Posts

Showing posts from July, 2017

SELECTION LIST OF PDO(1:3) PUBLISHED:-

*PDO 1:3 ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು ದಾಖಲಾತಿ ಪರಿಶೀಲನೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ* http://kea.kar.nic.in/rdpr/verification_candidates.pdf *ದಾಖಲಾತಿ ಪರಿಶೀಲನೆಗಾಗಿ ಅಭ್ಯರ್ಥಿಗಳಿಗೆ ಮಾಹಿತಿ* http://kea.kar.nic.in/rdpr/document_ver_inst.pdf

mAadhaar: Now carry Aadhaar on your mobile (Need Android 5.0 Lollipop OS)

Image
Ramarko Sengupta |  TIMESOFINDIA.COM  | Updated: Jul 19, 2017, 02:51 PM IST TIMESOFINDIA.COMRepresentative Image HIGHLIGHTS Unique Identification Authority of India (UIDAI), which issues Aadhaar numbers has launched an app called mAadhaarThe app will enable people carry their unique identification profile on mobile phonesCurrently, the app is only available on Android platform Unique Identification Authority of India  (UIDAI), which issues Aadhaar numbers has launched an app called mAadhaar that lets you carry your unique identification profile on your mobile.

ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ: ಫ್ರಾನ್ಸ್‌ ರಿಪೋರ್ಟ್‌

ಟೈಮ್ಸ್ ಆಫ್ ಇಂಡಿಯಾ | Updated Jul 16, 2017, 02.46PM IST ಚೆನ್ನೈ: ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂದು ಫ್ರಾನ್ಸ್‌ನ ಸೀಕ್ರೆಟ್ ರಿಪೋರ್ಟ್‌ವೊಂದು ಹೇಳಿದೆ. ಭಾರತ ಸರಕಾರ 1956ರಲ್ಲಿ ರಚಿಸಿದ್ದ ಶಾ ನವಾಜ್‌ ಸಮಿತಿ ಮತ್ತು 1970 ರಲ್ಲಿ ರಚಿಸಿದ್ದ ಖೋಸ್ಲಾ ಸಮಿತಿಗಳು ನೇತಾಜಿ ಅವರು ಜಪಾನ್‌ ಆಕ್ರಮಿತ ತೈಪಿಯಲ್ಲಿ 1945ರ ಆಗಸ್ಟ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ಆದರೆ 1999 ರಲ್ಲಿ ರಚನೆಯಾದ ಮುಖರ್ಜಿ ಸಮಿತಿ ಮಾತ್ರ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂದು ಹೇಳಿದೆ. ಆದರೆ ಸಂಶೋಧಕರು, ಇತಿಹಾಸಕಾರರು ಈ ಬಗ್ಗೆ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ. ಪ್ಯಾರಿಸ್‌ನ ಇತಿಹಾಸ ತಜ್ಞ ಜೆಬಿಪಿ ಮೊರೆ ಅವರು ಫ್ರಾನ್ಸ್‌ನ ನ್ಯಾಷನಲ್‌ ಆರ್ಕೈವ್ಸ್‌ಗೆ ನೀಡಿರುವ ಸೀಕ್ರೆಟ್‌ ಸರ್ವಿಸ್‌ ರಿಪೋರ್ಟ್‌ನಲ್ಲಿ 1945ರ ಆಗಸ್ಟ್‌ನಲ್ಲಿ ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿಲ್ಲ. 1947ರ ಡಿಸೆಂಬರ್‌ವರೆಗೂ ಬದುಕಿದ್ದರು ಎಂದು ಹೇಳಿದ್ದಾರೆ. 1947ರ ಡಿಸೆಂಬರ್‌ ಬಳಿಕ ನೇತಾಜಿ ಬೋಸ್‌ ಎಲ್ಲಿದ್ದಾರೆಂಬುದು ಗೊತ್ತಿಲ್ಲ. 1945ರ ಆಗಸ್ಟ್‌ನಲ್ಲಿ ನಡೆದ ವಿಮಾನ ಅಪಘಾತದಿಂದ ಅವರು ಜೀವಂತವಾಗಿ ಪಾರಾಗಿ ಇಂಡೋನೇಷ್ಯಾ ತೊರೆದಿದ್ದರು ಎಂದೂ ಮೊರೆ ಸೀಕ್ರೆಟ್‌ ರಿಪೋರ್ಟ್‌ನಲ್ಲಿ ಹೇಳಿದ್ದಾರೆ. Netaji didn't die in air crash:  How did Subha

ವಿಮಾನ ಅಪಘಾತದಲ್ಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವು: ಆರ್ ಟಿಐ ಪ್ರಶ್ನೆಗೆ ಕೇಂದ್ರದ ಉತ್ತರ

Image
ಗುಮ್ನಾಮಿ ಬಾಬಾ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅಲ್ಲ: ನೇತಾಜಿ ಸಾವಿನ ವಿವಾದಕ್ಕೆ ಕೊನೆಗೂ ತೆರೆ Published:  31 May 2017 12:42 PM IST  | Updated:  31 May 2017 01:33 PM IST ಸಂಗ್ರಹ ಚಿತ್ರ ನವದೆಹಲಿ:  ತೈವಾನ್ ನಲ್ಲಿ 1945ರಲ್ಲಿ ನಡೆದ ವಿಮಾನ ಅಫಘಾತದಲ್ಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ. ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಆರ್ ಟಿಐ ಅರ್ಜಿಗೆ ಉತ್ತರಿಸಿರುವ ಕೇಂದ್ರ ಸರ್ಕಾರ ಕೊನೆಗೂ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1945ರಲ್ಲಿ ತೈವಾನ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಅಂತೆಯೇ 1980ರ ದಶಕದಲ್ಲಿ ಜೀವಿಸಿದ್ದ  ಗುಮ್ನಾಮಿ ಬಾಬಾ ಸುಭಾಷ್ ಚಂದ್ರ ಬೋಸ್ ಅಲ್ಲ ಎಂದು ಸ್ಪಷ್ಟಡಿಸಿದೆ. ಮಾಹಿತಿಹಕ್ಕು ಕಾಯ್ದೆಯಡಿ ಸಾಯಕ್‌ ಸೇನ್‌ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಕೇಂದ್ರ ಗೃಹ ಇಲಾಖೆ, '1945ರ ವಿಮಾನ ದುರಂತದಲ್ಲೇ ನೇತಾಜಿ ಅವರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಶಾನವಾಜ್‌ ಆಯೋಗ, ಜಿ.ಡಿ. ಖೋಸ್ಲಾ ಆಯೋಗ ಮತ್ತು ಮುಖರ್ಜಿ ಆಯೋಗದ ತನಿಖಾ ವರದಿಗಳ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ಹೇಳಿದೆ.