Posts

2, 3 ವರ್ಷಗಳ ಬಳಿಕ ಡಿಡಿಪಿಐ, ಬಿಇಒಗಳು ಮರಳಿ ಶಾಲೆಗೆ!

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇ ಶಕರು (ಡಿಡಿಪಿಐ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಓ) ಇನ್ನು ಅದೇ ಹುದ್ದೆಯಲ್ಲಿ ಠಿಕಾಣಿ ಹೂಡು ವಂತಿಲ್ಲ. ಹೌದು, ಇನ್ನು ಮುಂದೆ ಡಿಡಿಪಿಐಗಳು ಗರಿಷ್ಠ 2 ವರ್ಷ ಮತ್ತು ಬಿಇಓಗಳು ಗರಿಷ್ಠ 3 ವರ್ಷ ಮಾತ್ರ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕು. ಬಳಿಕ ಬೋಧನಾ ವೃತ್ತಿಗೆ ಮರಳಬೇಕು.ಅಷ್ಟೇ ಅಲ್ಲ, ಡಿಡಿಪಿಐ ಹುದ್ದೆಯಲ್ಲಿ 2 ವರ್ಷ ಮತ್ತು ಬಿಇಓ ಹುದ್ದೆಯಲ್ಲಿ 3 ವರ್ಷಕ್ಕಿಂತ ಹೆಚ್ಚು ಅವಧಿಗೆ ಮುಂದು ವರಿಯಲು ಅವಕಾಶವೇ ಇಲ್ಲ. ಏಕೆಂದರೆ, ಹೊಸ ನಿಯಮಾ ವಳಿಯಲ್ಲಿ ನಿಗದಿಪಡಿಸಿದ ಗರಿಷ್ಠ ಅವಧಿ (ಡಿಡಿಪಿಐಗಳಿಗೆ 2 ವರ್ಷ ಮತ್ತು ಬಿಇಓಗಳಿಗೆ 3 ವರ್ಷ) ಮುಗಿಯುತ್ತಿದ್ದಂತೆ ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ಅವರು ವರ್ಗಾವಣೆಗೊ ಳ್ಳುತ್ತಾರೆ. ಡಿಡಿಪಿಐ ಅಥವಾ ಬಿಇಓಗಳಾದ ಬಳಿಕ ಬೋಧ ನಾ ವೃತ್ತಿಯ ಸಹವಾಸವೇ ಬೇಡ ಎಂದು ಹೇಳಿ ಸಾಕಷ್ಟು ಕಸರತ್ತು ಮಾಡಿ ಅದೇ ಹುದ್ದೆಯಲ್ಲಿ ಮುಂದುವರಿಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಮತ್ತು ಅರ್ಹ ಎಲ್ಲಾ ಬೋಧ ಕರಿಗೂ ಈ ಹುದ್ದೆಯಲ್ಲಿ ಅವಕಾಶ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರಡು ಅಧಿಸೂ ಚನೆ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಮೇ 15 ಆಕ್ಷೇಪಣೆ ಸಲ್ಲಿಸಲು ಕಡೆಯ ದಿನವಾಗಿದ್ದು, ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕ ನಿಗದಿತ ಅವಧಿ ಪೂರೈಸಿದ ಡಿಡಿಪಿಐ ಮತ್ತು ಬಿಇಓಗಳ ವರ

"Namaami Ganges":-

ಗಂಗಾ ಶುದ್ಧೀಕರಣ ಬಗ್ಗೆ ಅರಿವು ಮೂಡಿಸಲು 'ನಮಾಮಿ ಗಂಗೆ' ವಿಡಿಯೋ ಕುರಿತು : ಗಂಗಾ ಶುದ್ಧೀಕರಣ ಯೋಜನೆಗೆ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರೂಪಾಯಿ ವ್ಯಯಿಸುತ್ತಿದೆ. ಈ ಯೋಜನೆಯನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಸಲುವಾಗಿ 'ನಮಾಮಿ ಗಂಗೆ' ಎಂಬ ವಿಡಿಯೋವೊಂದನ್ನು ಸಿದ್ಧಪಡಿಸಿದ್ದು, ಇದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗಿದೆ. ತ್ರಿಚೂರು ಸೋದರರ ಸಂಯೋಜನೆಯಲ್ಲಿ ಮೂಡಿ ಬಂದಿರುವ ಆಶಯ ಗೀತೆಗೆ ಆದಿಶಂಕರಾಚಾರ್ಯರ ಗಂಗಾಷ್ಟಕದ ಶ್ಲೋಕಗಳನ್ನು ಬಳಸಿಕೊಳ್ಳಲಾಗಿದೆ. ಗಂಗಾ ನದಿಯ ತಟದ ಚಟುವಟಿಕೆಗಳು, ಭಕ್ತರು, ಗಂಗೆಯ ಮಹತ್ವವನ್ನು ಈ ಟ್ರೈಲರ್ ನಲ್ಲಿವೆ.

Indian economical development rate willbe 8.1% -UNO reports

ಭಾರತದ ಆರ್ಥಿಕ ಬೆಳವಣಿಗೆ ದರ ಶೇ.8.1: ವಿಶ್ವಸಂಸ್ಥೆ Published: 15 May 2015 11:16 AM IST ನವದೆಹಲಿ: ಭಾರತದ ಪಾಲಿಗೊಂದು ಸಿಹಿ ಭವಿಷ್ಯ ನುಡಿ ತೇಲಿಬಂದಿದೆ. ಈ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ.8.1ರಷ್ಟು ಇರಲಿದೆ ಎಂದು ವಿಶ್ವಸಂಸ್ಥೆಯ ಸಮೀಕ್ಷೆ ವರದಿ ತಿಳಿಸಿದೆ. ಮೂಲಸೌಕರ್ಯ ಯೋಜನೆ ಗಳು, ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು ಹಾಗೂ ಇಳಿದಿರುವ ಹಣದುಬ್ಬರದ ನಡುವೆ ಗ್ರಾಹಕರ ಕೊಳ್ಳುವಿಕೆಯ ಚಟುವಟಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಏರಿಕೆಯಾಗಲಿದೆಯೆಂದು ವಿಶ್ವಸಂಸ್ಥೆ ಅಂದಾಜಿಸಿದೆ. ಐಎಂಎಫ್ ಹಾಗೂ ವರ್ಲ್ಡ್ ಬ್ಯಾಂಕ್ ಕೂಡ ಶೇ.7.5 ಪ್ರಗತಿ ನಿರೀಕ್ಷಿಸಿದ್ದರೆ ಆರ್‍ಬಿಐ ಶೇ.7.8 ಬೆಳವಣಿಗೆಯ ಮುನ್ಸೂಚನೆ ನೀಡಿದೆ. ವರದಿ ಏನನ್ನುತ್ತೆ? ಬಂಡವಾಳ ಹೂಡಿಕೆಯಲ್ಲೂ ತೀವ್ರ ಹೆಚ್ಚಳ ನಿರೀಕ್ಷೆ 2015ರಲ್ಲಿ ಶೇ.8.1 ಹೆಚ್ಚಳ 2016ರಲ್ಲಿ ಶೇ8.2 ಏರಿಕೆ ವಿಶ್ವಾಸ ಭಾರತೀಯ ವಿತ್ತ ಸಚಿವಾಲಯ ನೀಡಿರುವ ವಿವರ ಆಧರಿಸಿ ವಿಶ್ವಸಂಸ್ಥೆ ವರದಿ ಪ್ರಕಟ ಹಣದುಬ್ಬರದಲ್ಲಿ ಇಳಿಕೆ ಕಂಡರೂ ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಚನಾತ್ಮಕ ಸುಧಾರಣೆಯಲ್ಲಿ ಭಾರಿ ಮುನ್ನಡೆ 120 ಹೊಸ ಬ್ಯಾಂಕ್ ಖಾತೆ ತೆರೆದದ್ದು ಆರ್ಥಿಕ ಪ್ರಗತಿಗೆ ಪೂರಕ ಮೇಕ್ ಇನ್ ಇಂಡಿಯಾ ಯೋಜನೆಯಿಂದ ಕೈಗಾರಿಕಾ ವಲಯದಲ್ಲಿ ಪ್ರಗತಿ Posted by: Rashmi Kasarag

24 Agreements Signed India and China | 24 ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದ ಭಾರತ-ಚೀನಾ | Kannadaprabha.com

bit.ly/1HgZ7bt 24 ಮಹತ್ವದ ಒಪ್ಪಂದಗಳಿಗೆ ಭಾರತ-ಚೀನಾ ಸಹಿ Published: 15 May 2015 10:05 AM IST | Updated: 15 May 2015 10:22 AM IST ಉಭಯ ರಾಷ್ಟ್ರಗಳ ನಾಯಕರ ಮಾತುಕತೆ ಬೀಜಿಂಗ್: ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಪ್ರಧಾನಿ ಕೆಖಿಯಾಂಗ್ ಅವರೊಂದಿಗೆ 10 ಬಿಲಿಯನ್ ಡಾಲರ್ ಮೌಲ್ಯದ ಮಹತ್ವದ 24 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಚೀನಾ ಪ್ರಧಾನಿ ಲಿ ಕೆಖಿಯಾಂಗ್ ಅವರೊಂದಿಗೆ ಪ್ರಧಾನಿ ಮೋದಿ 50 ನಿಮಿಷಗಳ ಕಾಲ ಮಹತ್ವದ ಮಾತುಕತೆ ನಡೆಸಿದ ಬಳಿಕ ಉಭಯ ನಾಯಕರು 24 ಒಡಂಬಡಿಕೆಗಳಿಗೆ ಸಹಿ ಹಾಕಿದ್ದಾರೆ. ಪ್ರಮುಖ ಒಡಂಬಡಿಕೆಗಳ ಪಟ್ಟಿ ಕೌಶಲ್ಯಾಭಿವೃದ್ಧಿ, ವ್ಯಾಪಾರದಲ್ಲಿ ಪರಸ್ಪರ ಸಹಕಾರ, ಶಿಕ್ಷಣ ವಲಯದಲ್ಲಿ ಹೊಂದಾಣಿಕೆ, ವಿಜ್ಞಾನ-ತಂತ್ರಜ್ಞಾನದಲ್ಲಿ ಮಾಹಿತಿ ಹಂಚಿಕೆ, ರೇಲ್ವೆ ವಲಯದಲ್ಲಿ ತಂತ್ರಜ್ಞಾನ ಹಂಚಿಕೆ, ರೇಲ್ವೆ ವಲಯದಲ್ಲಿ ಪರಸ್ಪರ ಸಹಕಾರ ಒಡಂಬಡಿಕೆಗಳಿಗೆ ಭಾರತ-ಚೀನಾ ಸಹಿ ಹಾಕಿವೆ. ಚೆಂಗ್ಡು, ಚೆನ್ನೈ ನಗರಗಳ ಅಭಿವೃದ್ಧಿಗೆ ವಿಶೇಷ ಒಡಂಬಡಿಕೆ, ಸಿಸಿಟಿವಿ, ದೂರದರ್ಶನ ಚಾನೆಲ್ ನಲ್ಲಿ ಸುದ್ದಿ ಬಿತ್ತರ, ಉಭಯ ದೇಶಗಳ ಸುದ್ದಿ ಬಿತ್ತರಿಸುವ ಸಂಬಂಧ ಒಡಂಬಡಿಕೆ, ಪ್ರವಾಸೋದ್ಯಮ ವಲಯದಲ್ಲಿ ಪರಸ್ಪರ ಸಹಕಾರ, ಭೂವಿಜ್ಞಾನ ತಂತ್ರಜ್ಞಾನ, ಚೀನಾ ದೇಶದ ಅಭಿವೃದ್ಧಿ ಸಂಶೋಧನಾ ಕೇಂದ್ರ ಸೇರಿದಂತೆ ಭಾರತದ ನೀತಿ ಆಯೋಗದ ನಡ

ಗ್ರಾ. ಪಂ. ಸದಸ್ಯತ್ವ ₹ 17 ಲಕ್ಷಕ್ಕೆ ಹರಾಜು!

Image
ಗ್ರಾ. ಪಂ. ಸದಸ್ಯತ್ವ ₹ 17 ಲಕ್ಷಕ್ಕೆ ಹರಾಜು! Fri, 05/15/2015 (PSGadyal) ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉಪ್ಪಾರಗಟ್ಟಿ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನದ ಮುಂದೆ ಗುರುವಾರ ಗ್ರಾಮಸ್ಥರು ಸಭೆ ಸೇರಿದ್ದರು ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ):  ತಾಲ್ಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಾದೂರು ಗ್ರಾಮ ಪಂಚಾಯ್ತಿಗೆ ಸೇರಿದ ನಾಲ್ಕು ಸದಸ್ಯ ಸ್ಥಾನಗಳನ್ನು ಉಪ್ಪಾರಗಟ್ಟಿ ಗ್ರಾಮದ ಜನರು  ₹ 16.93 ಲಕ್ಷಕ್ಕೆ ಹರಾಜು ಹಾಕಿದ್ದಾರೆ! ಗುರುವಾರ ಸದಸ್ಯ ಸ್ಥಾನದ ಆಕಾಂಕ್ಷಿಗಳ ಸಭೆ ನಡೆಸಿದ ಗ್ರಾಮಸ್ಥರು, ಆ ಮೊತ್ತವನ್ನು ನಾಲ್ವರು ಆಕಾಂಕ್ಷಿಗಳಿಂದ ಒಂದು ವರ್ಷದೊಳಗೆ ವಸೂಲಿ ಮಾಡುವ ನಿರ್ಧಾರವನ್ನೂ ಪ್ರಕಟಿಸಿದ್ದಾರೆ. ಗ್ರಾಮದ ಪ್ರಸಿದ್ಧ ಶಂಕರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಯ ಏಕೈಕ ಉದ್ದೇಶದಿಂದ ಸಭೆ ಸೇರಿದ ಗ್ರಾಮಸ್ಥರು, ಚುನಾವಣೆಗೆ ಅವಕಾಶ ನೀಡದೇ ಆಕಾಂಕ್ಷಿಗಳಿಂದ ದೇಣಿಗೆ ಪಡೆದು ಅವಿರೋಧ ಆಯ್ಕೆ ಮಾಡುವ ತೀರ್ಮಾನ ಕೈಗೊಂಡರು. ಹರಾಜು: ಗ್ರಾಮದ 34 ಆಕಾಂಕ್ಷಿಗಳು ತಲಾ ₹500 ಪಾವತಿಸಿ ಸದಸ್ಯತ್ವ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು, ಅಂತಿಮವಾಗಿ ನಾಲ್ವರು ಆಯ್ಕೆಯಾದರು. ಸಾಮಾನ್ಯ ಕ್ಷೇತ್ರದಲ್ಲಿ ಹಿಟ್ನಾಳ್ ಉಮೇಶಪ್ಪ ₹ 5.25ಲಕ್ಷ, ರತ್ನಮ್ಮ ಸೋಮನಗೌಡ ₹ 5.25 ಲಕ್ಷ, ದಾಕ್ಷಾಯಿಣಿ ಹಳ್ಳಿ ಹನುಮಂತಪ್ಪ ₹5.42 ಲಕ್ಷ, ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರದಲ್ಲಿ ಎ.ಕೆ. ಬುಳ್ಳಪ್ಪ  ₹1.01

ಭಾರತದ ಶಾಂತಿ ಪಾಲನಾ ಪಡೆಗೆ ವಿಶ್ವಸಂಸ್ಥೆ ಪ್ರಶಸ್ತಿ

ಭಾರತದ ಶಾಂತಿ ಪಾಲನಾ ಪಡೆಗೆ ವಿಶ್ವಸಂಸ್ಥೆ ಪ್ರಶಸ್ತಿ ವಾಷಿಂಗ್ಟನ್‌(ಪಿಟಿಐ):  ವಿಶ್ವಸಂಸ್ಥೆಯ  ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ  ನೀಡಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಇಲ್ಲಿನ ಕ್ಯಾಪಿಟಲ್‌ ಹಿಲ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಪಡೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸುಮಾರು 1.80 ಲಕ್ಷ ಪಡೆಗಳನ್ನು ಕೊಡುಗೆಯಾಗಿ ನೀಡುವ ಮೂಲಕ, ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಭಾರತ ಗಮನಾರ್ಹ ಕೊಡುಗೆ ನೀಡಿದೆ. ಇತರೆ ರಾಷ್ಟ್ರಗಳಿಗಿಂತ ಹೆಚ್ಚಿನ ಪಡೆಗಳನ್ನು ನೀಡಿರುವ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಅಮೆರಿಕ–ಭಾರತ ವಾಣಿಜ್ಯ ಮಂಡಳಿ  ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ವಿಶ್ವಸಂಸ್ಥೆ ರಾಯಭಾರಿ ಅರುಣ್‌ ಕೆ. ಸಿಂಗ್‌ ಪ್ರಶಸ್ತಿ ಸ್ವೀಕರಿಸಿದರು. ವಿಶ್ವಸಂಸ್ಥೆಯ 69 ಕಾರ್ಯಾಚರಣೆಗಳ ಪೈಕಿ 44ಕ್ಕೂ ಅಧಿಕ ಕಾರ್ಯಾಚರಣೆಯಲ್ಲಿ ಭಾರತೀಯ ಪಡೆ ಭಾಗವಹಿಸಿದೆ.

ಸಾಮಾಜಿಕ ಭದ್ರತಾ ಯೋಜನೆಗೆ ಒಂದೇ ದಿನ 7ಕೋಟಿ ಜನ ನೋಂದಣಿ.

ಸಾಮಾಜಿಕ ಭದ್ರತಾ ಯೋಜನೆಗೆ ಒಂದೇ ದಿನ 7ಕೋಟಿ ಜನ ನೋಂದಣಿ. (PSGadyal Teacher Vijayapur) ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ -ಪಿಟಿಐ ಚಿತ್ರ ನವದೆಹಲಿ(ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಚಾಲನೆ ನೀಡಿದ ಮೂರು ಸಾಮಾಜಿಕ ಭದ್ರತಾ ಯೋಜನೆಗಳಿಗೆ ರಾಷ್ಟ್ರಾದ್ಯಂತ ಒಂದೇ ದಿನ ಏಳು ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ದಿನಕ್ಕೆ ಒಂದು ರೂಪಾಯಿ ಪಾವತಿಸಿ ವಿಮಾ ರಕ್ಷಣೆ ಪಡೆಯುವುದೂ ಸೇರಿದಂತೆ ಮೂರು ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಅಟಲ್‌ ಪಿಂಚಣಿ ಯೋಜನೆಗೆ ನರೇಂದ್ರ ಮೋದಿ ಅವರು ಈಚೆಗೆ ಚಾಲನೆ ನೀಡಿದ್ದರು. 'ಯೋಜನೆಗೆ ಮೇ 9ರಂದು ಚಾಲನೆ ನೀಡಲಾಗಿದ್ದು, ಮೇ 13ರ ಸಂಜೆವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ 5.19 ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ರಾಷ್ಟ್ರದೆಲ್ಲೆಡೆ ಜಿಲ್ಲೆಗಳಲ್ಲಿ ಇದು ಯಶಸ್ಸಿನತ್ತ ಸಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಅಟಲ್‌ ಪಿಂಚಣಿ ಯೋಜನೆಗಳಿಗೆ 6.7 ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ(ಎಲ್ ಐಸಿ) ನಿರ್ವಹಿಸುತ್ತಿದ್ದು, ಐದು ದಿನಗಳಲ್ಲಿ 1.59 ಕೋಟಿ ಜನರ ನೋಂದಣಿ