*ಪಕ್ಷಿಪ್ರೇಮಿ ಶಿಕ್ಷಕ* ಮಹೇಶ್ ಪೂಜಾರಿ

ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ
ಸ.ಪ್ರಾ.ಶಾಲಾ ಶಿಕ್ಷಕರೊಬ್ಬರ ಹವ್ಯಾಸದ ಹಾದಿ ಕುರಿತು ವರದಿ:
(ಕರ್ನಾಟಕ ದರ್ಶನ)
*

*ಕೃತಕ ಗೂಡು:*

ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳ ಸಂತತಿ ಹೆಚ್ಚಿಸುವ ಪಣ ತೊಟ್ಟಂತಿರುವ ಇವರು, ತಮ್ಮ ಮನೆಯ ಅಂಗಳದಲ್ಲಿ ಗುಬ್ಬಚ್ಚಿಗಳಿಗಾಗಿ ಕೃತಕ ಗೂಡುಗಳನ್ನು ನಿರ್ಮಾಣ ಮಾಡಿದ್ದಾರೆ. ಗುಬ್ಬಚ್ಚಿಗಳು ಕೃತಕ ಗೂಡಿನಲ್ಲಿ ಮೊಟ್ಟೆಯಿಟ್ಟು ಸಂತತಿ ವೃದ್ಧಿಸುತ್ತಿವೆ.

ಇವರ ಕೈತೋಟದ ಗಿಡಗಳಲ್ಲಿ ಹತ್ತಾರು ಜೇನುಗೂಡುಗಳಿವೆ. ಈ ಗೂಡುಗಳಿಂದ ಪ್ರತಿವರ್ಷ ಸುಮಾರು ಒಂದು ಕೆ.ಜಿಯಷ್ಟು ಜೇನುತುಪ್ಪ ಪಡೆಯುತ್ತಿದ್ದಾರೆ.

ವರದಿ:ಪ್ರಕಾಶ ಎನ್‌.ಮಸಬಿನಾಳ

ಹಲವರಿಗೆ ಪಕ್ಷಿಗಳನ್ನು ತಂದು ಪಂಜರದಲ್ಲಿ ಇಟ್ಟು ಸಾಕುವುದು ಹವ್ಯಾಸ. ಆದರೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಶಿಕ್ಷಕ ಮಹೇಶ ಪೂಜಾರಿ ಹಾಗಲ್ಲ. ಹಕ್ಕಿಗಳಿಗಾಗಿಯೇ ಕೃತಕ ಗೂಡುಗಳನ್ನು ನಿರ್ಮಿಸಿ ಅವುಗಳಿಗೆ ಆಸರೆ ನೀಡುತ್ತಿದ್ದಾರೆ. ಕೃಷಿ ಪ್ರೇಮಿಯೂ ಇವರಾಗಿದ್ದು ಇವರಿಗೆ 'ಕೃಷಿಶಿಕ್ಷಕ' ಎಂದೂ ಕರೆಯಬಹುದು.

ರಜಾ ದಿನಗಳನ್ನು ಮನೆಯ ಕೈತೋಟದ ಅಂದ ಮಾಡುವುದರ ಜೊತೆ ಪಕ್ಷಿಗಳ ಆರೈಕೆಗಾಗಿ ಮೀಸಲು. ಮನೆಯ ಅಂಗಳದಲ್ಲಿ ಬಾಳೆ, ತೆಂಗು, ಅಡಿಕೆ, ಏಲಕ್ಕಿ, ನಿಂಬೆ, ವೆನಿಲಾ ಬೆಳೆದಿರುವುದು ಮಾತ್ರವಲ್ಲದೇ, ಮೂರು ಮೀಟರ್‌ ಸುತ್ತಳತೆಯಲ್ಲಿ ದ್ರಾಕ್ಷಿ, ಮಾವು, ಪೇರಲೆ, ಕಿತ್ತಳೆ ಹಣ್ಣುಗಳನ್ನು ಬೆಳೆಸಿದ್ದಾರೆ. ಇನ್ನೊಂದೆಡೆ, 14 ಜಾತಿಯ ದಾಸವಾಳ, ಮೂರು ತಳಿಯ ಕಾಕಡ ಹೂವಿನ ಗಿಡ ಜೊತೆ ಮೆಂತ್ಯ, ಕೊತ್ತಂಬರಿ, ಬದನೆ ಕಾಯಿ, ಪಡವಲಕಾಯಿ, ಹಾಗಲಕಾಯಿ, ಕರಿಬೇವು ಸೇರಿದಂತೆ ವೈವಿಧ್ಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಈ ತೋಟದಲ್ಲಿ ಹಕ್ಕಿಗಳಿಗೆ ನೆಲೆಯಾಗುವ ಗೂಡು ಗಳಿಗೆ ಆದ್ಯತೆ. ಬಾಲ್ಯದಲ್ಲಿಯೇ ಪಕ್ಷಿಗಳ ಬಗ್ಗೆ ತಿಳಿದು ಕೊಂಡಿದ್ದ ಇವರು, ವಿದ್ಯುತ್‌ ಸ್ಪರ್ಶ ಅಥವಾ ಇನ್ನಾವುದೇ ಅಪಘಾತದಿಂದ ನೆಲದಲ್ಲಿ ಬಿದ್ದ ಅಪ್ರಜ್ಞಾವಸ್ಥೆಯ ಪಕ್ಷಿಗಳನ್ನು ಕಂಡರೆ ತಕ್ಷಣ ತಮ್ಮ ಬೈಕನ್ನು ನಿಲ್ಲಿಸಿ ಕುಡಿಯಲು ಇಟ್ಟಿದ್ದ ಬಾಟಲಿ ನೀರನ್ನು ಹಕ್ಕಿಗೆ ಸಿಂಪಡಿಸಿ ಅದನ್ನು ಬದುಕಿಸುವ ಯತ್ನ ಮಾಡು ತ್ತಾರೆ. ಒಂದು ವೇಳೆ ಅದು ಸತ್ತು ಹೋದರೆ ಅದನ್ನು ರಸ್ತೆಯ ಪಕ್ಕದ ತಗ್ಗಿಗೆ ಹಾಕಿ ಮಣ್ಣು ಮುಚ್ಚಿ ಬರುತ್ತಾರೆ. ಹೀಗೆ ಪಕ್ಷಿಗಳ ಬಗ್ಗೆ ತಿಳಿದುಕೊಂಡಿರುವ ಇವರು ಮನೆ ಯಲ್ಲಿಯೇ ಪುಟ್ಟ ಪಕ್ಷಿಧಾಮವೊಂದನ್ನು ಸೃಷ್ಟಿಸಿದ್ದಾರೆ.

*ಹವ್ಯಾಸದ ಹಾದಿ*
ಆರಂಭದಲ್ಲಿ ನಾಲ್ಕು ಲವ್‌ಬರ್ಡ್‌ ಪಕ್ಷಿಗಳನ್ನು ಸಾಕಿದ್ದ ಇವರ ಮನೆಯಲ್ಲಿ ಸದ್ಯ 30ಕ್ಕೂ ಹೆಚ್ಚು ಪಕ್ಷಿ ಗಳಿವೆ. 20ಕ್ಕೂ ಹೆಚ್ಚು ಪಕ್ಷಿ ಮರಿಗಳನ್ನು ಇತರರಿಗೆ ಸಾಕಲು ಕೊಟ್ಟಿದ್ದಾರೆ. ಅಲ್ಲದೇ ಇವರ ಮನೆ ಅಂಗಳದಲ್ಲಿ ಸಿಂಪಗೆ, ಬುಲ್‌ಬುಲ್, ಸೂರಹಕ್ಕಿ, ಗೊಂಗ್‌ (ಇಂಡಿಯನ್‌ ಲ್ಯಾಬರ್‌), ಬಳುವ ಸೇರಿದಂತೆ ವಿವಿಧ ಹಕ್ಕಿಗಳು ಋತುಮಾನಕ್ಕೆ ತಕ್ಕಂತೆ ಗೂಡು ಕಟ್ಟುತ್ತವೆ.

'ಮುದ್ದೇಬಿಹಾಳ ಸಮೀಪದ ಬಿದರಕುಂದಿ ಯಲ್ಲಿ ಪ್ರಾಥಮಿಕ ಶಾಲೆ ಕಲಿಯುತ್ತಿದ್ದಾಗ ಶಾಲಾ ರಜೆಯ ದಿನ ಗಳಲ್ಲಿ ಸುತ್ತಮುತ್ತಲಿನ ಬೆಟ್ಟ ಸುತ್ತಿ ಕಂಡ ಕಂಡ ಮರ ಗಳನ್ನು ಏರಿ ಅಲ್ಲಿನ ಪಕ್ಷಿಗಳ ಗೂಡುಗಳನ್ನು ಆಸಕ್ತಿ ಯಿಂದ ನೋಡುವುದ ಲ್ಲದೇ ಪಕ್ಷಿಗಳು ಬದುಕುವ ಶೈಲಿ ಬಗ್ಗೆ ತಿಳಿದುಕೊಂಡಿ ದ್ದೇನೆ. ಗಿಳಿ ಹಿಡಿಯಬೇಕೆಂದು ಮರ ಏರಿ ಕಾಗೆಯ ಗೂಡಿಗೆ ಕೈಹಾಕಿ ಮೊಟ್ಟೆಯನ್ನು ವೀಕ್ಷಿಸು ತ್ತಿದ್ದಾಗ ಕಾಗೆ ಹಿಂಡು ಬೆನ್ನಟ್ಟಿದ ಘಟನೆಯು ನಡೆದಿದೆ' ಎಂದು ಬಾಲ್ಯದಲ್ಲಿನ ಪಕ್ಷಿಪ್ರೇಮದ ಬಗ್ಗೆ ನೆನಪಿಸಿಕೊಳ್ಳುತ್ತಾರೆ.

*ಉರಗ ಪ್ರೇಮಿ ಈ ಶಿಕ್ಷಕ*:

ತಮ್ಮ ಕೈತೋಟದ ಪರಿಸರದಲ್ಲಿ ಆಗಾಗ್ಗೆ ಹಾವುಗಳು ಬರುತ್ತವೆ. ಅವುಗಳನ್ನು ಕೊಲ್ಲದೇ ಕೈಯಲ್ಲಿ ಹಿಡಿದು ಡಬ್ಬದಲ್ಲಿ ರಕ್ಷಿಸಿಟ್ಟು ನಂತರ ಊರ ಹೊರಗಿನ ಪ್ರದೇಶ ದಲ್ಲಿ ಬಿಟ್ಟು ಬರುವ ಮೂಲಕ ಉರಗ ಪ್ರೇಮಿ ಎನಿಸಿ ಕೊಂಡಿದ್ದಾರೆ. ಅಲ್ಲದೇ ಇದುವರೆಗೂ ಪಟ್ಟಣದ ಇತರರ ಮನೆಯಲ್ಲಿ ಕಾಣಿಸಿಕೊಂಡಿದ್ದ 60ಕ್ಕೂ ಹೆಚ್ಚು ಹಾವು ಗಳನ್ನು ಹಿಡಿದು ಊರ ಹೊರಗೆ ಬಿಟ್ಟು ಬಂದಿರುವ ಇವರು, ವಿಷಪೂರಿತವಲ್ಲದ ಹಾವುಗಳನ್ನು ಮಾತ್ರ ಹಿಡಿಯುತ್ತೇನೆ ಎನ್ನುತ್ತಾರೆ. ಆಧುನಿಕ ಜಂಜಾಟ ದಲ್ಲಿ ಬಿಡುವೇ ಸಿಗುತ್ತಿಲ್ಲ ಎಂದು ಮನೆ ಕೆಲಸ ಸೇರಿದಂತೆ ಸುತ್ತಮುತ್ತಲಿನ ಪರಿಸರ ಮರೆಯುತ್ತಿರುವವರಿಗೆ ಈ ಶಿಕ್ಷಕರು ಮಾದರಿಯಾಗಿದ್ದಾರೆ.

ಹಾಗೆಯೇ, ತಮ್ಮ ಕೈತೋಟಕ್ಕೆ ಕೇವಲ ಸಾವಯವ ಗೊಬ್ಬರ ಬಳಸುವ ಇವರು ಉತ್ತಮ ಫಸಲನ್ನು ತೆಗೆಯು ತ್ತಿದ್ದಾರೆ. ಮನೆಯಲ್ಲಿನ ಕೊಳೆತ ಟೊಮೆಟೊ, ವಿವಿಧ ತರಕಾರಿ ಹಾಗೂ ನೆಲಕ್ಕುದುರಿದ ಮರದ ಹಸೆ ಎಲೆ ಗಳನ್ನು ದಪ್ಪನೆಯ ಪ್ಲಾಸ್ಟಿಕ್ ಪೈಪ್‌ಗೆ ಹಾಕುತ್ತಾರೆ. ಅದು ತುಂಬಿದ ನಂತರ ಅದರ ಬಾಯಿಯನ್ನು ಪ್ಲಾಸ್ಟಿಕ್ ಹಾಳೆ ಯಿಂದ ಕೆಲ ದಿನಗಳವರೆಗೆ ಭದ್ರಪಡಿಸುತ್ತಾರೆ. ಕೊಳೆತು ಗೊಬ್ಬರವಾದ ನಂತರ ಮನೆಯಲ್ಲಿನ ಗಿಡ ಹಾಗೂ ಕೈತೋಟಕ್ಕೆ ಗೊಬ್ಬರವಾಗಿ ಬಳಕೆ ಮಾಡುತ್ತಿ ದ್ದಾರೆ. ಮಾಹಿತಿಗೆ: ಮಹೇಶ ಪೂಜಾರಿ–9880851581.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023