Posts

ಕನ್ನಡಿಗ ಹರಿಶಂಕರಗೆ ರಷ್ಯಾದ "ಇಸೆನಿನ್" ಪ್ರಶಸ್ತಿ

Image

JOB NEWS: VARIOUS POSTS CALLFORMED IN INDIAN RAILWAYS ..apply online before 25/Jan/2016

Image

2015-16ನೇಸಾಲಿನಲ್ಲಿ ಕಲಾ&ವೃತ್ತಿ ಶಿಕ್ಷಕರ ತಾತ್ಕಾಲಿಕ. ನೇಮಕಾತಿ ಗೆ ಸಂಬಂಧಿಸಿದಂತೆ ಇಲಾಖಾ ಆದೇಶ(ಬಳ್ಳಾರಿ ಜಿಲ್ಲೆ)

Image

ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಭಾರತದ ಸಿಂಹ

Image

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) 233 ಹುದ್ದೆಗಳಿಗೆ ಹೊರಡಿಸಲಾದ ಅಧಿಸೂಚನೆಯನ್ನು ಸರ್ಕಾರವು ರದ್ದುಪಡಿಸಿದ ಆದೇಶದ ಪ್ರತಿ ☝🏻☝🏻☝🏻

Image

ಇಂದು ಗಣಿತ ಪ್ರಪಂಚದ ಅನರ್ಘ್ಯ ರತ್ನ ರಾಮಾನುಜನ್ ಅವರ ಜನ್ಮದಿನಾಂಕ::*

Image
BY ವಿಜಯವಾಣಿ ನ್ಯೂಸ್ · DEC 22, 2015 ಬಡತನ, ಅನಾರೋಗ್ಯ ಇವು ಯಾವುವೂ ಮಹಾಸಾಧಕನ ಆಂತರಿಕ ಜ್ಯೋತಿಯನ್ನು ನಂದಿಸಲಾಗಲಿಲ್ಲ. 'ಸಾಮಾನ್ಯರ ದೃಷ್ಟಿಗೆ ನಿಲುಕದ ಬಲು ಎತ್ತರದ ಶಿಖರಗಳಲ್ಲಿ ವಿಹರಿಸುವ ಮಹಾಮನಸ್ಸುಗಳು ಯಾವ ಪ್ರತಿಕೂಲಗಳನ್ನೂ ಲೆಕ್ಕಿಸುವುದಿಲ್ಲ' ಅನ್ನುವುದಕ್ಕೆ ಶ್ರೀನಿವಾಸ ರಾಮಾನುಜನ್ರೇ ಸಾಕ್ಷಿ. "ಸ ರ್ಕಾರಿ ಕಚೇರಿಗಳಲ್ಲಿ ರೇಷ್ಮೆ ವಸಗಳನ್ನು ಜೋಡು ಒರೆಸುವುದಕ್ಕೆ ಉಪಯೋಗಿಸುವುದೂ ತೊಗಲಿನ ರಟ್ಟನ್ನು ಕರವಸವೆಂದು ಉಪಯೋಗಿಸುವುದೂ ಅಪರೂಪವಲ್ಲ"- ಆಗರ್ಭ ವಿದ್ವಾಂಸ, ಗ್ರಂಥಶೋಧಕ ಎ.ಆರ್. ಕೃಷ್ಣ ಶಾಸಿ ಅವರಿಗೆ ಓರಿಯಂಟಲ್ ಲೈಬ್ರರಿಯಲ್ಲಿ ಒದಗಿಬಂದ ಡಿಸ್ಪ್ಯಾಚಿಂಗ್ ಗುಮಾಸ್ತಗಿರಿ ನೌಕರಿಯ ಬಗ್ಗೆ ಪರಿತಾಪಪಟ್ಟು ಡಿವಿಜಿಯವರು ಹೇಳಿದ ಮಾತಿದು. ಯಾವ ವಿಧವಾದ ವಿದ್ವತ್ಸಂಪರ್ಕವೂ ಇಲ್ಲದ ಯಾವಾಗಲೂ ಕತ್ತರಿ, ಟ್ವೈನ್ ದಾರ, ಗೋಂದುಗಳಲ್ಲಿ ಕೈಯಾಡಿಸುವ ಆ ನೌಕರಿಯ ಬಗ್ಗೆ ಖೇದಪಟ್ಟು ಹೇಳಿದ ಆ ಮಾತನ್ನು ಗಣಿತ ಪ್ರಪಂಚದ ಅನರ್ಘ್ಯರತ್ನ, ಬೌದ್ಧಿಕ ವಿಸ್ಮಯ ಶ್ರೀನಿವಾಸ ರಾಮಾನುಜನ್ರಿಗೂ ಯಥಾವತ್ತಾಗಿ ಅನ್ವಯಿಸಿ ಹೇಳಬಹುದು. ಶ್ರೀನಿವಾಸ ರಾಮಾನುಜನ್ ಹುಟ್ಟಿದ್ದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿ, 1887 ಡಿಸೆಂಬರ್ 22ರಂದು. ತುಂಬಾ ಬಡತನದ ಕುಟುಂಬ. ಶ್ರೀವೈಷ್ಣವ ಬ್ರಾಹ್ಮಣ ಸಂಪ್ರದಾಯದ ಕುಟುಂಬದಲ್ಲಿ ಜನ್ಮವೆತ್ತ ರಾಮಾನುಜನ್ರಿಗೆ ಕಟ್

NPS ನೋಂದಣಿಗೆ PAN ಕಡ್ಡಾಯ

Image

2014 ನೇ ಸಾಲಿನ ಜಾನಪದ ಆಕಾಡೆಮಿ ಪ್ರಶಸ್ತಿ ಪ್ರಕಟ

Image

ಜಾನಪದ ಆಕಾಡೆಮಿ ಪ್ರಶಸ್ತಿ ಪ್ರಕಟ

ಮರಾಠಿ ಲೇಖಕ ಪ್ರೊ.ಶ್ಯಾಮ್ ಮನೋಹರ್ಗೆ ಕುವೆಂಪು ಪ್ರಶಸ್ತಿ (೨೦೧೫)

Image
22 Dec, 2015 ಪ್ರಜಾವಾಣಿ ವಾರ್ತೆ ತೀರ್ಥಹಳ್ಳಿ: ಪುಣೆಯ ಹಿರಿಯ ಮರಾಠಿ ಸಾಹಿತಿ ಪ್ರೊ.ಶ್ಯಾಮ್ ಮನೋಹರ್ ಅವರನ್ನು 2015ನೇ ಸಾಲಿನ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕುಪ್ಪಳಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ತಿಳಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ 111ನೇ ಜನ್ಮ ದಿನೋತ್ಸವ ಹಾಗೂ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಸಮಾರಂಭ ಡಿ.29 ರಂದು ಕುಪ್ಪಳಿಯ ಕುವೆಂಪು ಜನ್ಮ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ₹ 5 ಲಕ್ಷ ನಗದು ಪುರಸ್ಕಾರ ಹೊಂದಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ.ಕೆ.ಪುಟ್ಟಸ್ವಾಮಿ ಸಂಪಾದಕತ್ವದ 'ಕುವೆಂಪು–ಮಲೆನಾಡು' ಪುಸ್ತಕ ಬಿಡುಗಡೆ ಮಾಡಲಾಗುವುದು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ಸಂಸತ್ ಸದಸ್ಯ ಎಂ.ವೀರಪ್ಪ ಮೊಯಿಲಿ ಅಧ್ಯಕ್ಷತೆಯಲ್ಲಿ 'ಸಮಕಾಲೀನತೆ ಮತ್ತು ಕುವೆಂಪು ಅವರ ತತ್ವ ಚಿಂತನೆಗಳು' ಕುರಿತು ವಿಚಾರಗೋಷ್ಠಿ ನಡೆಯಲಿದೆ. ಚಿಂತಕರಾದ ಎಸ್.ಸುರೇಶ್ಕುಮಾರ್, ಬಿ.ಎಲ್.ಶಂಕರ್ ಹಾಗೂ ವೈ.ಎಸ್.ವಿ. ದತ್ತ ಮಾತನಾಡಲಿದ್ದಾರೆ ಎಂದು ಕಡಿದಾಳ್ ಪ್ರಕಾಶ್ ತಿಳಿಸಿದ್ದಾ

ಫಿಲಿಪ್ಪೀನ್ಸ್ ಸುಂದರಿ ಪಿಯಾ ಮಿಸ್ ಯುನಿವರ್ಸ್ 2015r:*

Image
ಲಾಸ್ ವೇಗಾಸ್: ಆಕರ್ಷಕವಾಗಿ ನಡೆದ ಭುವನ ಸುಂದರಿ ಸ್ಫರ್ಧೆಯ ಫಿನಾಲೆಯಲ್ಲಿ ಫಿಲಿಪ್ಪೀನ್ಸ್ನ ಪಿಯಾ ಅಲೋಂಜೋ ವರ್ಝ್ಬಾಚ್ ಅವರು ಮಿಸ್ ಯುನಿವರ್ಸ್ 2015 ಆಗಿ ಆಯ್ಕೆಯಾದರು. ಕೊಲಂಬಿಯಾ ಸುಂದರಿ ಹಾಗೂ ಯುಎಸ್ಎ ಸುಂದರಿಯರು ಅನುಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಸೌಂದರ್ಯ ಪುರಸ್ಕಾರಕ್ಕೆ ಪಾತ್ರರಾದರು. ಫಿನಾಲೆಯಲ್ಲಿ ರಾಷ್ಟ್ರೀಯ ಉಡುಗೆ ವಿಭಾಗದಲ್ಲಿ ಥಾಯ್ಲೆಂಡ್ ಸುಂದರಿ ಆಯ್ಕೆಯಾದರು. ಯುಎಸ್ಎ, ಕೊಲಂಬಿಯಾ, ಜಪಾನ್, ಥಾಯ್ಲೆಂಡ್, ಆಸ್ಟ್ರೇಲಿಯಾ, ಡೊಮಿನಿಕನ್ ರಿಪಬ್ಲಿಕ್, ಫ್ರಾನ್ಸ್, ಕ್ಯುರಕಾವೊ, ಫಿಲಿಪ್ಪೀನ್ಸ್ ಮತ್ತು ವೆನೆಜುವೆಲಾ ಸುಂದರಿಯರು ಟಾಪ್ 10 ಪಟ್ಟಿಗೆ ಏರಿದ್ದರು. ಭಾರತದ ಊರ್ವಶಿ ರಾಟೆಲಾ ಅವರೂ ಸ್ಫರ್ಧೆಯಲ್ಲಿದ್ದರಾದರೂ, ಕಿರೀಟ ವಂಚಿತರಾದರು.

Police Constable recruitment G.O. 2015-16

Image

ಸಂಪಾದಕೀಯ: ಸರಕಾರಿ ಶಾಲೆಗಳಿಗೆ ಹೊಸ ‘ಫೇಸ್’'(facebook):-

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಬೆಳವಣಿಗೆಗಳು ಸರಕಾರಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆ ಹಂತದ ಕಲಿಕೆಯಲ್ಲಿ ಇನ್ನೂ ವ್ಯಾಪಕವಾಗಿ ಪ್ರವೇಶ ಪಡೆದುಕೊಂಡಿಲ್ಲ. ಶಿಕ್ಷಕರು ತಮಗಿರುವ ಹತ್ತಾರು ಕೆಲಸಗಳ ನಡುವೆ 'ಡಿಜಿಟಲ್ ಸಾಕ್ಷರ'ರಾಗುವ ಕಡೆ ಹೆಚ್ಚು ಗಮನ ಹರಿಸಿಲ್ಲ. ಇದರಿಂದ ಮಕ್ಕಳಿಗೆ ಹೊಸ ತಿಳಿವಿನ ಬಾಗಿಲುಗಳು ತೆರೆದುಕೊಂಡಿಲ್ಲ. ಇದಕ್ಕೆ ವಿರುದ್ಧವಾಗಿ ಖಾಸಗಿ ಶಾಲೆಗಳು ಇಡೀ ತರಗತಿಯನ್ನು 'ಸ್ಮಾರ್ಟ್' ಆಗಿಸಿ, ಮಕ್ಕಳನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇದರಿಂದ ಮಕ್ಕಳ ಕಲಿಕೆ ಮತ್ತು ಪಾಲ್ಗೊಳ್ಳುವಿಕೆಯಲ್ಲಿ ಎಷ್ಟರ ಮಟ್ಟಿಗೆ ಬದಲಾವಣೆಯಾಗಿದೆ ಎಂಬುದರ ಬಗ್ಗೆ ಯಾವುದೇ ಸಂಶೋಧನೆಗಳು ನಡೆದಿಲ್ಲ. ಆದರೆ ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆಯನ್ನು ಒಂದು ಗುಣಾತ್ಮಕ ಬದಲಾವಣೆ ಎಂದು ಧಾರಾಳವಾಗಿ ಪರಿಗಣಿಸಬಹುದು. ಇದೀಗ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ರಾಜ್ಯದ 74 ಸಾವಿರ ಶಾಲೆಗಳಿಗೆ ಫೇಸ್ಬುಕ್ ಖಾತೆ ತೆರೆಯಲು ಸಜ್ಜಾಗಿದೆ. ಒಮ್ಮೆ ಈ ಫೇಸ್ಬುಕ್ ಪುಟ ತೆರೆದ ಕೂಡಲೇ ಅದಕ್ಕೆ ಮಾಧ್ಯಮಿಕ, ಪ್ರೌಢಶಾಲೆಯ ಮುಖ್ಯಶಿಕ್ಷಕರು ತಮ್ಮ ಶಾಲೆಯ ಎಲ್ಲ ಬಗೆಯ ಚಟುವಟಿಕೆಗಳನ್ನು 'ಭರ್ತಿ' ಮಾಡಬೇಕಾಗುತ್ತದೆ. ಸಾಧನೆಗಳ ಜತೆ ಕುಂದುಕೊರತೆಗಳನ್ನು ಉಲ್ಲೇಖಿಸಿದರೆ ಶಿಕ್ಷಣ ಇಲಾಖೆ ಅದನ್ನು ನಿಯತವಾಗಿ ಗಮನಿಸುತ್ತದೆ

ಪ್ರೊ ಬಾಕ್ಸಿಂಗ್: ವಿಜೇಂದರ್ಗೆ ಹ್ಯಾಟ್ರಿಕ್ ಗೆಲುವು:-

Image
20 Dec, 2015 ಮ್ಯಾಂಚೆಸ್ಟರ್ (ಪಿಟಿಐ): ಗೆಲುವಿನ ಓಟ ಮುಂದುವರೆಸಿರುವ ಭಾರತದ ವಿಜೇಂದರ್ ಸಿಂಗ್, ವೃತ್ತಿಪರ ಬಾಕ್ಸಿಂಗ್ನಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಮೂರನೇ ಪಂದ್ಯದಲ್ಲಿ ವಿಜೇಂದರ್ ಬಲ್ಗೇರಿಯಾದ ಅನುಭವಿ ಬಾಕ್ಸರ್ ಸಮೆಟ್ ಹ್ಯುಸೆಯಿನೊವ್ ಅವರನ್ನು ಮಣಿಸಿದ್ದಾರೆ. ಎರಡನೇ ಸುತ್ತು ಪೂರ್ಣಗೊಳ್ಳುವ ಮುನ್ನವೇ ವಿಜೇಂದರ್ಗೆ ಜಯ ಒಲಿಯಿತು. 2ನೇ ಸುತ್ತು ಆರಂಭಗೊಂಡ ಸುಮಾರು 35 ಸೆಕೆಂಡುಗಳಲ್ಲಿ ಬಲವಾದ ಪಂಚಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ವಿಜೇಂದರ್ ಅವರನ್ನು ಟೆಕ್ನಿಕಲ್ ನಾಕೌಟ್ ಮೂಲಕ ವಿಜೇತ ಎಂದು ಪಂದ್ಯದ ರೆಫರಿ ಘೋಷಿಸಿದರು. ಮಾಜಿ ಒಲಿಂಪಿಕ್ ಹಾಗೂ ವಿಶ್ವಚಾಂಪಿಯನ್ಷಿಪ್ ಕಂಚಿನ ಪದಕ ವಿಜೇತ ವಿಜೇಂದರ್ ಕಳೆದ ಅಕ್ಟೋಬರ್ನಲ್ಲಷ್ಟೇ ವೃತ್ತಿಪರ ಬಾಕ್ಸಿಂಗ್ ಕಣಕ್ಕೆ ಧುಮುಕಿದ್ದರು. ಈವರೆಗಿನ ಮೂರು ಪಂದ್ಯಗಳಲ್ಲಿ ಜಯ ದಾಖಲಿಸಿದ್ದು ವಿಶೇಷ. ವಿಜೇಂದರ್ ಅವರು ಮೊದಲ ಪಂದ್ಯದಲ್ಲಿ ಸನ್ನಿ ವೈಟಿಂಗ್ ಹಾಗೂ ಎರಡನೇ ಪಂದ್ಯದಲ್ಲಿ ಡೀನ್ ಗಿಲ್ಲೆನ್ ಅವರನ್ನು ಮಣಿಸಿದ್ದರು. 30 ವರ್ಷದ ವಿಜೇಂದರ್ ಹ್ಯಾಟ್ರಿಕ್ ಜಯದ ಮೂಲಕ ಭವಿಷ್ಯದ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

65ನೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ಸ್ಪೇನ್ನ ಮಿರಿಯಾ ಲಾಲ್ಗುನಾ ರೊಯೊ ಅವರು ವಿಶ್ವ ಸುಂದರಿ ಕಿರೀಟಕ್ಕೆ ಭಾಜನ

Image
ಚೀನಾ, ಡಿ.20- ಸ್ಯಾನ್ಯಾದ ಕ್ರೌನ್ ಬ್ಯೂಟಿ ಥಿಯೇಟರ್ನಲ್ಲಿ ನಡೆದ 65ನೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ಸ್ಪೇನ್ನ ಮಿರಿಯಾ ಲಾಲ್ಗುನಾ ರೊಯೊ ಅವರು ವಿಶ್ವ ಸುಂದರಿ ಕಿರೀಟ ಧರಿಸಿದ್ದಾರೆ. ವಿಶ್ವಸುಂದರಿ ಪಟ್ಟವನ್ನು ಅಲಂಕರಿಸಿದ ಮಿರಿಯಾಗೆ ಕಳೆದ ಬಾರಿಯ ವಿಶ್ವ ಸುಂದರಿ ದಕ್ಷಿಣಆಫ್ರಿಕಾದ ರೊಲೆನೆ ಸ್ಟ್ರಾಸ್ ಅವರು ಮುಕುಟವಿಟ್ಟ್ನು ಅಲಂಕರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮರಿಯಾ, ನಾನಿನ್ನೂ ಫಾರ್ಮಸಿ ವಿದ್ಯಾರ್ಥಿಯಾಗಿದ್ದು ಮುಂದೊಂದು ದಿನ ನ್ಯೂಟ್ರಿಸಿನ್ ಉದ್ಯಮದಲ್ಲಿ ಉತ್ತಮ ಹೆಸರು ಮಾಡಬೇಕೆಂಬುದಾಗಿ ಹೇಳಿದರು. 65ನೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮೊದಲ ರನ್ನರ್ಅಪ್ ಆಗಿ ರಷ್ಯಾದ ಮಿಸ್ ಸೊಫಿಯಾ ಸಿಕಿತ್ಚುಕ್ ಹಾಗೂ ಎರಡನೇ ರನ್ನರ್ಅಪ್ ಆಗಿ ಇಂಡೋನೇಷಿಯಾದ ಮರಿಯಾ ಹರ್ಫಾಂತಿ ಹೊರಹೊಮ್ಮಿದರು.

All CBSE books and learning material will be made available online for free- HRD MINISTER

CBSE books to be made available online for free UdayavaniEnglish.com, Dec 19, 2015, 5:30 PM IST New Delhi : All CBSE books and learning material will be made available online for free as part of the Centre's good governance efforts, HRD Minister Smriti Irani said here today. At a function organised at a Kendriya Vidyalaya in east Delhi, she also said that initiatives would be undertaken to ensure holistic nurturing and improve learning outcomes at these schools. "We made NCERT books available online for free through e-books and mobile applications a month- and-a-half ago. We are similarly going to make CBSE books available online along with additional learning material and videos as part of our good governance efforts," Irani said at the inauguration of a new building of the school in Khichripur. Responding to the call by Delhi Deputy Chief Minister Manish Sisodia at the function that endeavours be made to ensure that children not only excel profession

68ನೇ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ ಷಿಪ್ನಲ್ಲಿ ಬಾಗಲಕೋಟೆಗೆ ಮತ್ತೊಂದು ಬಂಗಾರ, 2 ಬೆಳ್ಳಿ:*

Image
ಬಾಗಲಕೋಟ: ಪಂಜಾಬ್ನ ಲೂಧಿಯಾನದಲ್ಲಿ ನಡೆಯುತ್ತಿರುವ 68ನೇ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ ಷಿಪ್ನಲ್ಲಿ ಶುಕ್ರವಾರವೂ ಬಾಗಲಕೋಟ ಜಿಲ್ಲೆಯ ಕ್ರೀಡಾಪಟುಗಳು ಮತ್ತೊಂದು ಬಂಗಾರದ ಪದ ಹಾಗೂ ಎರಡು ಬೆಳ್ಳಿ ಪದಕ ಜಯಿಸಿದ್ದಾರೆ. 14 ವರ್ಷದೊಳಗಿನ ಮಹಿಳೆಯರು 2 ಕಿಮೀ ಪರಶೂಟ್ನಲ್ಲಿ ದಾನಮ್ಮ ಚಿಚಖಂಡಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು 14 ವರ್ಷದೊಳಗಿನ ಪುರುಷರ 2 ಕಿಮೀ ಪರಶೂಟ್ನಲ್ಲಿ ವೆಂಕಪ್ಪ ಕೆಂಗಲಗುತ್ತಿ, 16 ವರ್ಷದೊಳಗಿನ ಪುರುಷರ 2 ಕಿಮೀ ಪರಶೂಟ್ನಲ್ಲಿ ರಾಜು ಬಾಟಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದಾನಮ್ಮ ಚಿಚಖಂಡಿ ಬುಧವಾರ ನಡೆದಿದ್ದ ಟೈಮ್ ಟ್ರಯಲ್ನ 500 ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಿದ್ದರು. ಇದರಿಂದಾಗಿ ಬಾಗಲಕೋಟ ಜಿಲ್ಲೆಯ ಕ್ರೀಡಾಪಟುಗಳು ಒಟ್ಟು ಎರಡು ಬಂಗಾರದ ಪದಕ ಹಾಗೂ ನಾಲ್ಕು ಬೆಳ್ಳಿ ಪದಕ ಪಡೆದಂತಾಗಿದೆ.

ಟ್ವೆಂಟಿ–20 ಮಾದರಿಯಲ್ಲಿ ವೃತ್ತಿಜೀವನದಲ್ಲಿ 600 ಸಿಕ್ಸರ್ಗಳನ್ನು ಬಾರಿಸಿದ ಮೊದಲಿಗ ಕ್ರಿಸ್ ಗೇಲ್*-

Image
ಬ್ರಿಸ್ಬೇನ್: ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದಲ್ಲಿ ಹಲವು ಪ್ರಥಮಗಳನ್ನು ಸ್ಥಾಪಿಸಿರುವ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಶನಿವಾರ ಮತ್ತೆ ಎರಡು ವಿಶಿಷ್ಠ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಕೆರಿಬಿಯನ್ ನಾಡಿನ ಆಟಗಾರ ಚಿನ್ನದ ಲೇಪನ ಹೊಂದಿರುವ ಬ್ಯಾಟ್ ಬಳಸಿ ಆಡಿದ ವಿಶ್ವದ ಮೊದಲ ಆಟ ಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಜತೆಗೆ ಟ್ವೆಂಟಿ–20 ಮಾದರಿಯಲ್ಲಿ ವೃತ್ತಿಜೀವನದಲ್ಲಿ 600 ಸಿಕ್ಸರ್ಗಳನ್ನು ಬಾರಿಸಿದ ಮೊದಲಿಗ ಎಂಬ ಹೆಗ್ಗಳಿಕೆ ಯನ್ನೂ ತಮ್ಮದಾಗಿಸಿ ಕೊಂಡರು. ಈ ಎರಡೂ ದಾಖಲೆಗಳಿಗೆ ಸಾಕ್ಷಿಯಾಗಿದ್ದು ಆಸ್ಟ್ರೇಲಿಯಾದ ಗಾಬಾ ಮೈದಾನ. ಬಿಗ್ ಬಾಷ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಮೆಲ್ಬರ್ನ್ ರೆನೆಗೆಡ್ಸ್ ತಂಡದ ಪರ ಆಡುತ್ತಿರುವ ಗೇಲ್ ಅವರು ಚಿನ್ನ ಲೇಪಿತ ಬ್ಯಾಟ್ ಬಳಸಿ ಕ್ರಿಕೆಟ್ ಲೋಕದ ಗಮನ ಸೆಳೆದರು. ಭಾರತದ ಪ್ರಸಿದ್ಧ ಕ್ರೀಡಾ ಉತ್ಪನ್ನ ತಯಾರಿಕಾ ಕಂಪೆನಿ ಸ್ಪಾರ್ಟನ್ , ಗೇಲ್ ಅವರಿಗಾಗಿಯೇ ಈ ವಿಶಿಷ್ಠ ಬ್ಯಾಟ್ ಸಿದ್ಧಪಡಿಸಿತ್ತು. ಬ್ರಿಸ್ಬೇನ್ ಹೀಟ್ ವಿರುದ್ಧದ ಪಂದ್ಯದಲ್ಲಿ 333 ಸಂಖ್ಯೆಯ ಜರ್ಸಿ ತೊಟ್ಟಿದ್ದ ಗೇಲ್ ಬ್ಯಾಟಿಂಗ್ ಮಾಡಲು ಬಂದಾಗ ಕ್ರೀಡಾಂಗಣದಲ್ಲಿ ಮೆಕ್ಸಿಕನ್ ಅಲೆ ಎದ್ದಿತು. ಮೊದಲ ನಾಲ್ಕು ಓವರ್ಗಳ ಕಾಲ ಕ್ರೀಸ್ನಲ್ಲಿದ್ದ ಅವರು ತಲಾ ಎರಡು ಭರ್ಜರಿ ಸಿಕ್ಸರ್ ಮತ್ತು ಬೌಂಡರಿಗಳನ್ನು ಸಿಡಿಸಿ ಅಭಿಮಾನಿಗಳ ಪ್ರೀತಿಗೆ

ಸರ್ವ ರೋಗಗಳಿಗೂ ಶುಂಠಿ ದಿವ್ಯೌಷಧ::**

ಸರ್ವ ರೋಗಗಳಿಗೂ ಶುಂಠಿ ದಿವ್ಯೌಷಧ ಪ್ರಮುಖವಾದ ಸಾಂಬಾರ ಪದಾರ್ಥಗಳಲ್ಲಿ ಶುಂಠಿ ಕೂಡ ಒಂದು. ಒಣಗಿದ ಹಾಗೂ ಹಸಿಶುಂಠಿಗಳೆರಡನ್ನೂ ಸಾಂಬಾರ ಪದಾರ್ಥವಾಗಿ ಬಳಸುತ್ತಾರೆ. ನಮ್ಮ ದೇಹದಲ್ಲಿ ಪಚನಶಕ್ತಿಯನ್ನು ಹೆಚ್ಚಿಸುವ ಇದನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ.ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಶುಂಠಿಯನ್ನು ನಾಗರ, ವಿಶ್ವೌಷಧ ವಿಶ್ವಭೇಷಜ, ಮಹೌಷಧ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸಂಸ್ಕøತದ ಈ ಹೆಸರುಗಳೇ ಸೂಚಿಸುವಂತೆ ಇದು ಒಂದು ಅಪೂರ್ವ ಔಷಧ ದ್ರವ್ಯ. ಕಟು(ಖಾರ) ರಸವನ್ನು ಹೊಂದಿರುವ ಇದು ಜೀರ್ಣರಸದೊಂದಿಗೆ ಸೇರಿ ಪಚನವಾದಾಗ ಮಧುರ (ಸಿಹಿ)ಭಾವವನ್ನು ಪಡೆಯುವುದರಿಂದ ಇದು ಒಂದು ಶಕ್ತಿವರ್ಧಕವಾಗಿದೆ. ಗುಣದಲ್ಲಿ ಸ್ನಿಗ್ಧ ಮತ್ತು ಉಷ್ಣ ವೀರ್ಯವುಳ್ಳದ್ದಾಗಿದ್ದು ಕಫ ಮತ್ತು ವಾತ ದೋಷಗಳನ್ನು ನಾಶ ಮಾಡುತ್ತದೆ. ಶ್ವಾಸಕೋಶ, ಅರುಚಿ, ಪಾಂಡು (ರಕ್ತಹೀನತೆ), ಅತಿಸಾರ, ಜ್ವರ, ಕೆಮ್ಮು ಮುಂತಾದ ರೋಗಿಗಳಿಗೆ ಉಪಯೋಗಿಸಲ್ಪಡುವ ಇದು ಒಂದು ಶ್ರೇಷ್ಠ ದೀಪನ ಮತ್ತು ಪಚನ ಔಷಧವಾಗಿದೆ. ಇದಲ್ಲದೆ ಅಮವಾತ (ಕೀಲುನೋವು)ಗ್ರಹಣಿ, ಗುಲ್ಮ, ಹೃದ್ರೋಗ, ಅತಿಸಾರ ಮುಂತಾದ ಅನೇಕ ರೋಗಗಳಿಗೆ ಶುಂಠಿ ಒಂದು ಉತ್ತಮ ಔಷಧಿ. ಹಸಿ ಶುಂಠಿಯನ್ನು ಅದ್ರಕ ಎಂದು ಕರೆಯುತ್ತಾರೆ. ಅಡುಗೆ ಮತ್ತು ಔಷಧಿಗಳಲ್ಲಿ ಒಣಶುಂಠಿ ಹಾಗೂ ಹಸಿ ಶುಂಠಿಗಳೆರಡೂ ಉಪಯೋಗಕ್ಕೆ ಬರುತ್ತವೆ. ನ

RIE teacher case dismissed in Supreme Court also

Image

ಕನ್ನಡಕ್ಕೆ ಕಿರೀಟ ತೊಡಿಸಿರುವ “ಜ್ಞಾನಪೀಠ ಪ್ರಶಸ್ತಿ”ಯ ಪಕ್ಷಿನೋಟ

Image
ಕನ್ನಡಕ್ಕೆ ಕಿರೀಟ ತೊಡಿಸಿರುವ "ಜ್ಞಾನಪೀಠ ಪ್ರಶಸ್ತಿ"ಯ ಪ ಕ್ಷಿನೋಟ ವಿಶೇಷ ಲೇಖನ: ಬಿ. ಕೆ. ಗಣೇಶ್ ರೈ, ದುಬೈ. ಆತ್ಮೀಯರೇ, ನವೆಂಬರ್ ತಿಂಗಳು ಮುಗಿಯಿತು ನೂತನ ವರ್ಷದ ಬರುವಿಕೆಯ ನಿರೀಕ್ಷೆಯಲ್ಲಿರುವ ಕನ್ನಡಿಗರು  ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ತಿಂಗಳು ಪೂರ್ತಿ ಕನ್ನಡದ ಬಾವುಟ ಹಾರಿಸಿಯಾಯಿತು. ರಸಮಂಜರಿ, ಹಾಸ್ಯ, ನಾಟಕ, ಕನ್ನಡ ಜನಪದ ಗೀತೆಗಳು ಧ್ವನಿವರ್ಧಕಕದ ಮೂಲಕ ಆಲಿಸಿ ಮೈಮನ ಮುದಗೊಳಿಸಿ ಕೊಂಡಾಯಿತು. ವೇದಿಕೆಯ ಮೇಲೆ ಭಾಷಣಕಾರರ ಕನ್ನಡ ಅಭಿಮಾನವನ್ನು ಜಾಗೃತಿಗೊಳಿಸುವ ವೀರಾವೇಶದ ಮಾತುಗಳು. ಕನ್ನಡಕ್ಕೆ ದೊರೆತಿರುವ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಎದೆಯುಬ್ಬಿಸಿ ಮಾತಾನಾಡದಿದ್ದರೆ ಕನ್ನಡ ಭಾಷಣ ಅಪೂರ್ಣವಾಗುತ್ತದೆ. ಇಂತಹ ಜ್ಞಾನ ಪೀಠ ಪ್ರಶಸ್ತಿ ಇನ್ನಿತರ ಪ್ರಶಸ್ತಿಗಳಿಗಿಂತ ಎತ್ತರದ ಸ್ಥಾನದಲ್ಲಿದ್ದು ಹೆಚ್ಚು ಗೌರವವನ್ನು ಪಡೆದಿದೆ. ಈ ಶುಭ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಬೆಳಕು ಚೆಲ್ಲುವ ಅಪೂರ್ವ ಲೇಖನ…..   "ಜ್ಞಾನ ಪೀಠ ಪ್ರಶಸ್ತಿ" ವಿಶ್ವದಲ್ಲಿ ಅತ್ಯುನ್ನತ ಪುರಸ್ಕಾರ ನೋಬೆಲ್ ಪ್ರಶಸ್ತಿಯಾದರೆ, ಭಾರತದಲ್ಲಿ ನೋಬೆಲ್ ಪುರಸ್ಕಾರದಷ್ಟೆ ಉನ್ನತ ಸ್ಥಾನದಲ್ಲಿರುವುದು 'ಜ್ಞಾನಪೀಠ ಪ್ರಶಸ್ತಿ'. ಭಾರತ ಸರ್ಕಾರವು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಅತ್ಯುತ್ಕೃಷ್ಟ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿದೆ. ಭಾರತ ರಾಷ್ಟ್ರ ಭಾಷೆ ಹಿಂದಿ ಮತ್ತು ಉಳಿದ ಭಾಷೆಗಳಾದ

ಮದರ್ ತೆರೆಸಾಗೆ ಸಂತ ಪದವಿ : ಪಶ್ಚಿಮಬಂಗಾಳ ಸಿಎಂ ಮಮತಾ ಸ್ವಾಗತ

ಕೋಲ್ಕತಾ, ಡಿ.೧೯-ಮಹಾನ್ ಮಾನವತಾವಾದಿ, ದೀನ ದಲಿತರ ಸೇವಕಿಯಾಗಿ ಜೀವ ಸವೆಸಿದ ಮದರ್ ತೆರೆಸಾ ಅವರನ್ನು ಸಂತ ಪದವಿಗೆ ಏರಿಸುವ ವ್ಯಾಟಿಕನ್ ಪೋಪ್ ಅವರ ನಿರ್ಧಾರವನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾರ್ಧಿಕವಾಗಿ ಸ್ವಾಗತಿಸಿದ್ದಾರೆ. ಮನುಕುಲದ ಒಳಿತಿಗಾಗಿ ಬದುಕಿದ ಮದರ್ ತೆರೆಸಾ ಅವರಿಗೆ ೨೦೧೬ರಲ್ಲಿ ಸಂತ ಪದವಿ ದೊರೆಯುತ್ತಿರುವುದು ನಮಗೆ ಅತ್ಯಂತ ಹರ್ಷ ತಂದಿದೆ ಎಂದು ಮಮತಾ ಬ್ಯಾನರ್ಜಿ ಸಂತಸ ವ್ಯಕ್ತಪಡಿಸಿದ್ದಾರೆ. ಸಧ್ಯದಲ್ಲೇ ಮದರ್ ತೆರೆಸಾ ಅವರಿಗೆ ಮರಣೋತ್ತರ ಸಂತ ಪದವಿ ನೀಡಿ ಗೌರವಿಸಲಾಗುವುದು.

ಜನವರಿಯಿಂದ ಜಾರಿಯಾಗಲಿದೆ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯ:*

ಬೆಂಗಳೂರು, ಡಿ.18-ರಾಜ್ಯ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ, ಅನುದಾನಿತ ಸಂಸ್ಥೆಗಳ ನೌಕರರಿಗೆ 2016ನೆ ವರ್ಷದ ಗಳಿಕೆ ರಜೆಯನ್ನು ಅದ್ಯರ್ಪಿಸಿ (ಹಿಂ ದಿರುಗಿಸಿ), ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಜನವರಿ 1 ರಿಂದ ಜಾರಿಗೆ ಬರಲಿದೆ. 2016ನೇ ವರ್ಷದಲ್ಲಿ ಗರಿಷ್ಠ 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಅದ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಪಡೆಯಲು ಅವಕಾಶ ಕಲ್ಪಿಸಿದೆ. ಆದರೆ ಸರ್ಕಾರಿ ಅಧಿಕಾರಿ ಮತ್ತು ನೌಕರರು ಒಂದು ತಿಂಗಳು ಮುಂಚೆ ನೋಟಿಸ್ ನೀಡಿ ಈ ಸೌಲಭ್ಯ ಪಡೆಯಬೇಕಿದೆ. ಡಿ ಗ್ರೂಪ್ ನೌಕರರು 2016ನೆ ಕ್ಯಾಲೆಂಡರ್ ವರ್ಷದ ಯಾವುದೇ ತಿಂಗಳಿನಲ್ಲಿ ಸ್ವಇಚ್ಛೆಯಂತೆ ರಜೆ ನಗದೀಕರಣ ಸೌಲಭ್ಯ ಪಡೆಯಬಹುದು. ಎ, ಬಿ ಮತ್ತು ಸಿ ಗುಂಪಿನ ನೌಕರರು ಏಪ್ರಿಲ್ನಿಂದ ಡಿಸೆಂಬರ್ ನಡುವಿನ ಯಾವುದೇ ತಿಂಗಳಿನಲ್ಲಿ ರಜೆ ನಗದೀಕರಣ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಷರತ್ತುಗಳು ಏನೇ ಇದ್ದರೂ ಜನವರಿಯಿಂದ ಮಾರ್ಚ್ ನಡುವೆ ವಯೋನಿವೃತ್ತಿ ಹೊಂದುವ ಎಲ್ಲಾ ಅರ್ಹ ಅಧಿಕಾರಿ ಮತ್ತು ನೌಕರರು ನಿವೃತ್ತಿಯಾಗುವ ತಿಂಗಳಲ್ಲಿ ನಗದೀಕರಣ ಪ್ರಯೋಜನ ಪಡೆಯುವ ಅವಕಾಶವಿದೆ. ನಾಗರಿಕ ಸೇವಾ ನಿಯಮಗಳ ಅನ್ವಯ ಗಳಿಕೆ ರಜೆ ನಗದೀಕರಣ ನಿಯಂತ್ರಣಕ್ಕೆ ಸಂಬಂಧಿಸಿದ ಇತರೆ ಷರತ್ತುಗಳು ಅನ್ವಯವಾಗಲಿವೆ. ಈ ಆದೇಶವು ಈಗಾಗಲೇ ಇಂಥ ಸೌಲಭ್ಯ ವಿಸ್ತರಣೆಯಾಗಿರುವ ಸರ್ಕ

ಮಕ್ಕಳಿಗೆ ಶೂ ಬದಲು ಪಾದರಕ್ಷೆ

Image

ಕ.ರಾ.ರ.ಸಾ.ನಿ. ದಲ್ಲಿ ಚಾಲಕ ಕಂ ನಿರ್ವಾಹಕ ದರ್ಜೆ-೩ ಹುದ್ದೆಗಳನ್ನು ನೇಮಕಾತಿ :ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ದಿ. 28/12/2015 ರಿಂದ

Image

ಪ್ರತಿ ಠಾಣೆಗಳಲ್ಲಿ 2ನೇ ಭಾನುವಾರ ‘ದಲಿತರ ದಿನ’

ಪ್ರತಿ ಠಾಣೆಗಳಲ್ಲಿ 2ನೇ ಭಾನುವಾರ 'ದಲಿತರ ದಿನ' 18 Dec, 2015 ಪ್ರಜಾವಾಣಿ ವಾರ್ತೆ ಬೆಂಗಳೂರು: ದಲಿತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲೂ ಇನ್ನು ಮುಂದೆ ಪ್ರತಿ ತಿಂಗಳ 2ನೇ ಭಾನುವಾರ 'ದಲಿತರ ದಿನ' ಆಚರಣೆ ಯಾಗಲಿದೆ! ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರ ವಿರುದ್ಧ ನಡೆಯುವ ದೌರ್ಜನ್ಯಗಳ ಕುರಿತು ದಾಖಲಾಗುವ ದೂರುಗಳಿಗೆ ಪೊಲೀಸರು ಸಮರ್ಪಕ ವಾಗಿ ಸ್ಪಂದಿಸುತ್ತಿಲ್ಲವೆಂಬ ಆರೋಪಗಳು ಕೇಳಿಬಂದಿದ್ದವು. ಈ ಕಾರಣಕ್ಕೆ 'ದಲಿತರ ದಿನ' ಆಚರಣೆ ನಿಯಮ ಜಾರಿಗೆ ತರಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವ್ಯವಸ್ಥೆಯನ್ನು ಮೊದಲೇ ಜಾರಿಗೆ ತರಲಾಗಿತ್ತು. ಆದರೆ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಈ ನಿಯಮವನ್ನು ಕಡ್ಡಾಯಗೊಳಿಸಿ ರಾಜ್ಯ ಪೊಲೀಸ್ ಇಲಾಖೆ ಮತ್ತೊಮ್ಮೆ ಸುತ್ತೋಲೆ ಹೊರಡಿಸಿದೆ. 'ತಿಂಗಳ ಪ್ರತಿ 2ನೇ ಭಾನುವಾರ ಠಾಣಾ ಮಟ್ಟದಲ್ಲಿ ಸಭೆ ನಡೆಸಬೇಕು. ಸ್ಥಳೀಯ ದಲಿತ ಮುಖಂಡರನ್ನು ಸಭೆಗೆ ಆಹ್ವಾನಿಸಿ, ಕುಂದು- ಕೊರತೆ ಆಲಿಸ ಬೇಕು. ಬಳಿಕ ಸತ್ಯಾಸತ್ಯತೆ ಪರಿಶೀಲಿಸಿ ತತ್ಕ್ಷಣವೇ ವಿಚಾರಣೆ ಪ್ರಾರಂಭಿ ಸಬೇಕು. ಇಲಾಖಾ ಮಟ್ಟದಲ್ಲೇ ಬಗೆಹ ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು' ಎಂದು ರಾಜ್ಯ ಪೊಲೀಸ್ ಮಹಾನಿರ್ದೇ ಶಕ ಓಂಪ್ರಕಾಶ್ ಹೊರಡಿಸಿರುವ ಸುತ್ತೋಲ

ಗಣರಾಜ್ಯೋತ್ಸವದ ಮುಖ್ಯ ಅತಿಥಿ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ:*

Image
Dec 17, 2015, 12:21 PM IST ಹೊಸದಿಲ್ಲಿ: ಭಾರತದ ಗಣರಾಜ್ಯೋತ್ಸವದ ದಿನದಂದು ಮುಖ್ಯ ಅತಿಥಿಯನ್ನು ಆಹ್ವಾನಿಸುವ ಸಂಪ್ರದಾಯವನ್ನು ಅನುಸರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯ 2016ರ ಜನವರಿ 26ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರನ್ನು ಆಹ್ವಾನಿಸಿದೆ. ಹೊಲಾಂಡೆ ಅವರು ಭಾರತದ ಸರಕಾರದ ಈ ಆಹ್ವಾನವನ್ನು ಸ್ವೀಕರಿಸಿದ್ದು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾರತೀಯ ಸೇನೆಯಿಂದ ಗೌರವ ವಂದನೆಯನ್ನು ಸ್ವೀಕರಿಸಲಿದ್ದಾರೆ. "ಹೊಲಾಂಡೆ ಅವರ ಭೇಟಿಯಿಂದ ಭಾರತ ಮತ್ತು ಫ್ರಾನ್ಸ್ ನಡುವಿನ ಪ್ರಬಲ ವ್ಯೂಹಾತ್ಮಕ ಭಾಗೀದಾರಿಕೆ ಮತ್ತು ಉಭಯ ದೇಶಗಳ ನಡುವಿನ ವಿಶೇಷ ರೀತಿಯ ಸಂಬಂಧಗಳು ಇನ್ನಷ್ಟು ಸದೃಢವಾಗುವುದೆಂಬ ವಿಶ್ವಾಸ ನಮಗಿದೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯವು ಟ್ವೀಟ್ ಮಾಡಿದೆ. ಕಳೆದ ವರ್ಷ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಒಬಾಮಾ ಜತೆಗೆ ಅವರ ಪತ್ನಿ ಮಿಶೆಲ್ ಒಬಾಮಾ ಕೂಡ ಬಂದಿದ್ದರು.

ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 2015ರ ಸಾಲಿನ ಪ್ರಶಸ್ತಿಗೆ ಆಯ್ಕೆ:-

Image
ಬೆಂಗಳೂರು: ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 2015ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಿರುಮಲೇಶ್ ಅವರ 'ಅಕ್ಷಯ ಕಾವ್ಯ' ಕೃತಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, 1 ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಪುರಸ್ಕಾರ ಒಳಗೊಂಡಿದೆ. 'ಅಕ್ಷಯ ಕಾವ್ಯ' ತಿರುಮಲೇಶ್ ಅವರ ಮಹತ್ವಾಕಾಂಕ್ಷೆಯ ಕೃತಿಯಾಗಿದ್ದು, ಇದು 'ಆಧುನಿಕ ಮಹಾಕಾವ್ಯ'ದ ವಿಸ್ತಾರವನ್ನು ಒಳಗೊಂಡಿದೆ. ಲೋಕದ ಅನುಭವಗಳನ್ನು ಗಂಡು ಹೆಣ್ಣಿನ ರೂಪಕಗಳ ಮೂಲಕ ಗ್ರಹಿಸುವ ಪ್ರಯತ್ನ ಹಾಗೂ ಬೇರೆ ಬೇರೆ ಲಯಗಳು ಬಳಕೆಯಾಗಿರುವ ವಿಶಿಷ್ಟ ಕಾವ್ಯಪ್ರಯೋಗ ಇದಾಗಿದೆ.