Pulitzer Award to Palani Kumanan (T.N)


ಕೊಯಮತ್ತೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ 'ಪುಲಿಟ್ಜರ್‌'

Thu, 04/23/2015 - 01:00

ನ್ಯೂಯಾರ್ಕ್‌ (ಐಎಎನ್ಎಸ್):  ವರದಿ­ಗಾರಿಕೆ ಹಾಗೂ ಅದನ್ನು ಪ್ರಸ್ತುತ­­ಪಡಿಸಲು ಮಾಹಿತಿ ತಂತ್ರ­ಜ್ಞಾನದ ಬಳಕೆಯ ಹೆಚ್ಚಳದ ಬಗ್ಗೆ ತನಿಖಾ ವರದಿ  ಮಾಡಿರುವ ತಮಿಳು­­ನಾಡು ರಾಜ್ಯದ ಕೊಯಮ­ತ್ತೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ ಪಳನಿ ಕುಮಾನನ್‌ ಅವರಿಗೆ 'ದಿ ವಾಲ್‌ ಸ್ಟ್ರೀಟ್‌ ಜರ್ನಲ್‌'ನ ಪ್ರತಿಷ್ಠಿತ 'ಪುಲಿಟ್ಜರ್‌' ಪ್ರಶಸ್ತಿ ಸಂದಿದೆ.

ಸಾಫ್ಟ್‌ವೇರ್‌ ವಾಸ್ತುಶಾಸ್ತ್ರ ಮತ್ತು ತಾಂತ್ರಿಕ ಮುಖ್ಯಸ್ಥರಾಗಿರುವ ಕುಮಾನನ್‌,  'ಡೋವ್‌ ಜೋನ್ಸ್‌' ಜರ್ನಲ್‌ನ ಪ್ರಶಸ್ತಿ ಪುರಸ್ಕೃತ ವರದಿ 'ಮೆಡಿಕೇರ್‌ ಅನ್‌ಮಾಸ್ಕ್‌ಡ್‌'ಗೆ ಗ್ರಾಫಿಕ್ಸ್‌ ತಂಡದ ಸದಸ್ಯರಾಗಿ ದುಡಿದಿದ್ದರು ಎಂದು ಜರ್ನಲ್‌ನ ತನಿಖಾ ಸಂಪಾದಕ ಮಿಖಾಯಿಲ್‌ ಸಿಕೋನೊಲ್ಫಿ  ಹೇಳಿದ್ದಾರೆ.

ಕೊಯಮತ್ತೂರಿನ ಪಿಎಸ್ಜಿ ತಾಂತ್ರಿಕ ಕಾಲೇಜಿನಲ್ಲಿ ಕುಮಾನನ್‌ ಪದವಿ ಪಡೆದಿದ್ದಾರೆ. ವೈದ್ಯರು, ಆಸ್ಪತ್ರೆಗಳು ಸೇರಿದಂತೆ ಸುಮಾರು 8.80 ಲಕ್ಷ ವೈದ್ಯಕೀಯ ಸೇವಾದಾರರ ಮೇಲೆ ಸರ್ಕಾರಿ ಪಾವತಿ ವಿಶ್ಲೇಷಣೆಗೆ ಬಳಸುವ ಆರೋಗ್ಯ ಸುರಕ್ಷಾ ಬಿಲ್ಲಿಂಗ್‌ನಲ್ಲಿ
ಸಂವಹನ ದತ್ತಾಂಶವನ್ನು ಕುಮಾನನ್ ತಂಡ ಅಭಿವೃದ್ಧಿಪಡಿಸಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು