ಶಿಕ್ಷ ಕರು ಮಾಡಿದ್ದೇ ಪಾಠ, ತುಂಬಿದ್ದೇ ಡೇಟಾ
Updated Sep 5, 2017, 04:00 AM IST AAA *ಅಗೇಡಿ: ಕೆಪಿ ಸುರೇಶ ಶಿಕ್ಷ ಣ ನೀತಿಗಳ ಆಶಯಗಳಿಗೂ ಸರಕಾರದ ಅನುಷ್ಠಾನಕ್ಕೂ ಕಂದಕ ಇರುವುದು ಸಾಮಾನ್ಯ. ಆದರೆ, ಕರ್ನಾಟಕದ ಹೊಸ ಶಿಕ್ಷ ಣ ನೀತಿ ಖಾಸಗಿ ಸಹಭಾಗಿತ್ವದ ಬಗ್ಗೆ ಮಾತಾಡಿದಷ್ಟು ವಿವರವಾಗಿ ಶಾಲಾ ಶಿಕ್ಷ ಣದ ಸವಾಲುಗಳ ಬಗ್ಗೆ ಮಾತಾಡಿಲ್ಲ. ಜನರನ್ನು ಮೆಚ್ಚಿಸಲು ಬೇಕಾದ ಕನ್ನಡ ಮಾಧ್ಯಮ ಬೇಕು ಪರಿಸರ, ಸಾಮಾಜಿಕ ಪ್ರಜ್ಞೆ ಬೇಕು ಇತ್ಯಾದಿ ಬಾಯುಪಚಾರದ ಮಾತುಗಳಿವೆ. ಸರಕಾರ ಮೂಲ ಸಂರಚನೆಗೆ ವೆಚ್ಚ ಮಾಡಬೇಕು ಎನ್ನುವ ಸಜ್ಜನಿಕೆಯ ಮಾತುಗಳಿವೆ. ಶಿಕ್ಷ ಣ ನೀತಿಯೊಂದು ಆಶಯಗಳನ್ನಷ್ಟೇ ಅಲ್ಲ ಅನುಷ್ಠಾನದ ದಾರಿಯ ನಕ್ಷೆಯನ್ನೂ ಮುಂದಿಡಬೇಕು. ಇವನ್ನೆಲ್ಲಾ ವಾಸ್ತವದಲ್ಲಿ ನಿಜಗೊಳಿಸುವ ಹೊಳಹುಗಳು ಇಲ್ಲಿಲ್ಲ. ಅಂಕಿ ಅಂಶಗಳು ನೋಡಿದರೆ ಶಿಕ್ಷ ಣದ ಆಶಯಗಳನ್ನು ಆತ್ಮ ವಂಚನೆಯ ಮೂಲಕ ಹಳ್ಳ ಹತ್ತಿಸುವ ವಿವರಗಳೇ ಸಿಗುತ್ತವೆ. ಉದಾಹರಣೆಗೆ ಯಾವ ಮಗುವೂ ನಪಾಸಾಗಬಾರದು ಎಂಬುದರ ಅರ್ಥ, ಎತ್ತಿ ಮೇಲಿನ ತರಗತಿಗೆ ಹಾಕಿ ಕೈ ತೊಳೆದುಕೊಳ್ಳುವುದು ಎಂದಲ್ಲ. ಶಾಲೆ ಬಿಡುವ ಮಕ್ಕಳ ಪ್ರಮಾಣ 1ನೇ ತರಗತಿ ವರೆಗೆ ಎರಡಂಕಿ ದಾಟುವುದಿಲ್ಲ. ಆದರೆ ಹತ್ತನೇ ತರಗತಿಯಲ್ಲಿ ನಪಾಸಾಗುವ ಮಕ್ಕಳ ಪ್ರಮಾಣ ಶೇ.28! ಹಾಗೂ ಹೀಗೂ 35 ಪಡೆದು ಪಾಸಾದವರನ್ನು ಈ ವರ್ಗಕ್ಕೆ ಸೇರಿಸಿದರೆ ಇದು 1/3 ಕ್ಕೆ ಏರೀತು.ಯಾಕೆ ಮಕ್ಕಳು ಹತ್ತನೇ ತರಗತಿಯಲ್ಲಿ ಫೇಲಾಗುತ್ತಾರೆ? ಅಲ್ಲಿ ಪಬ್ಲಿಕ್ ಪರೀಕ್ಷೆ ಇರುತ್ತೆ. ಹಲವು ಅಧ್ಯಯನಗ