ಕರ್ನಾಟಕದ 6 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕ


ನವದೆಹಲಿ: ಸ್ಮಾರ್ಟ್ ಸಿಟಿ ಯೋಜನೆಗೆ
ಆಯ್ಕೆಯಾದ 98 ನಗರಗಳ ಪಟ್ಟಿಯನ್ನು
ನಗರಾಭಿವೃದ್ಧಿ ಮತ್ತು ಸಂಸದೀಯ
ವ್ಯವಹಾರಗಳ ಖಾತೆಯ ಸಚಿವ
ವೆಂಕಯ್ಯ ನಾಯ್ಡು
ಬಿಡುಗಡೆಗೊಳಿಸಿದ್ದಾರೆ.
ಮಂಗಳೂರು, ಹುಬ್ಬಳ್ಳಿ-
ಧಾರವಾಡ, ಶಿವಮೊಗ್ಗ, ದಾವಣಗೆರೆ,
ಬೆಳಗಾವಿ ಮತ್ತು ತುಮಕೂರು
ನಗರಗಳನ್ನು ರಾಜ್ಯ ಸರ್ಕಾರ
ಸ್ಮಾರ್ಟ್ ಸಿಟಿ ಯೋಜನೆ ಶಿಫಾರಸು
ಮಾಡಿತ್ತು. ಈ ಶಿಫಾರಸಿನಂತೆ
ಕೇಂದ್ರ ಸರ್ಕಾರ ಈ ನಗರಗಳನ್ನು
ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿಸಿದೆ.
ಕರ್ನಾಟಕದ 6 ನಗರಗಳು ಸ್ಮಾರ್ಟ್ ಸಿಟಿ
ಯೋಜನೆಗೆ ಆಯ್ಕೆ ಆಗಿದ್ದರೆ,
ಯೋಜನೆಯಲ್ಲಿ ಉತ್ತರ ಪ್ರದೇಶ
ಮತ್ತು ತಮಿಳುನಾಡಿಗೆ ಅಗ್ರ ಸ್ಥಾನ
ಸಿಕ್ಕಿದೆ.
ಉತ್ತರ ಪ್ರದೇಶದ 13, ತಮಿಳುನಾಡಿನ
12, ಮಹಾರಾಷ್ಟ್ರ 10,
ಮಧ್ಯಪ್ರದೇಶ 7, ಗುಜರಾತ್ 6,
ಬಿಹಾರ, ಪಂಜಾಬ್,
ಆಂಧ್ರಪ್ರದೇಶದಲ್ಲಿ ತಲಾ 3
ನಗರಗಳನ್ನು ನಗರಾಭಿವೃದ್ಧಿ ಇಲಾಖೆ
ಆಯ್ಕೆ ಮಾಡಿದೆ.
ನಗರಗಳ ಪಟ್ಟಿ ಬಿಡುಗಡೆಗೊಳಿಸಿ
ಮಾತನಾಡಿದ ವೆಂಕಯ್ಯ ನಾಯ್ಡು
ಯೋಜನೆಯ ನೀಲಿ ನಕ್ಷೆ ತಯಾರಿಗೆ
ಕೆಲ ದಿನದಲ್ಲೇ 2 ಕೋಟಿ ರೂ
ಬಿಡುಗಡೆ ಮಾಡಲಾಗುವುದು.
ಮುಂದಿನ ಐದು ವರ್ಷ ಪ್ರತಿ ವರ್ಷಕ್ಕೆ
ಕೇಂದ್ರದಿಂದ 100 ಕೋಟಿ ರೂ
ಬಿಡುಗಡೆ ಮಾಡುತ್ತೇವೆ. ಒಟ್ಟಾರೆ
ಯೋಜನೆಗೆ ಕೇಂದ ಸರ್ಕಾರ 48
ಸಾವಿರ ಕೋಟಿ ರೂ. ಮೀಸಲಿಟ್ಟಿದೆ
ಎಂದು ತಿಳಿಸಿದರು.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ವಯಸ್ಸಿನ ಲೆಕ್ಕಾಚಾರ 2024