ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಸ.ಪ್ರಾ.ಶಾಲಾ ಶಿಕ್ಷಕರೊಬ್ಬರ ಹವ್ಯಾಸದ ಹಾದಿ ಕುರಿತು ವರದಿ: (ಕರ್ನಾಟಕ ದರ್ಶನ) * *ಕೃತಕ ಗೂಡು:* ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳ ಸಂತತಿ ಹೆಚ್ಚಿಸುವ ಪಣ ತೊಟ್ಟಂತಿರುವ ಇವರು, ತಮ್ಮ ಮನೆಯ ಅಂಗಳದಲ್ಲಿ ಗುಬ್ಬಚ್ಚಿಗಳಿಗಾಗಿ ಕೃತಕ ಗೂಡುಗಳನ್ನು ನಿರ್ಮಾಣ ಮಾಡಿದ್ದಾರೆ. ಗುಬ್ಬಚ್ಚಿಗಳು ಕೃತಕ ಗೂಡಿನಲ್ಲಿ ಮೊಟ್ಟೆಯಿಟ್ಟು ಸಂತತಿ ವೃದ್ಧಿಸುತ್ತಿವೆ. ಇವರ ಕೈತೋಟದ ಗಿಡಗಳಲ್ಲಿ ಹತ್ತಾರು ಜೇನುಗೂಡುಗಳಿವೆ. ಈ ಗೂಡುಗಳಿಂದ ಪ್ರತಿವರ್ಷ ಸುಮಾರು ಒಂದು ಕೆ.ಜಿಯಷ್ಟು ಜೇನುತುಪ್ಪ ಪಡೆಯುತ್ತಿದ್ದಾರೆ. ವರದಿ:ಪ್ರಕಾಶ ಎನ್.ಮಸಬಿನಾಳ ಹಲವರಿಗೆ ಪಕ್ಷಿಗಳನ್ನು ತಂದು ಪಂಜರದಲ್ಲಿ ಇಟ್ಟು ಸಾಕುವುದು ಹವ್ಯಾಸ. ಆದರೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಶಿಕ್ಷಕ ಮಹೇಶ ಪೂಜಾರಿ ಹಾಗಲ್ಲ. ಹಕ್ಕಿಗಳಿಗಾಗಿಯೇ ಕೃತಕ ಗೂಡುಗಳನ್ನು ನಿರ್ಮಿಸಿ ಅವುಗಳಿಗೆ ಆಸರೆ ನೀಡುತ್ತಿದ್ದಾರೆ. ಕೃಷಿ ಪ್ರೇಮಿಯೂ ಇವರಾಗಿದ್ದು ಇವರಿಗೆ 'ಕೃಷಿಶಿಕ್ಷಕ' ಎಂದೂ ಕರೆಯಬಹುದು. ರಜಾ ದಿನಗಳನ್ನು ಮನೆಯ ಕೈತೋಟದ ಅಂದ ಮಾಡುವುದರ ಜೊತೆ ಪಕ್ಷಿಗಳ ಆರೈಕೆಗಾಗಿ ಮೀಸಲು. ಮನೆಯ ಅಂಗಳದಲ್ಲಿ ಬಾಳೆ, ತೆಂಗು, ಅಡಿಕೆ, ಏಲಕ್ಕಿ, ನಿಂಬೆ, ವೆನಿಲಾ ಬೆಳೆದಿರುವುದು ಮಾತ್ರವಲ್ಲದೇ, ಮೂರು ಮೀಟರ್ ಸುತ್ತಳತೆಯಲ್ಲಿ ದ್ರಾಕ್ಷಿ, ಮಾವು, ಪೇರಲೆ, ಕಿತ್ತಳೆ ಹಣ್ಣುಗಳನ್ನು ಬೆಳೆಸಿದ್ದಾರೆ. ಇನ್ನೊಂದೆಡೆ, 14 ಜಾತಿಯ ದಾಸವಾಳ