Posts

ಸಿಲಿಂಡರ್ ಗ್ಯಾಸ್ ಸೋರಿಕೆಯಾದರೆ ನಾಳೆಯಿಂದ 1906 ಸಂಖ್ಯೆಗೆ ಕರೆ ಮಾಡಿ

Image
ನವದೆಹಲಿ, ಡಿ.31-ಇನ್ನು ಮುಂದೆ ನಿಮ್ಮ ಮನೆಯ ಅಡಿಗೆ ಅನಿಲ (ಸಿಲಿಂಡರ್ ಗ್ಯಾಸ್) ಸೋರಿಕೆಯಾಗುತ್ತಿದ್ದರೆ ಗಾಬರಿಪಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಏಕೆಂದರೆ 1906 ಸಂಖ್ಯೆಗೆ ಕರೆ ಮಾಡಿದರೆ ಸಾಕು ತಕ್ಷಣವೇ ನಿಮ್ಮ ರಕ್ಷಣೆಗೆ ಧಾವಿಸುತ್ತಾರೆ. ಆಂಬುಲೆನ್ಸ್ ಹಾಗೂ ಪೊಲೀಸರ ಸಹಾಯ ಪಡೆಯಲು 100 ಸಂಖ್ಯೆಗೆ ಕರೆ ಮಾಡಿದರೆ ಹೇಗೆ ಸಹಾಯಕ್ಕೆ ಬರುತ್ತಾರೋ ಅದೇ ರೀತಿ ಈ ಸಂಖ್ಯೆಗೆ ದೂರವಾಣಿ ಕರೆ ಮಾಡಿದರೆ ಸಾಕು. ಇದೀಗ ಕೇಂದ್ರ ಸರ್ಕಾರ ಆಂಬುಲೆನ್ಸ್ ಮತ್ತು ಪೊಲೀಸ್ ಸಹಾಯಕವಾಣಿ ಮಾದರಿಯಲ್ಲಿ ಎಲ್ಪಿಜಿ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಸಹಾಯವಾಣಿಯೊಂದನ್ನು ಆರಂಭಿಸಿದೆ. 1906 ಎಲ್ಪಿಜಿಯ ನೂತನ ಸಹಾಯವಾಣಿಯಾಗಿದೆ. ನಿಮ್ಮ ಮನೆಯಲ್ಲಿ ತಾಂತ್ರಿಕ ಇಲ್ಲವೇ ಬೇರ್ಯಾಜವುದೋ ಕಾರಣಗಳಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದರೆ ಈ ಸಹಾಯವಾಣಿಗೆ ಕರೆ ಮಾಡಬಹುದು. ಇತ್ತೀಚೆಗೆ ದೇಶದಲ್ಲಿ ಎಲ್ಪಿಜಿ ಸೋರಿಕೆಯಿಂದ ಅನೇಕರು ಪ್ರಾಣ ಕಳೆದುಕೊಂಡು ಶಾಶ್ವತ ದೃಷ್ಟಿಹೀನ ಹಾಗೂ ಅಂಗವೈಕಲ್ಯಕ್ಕೂ ತುತ್ತಾಗಿದ್ದಾರೆ. ಸೋರಿಕೆಯನ್ನು ತಡೆಗಟ್ಟುವುದನ್ನು ತಿಳಿಯದ ಕೆಲವರು ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಇದನ್ನು ಅರಿತ ಕೇಂದ್ರ ಸರ್ಕಾರ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಸಹಾಯವಾಣಿಯನ್ನು ಆರಂಭಿಸಲು ಮುಂದಾಗಿದ್ದಾರೆ. ಜನವರಿ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ಇತ್ತೀ

ಭಾರತದ ಅತಿ ದೊಡ್ಡ ರಸ್ತೆ ಸುರಂಗ ಮಾರ್ಗ ಸೇವೆಗೆ ಸಿದ್ಧ ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿದ ಭಾರತೀಯ ಎಂಜಿನಿಯರ್ ಗಳ ಸಾಧನೆ,:*

Image
ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಸುರಂಗ ಮಾರ್ಗ (ಸಂಗ್ರಹ ಚಿತ್ರ) ಶ್ರೀನಗರ: ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಕೆಳಗೆ ಕೊರೆಯಲಾಗಿರುವ ಸುಮಾರು 9 ಕಿ.ಮೀ ದೂರದ ರಸ್ತೆ ಸುರಂಗ ಮಾರ್ಗವೊಂದು ಭಾರತೀಯ ಎಂಜಿನಿಯರ್ ಗಳನ್ನು ವಿಶ್ವ ಮಟ್ಟದಲ್ಲಿ ಖ್ಯಾತಿಗಳಿಸುವಂತೆ ಮಾಡಿದೆ. ಶ್ರೀನಗರದಿಂದ ಸುಮಾರು 170 ಕಿ.ಮೀ ದೂರದಲ್ಲಿ ಈ ಸುರಂಗ ಮಾರ್ಗವನ್ನು ಕೊರೆಯಲಾಗಿದ್ದು, ಸುಮಾರು 9 ಕಿ.ಮೀ ದೂರದ ರಸ್ತೆಗೆ ಈ ವರೆಗೂ ಸುಮಾರು 2, 500 ಕೋಟಿ ರು. ವ್ಯಯಿಸಲಾಗಿದೆ. ದೇಶದ ಅತಿದೊಡ್ಡ ರಸ್ತೆ ಸುರಂಗ ಮಾರ್ಗವೆಂದೇ ಖ್ಯಾತಿಗಳಿಸಿರುವ ಈ ರಸ್ತೆ ಮುಂಬರುವ ಜುಲೈ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ಆ ಮೂಲಕ ಜಮ್ಮು ಮತ್ತು ಶ್ರೀನಗರ ನಡುವಿನ ರಸ್ತೆ ಸಂಚಾರ ಇನ್ನಷ್ಟು ಸುಗಮವಾಗಲಿದೆ. ಇದಕ್ಕೂ ಮೊದಲು ಜಮ್ಮು ಮತ್ತು ಶ್ರೀನಗರ ನಡುವೆ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಇದೆಯಾದರೂ ಇಲ್ಲಿ ಸುಮಾರು 30 ಕಿ.ಮೀ ಸುತ್ತಿಕೊಂಡು ಹೋಗುವ ದಾರಿಯಾಗಿತ್ತು. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿತ್ತು. ಇದೀಗ ಈ ಸುರಂಗ ಮಾರ್ಗದಿಂದಾಗಿ ಪ್ರಯಾಣಿಕ ಸುಮಾರು 30 ಕಿ.ಮೀ ದೂರದ ಪ್ರಯಾಣ ಕೇವಲ 9 ಕಿ.ಮೀ ಇಳಿಯಲಿದೆ. ಪ್ರವಾಸೋಧ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ

ಕೋರ್ಟ್ ಆವರಣದ ಬಳಿ ಟೀ ಮಾರುವವನ ಮಗಳು ನ್ಯಾಯಾಧೀಶೆಯಾದಳು!

Image
ಈಕೆಯ ಹೆಸರು ಶ್ರುತಿ. ಪಂಜಾಬ್ನ ನಾಕೋದರ್ ನಿವಾಸಿಯಾಗಿರುವ ಈಕೆ ಪಂಜಾಬ್ ಸಿವಿಲ್ ಸರ್ವೀಸ್ನ ನ್ಯಾಯಾಧೀಶ ಹುದ್ದೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನ್ಯಾಯಾಧೀಶೆಯಾಗಿದ್ದಾಳೆ. ಈಕೆಯ ಅಪ್ಪ ಸುರೇಂದರ್ ಕುಮಾರ್ ಜಲಂಧರ್ ಕೋರ್ಟ್ ಆವರಣ ಬಳಿ ಟೀ ಮಾರುತ್ತಿದ್ದಾರೆ. ಟೀ ಮಾರುವವನ ಮಗಳು ಶ್ರುತಿ ಉನ್ನತ ವಿದ್ಯಾಭ್ಯಾಸ ಪಡೆದು ನ್ಯಾಯಾಧೀಶೆಯಾಗುವ ಮೂಲಕ ನಾಡಿನ ಹೆಮ್ಮೆಯ ಪುತ್ರಿ ಎನಿಸಿಕೊಂಡಿದ್ದಾಳೆ. ಸ್ಟೇಟ್ ಪಬ್ಲಿಕ್ ಸ್ಕೂಲ್ನಲ್ಲಿ ಕಲಿತ ಶ್ರುತಿ ಜಿಎನ್ಡಿಯು ಜಲಂಧರ್ ನಲ್ಲಿ ಕಾನೂನು ವ್ಯಾಸಂಗ ಮಾಡಿ ಪಂಜಾಬ್ ವಿವಿಯಿಂದ ಎಲ್ಎಲ್ಎಂ ಪದವಿ ಪಡೆದಿದ್ದಳು. ಮನೆಯಲ್ಲಿ ಬಡತನವಿದ್ದರೂ ಶ್ರುತಿಯ ಕಲಿಕೆಯನ್ನು ಇದ್ಯಾವುದೂ ಬಾಧಿಸಲೇ ಇಲ್ಲ. ಜ್ಯುಡಿಷ್ಯಲ್ ಅಕಾಡೆಮಿಯಲ್ಲಿ ಒಂದು ವರ್ಷ ತರಬೇತಿ ಪಡೆದ ನಂತರ ಮೊದಲ ಪ್ರಯತ್ನದಲ್ಲೇ ಪಂಜಾಬ್ ಸಿವಿಲ್ ಸರ್ವೀಸ್ (ಜ್ಯುಡಿಷ್ಯಲ್) ಪರೀಕ್ಷೆಯನ್ನು ಪಾಸು ಮಾಡಿದ್ದಾಳೆ. ನನಗೆ ಸಿಕ್ಕಿದ ಅತೀ ದೊಡ್ಡ ಉಡುಗೊರೆ ಇದು. ಆಕೆ ತನ್ನ ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾಳೆ ಎಂದು ನನಗೆ ಗೊತ್ತಿತ್ತು. ಆದರೆ ಆಕೆ ನ್ಯಾಯಾಧೀಶೆಯಾಗುತ್ತಾಳೆ ಎಂದು ನಾನು ಅಂದುಕೊಂಡಿರಲಿಲ್ಲ ಅಂತಾರೆ ಶ್ರುತಿಯ ಅಪ್ಪ ಸುರೇಂದರ್ ಕುಮಾರ್. ಶ್ರುತಿಯ ಸಾಧನೆಗೆ ಸಲಾಂ...

ಅಮಿತಾಭ್ ಕಾಂತ:* ನೀತಿ ಆಯೋಗದ ನೂತನ ಸಿಇಒ

Image
ನೀತಿ ಆಯೋಗಕ್ಕೆ ಹೊಸ ಸಿಇಒ:* amitabh-kant ಹೊಸದಿಲ್ಲಿ: ಉದ್ಯಮ ನೀತಿ ಮತ್ತು ಉತ್ತೇಜನ ವಿಭಾಗದ ಕಾರ್ಯದರ್ಶಿ ಅಮಿತಾಭ್ ಕಾಂತ್ ಅವರಿಗೆ ನೀತಿ ಆಯೋಗದ ಸಿಇಒ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಪ್ರಧಾನಿ ನೇತೃತ್ವದ ಸಂಪುಟದ ನೇಮಕ ಸಮಿತಿಯು ಅಮಿತಾಭ್ ಕಾಂತ್ರನ್ನು ನೂತನ ಸಿಇಒ ಆಗಿ ನೇಮಕ ಮಾಡಿದೆ. ನೀತಿ ಆಯೋಗದ ಹಾಲಿ ಸಿಇಒ ಸಿಂಧುಶ್ರೀ ಖುಲ್ಲರ್ ಅವರ ಒಂದು ವರ್ಷದ ಅಧಿಕಾರಾವಧಿ ಮಂಗಳವಾರವಷ್ಟೇ ಅಂತ್ಯವಾಗಿದೆ. ಉದ್ಯಮ ನೀತಿ ನಿರ್ಧಾರ, ಅಭಿವೃದ್ಧಿ, ಉದ್ಯಮದ ಬೆಳವಣಿಗೆ ಮೇಲೆ ನಿಗಾ ಇಡುವುದು, ಎಫ್ಡಿಐ ನೀತಿಯ ಸಮರ್ಪಕ ಜಾರಿ ಸೇರಿದಂತೆ ನಾನಾ ಜವಾಬ್ದಾರಿಯನ್ನು ಕಾಂತ್ ನಿಭಾಯಿಸಿದ್ದು, ಹೊಸ ಹೊಣೆಗಾರಿಕೆ ಅವರ ಮೇಲಿದೆ.

Job info: Peon poats in Pubjab Bank, Stenographer and Clerk posts in Employees State Insurance Corporation

Image

👆🏼 ಮಾನ್ಯ ಸಾರ್ವಜನಿಕರು ಹಾಗೂ ಪೋಷಕರ ಗಮನಕ್ಕೆ :*ಶಾಲೆಗೆ ದಾಖಲಾಗದ/ದಾಖಲಾಗಿ ಬಿಟ್ಟ ಮಕ್ಕಳನ್ನು ಗುರುತಿಸಿ ಶಾಲೆಗೆಸೇರಿಸಲು ಸಹಾಯ ಮಾಡಿ( ಬೆಂಗಳೂರು ಉತ್ತರ ಜಿಲ್ಲಾ)

Image

PROVISIONAL SELECTION LIST OF PSI/RSI (H-K REGION) -2015 : PUBLISHED

Image
 ಹೈದ್ರಾಬಾದ್ - ಕರ್ನಾಟಕ ಪ್ರದೇಶಗಳಲ್ಲಿ ಖಾಲಿ ಇರುವ 46 ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಹಾಗೂ 13 ಸಶಸ್ತ್ರ ಮೀಸಲು ಸಬ್ ಇನ್ಸ್‌ಪೆಕ್ಟರ್ (RSI- CAR/DAR) ಹುದ್ದೆಗಳಿಗೆ ದಿನಾಂಕ 29-6-2015 ರಂದು ಅರ್ಜಿಯನ್ನು ಆಹ್ವಾನಿಸಿ, ದೈಹಿಕ ಪರೀಕ್ಷೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾಗಿತ್ತು. ದಿನಾಂಕ  14-11-2015 , 15-11-2015 ರಂದು ಲಿಖಿತ ಪರೀಕ್ಷೆ  ಮತ್ತು ಕೊನೆಯದಾಗಿ 21-12-2015 ರಿಂದ 23-12-2015 ರ ವರೆಗೆ ನಡೆಸಿದ್ದ 10  ಅಂಕಗಳ ಮೌಖಿಕ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದವರ ತಾತ್ಕಾಲಿಕ ಆಯ್ಕೆಪಟ್ಟಿಯನ್ನು 1:1 ರ ಅನುಪಾತದಲ್ಲಿ ಪೊಲೀಸ್ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕರೆ ಪತ್ರವನ್ನು ಅವರವರ ವಿಳಾಸಕ್ಕೆ ಕಳುಹಿಸಿ, ಮೂಲ ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಾಲತಾಣ& Ksp.gov.in

ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ : ಎಚ್.ಆಂಜನೇಯ

ಬೆಂಗಳೂರು, ಡಿ.29-ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ಮುಂದಿನ ಶೈಕ್ಷಣಿಕ ವರ್ಷದಿಂದ ವಸತಿ ಶಾಲೆಯನ್ನು ಪ್ರಾರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಹೋಬಳಿಗೆ ತಲಾ ಒಂದು ವಸತಿ ಶಾಲೆ ಪ್ರಾರಂಭಿಸಲಾಗುವುದು. ಪ್ರತಿ ಶಾಲೆಗೆ 10 ಎಕರೆ ಪ್ರದೇಶ, 15 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಿ, ಸಿಬ್ಬಂದಿ ವಸತಿ ಗೃಹ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ವಸತಿ ಶಾಲೆಗಳ ಶಿಕ್ಷಣವನ್ನು ದ್ವಿತೀಯ ಪಿಯುಸಿವರೆಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ 100 ವಸತಿ ಶಾಲೆಗಳ ಪ್ರಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ ಪ್ರಾರಂಭಿಸಲಾಗುವುದು ಎಂದು ಆಂಜನೇಯ ತಿಳಿಸಿದರು. ವಾಸ್ತವ್ಯ: ಈ ಬಾರಿಯ ಹೊಸ ವರ್ಷವನ್ನು ಅರಣ್ಯ ವಾಸಿಗಳ ಹಾಡಿಯಲ್ಲಿ ವಾಸ್ತವ್ಯ ಹೂಡುವ ಮೂಲಕ ಆಚರಿಸಲು ಆಶಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿನ ವಾಡಾದ ಸಿದ್ದಿ ಸಮುದಾಯದ ಹಾಡಿಯಲ್ಲಿ ಆಚರಿಸಲಾಗುವುದು. ಡಿ.31ರಂದು ವಾಡಾದ ಹಾಡಿಯಲ್ಲಿ ವಾಸ್ತವ್ಯ ಹೂಡಿ ಜಿಲ್ಲೆಯಲ್ಲಿರುವ ಎಲ್ಲ ಬುಡಕಟ್ಟು ಜನಾಂಗ ಮತ್ತು ಸಿದ್ದಿ ಜನಾಂಗದವರ ಸಭೆ ನಡೆಸಿ ಸಮಸ್ಯೆ ಆಲಿಸಿ ಹಲವು ಸೌಲಭ್ಯ ವಿತರಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ, ತಂತ್ರಜ್ಞಾನ ಪ್ರಶಸ್ತಿ ಪ್ರಕಟ

Image

10 ಲಕ್ಷ ರೂ.ಗಿಂತ ಹೆಚ್ಚಿಗೆ ಆದಾಯ ಇರುವವರಿಗೆ ಸಬ್ಸಿಡಿ ಸಿಲಿಂಡರ್ ಇಲ್ಲ:*

10 ಲಕ್ಷ ರೂ.ಗಿಂತ ಹೆಚ್ಚಿಗೆ ಆದಾಯ ಇರುವವರಿಗೆ ಸಬ್ಸಿಡಿ ಸಿಲಿಂಡರ್ ಇಲ್ಲ ನವದೆಹಲಿ.ಡಿ.29 : ಒಂಬತ್ತು ಸಿಲಿಂಡರ್ಗಳಿಗೆ ಸಬ್ಸಿಡಿ ನೀಡಲು ಮುಂದಾಗಿದ್ದ ಕೇಂದ್ರ ಸರಕಾರ ಜನರು ವಿರೋಧಿಸಿದ್ದರಿಂದ ಆ ಸಂಖ್ಯೆಯನ್ನು 12ಕ್ಕೆ ಏರಿಸಿತ್ತು. ಆದರೆ, ಇದೀಗ ಸಬ್ಸಿಡಿ ಬಗ್ಗೆ ಸರಕಾರ ಮತ್ತಷ್ಟು ಬಿಗಿ ಧೋರಣೆ ತಾಳುತ್ತಿದ್ದು, 10 ಲಕ್ಷ ರೂ.ಗಿಂತ ಹೆಚ್ಚಿಗೆ ಆದಾಯ ಇರುವವರಿಗೆ ಸಬ್ಸಿಡಿ ಸೌಲಭ್ಯವನ್ನು ಹಿಂಪಡೆಯಲು ಮುಂದಾಗಿದೆ. ಹೊಸ ವರ್ಷದಿಂದ ಈ ನೀತಿ ಅನ್ವಯವಾಗುತ್ತಿದ್ದು, ಈ ಮೊದಲು ಖುದ್ದು ಸಬ್ಸಿಡಿ ತ್ಯಜಿಸಲು ಸರಕಾರ ಆಗ್ರಹಿಸಿತ್ತು. ಆದರೆ, ಉತ್ತಮ ಆದಾಯ ಹೊಂದಿರುವ ಎಲ್ಪಿಜಿ ಗ್ರಾಹಕರು ಮಾರುಕಟ್ಟೆ ಬೆಲೆಯಲ್ಲಿಯೇ ಎಲ್ಪಿಜಿ ಕೊಳ್ಳಲಿ ಎಂಬ ಉದ್ದೇಶದಿಂದ ಸರಕಾರ ಈ ನೀತಿಯನ್ನು ಬಿಗುಗೊಳಿಸುತ್ತಿದೆ, ಎಂದು ತೈಲ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಹೇಳಿದೆ. ದೇಶದಲ್ಲಿ 16.35 ಕೋಟಿ ಎಲ್ಪಿಜಿ ಗ್ರಾಹಕರಿದ್ದು, 57.5 ಲಕ್ಷ ಮಂದಿ ಸ್ವಯಂ ಪೇರಿತರಾಗಿ ಸಬ್ಸಿಡಿ ಸೌಲಭ್ಯವನ್ನು ತ್ಯಜಿಸಿದ್ದಾರೆ.

ಆಸ್ಕರ್ ವಿಜೇತ ಖ್ಯಾತ ಹಾಲಿವುಡ್ ಛಾಯಾಗ್ರಾಹಕ ಹಸ್ಕೆಲ್ ಇನ್ನಿಲ್ಲ

Image
BY ವಿಜಯವಾಣಿ ನ್ಯೂಸ್ · DEC 28, 2015 ಲಾಸ್ ಏಂಜೆಲಿಸ್ : ಎರಡು ಬಾರಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡ ಹಾಲಿವುಡ್​ನ ಖ್ಯಾತ ಛಾಯಾಗ್ರಾಹಕ ಹಸ್ಕೆಲ್ ವೆಕ್ಸ್ಲರ್ ತಮ್ಮ 93 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆರು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ಯುದ್ದ, ರಾಜಕೀಯ ಹಾಗೂ ಸಮಾಜದ ಅವ್ಯವಸ್ಥೆ ಬಗ್ಗೆ ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ ಹಕ್ಸೆಲ್, ಚಿತ್ರ ನಿರ್ವಣದ ಜತೆಗೆ ಸಾಮಾಜಿಕ ಕಳಕಳಿ, ನ್ಯಾಯ, ಮತ್ತು ಶಾಂತಿ ಸಂದೇಶ ನೀಡುವುದಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. 'ಹೂ ಈಸ್ ಅಫ್ರೇಡ್ ಆಫ್ ವರ್ಜಿನಿಯ ವೂಲ್ಪ್', 'ಬೌಂಡ್ ಆಫ್ ಗ್ಲೋರಿ', 'ಮೀಡಿಯಮ್ ಕೂಲ್' ಅವರ ಕೆಲವು ಮಹತ್ವದ ಚಿತ್ರಗಳು. ಹೂ ಈಸ್ ಅಫ್ರೇಡ್ ಆಫ್ ವರ್ಜಿನಿಯ ವೂಲ್ಪ್ ಚಿತ್ರವು 1966 ರಲ್ಲಿ ಹಕ್ಸಲ್ ಅವರಿಗೆ ಮೊದಲ ಆಸ್ಕರ್ ಪ್ರಶಸ್ತಿ ತಂದುಕೊಟ್ಟರೆ, ಬೌಂಡ್ ಆಫ್ ಗ್ಲೋರಿ ಚಿತ್ರ 1976ರಲ್ಲಿ ಎರಡನೇ ಆಸ್ಕರ್ ಪ್ರಶಸ್ತಿಯನ್ನು ಅವರ ಬಗಲಿಗೇರಿಸಿತ್ತು. 1985 ರಲ್ಲಿ ಯುದ್ಧದ ತಿರುಳು ಹೊಂದಿದ್ದ 'ಲ್ಯಾಟಿನೊ' ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದರು.

ಮೈಸೂರಿನ ಮೇಟಗಳ್ಳಿಯ RBI ಆವರಣದಲ್ಲಿ . ಬ್ಯಾಂಕನೋಟ್ ಕಾಗದ ತಯಾರಿಕಾ ಘಟಕ ಉದ್ಘಾಟನೆಗೆ ಸಜ್ಜು

Image

ಕುವೆಂಪು ಜಯಂತಿ ಇನ್ನು "ವಿಶ್ವಮಾನವ ದಿನ"

Image

ಸರ್ಕಾರಿ ಹುದ್ದೆಗಳಿಗೆ ಇನ್ನು ಸಂದರ್ಶನ ಇಲ್ಲ, ಅಫಿಡವಿಟ್ಟೂ ಬೇಕಿಲ್ಲ BY ವಿಜಯವಾಣಿ ನ್ಯೂಸ್

· DEC 26, 2015 ಹೊಸ ವರ್ಷಕ್ಕೆ ಕೇಂದ್ರದ ಕ್ರಾಂತಿಕಾರಿ ಕೊಡುಗೆ ನವದೆಹಲಿ: 2016ರ ಜನವರಿ 1ರಿಂದ ಸರ್ಕಾರದ ವಿವಿಧ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ, ಹಾಗೆಯೇ ಅಭ್ಯರ್ಥಿಗಳು ಸರ್ಕಾರಿ ಸೇವೆಗಳನ್ನು ಸೇರಲು ಅಫಿಡವಿಟ್​ಗಳ (ಪ್ರಮಾಣಪತ್ರ) ಆವಶ್ಯಕತೆಯೂ ಇರುವುದಿಲ್ಲ. 2015ರಲ್ಲಿ ಹಲವಾರು ಮಹತ್ವದ ಉಪಕ್ರಮಗಳ ಮೂಲಕ ಸುದ್ದಿಯಲ್ಲಿದ್ದ ಕೇಂದ್ರ ಸರ್ಕಾರದ ಸಿಬ್ಬಂದಿ ಇಲಾಖೆ ವರ್ಷಾಂತ್ಯದಲ್ಲಿ ಕೈಗೊಂಡಿರುವ ಮಹತ್ವದ ನಿರ್ಧಾರ ಇದು. 'ಸರ್ಟಿಫಿಕೇಟ್​ಗಳನ್ನು ಗಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿಕೊಳ್ಳುವ ಕ್ರಮವನ್ನು ರದ್ದು ಪಡಿಸುವ ಅತ್ಯಂತ ಮಹತ್ವದ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಇದರ ಬದಲಿಗೆ ಸ್ವಯಂ ದೃಢೀಕರಣ ಮಾಡುವ ವಿಧಾನವನ್ನು ಜಾರಿಗೊಳಿಸಲಾಗುತ್ತಿದೆ' ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಶನಿವಾರ ಇಲ್ಲಿ ಹೇಳಿದರು. 'ಪ್ರಜೆಗಳನ್ನು ನಂಬುವ ನಿರ್ಧಾರವನ್ನು ಸರ್ಕಾರ ಕೈಗೊಂಂಡಿದೆ. ಅದರಲ್ಲೂ ಯುವಕರು ಸ್ವಯಂ ದೃಢೀಕೃತ ದಾಖಲೆಗಳನ್ನು ಸಲ್ಲಿಸುವಾಗ ತಪ್ಪು ಮಾಹಿತಿ ನೀಡುವುದಿಲ್ಲ ಎಂಬುದು ಸರ್ಕಾರದ ನಂಬಿಕೆ' ಎಂದು ಅವರು ನುಡಿದರು. ಸರ್ಕಾರದ ಈ ನಿರ್ಧಾರವು ಸಾಮಾನ್ಯ ಜನರಿಗೆ ಅದರಲ್ಲೂ ಗ್ರಾಮೀಣ ಮಂದಿಯನ್ನು ನಿರಾಳಗೊಳಿಸಿದೆ. ತಮ್ಮ ದಾಖಲೆಗಳನ್ನ

೩೦೦ ಕೆ ಎ ಎಸ್ ಹುದ್ದೆಗಳನ್ನು ನೇಮಕಕ್ಕೆ ಸಿದ್ಧತೆ..

Image

ಹನುಕ್ಕಾ ಹಬ್ಬದ ಕುರಿತು ಮಾಹಿತಿ

Image

ರಸಪ್ರಶ್ನೆ: ಪ್ರಪಂಚ ನಿಮಗೆಷ್ಟು ಪರಿಚಿತ??

Image

ಸರ್ಕಾರಿ ಹುದ್ದೆಗಳಿಗೆ ಇನ್ನು ಸಂದರ್ಶನ ಇಲ್ಲ, ಅಫಿಡವಿಟ್ಟೂ ಬೇಕಿಲ್ಲ BY ವಿಜಯವಾಣಿ ನ್ಯೂಸ್

· DEC 26, 2015 ಹೊಸ ವರ್ಷಕ್ಕೆ ಕೇಂದ್ರದ ಕ್ರಾಂತಿಕಾರಿ ಕೊಡುಗೆ ನವದೆಹಲಿ: 2016ರ ಜನವರಿ 1ರಿಂದ ಸರ್ಕಾರದ ವಿವಿಧ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ, ಹಾಗೆಯೇ ಅಭ್ಯರ್ಥಿಗಳು ಸರ್ಕಾರಿ ಸೇವೆಗಳನ್ನು ಸೇರಲು ಅಫಿಡವಿಟ್​ಗಳ (ಪ್ರಮಾಣಪತ್ರ) ಆವಶ್ಯಕತೆಯೂ ಇರುವುದಿಲ್ಲ. 2015ರಲ್ಲಿ ಹಲವಾರು ಮಹತ್ವದ ಉಪಕ್ರಮಗಳ ಮೂಲಕ ಸುದ್ದಿಯಲ್ಲಿದ್ದ ಕೇಂದ್ರ ಸರ್ಕಾರದ ಸಿಬ್ಬಂದಿ ಇಲಾಖೆ ವರ್ಷಾಂತ್ಯದಲ್ಲಿ ಕೈಗೊಂಡಿರುವ ಮಹತ್ವದ ನಿರ್ಧಾರ ಇದು. 'ಸರ್ಟಿಫಿಕೇಟ್​ಗಳನ್ನು ಗಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿಕೊಳ್ಳುವ ಕ್ರಮವನ್ನು ರದ್ದು ಪಡಿಸುವ ಅತ್ಯಂತ ಮಹತ್ವದ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಇದರ ಬದಲಿಗೆ ಸ್ವಯಂ ದೃಢೀಕರಣ ಮಾಡುವ ವಿಧಾನವನ್ನು ಜಾರಿಗೊಳಿಸಲಾಗುತ್ತಿದೆ' ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಶನಿವಾರ ಇಲ್ಲಿ ಹೇಳಿದರು. 'ಪ್ರಜೆಗಳನ್ನು ನಂಬುವ ನಿರ್ಧಾರವನ್ನು ಸರ್ಕಾರ ಕೈಗೊಂಂಡಿದೆ. ಅದರಲ್ಲೂ ಯುವಕರು ಸ್ವಯಂ ದೃಢೀಕೃತ ದಾಖಲೆಗಳನ್ನು ಸಲ್ಲಿಸುವಾಗ ತಪ್ಪು ಮಾಹಿತಿ ನೀಡುವುದಿಲ್ಲ ಎಂಬುದು ಸರ್ಕಾರದ ನಂಬಿಕೆ' ಎಂದು ಅವರು ನುಡಿದರು. ಸರ್ಕಾರದ ಈ ನಿರ್ಧಾರವು ಸಾಮಾನ್ಯ ಜನರಿಗೆ ಅದರಲ್ಲೂ ಗ್ರಾಮೀಣ ಮಂದಿಯನ್ನು ನಿರಾಳಗೊಳಿಸಿದೆ. ತಮ್ಮ ದಾಖಲೆಗಳನ್ನ

ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಲ್ಲಿ ಇ ಕಲಿಕೆ*-

Image

ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ನೀಡುವ ಪ್ರಸ್ತಾವನೆ ಪರಿಶೀಲನೆ.

Image

ಕಲಿಕೆ ದುರ್ಬಲಗೊಳಿಸುತ್ತಿರುವ ಶಾಲೆಗಳು:- ವಿಶ್ಲೇಷಣೆ

Image

ರು.50ಕ್ಕೆ ಸಿಗಲಿದೆ ಕೃತಕ ಧ್ವನಿಪೆಟ್ಟಿಗೆ ಬೆಂಗಳೂರಿನ ಕ್ಯಾನ್ಸರ್ ತಜ್ಞರ ಸಾಧನೆ | 25ಗ್ರಾಂ ತೂಕದ ಉಪಕರಣ

Image
ಬೆಂಗಳೂರು: ಗಂಟಲು ಕ್ಯಾನ್ಸರ್ನಿಂದ ಧ್ವನಿಯನ್ನೇ ಕಳೆದುಕೊಂಡವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿದೆ. ಕೃತಕ ಧ್ವನಿಪೆಟ್ಟಿಗೆಗಾಗಿ ಸಾವಿರಾರು ಖರ್ಚು ಮಾಡುವ ಅಗತ್ಯವೂ ಇನ್ನಿಲ್ಲ. ಬೆಂಗಳೂರು ಮೂಲದ ಕ್ಯಾನ್ಸರ್ ತಜ್ಞರೊಬ್ಬರು ಧ್ವನಿ ಉಪಕರಣವನ್ನು ತಯಾರಿಸಿದ್ದು, ಇದನ್ನು ಕೇವಲ ರು.50ಕ್ಕೆ ಲಭ್ಯವಾಗುವಂತೆ ಮಾಡಿದ್ದಾರೆ. ಬರೀ 25ಗ್ರಾಂ ತೂಕವಿರುವ ಈ ಉಪಕರಣ ಬಡವರ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಈ ಬಗ್ಗೆ `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ``ಮಾತಾಡುವುದು ಮನುಷ್ಯನ ಹಕ್ಕು. ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಯ ಧ್ವನಿಪೆಟ್ಟಿಗೆ ತೆಗೆದುಹಾಕಿದಾಗ, ಅವರಲ್ಲಿ ಮಾತನಾಡುವ ಆಸೆ ಇನ್ನಷ್ಟು ಮೊಳೆಯುತ್ತದೆ. ಕ್ಯಾನ್ಸರ್ ಜೊತೆಗೆ ಧ್ವನಿ ಕಳೆ ದುಕೊಂಡಿರುವ ನೋವೂ ಅವರನ್ನು ಭಾವನಾತ್ಮಕವಾಗಿ ಕುಂದಿಸುತ್ತದೆ. ಹಾಗಾಗಬಾರದೆಂದು ಬಡವರನ್ನು ಗಮನದಲ್ಲಿಟ್ಟುಕೊಂಡೇ ಈ ಕಡಿಮೆಬೆಲೆಯ ಉಪಕರಣ ತಯಾರಿಸಲಾಗಿದೆ ಎಂದು ಇದರ ಸೃಷ್ಟಿಕರ್ತ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಧ್ವನಿ ಉಪಕರಣದ ಬೆಲೆ 20ಸಾವಿರ ಇದ್ದು, ಅದು ಬಡವರಿಗೆ ಸುಲಭಕ್ಕೆ ಎಟುಕುವಂಥದ್ದಲ್ಲ. ಅಲ್ಲದೆ ಅದನ್ನು ಆರು ತಿಂಗಳಿಗೊಮ್ಮೆ ಬದಲಿಸಬೇಕಾಗುತ್ತದೆ. ಆದ್ದರಿಂದ ಬಡವರಿಗಾಗಿ ಇದನ್ನು ತಯಾರು ಮಾಡಿದ್ದೇನೆ'' ಎಂದು ಅವರು ತಿಳಿಸಿದ್ದಾರೆ. ಸಾಮಾ

FaceBook ನ ಫ್ರೀ ಬೇಸಿಕ್ ಸ್ಥಗಿತಕ್ಕೆ ಟ್ರಾಯ್ ಸೂಚನೆ

Image

ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಟಗಾರ ಸ್ಟೀವನ್ ಸ್ಮಿತ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನೀಡುವ ‘ವರ್ಷದ ಶ್ರೇಷ್ಠ ಆಟಗಾರ’ ಮತ್ತು ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.:*

ಸ್ಟೀವನ್ ಸ್ಮಿತ್ಗೆ ಐಸಿಸಿ ಗೌರವ 24 Dec, 2015 ದುಬೈ (ಪಿಟಿಐ): ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಟಗಾರ ಸ್ಟೀವನ್ ಸ್ಮಿತ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನೀಡುವ 'ವರ್ಷದ ಶ್ರೇಷ್ಠ ಆಟಗಾರ' ಮತ್ತು ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 2014 ಸೆಪ್ಟೆಂಬರ್ 18ರಿಂದ 2015 ಸೆಪ್ಟೆಂಬರ್ 13ರ ಅವಧಿಯಲ್ಲಿ ನಡೆದ ಟೂರ್ನಿಗಳಲ್ಲಿ ಸ್ಮಿತ್ ಅವರಿಂದ ಮೂಡಿ ಬಂದಿರುವ ಸಾಮರ್ಥ್ಯದ ಆಧಾರದಲ್ಲಿ ಅವರಿಗೆ ಈ ಗೌರವಗಳು ಒಲಿದಿವೆ. ಅವರು ಗ್ಯಾರಿ ಫೀಲ್ಡ್ ಸೋಬರ್ಸ್ ಟ್ರೋಫಿ (ವರ್ಷದ ಕ್ರಿಕೆಟಿಗ) ಪಡೆದ ಆಸ್ಟ್ರೇಲಿಯಾದ ನಾಲ್ಕನೇ ಹಾಗೂ ವಿಶ್ವದ 11ನೇ ಆಟಗಾರ ಎನಿಸಿದ್ದಾರೆ. * ವಿಶ್ವದ ಶ್ರೇಷ್ಠ ಆಟಗಾರರ ಪೈಪೋಟಿಯ ನಡುವೆಯೂ ಪ್ರಶಸ್ತಿ ಒಲಿದಿದ್ದು ಖುಷಿ ನೀಡಿದೆ. ಈ ಪ್ರಶಸ್ತಿಗಳು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿವೆ ಸ್ಟೀವನ್ ಸ್ಮಿತ್ ಆಸ್ಟ್ರೇಲಿಯಾದ ಆಟಗಾರ ಮುಖ್ಯಾಂಶಗಳು * ಡಿವಿಲಿಯರ್ಸ್ಗೆ ಸತತ ಎರಡನೇ ಬಾರಿ ವರ್ಷದ ಏಕದಿನ ಕ್ರಿಕೆಟಿಗ ಗೌರವ ಒಲಿದಿದೆ * ಪಂದ್ಯಗಳ ವೇಳೆ ಕ್ರೀಡಾ ಸ್ಫೂರ್ತಿಯಿಂದ ಆಡಿದ್ದಾಗಿ ಮೆಕ್ಲಮ್ಗೆ ಗೌರವ