Posts

Showing posts from October, 2016

ಯಾದಗಿರಿ ಜಿಲ್ಲೆಯಲ್ಲಿ (ಸ.ಕ.ಇಲಾಖೆ)ಖಾಲಿಯಿರುವ ಅಡುಗೆ ಸಹಾಯಕ/ಕಾವಲುಗಾರ ಹುದ್ದೆ ಗಳಿಗೆ ಅರ್ಜಿ ಆಹ್ವಾನ

Image

ನವ್ಹಂಬರ್ 20ರಂದು ಕ.ರಾ.ರ. ಸಾ.ನಿ.ದ ಮೇಲ್ವಿಚಾರಕ ಹುದ್ದೆ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ

Image

ಏಂಜೆಲ್ಸ್ ಫ್ಲೈಟ್’ ವಿಶ್ವದ ಅತಿ ಚಿಕ್ಕ ರೈಲು

Image
 October 29, 2016 ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್‍ನಲ್ಲಿರುವ ಈ ಪುಟ್ಟ ರೈಲಿನ ಹೆಸರು ಏಂಜೆಲ್ಸ್ ಫ್ಲೈಟ್. ಈ ರೈಲಿನಲ್ಲಿ ಈವರೆಗೆ 10 ಕೋಟಿಗೂ ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ ಎಂದರೆ ನಿಮಗೆ ಆಚ್ಚರಿಯಾಗಬಹುದು. ವಿಶ್ವದ ಅತ್ಯಂತ ಪುಟ್ಟ ರೈಲು ಎಂಬ ಹೆಗ್ಗಳಿಕೆ ಪಡೆದಿರುವ ಇದು ಕಳೆದ 50 ವರ್ಷಗಳಿಂದಲೂ ಚಾಲನೆಯಲ್ಲಿದೆ. ಈ ಸ್ವಯಂಚಾಲಿತ ರೈಲು ವೇಗ ಮತ್ತು ಅಗಾಧ ಸಾಮಥ್ರ್ಯಕ್ಕೆ ಸಾಕ್ಷಿಯಾಗಿದೆ. ಸಿನಾಯ್‍ನಿಂದ ಅತ್ಯಂತ ಇಳಿಜರಾಗಿ ರುವ ಅಲಿವೆಟ್ ಎಂಬ ಸ್ಥಳಕ್ಕೆ ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 10ರವರೆಗೆ ನಿರಂತವಾಗಿ ಸಂಚರಿಸುತ್ತದೆ. ಐದು ದಶಕದ ಅವಧಿಯಲ್ಲಿ ಇಷ್ಟು ಸಂಖ್ಯೆಯ ಜನರು ಬೇರಾವುದೇ ರೈಲಿನಲ್ಲಿ ಪ್ರಯಾಣಿಸಿಲ್ಲ ಎಂಬುದು ಏಂಜೆಲ್ಸ್ ಫ್ಲೈಟ್‍ನ ಮತ್ತೊಂದು ಹೆಗ್ಗಳಿಕೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತು ಈ ರೈಲಿಗೂ ಅನ್ವಯಿಸುತ್ತದೆ.

ಹಿಂದುಳಿದ ವರ್ಗಗಳ ಇಲಾಖೆ ನೇಮಕಾತಿ ಅಧಿಸೂಚನೆ

Image

Primary school teachers' special allowance raised from Rs.300 to Rs.450 w.ef. 01/11/2016

Image

ಕೇಂದ್ರ ನೌಕರ,ಪಿಂಚಣಿದಾರರ ಭತ್ಯೆಯಲ್ಲಿ 2% ಹೆಚ್ಚಳ

Image
ದೆಹಲಿ:  ದೀಪಾವಳಿ ಹಬ್ಬದ ನಿಮಿತ್ತ ಕೇಂದ್ರ ಕ್ಯಾಬಿನೆಟ್ 50 ಲಕ್ಷ ಸರಕಾರಿ ನೌಕರರು ಮತ್ತು 58 ಲಕ್ಷ ಪಿಂಚಣಿದಾರರಿಗೆ ಜುಲೈ 1, 2016 ರಿಂದ ಜಾರಿಗೆ ಬರುವಂತೆ ದಿನ ಭತ್ಯೆ ಶೇ.2 ರಷ್ಟು ಹೆಚ್ಚಳ ಮಾಡಿದೆ. ಈ ಮೊದಲು ಸರಕಾರವು ದಿನಭತ್ಯೆಯನ್ನು ಮೂಲ ಭತ್ಯೆಯ ಶೇ. 6 ರಿಂದ ಶೇ. 125 ಹೆಚ್ಚಿಸಿತ್ತು. ಅನಂತರ ಏಳನೇ ಪಾವತಿ ಆಯೋಗದ ವರದಿ ಅನುಷ್ಠಾನ ಮಾಡುವ ಸಂದರ್ಭ ದಿನಭತ್ಯೆಯನ್ನು ಮೂಲಭತ್ಯೆಯಲ್ಲಿ ಸೇರಿಸಲಾಗಿತ್ತು. ಕೇಂದ್ರ ಸರಕಾರಿ ನೌಕರರು ದಿನಭತ್ಯೆಯನ್ನು ಶೇ. 3 ಕ್ಕೆ ಏರಿಸ ಬೇಕೆಂದು ಬೇಡಿಕೆ ಇಟ್ಟಿದ್ದಾರೆಂಬ ವರದಿ ಮೂಲಗಳಿಂದ ತಿಳಿದು ಬಂದಿದೆ.

ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರಗಳು :-

Image
ವಾರ್ತಾ ಭಾರತಿ : 26 Oct, 2016 ಅಲ್ಜೀಮರ್ ಮತ್ತು ಮರೆವು ರೋಗವು ವೃದ್ಧಾಪ್ಯದಲ್ಲಿ ದಾಳಿ ಇಡುವ ಎರಡು ಅತೀ ಮರಕ ರೋಗ. ರೋಗಿಗಳು ತಮ್ಮ ನೆನಪು ಶಕ್ತಿಯನ್ನು ಕಳೆದುಕೊಳ್ಳುತ್ತಾ ವಯಸ್ಸಾಗುತ್ತಿದ್ದಂತೆಯೇ ಗಂಭೀರ ಸಮಸ್ಯೆಯನ್ನು ಎದುರಿಸುತ್ತಾರೆ. ಮಾನಸಿಕ ಮತ್ತು ಚಹರೆಗಳು ಕುಸಿಯುವ ಸಮಸ್ಯೆಯನ್ನು ಎದುರಿಸುವವರು ಮತ್ತು ಮುಖ್ಯವಾಗಿ ಇಂಥ ಕುಟುಂಬ ಇತಿಹಾಸವಿದ್ದವರು ಆಹಾರ ಪದಾರ್ಥಗಳ ಸೇವನೆಯತ್ತ ಹೆಚ್ಚು ಗಮನ ನೀಡಬೇಕು. ಮರೆವು ರೋಗದಂತಹ ಸಮಸ್ಯೆ ಕಾಡುವ ಸಾಧ್ಯತೆ ಇದ್ದಲ್ಲಿ ಈ ಕೆಲವು ಅಂಶಗಳತ್ತ ಗಮನ ಕೊಡಬೇಕು. ಬೆರ್ರಿಗಳು ಬ್ಲೂಬೆರ್ರಿ, ಚೆರ್ರಿಹಣ್ಣು ಮತ್ತು ಸ್ಟ್ರಾಬೆರಿಗಳನ್ನು ಆಹಾರದಲ್ಲಿ ಬೆರೆಸಬೇಕು. ಇವು ಅಧಿಕ ಆಂಥೋಸಿಯಾನಿನ್ ಹೊಂದಿರುವ ಕಾರಣ ಮರೆವು ರೋಗ ಮತ್ತು ಅಲ್ಜೀಮರ್ಗಳ ವಿರುದ್ಧ ಶಕ್ತಿ ಕೊಡುತ್ತದೆ. ಅಲ್ಲದೆ ಬೆರ್ರಿಗಳಲ್ಲಿ ವಿಟಮಿನ್ ಸಿ, ಇ ಮತ್ತು ಆಂಟಿ ಆಕ್ಸಿಡಂಟ್ಗಳಿದ್ದು ಉರಿಯೂತ ಸಮಸ್ಯೆಯಿಂದ ಕಾಪಾಡಿ ಉತ್ತಮ ಮಾನಸಿಕ ಆರೋಗ್ಯ ಕೊಡುತ್ತದೆ. ಬ್ರೊಕೊಲಿ ಈ ತರಕಾರಿಯಲ್ಲಿ ಎರಡು ಪ್ರಮುಖ ಪೌಷ್ಟಿಕಾಶಂಗಳಿದ್ದು, ನಿಮ್ಮ ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಇವು ಖೊಲೈನ್ ಆಗಿದ್ದು, ನೆನಪುಶಕ್ತಿಗೆ ಉತ್ತೇಜನ ಕೊಡುತ್ತದೆ. ವಿಟಮಿನ್ ಕೆ ಉತ್ತಮ ನಡವಳಿಕೆ ಸಾಮರ್ಥ್ಯ ಕೊಡುತ್ತದೆ. ದೊಡ್ಡ ಪ್ರಮಾಣದಲ್ಲಿ ಬ್ರೊಕೊಲಿ ಸೇವಿಸಿದವರು ಇತರರಿಗಿಂತ ನೆನಪು

ಪೌಲ್‌ ಬೆಟ್ಟಿಗೆ ಪ್ರತಿಷ್ಠಿತ ಮ್ಯಾನ್‌ ಬುಕರ್

Image
‌ 27 Oct, 2016 ಪಿಟಿಐ ಲಂಡನ್‌ :  ಅಮೆರಿಕದ ಲೇಖಕ ಪೌಲ್‌ ಬೆಟ್ಟಿ ಅವರು ಪ್ರತಿಷ್ಠಿತ ಮ್ಯಾನ್‌ ಬುಕರ್‌ ಪ್ರಶಸ್ತಿಗೆ ಪಾತ್ರರಾಗಿದ್ದು, ಈ ಪ್ರಶಸ್ತಿಗಳಿಸಿದ ಅಮೆರಿಕದ ಮೊದಲಲೇಖಕರಾಗಿದ್ದಾರೆ.ಅಮೆರಿಕದ ಜನಾಂಗೀಯ ರಾಜಕಾರಣ ಕುರಿತು ವಿಡಂಬನಾತ್ಮಕ ವಾಗಿರುವ ತಮ್ಮ 'ದಿ ಸೆಲ್‌ಔಟ್‌' ಕೃತಿಗೆ ಅವರು ಈ ಪ್ರಶಸ್ತಿ ಗಳಿಸಿದ್ದಾರೆ. ಆಫ್ರಿಕನ್‌ ಅಮೆರಿಕನ್‌ ವ್ಯಕ್ತಿಯೋರ್ವ  ತನ್ನ ಅಸ್ತಿತ್ವ ದೃಢಪಡಿಸಿಕೊಳ್ಳುವ ಸಲುವಾಗಿ ಲಾಸ್‌ ಏಂಜಲೀಸ್‌ನಲ್ಲಿ ಜೀತಪದ್ಧತಿ ಮತ್ತು ವರ್ಣಭೇದ ಪದ್ಧತಿಯನ್ನು ಪುನಃ ಆರಂಭಿಸುವ ವಿಡಂಬನಾತ್ಮಕತೆ ಈ ಕೃತಿಯ ತಿರುಳಾಗಿದೆ. ಈ ಕೃತಿ 'ಆಘಾತಕಾರಿ ಮತ್ತು ಅನಿರೀಕ್ಷಿತ ಹಾಸ್ಯ'ವುಳ್ಳದ್ದು ಎಂದು ತೀರ್ಪುಗಾರರು ವ್ಯಾಖ್ಯಾನಿಸಿದ್ದಾರೆ. ಮಂಗಳವಾರ ರಾತ್ರಿ ಲಂಡನ್‌ನ ಗಿಲ್ಡ್‌ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಟ್ಟಿ ಅವರು ₹ 40.81ಲಕ್ಷ ಮೌಲ್ಯದ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, 'ನಾನು ಬರೆಯುವುದನ್ನು ದ್ವೇಷಿಸುತ್ತೇನೆ' ಎಂದು ಹೇಳಿದ್ದಾರೆ. 'ಇದು ಕಷ್ಟದ ಪುಸ್ತಕ. ಇದನ್ನು ಬರೆಯಲು ನನಗೆ ಕಷ್ಟವಾಗಿತ್ತು.ಇದನ್ನು ಓದುವುದು ಕಷ್ಟ ಎಂದೂ ನನಗೆ ತಿಳಿದಿದೆ. ಎಲ್ಲರೂ ವಿವಿಧ ದೃಷ್ಟಿಕೋನಗಳಿಂದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ' ಎಂದು ಬೆಟ್ಟಿ ಅವರು  ಹೇಳಿದ್ದಾರೆ. 'ನಾಲ್ಕು ತಾಸುಗಳ

Paul Beatty's "The Sellout" wins 2016 Man Booker Prize

   Submitted by Alice on Tue, 2016-10-25 21:49 Man Booker Prize 2016 winner ------------------------------ The Sellout by Paul Beatty is named winner of the 2016 Man Booker Prize for Fiction. The Sellout is published by small independent publisher Oneworld, who had their first win in 2015 with Marlon James' A Brief History of Seven Killings . The 54-year-old New York resident, born in Los Angeles, is the first American author to win the prize in its 48-year history. US authors became eligible in 2014. The 2016 shortlist included two British, two US, one Canadian and one British-Canadian writer. The Sellout is a searing satire on race relations in contemporary America. The Sellout is described by The New York Times as a 'metaphorical multicultural pot almost too hot to touch', whilst the Wall Street Journal called it a 'Swiftian satire of the highest order. Like someone shouting fire in a crowded theatre, Mr. Beatty has

KPSC ಪ್ರಥಮ /ದ್ವಿತೀಯ ದರ್ಜೆ ಸಹಾಯಕರ (FDA/SDA) ಅಂತಿಮ ಪಟ್ಟಿ ಪ್ರಕಟ*

24-10-2016 http://kpsc.kar.nic.in/finalist%20fda.htm 🌸 *KPSC ದ್ವಿತೀಯ ದರ್ಜೆ ಸಹಾಯಕರ (SDA) ಅಂತಿಮ ಪಟ್ಟಿ ಪ್ರಕಟ*👇 http://kpsc.kar.nic.in/finalist%20sda.htm 🌼 *53 ಕಂಪ್ಯೂಟರ್ ಶಿಕ್ಷಕರ ನೇಮಕಾತಿ ಪಟ್ಟಿ ಪ್ರಕಟ* (Including 01 Teacher court order ) http://kpsc.kar.nic.in/finalist%2053%20post%20of%20compteacher.htm

*2016-17 ನೇ ಸಾಲಿನ ಎರಡು ವರ್ಷದ ಬಿ.ಇಡಿ. ಕೋರ್ಸಿಗೆ ದಾಖಲಾತಿ ಅಧಿಸೂಚನೆ:~*

Image
ಅರ್ಜಿ ಸಲ್ಲಿಕೆಯ ಅವಧಿ: ದಿನಾಂಕ 25-10-2016 ರಿಂದ 16-11-2016 ವರೆಗೆ ಹೆಚ್ಚಿನ ಮಾಹಿತಿಗಾಗಿ: * www.schooleducation.kar.nic.in * ಭೇಟಿ ನೀಡಿ.

ಗದಗ ಜಿಲ್ಲೆಯಲ್ಲಿ ಕಾವಲುಗಾರ ಮತ್ತು ಅಡುಗೆ ಸಹಾಯಕರ ಹುದ್ದೆ ಗಳಿಗೆ ಅರ್ಜಿ ಆಹ್ವಾನ 20/10/16

Image

ಅಕ್ಟೋಬರ 23/24 ರಂದು ಇಗ್ನೋ ಬಿ.ಎಡ್ ಪ್ರವೇಶ ಪರೀಕ್ಷೆ

Image

ದೀಪಾವಳಿ ಗಿಫ್ಟ್ :ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ

Image
ಬೆಂಗಳೂರು, ಅಕ್ಟೋಬರ್ 21: ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಕೊಡುಗೆಯಾಗಿ ಕಾಂಗ್ರೆಸ್ ಸರ್ಕಾರ ಶುಕ್ರವಾರ ಸಂಜೆ ಸಿಹಿ ಸುದ್ದಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಟ್ಟಿಭತ್ಯೆಯನ್ನು 2012ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಶೇ.4.25ರಷ್ಟು ಏರಿಕೆ ಮಾಡಿದ್ದಾರೆ. ಈ ಬಗ್ಗೆ ಹಣಕಾಸು ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಸೌರಮಾನ ಯುಗಾದಿ ನಂತರ ದೀಪಾವಳಿ ಹಬ್ಬಕ್ಕೆ ಈ ಗಿಫ್ಟ್ ಸಿಕ್ಕಿದೆ. ಜುಲೈ 1, 2016ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳ ಆದೇಶ ಜಾರಿಗೆ ಬರಲಿದೆ. ಇದರಿಂದಾಗಿ 8.5 ಲಕ್ಷ ನೌಕರರ ಮಾಸಿಕ ವೇತನ ಹೆಚ್ಚಳವಾಗಲಿದೆ. [] ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯಸರ್ಕಾರವೂ ನೌಕರರ ತುಟ್ಟಿಭತ್ಯೆ ಮಾಡುವ ನಿರೀಕ್ಷೆಯಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ವಿಳಂಬ ನೀತಿ ಅನುಸರಿಸಿತು. ಅಲ್ಲದೆ, ಏಳನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲು ಮುಂದಾಗಿಲ್ಲದಿರುವುದು ನೌಕರರ ಅಸಮಾಧಾನಕ್ಕೆ ಕಾರಣವಾಗಿತ್ತು. ಏಪ್ರಿಲ್ 14ರಂದು ಮೂಲ ವೇತನದ ಶೇ. 33 ರಿಂದ ಶೇ36ರಷ್ಟು ಹೆಚ್ಚಿನ ಸಂಬಳ ಏರಿಕೆಯಾಗಿತ್ತು. ಈಗ ಶೇ.4.25ರಷ್ಟು ಏರಿಕೆ ಮಾಡಿ, ಶೇ 40.25ಗೆ ತರಲಾಗಿದೆ. ಸರ್ಕಾರಿ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು, ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುವವರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆ

ಸೂಚನೆ:ಕೆ.ಪಿ.ಟಿ.ಸಿಎಲ್ ಗೆ ಅರ್ಜಿ ಸಲ್ಲಿಸಿದವರು ಒಂದು ಕಂಪನಿಗೆ ಒಂದೇ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುವದು

Image

ಪಪ್ಪಾಯಿ ಏಕೆ ತಿನ್ನಬೇಕು…? ಇಲ್ಲಿವೆ ನೋಡಿ ಕೆಲವು ಕಾರಣಗಳು

Image
ಪಪ್ಪಾಯಿ ಒಂದು ಅದ್ಭುತ ಹಣ್ಣಾಗಿದ್ದು ನಿತ್ಯದ ಆಹಾರದಲ್ಲಿ ಅದನ್ನು ಸೇರ್ಪಡೆಗೊಳಿಸಿಕೊಂಡರೆ ಒಳಿತಾಗುತ್ತದೆ. ಶರೀರದ ತೂಕ ಕಡಿಮೆ ಮಾಡಿಕೊಳ್ಳ ಬಯಸುವವರಿಗೆ ಇದು ಒಂದು ವರದಾನವೇ ಸರಿ. ಕಿತ್ತಳೆ ಬಣ್ಣದ ಸಿಹಿಯಾದ ಈ ರಸಭರಿತ ಹಣ್ಣು ವಿಟಮಿನ್‍ಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಗುಣಕಾರಿ ಲಕ್ಷಣಗಳನ್ನುಹೊಂದಿದೆ. ಉರಿಯೂತ ನಿವಾರಕ : ಪಪ್ಪಾಯಿ ಚಿಮೊಪಾಪಿನ್ ಮತ್ತು ಪಾಪಿನ್ ಗಳೆಂಬ ಎರಡು ಪ್ರೋಟೀನ್ ಜೀರ್ಣಕಾರಕ ಕಿಣ್ವಗಳನ್ನು, ವಿಟಮಿನ್ ಎ, ಸಿ ಮತ್ತು ಕ್ಯಾರೋಟಿನ್ ಹೊಂದಿದೆ. ಇವೆಲ್ಲವೂ ಈ ಹಣ್ಣಿಗೆ ರುಮಟಾಯ್ಡ್ ಆಥ್ರೈಟಿಸ್ ವಿರುದ್ಧ ಹೋರಾಟಕ್ಕೆ ಕಸುವು ನೀಡುತ್ತವೆ ಮತ್ತು ಉರಿಯೂತಗಳ ನಿವಾರಣೆಗೂ ಸಹಕಾರಿಯಾಗಿದೆ. ಕರುಳಿನ ರಕ್ಷಕ : ಪಪ್ಪಾಯಿ ಜೀವನಿರೋಧಕ (ಆ್ಯಂಟಿ ಬಯಾಟಿಕ್)ಗಳಿಂದ ಹಾನಿಗೊಂಡ ಉತ್ತಮ ಕರುಳಿನ ಬ್ಯಾಕ್ಟೀರಿಯಾಗಳನ್ನು ಪುನಶ್ಚೇತನಗೊಳಿಸುತ್ತದೆ. ವಾಕರಿಕೆ ನಿವಾರಕ: ಪಪ್ಪಾಯಿ ಕಿಣ್ವಗಳ ಒಂದು ಸಮೃದ್ಧ ಮೂಲವಾಗಿದ್ದು ಕರುಳಿನ ಆಮ್ಲವನ್ನು ಸಮತೋಲನಗೊಳಿಸುತ್ತದೆ. ಈ ಹಣ್ಣು ವಾಕರಿಕೆಯನ್ನು ಹೋಗಲಾಡಿಸುತ್ತದೆ. ಒತ್ತಡ ಶಾಮಕ : ಪಪ್ಪಾಯಿಯಲ್ಲಿರುವ ವಿಟಮಿನ್ ಸಿ ಒತ್ತಡದ ಹಾರ್ಮೋನ್‍ಗಳ ಹರಿವನ್ನು ನಿರ್ಬಂಧಿಸುತ್ತದೆ. ತನ್ಮೂಲಕ ಒತ್ತಡವನ್ನು ತಗ್ಗಿಸುತ್ತದೆ. ಋತುಚರ್ಯೆ ಸುಗಮ : ಋತು ಸಂಬಂಧಿ ತೊಂದರೆಗಳಿಗೆ ಪಪ್ಪಾಯಿ ರಾಮಬಾಣ ಎಂದು ಬಿಂಬಿತವಾಗಿದೆ. ಒಂದು ಪಪ್ಪಾಯಿ ಎಲೆ, ಹುಣಸೆಹಣ್ಣು ಮತ್

ಗೂಗಲ್ ವಿಜ್ಞಾನ ಉತ್ಸವ-2016 ಫೈನಲ್ ನಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು

Image
ಗೂಗಲ್ ವಿಜ್ಞಾನ ಉತ್ಸವ-2016 ಫೈನಲ್ ನಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ನವದೆಹಲಿ:  ಗೂಗಲ್ ವಿಜ್ಞಾನ ಉತ್ಸವ -2016 ರ ಫೈನಲ್ಸ್ ಗೆ  ಭಾರತದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 50,000 ಡಾಲರ್ ಸ್ಕಾಲರ್ ಶಿಪ್ ಗೆಲ್ಲಲು ಅವಕಾಶ ಇರುವ ಗೂಗಲ್ ವಿಜ್ಞಾನ ಉತ್ಸವದ ಫೈನಲ್ ನಲ್ಲಿ ಭಾಗವಹಿಸುತ್ತಿರುವ 16 ಸ್ಪರ್ಧಿಗಳ ಪೈಕಿ ಭಾರತೀಯರಾದ ಶ್ರೇಯಾಂಕ್ ಹಾಗೂ ಮನಿಷಾ ಫಾತಿಮಾ ಸಹ ಇದ್ದು, ಸೆ.27 ರಂದು ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ. 16 ವರ್ಷದ ಶ್ರೇಯಾಂಕ್ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಯಾಗಿದ್ದು ಕೀಪ್ ಟ್ಯಾಬ್ ಎಂಬ ಶೀರ್ಷಿಕೆಯಡಿ ಆಳವಾದ ಕಲಿಕೆ ಕ್ರಮಾವಳಿಗಳ ಕುರಿತಾದ ಪ್ರಾಜೆಕ್ಟ್ ನ್ನು ಸಲ್ಲಿಸಿದ್ದಾರೆ. 15 ವರ್ಷದ ಮನಿಷಾ ಫಾತಿಮಾ, ಹೈದರಾಬಾದ್ ನ ಸಾಧು ವಾಸ್ವಾನಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಭತ್ತದ ಗದ್ದೆಗಳಿಗೆ ನೆರವಾಗುವ ಸ್ವಯಂಚಾಲಿತ ನೀರಿನ ನಿರ್ವಹಣೆ ವ್ಯವಸ್ಥೆಯ ಕುರಿತು ಯೋಜನೆಯನ್ನು ಸಲ್ಲಿಸಿದ್ದಾರೆ.  ಗೂಗಲ್ ವಿಜ್ಞಾನ ಉತ್ಸವ-2016 ಕ್ಕಾಗಿ ವಿಶ್ವದ 9 ರಾಷ್ಟ್ರಗಳಿಂದ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅತ್ಯುತ್ತಮವಾದ 16 ಯೋಜನೆಗಳನ್ನು ವಿದ್ಯಾರ್ಥಿಗಳಿಂದ ಪಡೆಯಲಾಗಿದ್ದು, ಸೆ.27 ರಂದು ನಡೆಯಲಿರುವ ಫೈನಲ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿರುವ 16 ಸ್ಪರ್ಧಿಗಳು ಪೋಷಕರೊಂದಿಗೆ ಕ್ಯಾಲಿಫೋರ್ನಿಯಾಗೆ ತೆರಳಲಿದ್ದಾರೆ.

6.29ಕ್ಕೆ ತೀರ್ಥಸ್ವರೂಪಿಣಿಯಾಗಿ ಉಕ್ಕಿ ಹರಿದ ಕಾವೇರಿ ತಾಯಿ!

Image
Updated: Mon, Oct 17, 2016, 6:44 [IST] By:  Prasad ಭಾಗಮಂಡಲ, ಅಕ್ಟೋಬರ್ 17 : ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಶುಭಸಮಯದಲ್ಲಿ ಅಕ್ಟೋಬರ್ 17ರ ಬೆಳಿಗ್ಗೆ ಸರಿಯಾಗಿ 6.29ಕ್ಕೆ ಭಾಗಮಂಡಲದ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತಾಯಿ ತೀರ್ಥಸ್ವರೂಪಿಣಿಯಾಗಿ ಉಕ್ಕಿಹರಿದಿದ್ದಾಳೆ. ಈ ವಿಸ್ಮಯಕರ ಘಟನೆಯನ್ನು ನೋಡಲು ಕರ್ನಾಟಕ ಮತ್ತು ದೇಶದ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಮಂಡಲದಲ್ಲಿ ನೆರೆದಿದ್ದಾರೆ. ಕಾವೇರಿ ತೀರ್ಥದಲ್ಲಿ ಪವಿತ್ರಸ್ನಾನ ಮಾಡಿ ಪುನೀತರಾಗಲು ಕಾತುರದಿಂದ ಕಾದಿದ್ದಾರೆ. ಸರಿಯಾಗಿ 6.29ಕ್ಕೆ ತೀರ್ಥೋದ್ಭವವಾಗುತ್ತಿದ್ದಂತೆ, ಮಂತ್ರಘೋಷಗಳ ನಡುವೆ ಅಲ್ಲಿ ನೆರೆದವರಿಗೆ ತೀರ್ಥಪ್ರೋಕ್ಷಣೆ ಮಾಡಲಾಯಿತು. ಕೊಡಗಳ ಮೂಲಕ ಪುಣ್ಯ ಸ್ನಾನ ಮಾಡಿ ಭಕ್ತಾದಿಗಳು ಪುನೀತರಾದರು. ಪ್ರಧಾನ ಅರ್ಚಕರ ನೇತೃತ್ವದಲ್ಲಿ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತಾಯಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ. ಮಳೆಗಾಲ ಕೈಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವಸೆಲೆಯಾಗಿರುವ ಕಾವೇರಿ ಜನರನ್ನು ಕಾಪಾಡಲೆಂದು ಕೂಡ ಪೂಜೆ ಸಲ್ಲಿಸಲಾಗುತ್ತಿದೆ. ಇಲ್ಲಿ ನೆರೆದಿರುವ ಜನರಿಗಾಗಿ ಜಿಲ್ಲಾಡಳಿತ ಸರ್ವಸಿದ್ಧತೆ ಮಾಡಿದೆ. ನೂಕುನುಗ್ಗಲು ಸಂಭವಿಸದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಬಸ್ ಸೌಲಭ್ಯ, ಬಂದವರಿಗೆ ಊಟೋಪಚಾರಕ್ಕಾಗಿ, ವಸತಿಗಾಗಿ ಕೂಡ ಸಕಲ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿದೆ.

ಮತ್ತೆ ಮತ್ತೆ ಬಿಸಿ ಮಾಡಲೇಬಾರದ ಆಹಾರ ಪದಾರ್ಥಗಳು:

ಮನೆಗಳಲ್ಲಿ ಮುನ್ನಾದಿನದ ಆಹಾರ ಪದಾರ್ಥಗಳು ಉಳಿದುಕೊಂಡಿದ್ದರೆ ಅವು ವ್ಯರ್ಥವಾಗದಂತೆ ಮತ್ತೊಮ್ಮೆ ಬಿಸಿ ಮಾಡುವುದು ಮಾಮೂಲು. ಕೆಲವರು ಇದನ್ನು ವಿರೋಧಿಸುತ್ತಾರಾದರೂ ಹೆಚ್ಚಿನವರು ಯಾವುದೇ ತಕರಾರಿಲ್ಲದೇ ಅದನ್ನೇ ಬಿಸಿ ಮಾಡಿಕೊಂಡು ಸೇವಿಸುತ್ತಾರೆ. ಇದು ತೀರಾ ತೆಗೆದುಹಾಕುವಂಥದ್ದೇನಲ್ಲ. ಆದರೆ ಆಹಾರವನ್ನು ಮತ್ತೆ ಮತ್ತೆ ಬಿಸಿಮಾಡಿ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂಬ ಕಟುಸತ್ಯ ಹೆಚ್ಚಿನವರಿಗೆ ಗೊತ್ತೇ ಇಲ್ಲ ಎನ್ನುವುದು ಇಲ್ಲಿಯ ಸಮಸ್ಯೆ. ಮನೆಗಳಲ್ಲಿ ರಜಾದಿನಗಳ ಡಿನ್ನರ್,ಹುಟ್ಟುಹಬ್ಬದ ಪಾರ್ಟಿ ಅಥವಾ ಇನ್ಯಾವುದೇ ಸಮಾರಂಭದ ಬಳಿಕ ಆಹಾರ ಪದಾರ್ಥಗಳು ಬಾಕಿ ಉಳಿದುಕೊಂಡಿದ್ದರೆ ಅವುಗಳನ್ನು ಮತ್ತೆ ಬಿಸಿ ಮಾಡುವ ಸಂದರ್ಭದಲ್ಲಿ ಈ ಕೆಳಗೆ ಉಲ್ಲೇಖಿಸಲಾಗಿರುವ ಆಹಾರಗಳು ಅವುಗಳಲ್ಲಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ........ ಬೀಟ್ರೂಟ್,ಎಲೆರೂಪದ ತರಕಾರಿಗಳು ಬೀಟ್ರೂಟ್ ಮತ್ತು ಬಸಳೆ,ಸಲಾಡ್ ಪತ್ತಾ,ಅಜವಾನದ ಎಲೆಯಂತಹ ತರಕಾರಿಗಳು ಸಮೃದ್ಧ ನೈಟ್ರೈಟ್ಗಳನ್ನು ಹೊಂದಿದ್ದು, ನಮ್ಮ ಶರೀರಕ್ಕೆ ಪೂರಕವಾಗಿವೆ. ಆದರೆ ಈ ತರಕಾರಿಗಳ ಪದಾರ್ಥಗಳನ್ನು ಮತ್ತೊಮ್ಮೆ ಬಿಸಿ ಮಾಡಿದಾಗ ಈ ನೈಟ್ರೈಟ್ಗಳು ನೈಟ್ರೋಸಮೈನ್ಗಳಾಗಿ ಪರಿವರ್ತನೆಗೊಳ್ಳುತ್ತವೆ ಮತ್ತು ಈ ನೈಟ್ರೋಸಮೈನ್ಗಳು ಕ್ಯಾನ್ಸರ್ಕಾರಕಗಳಾಗಿವೆ. ಹೀಗಾಗಿ ಬೀಟ್ರೂಟ್,ಎಲೆರೂಪದ ತರಕಾರಿಗಳ ಪದಾರ್ಥಗಳು ಬಾ

ಗಿನ್ನೀಸ್ ಪುಟ ಸೇರಿದ ತೆಲಂಗಾಣದ ನಾಡಹಬ್ಬ ‘ಬತುಕಮ್ಮ’ ಆಚರಣೆ

Image
ಹೈದರಾಬಾದ್, ಅ.9 -ತೆಲಂಗಾಣದ ಸಾಂಪ್ರದಾಯಿಕ ನಾಡಹಬ್ಬ ಬತುಕಮ್ಮ ಆಚರಣೆ ವಿಶ್ವ ದಾಖಲೆಗೆ ಪಾತ್ರವಾಗಿದೆ. ನಿನ್ನೆ ಮುತ್ತಿನನಗರಿ ಹೈದರಾಬಾದ್‍ನ ಲಾಲ್‍ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಬತುಕಮ್ಮ ಹಬ್ಬವನ್ನು ಏರ್ಪಡಿಸಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಮಹಿಳೆಯರು ಭಾಗವಹಿಸಿ ನೂತನ ದಾಖಲೆ ನಿರ್ಮಿಸಿದರು.  ಗಿನ್ನೀಸ್ ಪುಟ ಸೇರಿದೆ. ಕೇರಳದಲ್ಲಿ 2015ರಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ದಾಖಲೆಯನ್ನು ಈ ಬಾರಿಯ ಬತುಕಮ್ಮ ಹಬ್ಬದ ಆಚರಣೆ ಮುರಿದಿದೆ. ಕೇರಳದಲ್ಲಿ ಓಣಂ ಆಚರಣೆಯಲ್ಲಿ 5015 ಮಹಿಳೆಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ 9,292 ಪ್ರಮದೆಯರು ಪಾಲ್ಗೊಳ್ಳುವ ಮೂಲಕ ಹೊಸ ವಿಶ್ವ ದಾಖಲೆ ಸೃಷ್ಟಿಯಾಗಿದೆ. ಕಾರ್ಯಕ್ರಮದಲ್ಲಿ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿಜರ್, ಮಿನ್ ಪ್ಲಾನೆಟ್ ಇಂಡಿಯಾ ರಶ್ಮಿ ಠಾಕೂರ್, ತೆಲಂಗಾಣ ಗೃಹ ಸಚಿವ ನರಸಿಂಹ ರೆಡ್ಡಿ, ಪ್ರವಾಸೋದ್ಯಮ ಸಚಿವ ನರಸಿಂಹ ಲಾಲ್ ಹಾಗೂ ಸರ್ಕಾರದ ಉನ್ನತಾಧಿಕಾರಿಗಳು ಹಾಜರಿದ್ದರು. ಇಷ್ಟು ಸಂಖ್ಯೆಯ ವನಿತೆಯರು ಒಂದೆಡೆ ಸೇರಿ ಕಣ್ಮನ ತಣಿಸುವ ಪುಷ್ಪಾಲಂಕಾರವನ್ನು ವಿನ್ಯಾಸಗೊಳಿಸಿದ ಅಪೂರ್ವ ವಿದ್ಯಮಾನವಿದು. ಇದರೊಂದಿಗೆ ವನಿತೆಯರ ಗಾಯನ ಮತ್ತು ನೃತ್ಯ ಕಾರ್ಯಕ್ರಮಗಳು ವಿಶೇಷವಾಗಿ ಗಮನಸೆಳೆದವು.  ಬತುಕಮ್ಮ ಹಬ್ಬವನ್ನು ಭಾದ್ರಪದ ಅಮಾವಾಸ್ಯೆಯ ಸಂದರ್ಭದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇಡೀ ವಾರ ಮಣ್ಣಿನಿಂದ ಮಾಡಿದ ದುರ್ಗೆಯನ್ನು ಪೂಜಿಸ

ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾನಟೋಸ್ ಗೆ ನೊಬೆಲ್ ಶಾಂತಿ ಪ್ರಶಸ್ತಿ:-

Image
Nobel Peace Prize 2016,  ನೊಬೆಲ್ ಶಾಂತಿ ಪ್ರಶಸ್ತಿ 2016, ಕೊಲಂಬಿಯಾ ಅಧ್ಯಕ್ಷ, ಜುವಾನ್ ಮ್ಯಾನುಯೆಲ್ ಸ್ಯಾನಟೋಸ್ ಗೆ.. English summary Colombia's President Juan Manuel Santos was on Friday declared the winner of the Nobel Peace Prize 2016. ಓಸ್ಲೋ: ಕೊಲಂಬಿಯಾದ ಸರ್ಕಾರ ಮತ್ತು ಎಫ್ಎಆರ್ ಸಿ ಬಂಡಾಯ ಗುಂಪಿನ ನಡುವೆ ಶಾಂತಿ ನೆಲೆಸಲು ಪ್ರಮುಖ ಕಾರಣವಾಗಿದ್ದ ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾರ್ವೆಯ ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಸಮಿತಿ 2016 ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಅಂತಿಮಗೊಳಿಸಿದ್ದು, ಕಳೆದ 50 ವರ್ಷಗಳಿಂದ ಕೊಲಂಬಿಯಾ ಸರ್ಕಾರ ಮತ್ತು ಎಫ್ಎಆರ್ ಸಿ ನಡುವೆ ನಡೆಯುತ್ತಿದ್ದ ನಾಗರಿಕ ಯುದ್ಧವನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಗೆ ಪ್ರಶಸ್ತಿಯನ್ನು ಘೋಷಿಸಿದೆ. ಕಳೆದ 50 ವರ್ಷ ನಡೆದ ಯುದ್ಧದಲ್ಲಿ 220,000 ಕೊಲಂಬಿಯನ್ನರು ಮೃತಪಟ್ಟಿದ್ದರು. ಅಷ್ಟೇ ಅಲ್ಲದೆ 6 ಮಿಲಿಯನ್ ಕೊಲಂಬಿಯನ್ನರು ಮೂಲ ಪ್ರದೇಶದಿಂದ ಸ್ಥಳಾಂತರಗೊಂಡಿದ್ದರು. ಕ್ಯೂಬಾದಲ್ಲಿ 2012 ರಲ್ಲಿ ಪ್ರಾರಂಭವಾಗಿದ್ದ ಮಾತುಕತೆಯ ಭಾಗವಾಗಿ ಶಾಂತಿಯುತ ಒಪ್ಪಂದಕ್ಕೆ ಸಹಿಹಾಕುವ ಪ್ರಸ್ತಾವನೆಗೆ ಶೇ.52 ರಷ್ಟು ಜನರು ವಿರೋಧ

ರಾಷ್ಟ್ರೀಯ ಶಿಕ್ಷಣ ನೀತಿ 2016:-

ವಿಸ್ಮಯ ನೂತನ ಮನು ಧರ್ಮದ ನೂತನ ಶಿಕ್ಷಣ ನೀತಿಯಲ್ಲಿ ದೇಶದ ಜನಸಂಖ್ಯೆಯ ಶೇ.80ರಷ್ಟು ಜನರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸುವ ಮೂಲಕ ಹೊಸ ವರ್ಗದ ಕಾರ್ಮಿಕರನ್ನು ರೂಪಿಸುವ ಸ್ಥಿತಿಯಿದೆ. ಜ್ಞಾನಾಧಾರಿತ ಶಿಕ್ಷಣವನ್ನು ಉಳಿದ ಶೇ.20ರಷ್ಟು ಜನರಿಗೆ ಮೀಸಲಾಗಿಡುವ ವ್ಯವಸ್ಥೆಯಿದು. ಸಮಾಜವನ್ನು ಬೆಳಗಿಸುವಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಶಿಕ್ಷಣ ರಾಜ್ಯಗಳ ಕೈಯಲ್ಲಿರುವ ಒಂದು ಪ್ರಧಾನ ಅಸ್ತ್ರವಾಗಿದ್ದು ಜ್ಞಾನವನ್ನು ಸಾಮಾನ್ಯ ಜನತೆಗೆ ತಲುಪಿಸುವ ಸಾಧನವಾಗಿದೆ. ಮೋದಿ ಸರಕಾರದ ನೂತನ ಶಿಕ್ಷಣ ನೀತಿ- 2016 (ಎನ್ಇಪಿ) ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಎನ್ಇಪಿಯ ಇತ್ತೀಚಿನ ಕರಡು ಪ್ರತಿಯು ದೇಶದ ಕಾರ್ಮಿಕರಲ್ಲಿ 'ಕೌಶಲ್ಯ ಅಭಿವೃದ್ಧಿ'ಯತ್ತ ಹೆಚ್ಚಿನ ಒತ್ತು ನೀಡಿದೆ. ಜಾಗತಿಕ ಮಾರುಕಟ್ಟೆಗೆ ನಿಗ್ರಹಿತ ಕುಶಲ ಕಾರ್ಮಿಕರನ್ನು ಉತ್ಪಾದಿಸುವ ಬದ್ಧತೆಯ ಜೊತೆಗೆ ಶೇ.80ರಷ್ಟು ಸಾಮಾನ್ಯ ದುಡಿಯುವ ವರ್ಗದ ಮಂದಿಗೆ ಶಿಕ್ಷಣದ ಅವಕಾಶ ನಿರಾಕರಿಸಿ, ಜಾಗತಿಕ ಪ್ರಜೆಗಳು ಎಂದು ಉಲ್ಲೇಖಿಸಲ್ಪಟ್ಟ, ಬ್ರಾಹ್ಮಣೀಕೃತ ವೌಲ್ಯದ ಆಶಯಗಳಿಗೆ ಪುಷ್ಟಿ ನೀಡುವ ಶಿಕ್ಷಣ ನೀತಿಯಿದು. ಕಳೆದ ವರ್ಷ ಮಾನವ ಸಂಪನ್ಮೂಲ ಸಚಿವಾಲಯವು (ಎಂಎಚ್ಆರ್ಡಿ) ನೂತನ ಶಿಕ್ಷಣ ನೀತಿಯ ಕರಡು ಪ್ರತಿ ರಚಿಸಲು ಟಿ.ಎಸ್.ಆರ್. ಸುಬ್ರಮಣಿಯನ್ ನೇತೃತ್ವದಲ್ಲಿ ಐವರು ಸದಸ್ಯರನ್ನೊಳಗೊಂಡ

Provisional Select list and Cutoff Marks for First Division Assistant is published:-

Image
Cutoff list:-

PROVISIONAL SELECTION LIST OF (7/10/2016)  FIRST DIVISION ASSISTANT

http://kpsc.kar.nic.in/fda%20selecton%20list.pdf

NOTIFICATION OF GROUP C NON TECHNICAL POSTS DT 05-10-2016. ಕೆಪಿಎಸ್ಸಿ: 1353 ಹುದ್ದೆಗಳಿಗೆ ಅಧಿಸೂಚನೆ

ವಿವಿಧ ಇಲಾಖೆಯಲ್ಲಿನ ಗ್ರೂಪ್ ಸಿ ಹುದ್ದೆಗಳಿಗೆ ನೇಮಕ ಕರ್ನಾಟಕ ಲೋಕ ಸೇವಾ ಆಯೋಗ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಗ್ರೂಪ್ 'ಸಿ' ವೃಂದದ ತಾಂತ್ರಿಕೇತರ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಶುಕ್ರವಾರದಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಒಟ್ಟು 1,353 ಹುದ್ದೆಗಳಿಗೆ ನೇಮಕ ನಡೆಯಲಿದೆ. ಮುಖ್ಯವಾಗಿ ಮೂರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ವಿವಿಧ ಶಿಕ್ಷಕರ ಮತ್ತು ನಿಲಯ ಪಾಲಕರ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಉಳಿದಂತೆ ಪೌರಾಡಳಿತ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಸಂಸದೀಯ ಸಚಿವಾಲಯದಲ್ಲಿನ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಯೋಗದ ದಿನಾಂಕ 03-03-2016ರ ಅಧಿಸೂಚನೆಯಲ್ಲಿ ಅಧಿಸೂಚಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ 86 ಮಹಿಳಾ ಮೇಲ್ವಿಚಾರಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಅಧಿಸೂಚನೆಯಲ್ಲಿ 557 ಹುದ್ದೆಗಳಿಗೆ ಮತ್ತೇ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸೂಚಿಸಲಾಗಿದೆ. ವಿದ್ಯಾರ್ಹತೆ ಏನು? ಪ್ರತಿ ಹುದ್ದೆಗೆ ಬೇರೆ ಬೇರೆಯಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು, ಬಹುತೇಕ ಎಲ್ಲ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳಾ ಮೇಲ್ವಿಚಾರಕಿ ಹುದ್ದೆಗಳಿಗೆ, ನಿಲಯಪಾಲಕರ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಹಾಗೂ ಶಿಕ್

ವಿಶ್ವ ಶಿಕ್ಷಕರ ದಿನದ ಶುಭಶಾಯಗಳು WORLD TEACHERS DAY BEST WISHES

ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 5 ರಂದು "ವಿಶ್ವ ಶಿಕ್ಷಕರ ದಿನ" ವನ್ನು ಆಚರಿಸಬೇಕೆಂದು "ಯುನೆಸ್ಕೋ " ಕರೆ ನೀಡಿತು. 1966 ರರ ಅಕ್ಟೋಬರ್ 5 ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994 ರ ಅಕ್ಟೋಬರ್ 5 ರಿಂದ "ವಿಶ್ವ ಶಿಕ್ಷಕರ ದಿನ"ವನ್ನಾಚರಿಸಲಾಗುತ್ತದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮದಿನವಾದ ಸೆಪ್ಟೆಂಬರ್ 5ರಂದು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಭಾರತದಲ್ಲಿ  ಆಚರಿಸಲಾಗುತ್ತದೆ. ಸರ್ವಪಲ್ಲಿ ರಾಧಾಕೃಷ್ಣನ್ ಇವರ ಬಗ್ಗೆ ತಿಳುವಳಿಕೆ ಪಡೆಯುವ. (ಜನನ : 5 ನೇ ಸೆಪ್ಟೆಂಬರ್, 1888.) ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಶಿಕ್ಷಕರಾಗಿದ್ದ 'ಡಾ. ಸರ್ವೆಪಲ್ಲಿ ರಾಧಾಕೃಷ್ಣನ್' 1962 ರಲ್ಲಿ ಭಾರತದ ರಾಷ್ಟ್ರಪತಿಯಾದಾಗ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ

ಅತಿದೊಡ್ಡ ಟೆಲಿಸ್ಕೋಪ್‌ ಕಾರ್ಯಾರಂಭ

Image
26 Sep, 2016 ಪಿಟಿಐ ಬೀಜಿಂಗ್‌ :   ಚೀನಾದಲ್ಲಿ ಸ್ಥಾಪಿಸಲಾದ ಜಗತ್ತಿನ ಅತಿ ದೊಡ್ಡ ರೇಡಿಯೊ ಟೆಲಿಸ್ಕೋಪ್‌ ಭಾನುವಾರ ಪರೀಕ್ಷಾರ್ಥ ಕಾರ್ಯಾರಂಭ ಮಾಡಿದೆ. ಐತಿಹಾಸಿಕ ಕ್ಷಣಕ್ಕೆ ನೂರಾರು ಮಂದಿ ಖಗೋಳವಿಜ್ಞಾನಿಗಳು ಹಾಗೂ ಖಗೋಳಾಸಕ್ತರು ಸಾಕ್ಷಿಯಾದರು. ಚಾಲನೆ ನೀಡಿದ ಕೆಲವೇ ನಿಮಿಷಗಳಲ್ಲಿ ಬಾಹ್ಯಾಕಾಶದಿಂದ ಮೊದಲ ಸಂದೇಶವನ್ನು ಸ್ವೀಕರಿಸಿತು. ದೂರದರ್ಶಕವು ಸದ್ಯ ಪರೀಕ್ಷಾ ಹಂತದಲ್ಲಿದ್ದು, ಮೂರು ವರ್ಷದ ಬಳಿಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿದೆ. 4.5 ಕೋಟಿ ವರ್ಷಗಳ ಹಿಂದೆ ಗುಜಿಯೋ ಪ್ರಾಂತ್ಯದ ಪರ್ವತದಲ್ಲಿ ಇದ್ದ ಗುಹೆಯೊಂದು ಕುಸಿದುಬಿದ್ದು ಉಂಟಾಗಿರುವ ಬೃಹದಾಕಾರದ ಗುಳಿಯಲ್ಲಿ ಟೆಲಿಸ್ಕೋಪ್ ನಿರ್ಮಿಸಲಾಗಿದೆ. ₹1200 ಕೋಟಿ ವೆಚ್ಚದ ಈ ಟೆಲಿಸ್ಕೋಪ್‌ನ ತಟ್ಟೆ 30 ಫುಟ್ಬಾಲ್ ಮೈದಾನಗಳಷ್ಟು ವಿಶಾಲವಾಗಿದೆ.  ಒಟ್ಟು 4,450 ಫಲಕಗಳನ್ನು ಜೋಡಿಸಲಾಗಿದ್ದು,  ಪ್ರತಿ ಫಲಕವೂ ತ್ರಿಕೋನಾಕೃತಿಯಲ್ಲಿ 11 ಮೀಟರ್ ಉದ್ದವಿದೆ. ಸುಮಾರು 20 ವರ್ಷಗಳ ನಿರಂತರ ಶೋಧನೆಯ ನಂತರ ಟೆಲಿಸ್ಕೋಪ್‌ ಸ್ಥಾಪನೆಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಲಾಗಿದೆ.  ಈ ಸ್ಥಳದ ಸುತ್ತಮುತ್ತ ಐದು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಜನವಸತಿ  ಪ್ರದೇಶಗಳಿಲ್ಲ. ಈ ವ್ಯಾಪ್ತಿಯಲ್ಲಿ ಬೇರೆ ಯಾವ ರೀತಿಯ ರೇಡಿಯೊ ತರಂಗಗಳು ಕೆಲಸ ಮಾಡುವುದಿಲ್ಲ. ದೂರದ ಆಕಾಂಶಗಂಗೆಯಲ್ಲಿರುವ ನೈಸರ್ಗಿಕ ಜಲಜನಕ ಹಾಗೂ ಸಾಮಾನ್ಯ ಟೆಲಿಸ್ಕೋಪ್‌ಗಳ ಪತ್ತೆ ಮಾಡದ  ಆಕಾಶಕ

SBI becomes 1st domestic bank to open branch in Myanmar

October 4, 2016 • The State Bank of India announced its entry into Myanmar by opening a branch in the capital city of Yangon, becoming the first domestic lender to do so. The Yangon branch is the 54th foreign branch of the nation's largest lender, chairperson Arundhati Bhattacharya, who opened the office. This branch extends the global presence of SBI in 37 countries through 198 offices, she said. Bhattacharya, who became the first chairman to get a second term at SBI last Saturday, said: "SBI has been associated with Myanmar since 1861, when the erstwhile Bank of Bengal operated its branch in the then Rangoon. Later, as part of bank nationalisation, the operations of the Rangoon branch of SBI were taken over by the Peoples' Bank of Burma in February 1963." The Myanmarese central bank earlier this year allowed SBI to open a branch with the primary objective of extending wholesale banking services to foreign corporates.