಜಗತ್ತಿನೆಲ್ಲೆಡೆ ಬಿಡುಗಡೆಯಾದ ಒಂದು ವಾರದಲ್ಲಿ ಬಾಕ್ಸ್ ಆಫೀಸ್ನಲ್ಲಿ ದಾಖಲೆಯ 3276 ಕೋಟಿ ರು. ಕೊಳ್ಳೆ ಹೊಡೆದಿದೆ. ಕಾಲಿನ್ ಟ್ರೆವೆರೋ ನಿರ್ದೇಶನದ ಈ ಚಿತ್ರ ಮೊದಲ ವಾರಾಂತ್ಯದಲ್ಲಿ ವಿಶ್ವಾದ್ಯಂತ 511.8 ದಶಲಕ್ಷ ಡಾಲರ್ ಬಾಚಿಕೊಂಡಿದೆ. ಚಿತ್ರವೊಂದು ಇಷ್ಟೊಂದು ಅಧಿಕ ಹಣ ಗಳಿಸಿರುವುದು ಕೂಡ ಇದೇ ಮೊದಲು. 2011ರಲ್ಲಿ ಹ್ಯಾರಿ ಪಾಟರ್ ಮತ್ತು ಡೆತ್ಲಿ ಹ್ಯಾಲೋಸ್ ಚಿತ್ರ ಮೊದಲ ವಾರದಲ್ಲಿ 3072 ಕೋಟಿ ರು. ಗಳಿಸಿತ್ತು. ಈ ದಾಖಲೆಯನ್ನು ಜುರಾಸಿಕ್ ವರ್ಲ್ಡ್ ಹಿಂದಿಕ್ಕಿದೆ. ಕಾಲಿನ್ ಟ್ರೆವೆರೋ ನಿರ್ದೇಶನದ ಈ ಚಿತ್ರ ಮೊದಲ ವಾರಾಂತ್ಯದಲ್ಲಿ ವಿಶ್ವಾದ್ಯಂತ 511.8 ದಶಲಕ್ಷ ಡಾಲರ್ ಬಾಚಿಕೊಂಡಿದೆ. ಈ ಚಿತ್ರ 961 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಭಾರತದಲ್ಲೂ ಶನಿವಾರ ಜುರಾಸಿಕ್ ವರ್ಲ್ಡ್ ಚಿತ್ರ ಬಿಡುಗಡೆಯಾಗಿದ್ದು, ಎರಡೇ ದಿನದಲ್ಲಿ 44 ಕೋಟಿ ರು. ಬಾಚಿಕೊಂಡಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು, ಪಾರ್ಕ್ನ ಮಾಲೀಕ ಸಾಮ್ ಮಸ್ರಾನಿ ಅವರ ತಂದೆಯ ಪಾತ್ರದಲ್ಲಿ ಅಭಿನಯಿಸಿದ

NL Beno Zephine, 25, will be the first 100% blind Indian Foreign Service officer of India.

Image
ದೇಶದ ಮೊದಲ ಅಂಧ ಮಹಿಳಾ ಐಎಫ್ಎಸ್ ಅಧಿಕಾರಿ ನೇಮಕ ಮಂಗಳವಾರ - ಜೂನ್ -16-2015 ಚೆನ್ನೈನ ನಿವಾಸಿ ಬೆನೊಗೆ ಕೇಂದ್ರ ಸರಕಾರದ ಕೊಡುಗೆ ಚೆನ್ನೈ, ಜೂ.15: ಜೂನ್ 12ರ ರಾತ್ರಿಯ ನಂತರ ಎನ್.ಎಲ್. ಬೆನೊ ಝೆಫಾಯಿನ್ಗೆ ಎಳ್ಳಷ್ಟೂ ಸಮಯವಿಲ್ಲ. ಆಕೆಯ ಫೋನ್ ರಿಂಗ್ ಆಗುವುದು ನಿಂತಿಲ್ಲ. ಕರೆಗಳ ಮೇಲೆ ಕರೆಗಳು. ಎಲ್ಲರೂ ಆಕೆಗೆ ಅಭಿನಂದನೆ ಹೇಳುವವರೇ. ಕಾರಣವಿಷ್ಟೇ. ಚೆನ್ನೈನ 25ರ ಪ್ರಾಯದ ನಿವಾಸಿ ದೇಶದ ಮೊದಲ ಅಂಧ (ಶೇ.100ರಷ್ಟು ಕುರುಡು) ಐಎಫ್ಎಸ್ (ವಿದೇಶಾಂಗ ಸೇವೆ) ಅಧಿಕಾರಿಯಾಗುತ್ತಿದ್ದಾರೆ. ''ನಿಮ್ಮನ್ನು ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ'' ಎಂದು ಶುಕ್ರವಾರ ರಾತ್ರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಬಂದ ಫೋನ್ ಕರೆಯೊಂದು ಝೆಫಾಯಿನ್ಗೆ ತಿಳಿಸಿತ್ತು. ಭಾರತೀಯ ವಿದೇಶಾಂಗ ಸೇವೆಯ 69 ವರ್ಷಗಳ ಇತಿಹಾಸದಲ್ಲಿ ಅಂಧ ಅಭ್ಯರ್ಥಿಯೊಬ್ಬರು ಐಎಫ್ಎಸ್ಗೆ ಸೇರ್ಪಡೆಗೊಳ್ಳುತ್ತಿರುವುದು ಇದೇ ಮೊದಲು. ''ಇಂತಹ ಮಹತ್ವದ ನಿರ್ಧಾರ ಕೈಗೊಂಡಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ನಿಜವಾಗಿಯೂ ಕೃತಜ್ಞತೆ ಹೇಳಲು ಬಯಸುತ್ತೇನೆ. ಸ್ವಲ್ಪಮಟ್ಟಿಗೆ ದೃಷ್ಟಿದೋಷ ಹೊಂದಿರುವವರನ್ನು ಹೊರತುಪಡಿಸಿ ಅಂಧರನ್ನು ಐಎಫ್ಎಸ್ ಸೇವೆಗೆ ಪರಿಗಣಿಸುವುದಿಲ್ಲ ಎಂದು ಕೇಳಿದ್ದೆ'' ಎಂದು ಬೆನೊ ಹೇಳುತ್ತ

Hindi, 3 Indian languages find place in Dubai driving tests - The Times of India on Mobile

http://m.timesofindia.com/world/middle-east/Hindi-3-Indian-languages-find-place-in-Dubai-driving-tests/articleshow/47665455.cms?utm_source=facebook.com&utm_medium=referral&utm_campaign=TOI

HSTR RECRUITMENT CET EXAM(13/6/2015) KEYS :Mental Ability (25 questions)

✏ಸಾಂಕೇತಿಕ ಭಾಷೆ  are=2 ✏ಅಭಿಮುಖ ಸಂಖ್ಯೆ 3 ✏coding    MOULDING-LNTKCHMF ✏ರಕ್ತ ಸಂಬಂಧ -ಸಹೋದರಿ ✏ತ್ರಿಭುಜಗಳು 15 ✏ದಿಕ್ಕು 5 km ✏ವೆನ ನಕ್ಷ್ 3 ✏ಶಾಲೆಗೆ ಹೋಗದಿರುವ ಅಂಗವಿಕಲ ಹೆಣ್ಣು ಮಕ್ಕಳು =2 ✏ಅಂಗವಿಕಲರು ಅಲ್ಲದೆ ಶಾಲೆಗೆ ಹೋಗದಿರುವ ಹುಡುಗಿಯರು 5 ✏ಕನಿಷ್ಟ ಸಂಖ್ಯೆ 121 ✏ಮಗನ ವಯಸ್ಸು ,15 ✏ತಪ್ಪಾದ ಸಂಖ್ಯೆ 27 ✏ಹಸ್ತಲಾಘವ 12 ✏ಇಂದೊರನಲ್ಲಿಲ್ಲದ ಬ್ಯಾಂಕು D ✏ರಾಯಪುರ ಇಂದೊರನಲ್ಲಿರುವ ಭುಪಾಲಿನಲ್ಲಿಲ್ಲದ ಬ್ಯಾಂಕು E ✏ಭಿನ್ನವಾದ ಸಂಖ್ಯೆ 751 ✏ರೀಟಾ ✏ಮಧ್ಯದಲ್ಲಿ ಇರುವ ವ್ಯಕ್ತಿ S ✏ಕುಳ್ಳಗಿರುವ ವ್ಯಕ್ತಿ L ✏ಬಿಟ್ಟು ಹೋದ ಸಂಖ್ಯೆ 15 ✏DISTRIBUTE ಬದಲಾವಣೆಯಾದಾಗ E ✏ಸರಣಿ 735 ✏ಶ್ರೇಣಿ abbacddceffe(ans  bcef) ✏ಸಮೀಕರಣ ans 3 16+5-10x4/3=9 ✏ಚಿತ್ರದಲ್ಲಿ ಬಿಟ್ಟು ಹೋದ ಸಂಖ್ಯೆ =15 👉(Note: These key Ans are only Best of My Knowledge But not final) From: Mr.S.G.Bellubbi👏

ಎಂಆರ್ ಎಸ್ಎ (Methicillin-resistant Staphylococcus Aureus): virus-

ಮಾನವ ದೇಹದಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ವಾಸಿಸುತ್ತವೆ. ಎಂಆರ್ಎಸ್ಎ (Methicillin-resistant Staphylococcus aureus ) ಕೂಡ ಅಂತಹುದೇ ಒಂದು ಬ್ಯಾಕ್ಟೀರಿಯಾ. ಇವು ದೇಹದಲ್ಲೇ ವಾಸಿಸುವುದರಿಂದ ವಿವಿಧ ಕಾರಣಗಳಿಗೆ ಬ್ಯಾಕ್ಟೀರಿಯಾಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಈ ಬ್ಯಾಕ್ಟೀರಿಯಾಗಳು ಮೂಗಿನ ಹೊಳ್ಳೆಗಳ ಪ್ರವೇಶ ಭಾಗದಲ್ಲಿ, ಹೊಕ್ಕುಳಲ್ಲಿ, ಕಂಕುಳ ಕೆಳಗೆ ವಾಸಿಸುತ್ತಿವೆ. ಇವು ದೇಹದಲ್ಲಿ ಇವೆ ಎಂದ ಮಾತ್ರಕ್ಕೇ ರೋಗಗಳು ಬರುವುದಿಲ್ಲ. ಬ್ಯಾಕ್ಟೀರಿಯಾಗಳಿಂದ ದೇಹದ ಕೋಶಗಳಿಗೆ ಹಾನಿಯಾದಾಗ ಸೋಂಕು ಎನ್ನುತ್ತಾರೆ. ಯಾರಲ್ಲಿ ಹೆಚ್ಚು?: ಸಾಮಾನ್ಯವಾಗಿ ಆಸ್ಪತ್ರೆ ಸಿಬ್ಬಂದಿಯಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಆಸ್ಪತ್ರೆ, ನರ್ಸಿಂಗ್ ಹೋಮ್ಗಳಲ್ಲಿ ಸ್ವಚ್ಛತೆಯ ಕೆಲಸ ಮಾಡುವವರನ್ನು ಈ ಕುರಿತು ವರ್ಷಕ್ಕೆ ಮೂರ್ನಾಲ್ಕು ಬಾರಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಎಂಆರ್ಎಸ್ಎ ಪ್ರಮಾಣ ಅತಿಯಾಗಿ ಕಂಡುಬಂದಲ್ಲಿ ಅವರ ಮೂಗಿನ ಕೆಳಗೆ ಹಚ್ಚಿಕೊಳ್ಳಲು ಮುಲಾಮು ನೀಡಲಾಗುತ್ತ ಲಕ್ಷಣ: ಎಂಆರ್ಎಸ್ಎ ಪ್ರಮಾಣ ಹೆಚ್ಚಾದಲ್ಲಿ ರೋಮಗಳ ಬುಡದಲ್ಲಿ ಕೆರೆತ, ಗಂಟಲು ಕೆರೆತ ಬರಬಹುದು. ಅದು ಮೂಗಿನ ಮೂಲಕ ಹರಡುತ್ತದೆ. ಆದ್ದರಿಂದ ಮೂಗಿನ ಕೆಳಭಾಗಕ್ಕೆ ಔಷಧಿ ಹಚ್ಚುವಂತೆ ತಿಳಿಸಲಾಗುತ್ತದೆ. ಚರ್ಮ, ಶ್ವಾಸಕೋ

WorldBloodDonorDay is being observed today across the world. The theme of this year’s campaign is “Thank you for saving my life”.

# WorldBloodDonorDay is being observed today across the world to raise the public awareness about the need for safe blood donation. The theme of this year's campaign is "Thank you for saving my life". It encourages donors all over the world to donate blood voluntarily and regularly with the slogan "Give freely, give often. Blood donation matters". ❤@ಈ ದಿನದ ವಿಶೇಷ@❤  ➡ ಪ್ರತಿವರ್ಷ ಜೂನ್ ೧೪ ನ್ನು   "ವಿಶ್ವ ರಕ್ತ ದಾನಿಗಳ ದಿನ"ವನ್ನಾಗಿ ಆಚರಿಸಲಾಗುತ್ತದೆ.                      ➡ ಮೊದಲ ಬಾರಿಗೆ ಈ ಆಚರಣೆಯು ೨೦೧೪ ರಲ್ಲಿ ನಡೆಯಿತು. ೨೦೧೫ರಲ್ಲಿ ನಡೆದ ೫೮ ನೇ "ವಿಶ್ವ ಆರೋಗ್ಯ ಸಮಾವೇಶ"ದಲ್ಲಿ ಇದನ್ನು ವಾಷಿ೯ಕ ಆಚರಣೆಯನ್ನಾಗಿ ಘೋಷಿಸಲಾಯಿತು.                    ➡ ಆಧುನಿಕ ರಕ್ತ ವರ್ಗಾವಣೆ ವ್ಯವಸ್ತೆಯ ಸ೦ಸ್ಥಾಪಕ ಆಸ್ಟ್ರೇಲಿಯಾದ ಜೀವಶಾಸ್ತ್ರದ ವಿಜ್ಞಾನಿ "ಕಾಲ್೯ ಲಾ೦ಡ್ ಸ್ಟೈನರ್" ಹುಟ್ಟಿದ ದಿನದ ಸ್ಮರಣಾರ್ಥವಾಗಿ ಈ ದಿನದ ಆಚರಣೆ.                     ➡ "ಸ್ನೇಹಿತರು ಆಗಲು ಬಯಸುತ್ತಿರಾ.....ರಕ್ತ ದಾನ ಮಾಡಿ ಸ೦ಭ೦ಧಿಗಳೇ ಆಗಿಬೀಡಿ".               ➡ "ರಕ್ತ ಕೆ೦ಪು ಬಣ್ಣದ. ಬ೦ಗಾರ".ಸಾವು-ಬದುಕಿನ ಅನಂತ ತಿಳ

👆CRP and CRP ಪರೀಕ್ಷೆಯ ಕೀ ಉತ್ತರಗಳು. Page 1&2

Image
👆CRP and CRP ಪರೀಕ್ಷೆಯ ಕೀ ಉತ್ತರಗಳು. Page 1&2

ಐಎಸ್ಎಸ್ನಲ್ಲಿ ಹೆಚ್ಚು (199)ದಿನ ಕಳೆದ ಮಹಿಳೆ: ಗಗನಯಾತ್ರಿ ಸಮಂತಾ ಕ್ರಿಸ್ಟೋಫರ್:

ದಿನಗಳ ಕಾಲ ಐಎಸ್ಎಸ್ನಲ್ಲಿ ಇರುವ ಮೂಲಕ ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿ ಸಮಂತಾ ಕ್ರಿಸ್ಟೋಫರ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಈವರೆಗೆ ಬಾಹ್ಯಾಕಾಶದಲ್ಲಿ ಹೆಚ್ಚು ದಿನಗಳನ್ನು ಕಳೆದ ಮಹಿಳೆ ಎಂಬ ದಾಖಲೆ ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರ ಹೆಸರಿನಲ್ಲಿತ್ತು. 2006– 2007ರ ಅವಧಿಯಲ್ಲಿ ಅವರು ಐಎಸ್ಎಸ್ನಲ್ಲಿ 195 ದಿನಗಳನ್ನು ಕಳೆದಿದ್ದರು.

Twitter to increase DM(Direct Message) character limit from 140 to 10,000 characters:

ಟ್ವಿಟರ್ನಲ್ಲಿ ಪದ ಮಿತಿ 140ರಿಂದ 10,000 ಪದಗಳಿಗೆ ಏರಿಕೆ Published: 12 Jun 2015 03:22 PM IST ನವದೆಹಲಿ: ಜನಪ್ರಿಯ ಸಾಮಾಜಿಕ ತಾಣ ಟ್ವಿಟರ್ ಇನ್ನು ಮುಂದೆ ಖಾಸಗಿ ಸಂದೇಶಗಳನ್ನು ಕಳುಹಿಸುವಾಗ ಸಂದೇಶದ ಪದ ಮಿತಿಯನ್ನು 140 ರಿಂದ 10,000ಕ್ಕೆ ಏರಿಕೆ ಮಾಡಿದೆ. ಇನ್ನು ಮುಂದೆ ಟ್ವಿಟರ್ ಬಳಕೆದಾರರು ನೇರ ಸಂದೇಶ (ಡೈರೆಕ್ಟ್ ಮೆಸೇಜ್) ಕಳುಹಿಸುವಾಗ 10,000 ಪದಗಳ ಮಿತಿಯಲ್ಲಿ ಸಂದೇಶ ಕಳುಹಿಸಬಹುದಾಗಿದೆ ಎಂದು ಟ್ವಿಟರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ. ಈ ಬದಲಾವಣೆಗಳು ಜುಲೈ ತಿಂಗಳಿನಿಂದ ಜಾರಿಗೆ ಬರಲಿದೆ.

Forbes' Sports MILLIONARES' list announced : Dhini got 23rd rank

ನವದೆಹಲಿ: ಫೋರ್ಬ್ಸ್ ಮ್ಯಾಗಜೀನ್ ಅತಿ ಹೆಚ್ಚು ಸಂಭಾವನೆ ಸಿಗುವ ವಿಶ್ವದ 100 ಕ್ರೀಡಾಪಟುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಈ ಫೋರ್ಬ್ಸ್ ಪಟ್ಟಿಯಲ್ಲಿ ನಿರೀಕ್ಷೆಯಂತೆ ಶತಮಾನದ ಬಾಕ್ಸರ್ ಮೇವೆದರ್ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಗಾಲ್ಫ್ ಆಟಗಾರ ಟೈಗರ್ವುಡ್ಸ್, ಟೆನ್ನಿಸ್ ಸ್ಟಾರ್ ರೋಜರ್ ಫೆಡರರ್, ಪೋರ್ಚುಗೀಸ್ನ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಟಾಪ್ ಪಟ್ಟಿಯಲ್ಲಿದ್ದಾರೆ. ಕಳೆದ ವರ್ಷ 22ನೇ ಸ್ಥಾನದಲ್ಲಿದ್ದ ಧೋನಿ ಈ ವರ್ಷ 23 ಸ್ಥಾನಕ್ಕೆ ಕುಸಿದಿದ್ದಾರೆ.ಧೊನಿ ಒಟ್ಟು ಸಂಪಾದನೆ 31 ದಶಲಕ್ಷ ಡಾಲರ್ ಹಣವೆಂದು ಅಂದಾಜಿಸಲಾಗಿದೆ. ಅದರಲ್ಲಿ ಧೊನಿಯ ಕ್ರಿಕೆಟ್ನಿಂದ 4 ದಶಲಕ್ಷ ಡಾಲರ್, ಜಾಹೀರಾತುಗಳಿಂದ ಹಾಗೂ ಕೆಲವೊಂದು ಒಡಂಬಡಿಕೆಗಳಿಂದ 27 ದಶಲಕ್ಷ ಡಾಲರ್ ಆದಾಯ ಸಂಪಾದಿಸಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ. 33 ವರ್ಷದ ಕ್ರಿಕೆಟರ್ ಧೋನಿ 2014ರಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆದರೆ ಏಕದಿನ ಕ್ರಿಕೆಟ್ನಲ್ಲಿ ನಾಯಕತ್ವದ ಜೊತೆಗೆ ವಿಕೆಟ್ ಕೀಪರ್ ಆಗಿ ತಂಡವನ್ನು ಮುನ್ನೆಡೆಸುತ್ತಿದ್ದಾರೆ.

ಪ್ರಸ್ತುತ: ಶಿಕ್ಷಕರಿಗೆ ‘ಭಾರ’ವಾದ ಸಾಮಾಜಿಕ ಹೊರೆ

Jun 10, 2015, 04.56AM IST * ಪ್ರಸ್ತುತ: ಲಕ್ಷ್ಮೀಕಾಂತ ಮಿರಜಕರ ಎಲ್ಲಿಯೂ ಉದ್ಯೋಗ ಸಿಗದವರು ಶಿಕ್ಷಣ ಕ್ಷೇತ್ರ ಪ್ರವೇಶಿಸು ತ್ತಾರೆ, ಅದು ವೃತ್ತಿ ಪ್ರೀತಿಯಿಂದ ಅಲ್ಲ,ಉದರನಿಮಿತ್ತಂ ಮಾತ್ರ-ಎಂಬುದು ಸಾರ್ವಜನಿಕರಿಂದ ಕೇಳಿ ಬರುವ ಮಾತು. ಇಂದು ಪರಿಸ್ಥಿತಿ ಹೀಗಿಲ್ಲ. ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿಯೇ ಈಗ ಕೆಲಸ ಪಡೆಯುತ್ತಾರೆ. ಇಂದು ಸಂಬಳ, ಭತ್ಯೆ ತಪ್ತಿಕರವಾಗಿವೆ. ಶಿಕ್ಷಕ ವೃತ್ತಿ ನೀರಸವಾದುದಲ್ಲ. ಅದೊಂದು ಸಜೀವ ಕಾರಂಜಿ. ನಿರ್ಭಾವ ಕಡತಗಳ ಮಧ್ಯೆ ಕುಳಿತು ಕೆಲಸ ಮಾಡುವುದಕ್ಕೂ, ಚಿಗುರೆಲೆಗಳ ಮಧ್ಯೆ ಮಕ್ಕಳ ಭವಿಷ್ಯ ನಿರ್ಮಾಣ ದಲ್ಲಿ ತೊಡಗುವುದಕ್ಕೂ ಅಜಗಜಾಂತರ ವ್ಯತ್ಯಾಸ. ಆದರೆ ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ಅಥವಾ ಅದನ್ನು ನಿರ್ವಹಿಸುತ್ತಲೇ ಬೇರೆ ಬೇರೆ ಕೆಲಸಗಳತ್ತ ಗಮನ ಹರಿಸ ಬೇಕು. ಶಿಕ್ಷಕನಾಗಿ ನೇಮಕವಾಗುವ ವ್ಯಕ್ತಿಯ ಹೆಗಲಿಗೆ ಹಲವು ಜವಾಬ್ದಾರಿಗಳು ಏರುತ್ತವೆ. ಅವರಿಗೆ ಯೋಜನಾ ಹೊರೆ ಜಾಸ್ತಿ ಯಾಗಿದೆ. ಜತೆಗೆ ಕಾಲಕಾಲಕ್ಕೆ ಇಲಾಖಾಧಿಕಾರಿಗಳು ಬೇಡುವ ವರದಿಗಳನ್ನು ಸಮಯದ ಪರಿಮಿತಿಯೊಳಗೆ ನೀಡುತ್ತಾ, ಶಿಕ್ಷಣದ ಗುಣಮಟ್ಟ ಕಾಯ್ದು ಕೊಳ್ಳುವ ಸವಾಲು ಅವರ ಎದುರಿಗೆ ಇರುತ್ತದೆ. ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಕ್ಷರ ದಾಸೋಹ, ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಶಾಲಾ ಕಟ್ಟಡ ನಿರ್ಮಾಣ, ಗೈರು ಹಾಜರಾತಿ ಆಂದೋಲನ, ಸಮುದಾಯದತ್ತ ಶಾಲೆ, ಜನಗಣತಿ, ಮಕ್ಕಳ ಗಣತಿ, ಆರ್ಥಿಕ ಗಣತಿ,ಆನೆಕಾ

ಬಿಳಿ ರಕ್ತ ಕಣ ಹೆಚ್ಚಿಸಬಲ್ಲ 15 ಆಹಾರ ಪದಾರ್ಧಗಳು:

ದೇಹದಲ್ಲಿ ಕೆಂಪು ಮತ್ತು ಬಿಳಿ ರಕ್ತಕಣಗಳ ಬಗ್ಗೆ ನಾವು ಕೇಳಿದ್ದೇವೆ. ದೇಹದಲ್ಲಿನ ರಕ್ತದ ಕಣಗಳು ಸ್ವಲ್ಪ ಏರುಪೇರಾದರೂ ಮನುಷ್ಯನ ಆರೋಗ್ಯವು ಹದಗೆಡುವುದರಲ್ಲಿ ಅನುಮಾನವಿಲ್ಲ. ಕೆಂಪು ರಕ್ತದ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚಿನ ದಿನಗಳಲ್ಲಿ ಬಿಳಿ ರಕ್ತ ಕಣಗಳ ಕುರಿತಂತೆ ಮಾತನಾಡುವುದನ್ನು ಕೇಳಿರಬಹುದು. ಮಾರಣಾಂತಿಕ ರೋಗಗಳಿಗೆ ತುತ್ತಾದವರಲ್ಲಿ ಈ ಬಿಳಿ ರಕ್ತಕಣಗಳು ಕಡಿಮೆಯಾಗಿದೆ ಎಂದು ವೈದ್ಯರು ಹೇಳುತ್ತಿರುತ್ತಾರೆ. ಇದಕ್ಕೆ ಆಧುನಿಕ ಯುಗದ ಆಹಾರ ವ್ಯವಸ್ಥೆಯೂ ಒಂದು ರೀತಿಯ ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಮಾನವನ ದೇಹದಲ್ಲಿ ಕೆಂಪು ರಕ್ತಕಣಗಳು ಎಷ್ಟು ಮುಖ್ಯವೋ ಅದೇ ರೀತಿ ಬಿಳಿ ರಕ್ತಕಣಗಳು ಮುಖ್ಯ ಪಾತ್ರವಹಿಸುತ್ತವೆ. ಕೆಂಪು ರಕ್ತ ಕಣಗಳು ಶ್ವಾಸಕೋಶದಿಂದ ಆಮ್ಲಜನಕವನ್ನು ದೇಹದ ಕಣ ಕಣ ಗಳಿಗೂ ಸಾಗಿಸುವ ವಾಹಕವಾದರೆ ಬಿಳಿರಕ್ತ ಕಣಗಳು ರೋಗಾಣುಗಳನ್ನು ನಾಶ ಪಡಿಶುವ ಸೈನಿಕರಾಗಿರುತ್ತವೆ. ಬಿಳಿರಕ್ತ ಕಣಗಳನ್ನು ಲ್ಯುಕೋಸೈಟ್ ಎಂತಲೂ ಕರೆಯುವುದುಂಟು. ಈ ಬಿಳಿರಕ್ತಕಣ ದೇಹದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಮ್ಮ ದೇಹದೊಳಗೆ ಸೇರಲು ಯತ್ನಿಸುವ ವೈರಸ್ ಗಳ ವಿರುದ್ಧ ಈ ಬಿಳಿ ರಕ್ತಕಣಗಳು ಹೋರಾಟ ನಡೆಸುತ್ತವೆ. ಬಿಳಿ ರಕ್ತಕಣಗಳಿಲ್ಲದವರು ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಇಂತಹವರು ಬೇಗ ಗುಣಮುಖರಾ

Download Answer Key for 1-5th, 6-8th Primary school teachers recruitment - 2014-15

myapp.pstr15.caconline.in/KeyAnswer.aspx

G.O of claiming OBC GROUP INCOME LIMIT INCREASED from Rs. 4.5 to 6 lakh -ಸಾಮಾಜಿಕವಾಗಿ ಮುಂದುವರೆದ ವ್ಯಕ್ತಿಗಳು/ವರ್ಗಗಳನ್ನು (ಕೆನೆಪದರ) ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರತು ಪಡಿಸಲು ಕೆನೆಪದರ ನೀತಿಯ ವಾರ್ಷಿಕ ಆಧಾಯ ಮಿತಿಯನ್ನು ರೂ.4.50 ಲಕ್ಷಗಳಿಂದ ರೂ.6.00 ಲಕ್ಷಗಳಿಗೆ ಹೆಚ್ಚಿಸುವ ಬಗ್ಗೆ -ಸರ್ಕಾರದ ಆದೇಶ

Image
Share via ImgCreator

2015-16 ನೇ ಸಾಲಿನ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಬಗ್ಗೆ ಮಾರ್ಗಸೂಚಿಗಳು. 06/06/2015

Image

Apply Vidyadaan Scholarship who are scored more than 90% in SSLC by Sarojini Damodar Foundation. Call:9986325234

Image

ನಂದನವನವಾದ ಅಡಿವೆಪ್ಪ ಹೂಲಿ ದಂಪತಿಗಳ ಸ.ಕಿ.ಪ್ರಾ ಶಾಲೆ, ಪಾಟೀಲ ವಸ್ತಿ ,ಚಿಮ್ಮಡ, ಜಮಖಂಡಿ(ತಾ) ಬಾಗಲಕೋಟ (ಜಿಲ್ಲೆ )

Image