ಬೆಂಗಳೂರು ನಗರ ರೈಲ್ವೆ ನಿಲ್ದಾಣ ಇನ್ನು ಮುಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ

ಬೆಂಗಳೂರು: ಬೆಂಗಳೂರು ನಗರ
ರೈಲ್ವೆ ನಿಲ್ದಾಣಕ್ಕೆ ಅಧಿಕೃತವಾಗಿ
ಕ್ರಾಂತಿವೀರ ಸಂಗೊಳ್ಳಿ
ರಾಯಣ್ಣ ನಿಲ್ದಾಣ ಎಂದು
ಮರುನಾಮ ಮಾಡಲಾಗಿದೆ.
ಕೇಂದ್ರ ರೈಲ್ವೆ ಸಚಿವ ಸುರೇಶ್
ಪ್ರಭು ಇಂದು ಹೆಸರನ್ನು
ಅಧಿಕೃತವಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ
ಸಿದ್ದರಾಮಯ್ಯ, ಮಾಜಿ ಪ್ರಧಾನಿ
ದೇವೇಗೌಡ, ಕೇಂದ್ರ ಸಚಿವರಾದ
ಅನಂತ್ ಕುಮಾರ್, ವೆಂಕಯ್ಯ
ನಾಯ್ಡು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಚಿವರು
ಯಲಹಂಕ-ಪೆನುಕೊಂಡ,
ಅರಸೀಕೆರೆ-ತುಮಕೂರು ಮತ್ತು
ಹುಬ್ಬಳ್ಳಿ-ಚಿಕ್ಜಾಜೂರು ರೈಲು
ಯೋಜನೆಗಳಿಗೆ ಶಂಕುಸ್ಥಾಪನೆ
ನೆರವೇರಿಸಿದರು.

Comments

Popular posts from this blog

ಶಿಕ್ಷಕರ ಸೇವಾ ಪ್ರಮಾಣ ಪತ್ರ.

NMMS 2019 PAPER-1, ಮಾನಸಿಕ ಸಾಮರ್ಥ್ಯ ಪರೀಕ್ಷೆ (GMAT)