Ambigara Choudayya... Part-2

ಈ ದಿಸೆಯಲ್ಲಿ ಅಂಬಿಗರ
ಚೌಡಯ್ಯನವರು ಗಮನಾರ್ಹರು.
ಚೌಡಯ್ಯನ ದೃಷ್ಟಿಯಲ್ಲಿ ಧರ್ಮ -
ದೇವರು :
ಚೌಡಯ್ಯ ಮೊದಲಾದ
ವಚನಕಾರರು ಧರ್ಮದ
ವ್ಯಾಖ್ಯೆಯನ್ನು ಸರಳಗೊಳಿಸಿದರು.
ನರನಲ್ಲೇ ಹರನನ್ನು ;
ವ್ಯಕ್ತಿಯಲ್ಲೇ ಶಕ್ತಿಯನ್ನು
ಗುರುತಿಸುವದರ ಮೂಲಕ ದೇವರ
ಕಲ್ಪನೆಯನ್ನೇ ಬದಲಾಯಿಸಿದರು.
ವೀರಶೈವ ಧರ್ಮವನ್ನೇ ಅವರು
ಆರಿಸಿಕೊಂಡರೂ ಅದಕ್ಕೊಂದು ಹೊಸ
ತಿರುವು ತಂದುಕೊಟ್ಟರು. ಹುಟ್ಟಿನಿಂದ
ಲಿಂಗಾಯತರಾಗಿದ್ದ ಮಾತ್ರ
ವೀರಶೈವರು ಎಂಬ ಹಳೆಯ
ವಿಚಾರವನ್ನು ಬಿಟ್ಟು; ಅಲ್ಲಿದ್ದ
ಸಂಪ್ರದಾಯವನ್ನು ಅಲ್ಲಗಳೆದು
ಹುಟ್ಟಿನಿಂದ ಯಾವದೇ
ಮತದವರಾಗಿದ್ದರೂ ಆಚಾರ,
ವಿಚಾರದಿಂದ
ಲಿಂಗಾಯತರಾದವರನ್ನು ಶರಣರು
ವೀರಶೈವರೆಂದು ಕರೆಯುವದರ ಮೂಲಕ
ವೀರಶೈವ ಧರ್ಮದ
ವ್ಯಾಪ್ತಿಯನ್ನು ಹೆಚ್ಚಿಸಿದರು.
ಚೌದಯ್ಯನವರು ಇಂತಹ ವಿಷಯದಲ್ಲಿ
ಬಹಳ ನಿರ್ಭಿಡೆ ವ್ಯಕ್ತಿ. " ಕಟ್ಟಿದ
ಲಿಂಗವನ್ನು ಬಿಟ್ಟು ಬೆಟ್ಟದ ಲಿಂಗಕ್ಕೆ
ಹೋಗುವವರಿಗೆ
ಮೆಟ್ಟು ತೆಗೆದುಕೊಂಡು ಹೊಡೆಯೆಂದು"
ಖಾರವಾಗಿ ಹೇಳುತ್ತಾರೆ.ಧರ್ಮನಿಷ್ಟೆ
ಚೌಡಯ್ಯನವರಲ್ಲಿ ಗಾಢವಾಗಿತ್ತು.
ಅವರ ವಿಚಾರಧಾರೆ
ಬೆಳೆದಂತೆಲ್ಲಾ ಅದು ಇನ್ನೂ
ವಿಶಾಲವಾಗುತ್ತ ಹೋಯಿತು.
ಆದ್ದರಿಂದಲೇ ಅವರು ಹಿಂದಿದ್ದ
ಧರ್ಮಗಳಲ್ಲಿಯ
ಪೊಳ್ಳುತನವನ್ನು ಬಯಲುಮಾಡಿ
ಅಖಂಡವಾದ ಮಾನವ ಧರ್ಮದ ಕಡೆ
ಕರೆದೊಯ್ದರ.
ಚೌಡಯ್ಯ ಮೊದಲಾದ
ವಚನಕಾರರು ಮೂರ್ತಿ ಪೂಜಕರಲ್ಲ.
ಹಾಗೆಂದಾಕ್ಷಣ ಅವರು
ನಿರಾಕಾರವನ್ನೂ ಪೂಜಿಸುವುದಿಲ್ಲ.
ಪರಮಾತ್ಮನ
ಆಕಾರವನ್ನೇ ಜೀವಾತ್ಮನಲ್ಲಿ
ಗುರುತಿಸಿ ಇಷ್ಟಲಿಂಗದ ಕುರುಹಿನ
ಮೂಲಕ
ಅರಿವು ಕಂಡುಕೊಳ್ಳುವದು ಮುಖ್ಯ
ಉದ್ದೇಶ.
ALL RI

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು