ಕಿರಾಣಿ ವ್ಯಾಪಾರಿ ಮಗ ಯುಪಿಎಸ್ಸಿ ಸಾಧಕ ಕಿಶೋರ್
ಬಾಗಲಕೋಟೆ, ಮೇ 12: ಜಮಖಂಡಿ ತಾಲೂಕಿನ ಬನಹಟ್ಟಿ- ರಬಕವಿ ನಗರದ ಕಿರಾಣಿ ವ್ಯಾಪಾರಸ್ಥ ಬದ್ರಿನಾರಾಯಣ ಭಟ್ಟಡ ಹಾಗು ಉಮಾ ದಂಪತಿ ಮಗ ಕಿಶೋರ ಈಗ ಬಾಗಲಕೋಟೆ ಜಿಲ್ಲೆಯ ಹೆಮ್ಮೆಯ ಪುತ್ರನಾಗಿ ಹೆಸರು ಗಳಿಸಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ವು ಮಂಗಳವಾರ ಪ್ರಕಟಿಸಿದ ಫಲಿತಾಂಶದಲ್ಲಿ ರಾಷ್ಟ್ರಕ್ಕೆ 808ನೇ rank ಪಡೆಯುವದರ ಮೂಲಕ ಸಾಧನೆ ಮಾಡಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಜತೆ ಮಾತನಾಡಿದ ಕಿಶೋರ, ಕಳೆದ ವರ್ಷವು ಈ ಪರೀಕ್ಷೆಯನ್ನು ಎದುರಿಸಿದ್ದೆ, ಇದು ನನ್ನ ಎರಡನೇಯ ಪ್ರಯತ್ನ ಈ ಭಾರಿ 808 ನೇ ಸ್ಥಾನ ಪಡೆದುಕೊಂಡಿದ್ದೇನೆ. ಫಲಿತಾಂಶವನ್ನು ಕೇಳಿ ತುಂಬಾ ಸಂತೋಷವಾಗಿದೆ. ಇದು ನನಗೆ ತೃಪ್ತಿ ನೀಡಿದೆ ಮುಂದಿನ ಸಲ ಹೆಚ್ಚಿನ ಶ್ರೇಯಾಂಕ ಸ್ಥಾನ ಇನ್ನಷ್ಟು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಪ್ರತಿ ದಿನ 10 ಗಂಟೆಗಳ ಕಾಲ ಓದುತ್ತಿದ್ದೆ, ಭೂಗೋಳ ಶಾಸ್ತ್ರ ನನ್ನ ವಿಷಯವಾಗಿತ್ತು ಎಂದು ತಿಳಿಸಿದರು. ಕಿಶೋರ ಪ್ರತಿಭಾವಂತ: ಇವರು ಆರಂಭದಿಂದಲೂ ಪ್ರತಿಭಾವಂತ ವಿದ್ಯಾರ್ಥಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.95.2 ಅಂಕಗಳೊಂದಿಗೆ ರಾಮಪೂರದ ಪೂರ್ಣಪ್ರಜ್ಞ ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದರು. ಕಿಶೋರ ಭಟ್ಟಡ ಬನಹಟ್ಟಿಯ ಎಸ್ಆರ್ಎ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದು ದ್ವಿತೀಯ ಪರೀಕ್ಷೆಯಲ್ಲಿ ಶೇ.91.83 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದರು. ನಂತರ ಸಿಇಟಿ ಪರೀಕ್ಷೆಯಲ್ಲಿ