Posts

Gandhi study center inaugurated by Modi in Shanghai :-

Image
ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟಿಸಿದ ಮೋದಿ ಶಾಂಘೈ: ಚೀನಾದ ಫುಡಾನ್ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಸ್ಥಾಪಿಸಲಾದ ಗಾಂಧಿ ಅಧ್ಯಯನ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪವಿತ್ರ ಸಂದರ್ಭದಲ್ಲಿ ನಿಮ್ಮೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯ. ನಿಜಕ್ಕೂ ಇದು ನನ್ನಲ್ಲಿ ಖುಷಿಯನ್ನುಂಟುಮಾಡಿದೆ. ಮಹಾತ್ಮಾಗಾಂಧಿ ಜನಿಸಿದ್ದು ಭಾರತದಲ್ಲಿ. ಅವರು ವಿಶ್ವಕ್ಕೇ ಆದರ್ಶವಾಗಿ ಬೆಳೆದರು. ಗಾಂಧೀಜಿ ಅವರ ಸಿದ್ಧಾಂತಗಳು ಇಂದಿಗೂ ನಮಗೆ ದಾರಿ ದೀಪವಾಗಿದೆ. ಅವರೊಬ್ಬ ಯುಗಪುರುಷ ಎಂದು ಸ್ಮರಿಸಿದರು.

CET-2015 Provisional Answer Keys(all series and all subjects)

http://kea.kar.nic.in/cet2015/provisional_key.pdf

ಮೊರಾರ್ಜಿ ಶಾಲೆ ನೇಮಕಾತಿ: ದಾಖಲೆಗಳ ಪರಿಶೀಲನೆ ಕಾಟ ಶಿಕ್ಷಕರಿಗೆ ಕೃಪಾಂಕ ಭಾಗ್ಯ ಇಲ್ಲ!

ಮೊರಾರ್ಜಿ ಶಾಲೆ ನೇಮಕಾತಿ: ದಾಖಲೆಗಳ ಪರಿಶೀಲನೆ ಕಾಟ ಶಿಕ್ಷಕರಿಗೆ ಕೃಪಾಂಕ ಭಾಗ್ಯ ಇಲ್ಲ! (PSGadyal Teacher) ಬೆಂಗಳೂರು: ಗುತ್ತಿಗೆ ಆಧಾರದ ಶಿಕ್ಷಕರಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನೇಮಕಾತಿಯಲ್ಲಿ ಕೃಪಾಂಕ ಕೊಡುವಂತೆ  ರಾಜ್ಯ ಹೈಕೋರ್ಟ್‌ 2013ರಲ್ಲೇ ಆದೇಶ ನೀಡಿದ್ದರೂ, ಶಿಕ್ಷಕರಿಗೆ ಇನ್ನೂ 'ನೇಮಕ ಭಾಗ್ಯ' ದೊರೆತಿಲ್ಲ. ಈಗ ನಡೆಯುತ್ತಿರುವ ದಾಖಲೆಗಳ ಪರಿಶೀಲನೆ ವೇಳೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಅಧಿಕಾರಿಗಳು, 'ನಮ್ಮಿಂದ ಒದಗಿ ಸಲು ಸಾಧ್ಯವಾಗದ ದಾಖಲೆಗಳನ್ನು ಕೇಳುತ್ತಿದ್ದಾರೆ' ಎಂದು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕೆಲವು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ. ಮೊರಾರ್ಜಿ ದೇಸಾಯಿ ಶಾಲೆಗಳು ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿವೆ. ಈ ಸಂಸ್ಥೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಸೇರಿದೆ. 'ಹೈಕೋರ್ಟ್‌ ಆದೇಶವನ್ನು ಸಂಸ್ಥೆ ಈಗ ಅನುಷ್ಠಾನಕ್ಕೆ ತರುತ್ತಿದೆ. ದಾಖಲೆಗಳ ಪರಿಶೀಲನೆ ಆರಂಭಿಸಿದೆ. ಆದರೆ ಹೈಕೋರ್ಟ್‌ ಆದೇಶ ಪಾಲಿಸಿದಂತೆಯೂ ಆಗಬೇಕು, ನಮಗೆ ಕಾಯಂ ಕೆಲಸ ಸಿಗದಂತೆಯೂ ಆಗಬೇಕು ಎಂಬಂತಿದೆ ಅಧಿಕಾರಿಗಳ ಧೋರಣೆ' ಎಂದು ಶಿಕ್ಷಕರೊಬ್ಬರು ದೂರಿದರು. 'ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿಇಡಿ ಮತ್ತಿತರ ಅಂಕಪಟ್ಟಿಗಳನ್ನು ಗುತ್ತಿಗೆ ಆಧಾರದಲ್ಲಿರುವ ಶಿಕ್ಷಕರು ಹಾಜರುಪಡಿಸಬಹುದು. ಆದರೆ ನಮ್ಮನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಸಂದರ್ಭದಲ್ಲಿ ಹೊರಡಿಸಿದ...

CET-2015 Provisional Answer Keys(biology)

Image

👆 May-18 PUC Result

Image
👆 May-18 PUC Result

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ.

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ. (PSGadyal) ನವದೆಹಲಿ: ವಾಹನ ಸವಾರರಿಗೆ ಕಹಿ ಸುದ್ದಿ. ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 3.13 ರೂ ಏರಿಕೆಯಾದರೆ ಡೀಸೆಲ್ ದರ 2.71 ರೂ. ಏರಿಕೆಯಾಗಿದೆ. ಪರಿಷ್ಕøತ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್,ಡೀಸಿಲ್ ದರ ಏರಿಕೆಯಾಗಿದೆ.

ಭಾರತ - ಚೀನಾ ನಡುವೆ 10 ಶತಕೋಟಿ ಡಾಲರ್ ಮೌಲ್ಯದ 24 ಒಪ್ಪಂದ.....................:

Image
ಭಾರತ - ಚೀನಾ ನಡುವೆ 10 ಶತಕೋಟಿ ಡಾಲರ್ ಮೌಲ್ಯದ 24 ಒಪ್ಪಂದ  (PSGadyal Teacher) India - China ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಜತೆಗೆ ಬರೋಬ್ಬರಿ 1000 ಕೋಟಿ  ಡಾಲರ್​ಗಳಿಗೂ ಹೆಚ್ಚು ಮೌಲ್ಯದ 24 ಒಪ್ಪಂದಗಳಿಗೆ ಸಹಿ ಹಾಕಿದ್ದು ಉಭಯ ದೇಶಗಳ ಸಂಬಂಧಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಭಾರತ ಮತ್ತು ಚೀನಾ ನಡುವೆ ನಡೆದ ಒಪ್ಪಂದಗಳು # ಚೆಂಗ್ಡು ಮತ್ತು ಚೆನ್ನೈಯಲ್ಲಿ ರಾಜತಾಂತ್ರಿಕ ಕಚೇರಿಗಳ ಸ್ಥಾಪನೆಗೆ ಪ್ರೊಟೊಕಾಲ್. # ವೃತ್ತಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಸಹಕಾರ ಮತ್ತು ಭಾರತದಲ್ಲಿ ಮಹಾತ್ಮಾ ಗಾಂಧಿ ಕೌಶಲ್ಯಅಭಿವೃದ್ಧಿ ಸಂಸ್ಥೆ ಸ್ಥಾಪನೆ. # ವಿದೇಶಾಂಗ ಸಚಿವಾಲಯ ಮತ್ತು ಕಮ್ಯೂನಿಸ್ಟ್ ಪಾರ್ಟಿ ಆಫ್ ಚೈನಾ (ಸಿಸಿಸಿಪಿಸಿ) ಮಧ್ಯೆ ಸಹಕಾರ. # ಚೀನಾ ಮತ್ತು ಭಾರತ ರೈಲ್ವೇಯ ರಾಷ್ಟ್ರೀಯ ರೈಲ್ವೇ ಆಡಳಿತ ಮಧ್ಯೆ ಕಾರ್ಯಯೋಜನೆ. # ವ್ಯಾಪಾರ ಮಾತುಕತೆಗಳಲ್ಲಿ ಸಹಕಾರಕ್ಕೆ ಸಂಬಂಧಿಸಿದಂತೆ ಸಲಹಾ ವ್ಯವಸ್ಥೆ. # ಶಿಕ್ಷಣ ವಿನಿಮಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ಪತ್ರ. # ಗಣಿಗಾರಿಕೆ ಮತ್ತು ಖನಿಜಗಳ ಕ್ಷೇತ್ರದಲ್ಲಿ ಸಹಕಾರ. # ಬಾಹ್ಯಾಕಾಶ ಸಹಕಾರ ರೂಪುರೇಷೆ. # ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರ ಒಪ್ಪಂದ. # ಸಮುದ್ರ ವಿಜ್ಞಾನ, ಪರಿಸರ ಬದಲಾವಣೆ ಮತ್ತು ಕ್ರಯೋಸ್ಪಿಯರ್ ಕ್ಷೇತ್ರಗಳಲ್ಲಿ ಸಹಕಾ...

2, 3 ವರ್ಷಗಳ ಬಳಿಕ ಡಿಡಿಪಿಐ, ಬಿಇಒಗಳು ಮರಳಿ ಶಾಲೆಗೆ!

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇ ಶಕರು (ಡಿಡಿಪಿಐ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಓ) ಇನ್ನು ಅದೇ ಹುದ್ದೆಯಲ್ಲಿ ಠಿಕಾಣಿ ಹೂಡು ವಂತಿಲ್ಲ. ಹೌದು, ಇನ್ನು ಮುಂದೆ ಡಿಡಿಪಿಐಗಳು ಗರಿಷ್ಠ 2 ವರ್ಷ ಮತ್ತು ಬಿಇಓಗಳು ಗರಿಷ್ಠ 3 ವರ್ಷ ಮಾತ್ರ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕು. ಬಳಿಕ ಬೋಧನಾ ವೃತ್ತಿಗೆ ಮರಳಬೇಕು.ಅಷ್ಟೇ ಅಲ್ಲ, ಡಿಡಿಪಿಐ ಹುದ್ದೆಯಲ್ಲಿ 2 ವರ್ಷ ಮತ್ತು ಬಿಇಓ ಹುದ್ದೆಯಲ್ಲಿ 3 ವರ್ಷಕ್ಕಿಂತ ಹೆಚ್ಚು ಅವಧಿಗೆ ಮುಂದು ವರಿಯಲು ಅವಕಾಶವೇ ಇಲ್ಲ. ಏಕೆಂದರೆ, ಹೊಸ ನಿಯಮಾ ವಳಿಯಲ್ಲಿ ನಿಗದಿಪಡಿಸಿದ ಗರಿಷ್ಠ ಅವಧಿ (ಡಿಡಿಪಿಐಗಳಿಗೆ 2 ವರ್ಷ ಮತ್ತು ಬಿಇಓಗಳಿಗೆ 3 ವರ್ಷ) ಮುಗಿಯುತ್ತಿದ್ದಂತೆ ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ಅವರು ವರ್ಗಾವಣೆಗೊ ಳ್ಳುತ್ತಾರೆ. ಡಿಡಿಪಿಐ ಅಥವಾ ಬಿಇಓಗಳಾದ ಬಳಿಕ ಬೋಧ ನಾ ವೃತ್ತಿಯ ಸಹವಾಸವೇ ಬೇಡ ಎಂದು ಹೇಳಿ ಸಾಕಷ್ಟು ಕಸರತ್ತು ಮಾಡಿ ಅದೇ ಹುದ್ದೆಯಲ್ಲಿ ಮುಂದುವರಿಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಮತ್ತು ಅರ್ಹ ಎಲ್ಲಾ ಬೋಧ ಕರಿಗೂ ಈ ಹುದ್ದೆಯಲ್ಲಿ ಅವಕಾಶ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರಡು ಅಧಿಸೂ ಚನೆ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಮೇ 15 ಆಕ್ಷೇಪಣೆ ಸಲ್ಲಿಸಲು ಕಡೆಯ ದಿನವಾಗಿದ್ದು, ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕ ನಿಗದಿತ ಅವಧಿ ಪೂರೈಸಿದ ಡಿಡಿಪಿಐ ಮತ್ತು ಬಿಇಓಗಳ ವರ...

"Namaami Ganges":-

ಗಂಗಾ ಶುದ್ಧೀಕರಣ ಬಗ್ಗೆ ಅರಿವು ಮೂಡಿಸಲು 'ನಮಾಮಿ ಗಂಗೆ' ವಿಡಿಯೋ ಕುರಿತು : ಗಂಗಾ ಶುದ್ಧೀಕರಣ ಯೋಜನೆಗೆ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರೂಪಾಯಿ ವ್ಯಯಿಸುತ್ತಿದೆ. ಈ ಯೋಜನೆಯನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಸಲುವಾಗಿ 'ನಮಾಮಿ ಗಂಗೆ' ಎಂಬ ವಿಡಿಯೋವೊಂದನ್ನು ಸಿದ್ಧಪಡಿಸಿದ್ದು, ಇದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗಿದೆ. ತ್ರಿಚೂರು ಸೋದರರ ಸಂಯೋಜನೆಯಲ್ಲಿ ಮೂಡಿ ಬಂದಿರುವ ಆಶಯ ಗೀತೆಗೆ ಆದಿಶಂಕರಾಚಾರ್ಯರ ಗಂಗಾಷ್ಟಕದ ಶ್ಲೋಕಗಳನ್ನು ಬಳಸಿಕೊಳ್ಳಲಾಗಿದೆ. ಗಂಗಾ ನದಿಯ ತಟದ ಚಟುವಟಿಕೆಗಳು, ಭಕ್ತರು, ಗಂಗೆಯ ಮಹತ್ವವನ್ನು ಈ ಟ್ರೈಲರ್ ನಲ್ಲಿವೆ.

Indian economical development rate willbe 8.1% -UNO reports

ಭಾರತದ ಆರ್ಥಿಕ ಬೆಳವಣಿಗೆ ದರ ಶೇ.8.1: ವಿಶ್ವಸಂಸ್ಥೆ Published: 15 May 2015 11:16 AM IST ನವದೆಹಲಿ: ಭಾರತದ ಪಾಲಿಗೊಂದು ಸಿಹಿ ಭವಿಷ್ಯ ನುಡಿ ತೇಲಿಬಂದಿದೆ. ಈ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ.8.1ರಷ್ಟು ಇರಲಿದೆ ಎಂದು ವಿಶ್ವಸಂಸ್ಥೆಯ ಸಮೀಕ್ಷೆ ವರದಿ ತಿಳಿಸಿದೆ. ಮೂಲಸೌಕರ್ಯ ಯೋಜನೆ ಗಳು, ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು ಹಾಗೂ ಇಳಿದಿರುವ ಹಣದುಬ್ಬರದ ನಡುವೆ ಗ್ರಾಹಕರ ಕೊಳ್ಳುವಿಕೆಯ ಚಟುವಟಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಏರಿಕೆಯಾಗಲಿದೆಯೆಂದು ವಿಶ್ವಸಂಸ್ಥೆ ಅಂದಾಜಿಸಿದೆ. ಐಎಂಎಫ್ ಹಾಗೂ ವರ್ಲ್ಡ್ ಬ್ಯಾಂಕ್ ಕೂಡ ಶೇ.7.5 ಪ್ರಗತಿ ನಿರೀಕ್ಷಿಸಿದ್ದರೆ ಆರ್‍ಬಿಐ ಶೇ.7.8 ಬೆಳವಣಿಗೆಯ ಮುನ್ಸೂಚನೆ ನೀಡಿದೆ. ವರದಿ ಏನನ್ನುತ್ತೆ? ಬಂಡವಾಳ ಹೂಡಿಕೆಯಲ್ಲೂ ತೀವ್ರ ಹೆಚ್ಚಳ ನಿರೀಕ್ಷೆ 2015ರಲ್ಲಿ ಶೇ.8.1 ಹೆಚ್ಚಳ 2016ರಲ್ಲಿ ಶೇ8.2 ಏರಿಕೆ ವಿಶ್ವಾಸ ಭಾರತೀಯ ವಿತ್ತ ಸಚಿವಾಲಯ ನೀಡಿರುವ ವಿವರ ಆಧರಿಸಿ ವಿಶ್ವಸಂಸ್ಥೆ ವರದಿ ಪ್ರಕಟ ಹಣದುಬ್ಬರದಲ್ಲಿ ಇಳಿಕೆ ಕಂಡರೂ ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಚನಾತ್ಮಕ ಸುಧಾರಣೆಯಲ್ಲಿ ಭಾರಿ ಮುನ್ನಡೆ 120 ಹೊಸ ಬ್ಯಾಂಕ್ ಖಾತೆ ತೆರೆದದ್ದು ಆರ್ಥಿಕ ಪ್ರಗತಿಗೆ ಪೂರಕ ಮೇಕ್ ಇನ್ ಇಂಡಿಯಾ ಯೋಜನೆಯಿಂದ ಕೈಗಾರಿಕಾ ವಲಯದಲ್ಲಿ ಪ್ರಗತಿ Posted by: Rashmi Kasarag...