ಪನಾಮಾ ಕಾಲುವೆಗೆ ನೂರು ವರ್ಷ
Posts
೧೨ವರ್ಷಕ್ಕೊಮ್ಮೆ ಹೂ ಬಿಟ್ಟು ನಶಿಸುವ ಹಾರ್ಲೆ(ಪಶ್ಚಿಮ ಘಟ್ಟದಲ್ಲಿ ನೀಲಿ ರಂಗೋಲಿ)
- Get link
- Other Apps
ಮಲೆನಾಡಿನ ವಿಶೇಷತೆಗಳು ಹಲವು. ಇಲ್ಲಿನ ಗಿರಿ ತೊರೆ ಹಳ್ಳ ಕೊಳ್ಳಗಳನ್ನೊಳ ಗೊಂಡ ಪ್ರಕತಿ, ಮಳೆಗಾಲದಲ್ಲಿ ಮೈದಳೆಯುವ ಜಲಪಾತಗಳು...ಹೀಗೆ ಪಟ್ಟಿ ದೊಡ್ಡದಿದೆ. ಇಂತಹ ವಾತಾವರಣದ ನಡುವೆ ಭೂಮಿಯ ಒಡಲಿನಿಂದ ಸಸ್ಯವಾಗಿ ಬೆಳೆದು 12 ವರ್ಷಗಳಿಗೆ ಒಮ್ಮೆ ಹೂ ಬಿಟ್ಟು ಮುಂದಿನ ಪೀಳಿಗೆಗೆ ಬೀಜೋತ್ಪತ್ತಿ ಮಾಡಿ ತನ್ನ ಜೀವಿತ ಅವಧಿಯನ್ನು ಪೂರ್ಣಗೊಳಿಸಿಕೊಳ್ಳುವ ಹಾರ್ಲೆ ಎಂಬ ಗಿಡ ವಿಶೇಷವಾದುದು. ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನ ಘಟ್ಟ ಪ್ರದೇಶಗಳಾದ ದೇವರಮನೆ, ಬೈರಾಪುರ, ಮೂಲರ ಹಳ್ಳಿ, ಗುತ್ತಿಹಳ್ಳಿ, ಕೋಗಿಲೆ, ಮರಗುಂದ ಮುಂತಾದ ಗಿರಿಶಿಖರಗಳಲ್ಲಿ ಈ ವರ್ಷ ಪ್ರಕೃತಿನಿರ್ಮಿತ ಹಾರ್ಲೆಯ ಹೂದೋಟ ನಿರ್ಮಾಣಗೊಂಡಿದೆ. ಪ್ರಕೃತಿಯ ಈ ಸೂಜಿಗ ಸ್ಥಳೀಯರು, ಪರಿಸರ ಪ್ರಿಯರನ್ನು ತನ್ನತ್ತ ಸೆಳೆಯುತ್ತಿವೆ. ಹಾರ್ಲೆ ಗಿಡ ಹಲವು ವೈಶಿಷ್ಠಗಳನ್ನು ಹೊಂದಿದೆ. ಬಿದಿರಿನದ್ದು 60 ವರ್ಷಗಳ ಜೀವಿತಾವಧಿಯಾದರೆ ಇದರದ್ದು 12 ವರ್ಷಗಳು. ಅತೀ ಹೆಚ್ಚು ಮಳೆ ಬೀಳುವ ಬೆಟ್ಟಗುಡ್ಡಗಳಲ್ಲಿ ಹುಟ್ಟುವ ಈ ಗಿಡ 12 ವರ್ಷಗಳಿಗೊಮ್ಮೆ ಹೂ ಬಿಟ್ಟು ಇಡೀ ಬೆಟ್ಟವನ್ನೇ ಸುಂದರ ಉದ್ಯಾನವನವನ್ನಾಗಿಸುತ್ತದೆ. ಇದನ್ನು ನೋಡಲೆಂದೇ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದೆ. ಈ ವರ್ಷವೂ ಹಾರ್ಲೆ ಹೂವಿನ ಉದ್ಯಾನ ವೀಕ್ಷಿಸಲು ಸಾವಿರಾರು ಮಂದಿ ಪರಿಸರ ಪ್ರಿಯರು ಆಗಮಿಸುತ್ತಿದ್ದಾರೆ.
ಅನಂತಮೂರ್ತಿ ಜೀವನಚಿತ್ರ
- Get link
- Other Apps
Updated: 22 Aug 2014 09:23:57 PM IST ಜನನ: ಡಿಸೆಂಬರ್ 21, 1932 ಮೇಳಿಗೆ ಗ್ರಾಮ, ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆ ವಿದ್ಯಾಭ್ಯಾಸ * ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿ.ಎಚ್.ಡಿ. (ಬರ್ಮಿಂಗ್ ಹ್ಯಾಮ್ ವಿ.ವಿ. ಯುನೈಟೆಡ್ ಕಿಂಗ್ ಡಂ), 1966 * ಇಂಗ್ಲಿಷ್ ಎಂ.ಎ., ಮೈಸೂರು ವಿಶ್ವವಿದ್ಯಾಲಯ, 1956 * ಬಿ.ಎ. ಆನರ್ಸ್, ಮಹಾರಾಜ ಕಾಲೇಜು, ಮೈಸೂರು ವೃತ್ತಿ ಅನುಭವಗಳು * ಕುಲಪತಿ, ಕೇಂದ್ರೀಯ ವಿಶ್ವವಿದ್ಯಾಲಯ, ಗುಲ್ಬರ್ಗ, 2001 * ಸಂದರ್ಶಕ ಪ್ರಾಧ್ಯಾಪಕ, ಕಾರ್ನೆಲ್ ವಿವಿ, 2000 * ಸಂದರ್ಶಕ ಪ್ರಾಧ್ಯಾಪಕ, ಪೆನ್ವಿಲ್ವೇನಿಯಾ ವಿವಿ, 2000 * ಸನಿವಾಸ ಲೇಖಕ (ರೈಟರ್ ಇನ್ ರೆಸಿಡೆನ್ಸ್), ಟೆಕ್ಸಾಸ್ ವಿವಿ, ಆಸ್ಟಿನ್, 1995 * ಅಧ್ಯಕ್ಷರು, ಇಂಡಿಯನ್ ಅಕಾಡೆಮಿ (ದೆಹಲಿ) 1993-98 * ಅಧ್ಯಕ್ಷರು, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (ದೆಹಲಿ) 1992-93 * ಸಂದರ್ಶಕ ಪ್ರಾಧ್ಯಾಪಕ, ಜವಾಹರಲಾಲ್ ನೆಹರು ವಿವಿ, ದೆಹಲಿ, 1993 * ಪ್ರೊಫೆಸರ್, ಇಂಗ್ಲಿಷ್ ವಿಭಾಗ, ಮೈಸೂರು ವಿವಿ, 1980-92 * ಸಂದರ್ಶಕ ಪ್ರಾಧ್ಯಾಪಕ, ಟ್ಯೂಬಿಂಗನ್ ವಿವಿ, ಜರ್ಮನಿ, 1992 * ಉಪಕುಲಪತಿ, ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ, ಕೇರಳ 1987-91 * ಫುಲ್ ಬ್ರೈಟ್ ಸಂದರ್ಶಕ ಪ್ರಾಧ್ಯಾಪಕ, ಅಯೋವಾ ವಿವಿ, 1986-87 * ಸಂದರ್ಶಕ ಲೇಖಕ, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ
'ಭಾರತದ ತ್ರಿವರ್ಣ ಧ್ವಜ'ದ ಬಗ್ಗೆ ನಿಮಗೆಷ್ಟು ಗೊತ್ತು?
- Get link
- Other Apps
1. ಭಾರತದ ರಾಷ್ತ್ರೀಯ ಧ್ವಜ'ದ ಈಗಿನ ಅವತರಣಿಕೆಯನ್ನು ಜುಲೈ 22, 1947ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. 2. ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳುಪು, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. 3. ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ 4. ಪಂಡಿತ್ ಜವಾಹರ್ ಲಾಲ್ ನೆಹರು 1947 ಜುಲೈ 22ರಂದು ಅಸೆಂಬ್ಲಿಯಲ್ಲಿ ನಮ್ಮ ರಾಷ್ಟ್ರ ದ್ವಜವನ್ನು ದೇಶಕ್ಕೆ ಅರ್ಪಿಸಿದರು. 5. ನಮ್ಮ ಸರಕಾರವು ದ್ವಜ ಕೇವಲ ಕೈ ನೆಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು.ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲ ಆದರೆ ಅದು ಕೈ ನೂಲು ಮತ್ತು ಕೈ ನೆಯ್ಗೆಯದೇ ಇರಬೇಕು. 6. ದ್ವಜದ ಉದ್ದ ಮತ್ತು ಅಗಲ 3:2 ಪ್ರಮಾಣದಲ್ಲಿರತಕ್ಕದ್ದು 7. ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. 8. ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು.ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ. 9. ದ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿದಾನಗತಿಯಲ್ಲಿ ಇಳಿಸಬೇಕು.ಸೂರ್ಯೋದಯದಿಂದ ಹಿಡಿದು ಸೂರ್ಯಾ