Posts

ಕೆ–ಸೆಟ್‌: ಡಿಸೆಂಬರ್‌ 11ಕ್ಕೆ ಪರೀಕ್ಷೆ 21 Sep, 2016:-ಪ್ರಜಾವಾಣಿ ವಾರ್ತೆ

ಮೈಸೂರು:  ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆಗೆ (ಕೆ–ಸೆಟ್‌) ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಪರೀಕ್ಷೆ ಡಿ. 11ರಂದು ನಡೆಯಲಿದೆ. ಪ್ರಕ್ರಿಯೆ ಸೆ. 26ರಂದು ಆರಂಭವಾಗಲಿದ್ದು, ದಂಡಶುಲ್ಕ ರಹಿತವಾಗಿ ಅ. 25 ಮತ್ತು ದಂಡ ಸಹಿತವಾಗಿ ನ. 4ರ ವರೆಗೆ (ಸಂಜೆ 5 ಗಂಟೆ) ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ವರ್ಗ ₹ 1,050, ಪ್ರವರ್ಗ 2ಎ, 2ಬಿ, 3ಎ, 3ಬಿ ₹ 850 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ–1, ಅಂಗವಿಕಲ ಅಭ್ಯರ್ಥಿಗಳಿಗೆ ₹ 550 ಪರೀಕ್ಷಾ ಶುಲ್ಕ ನಿಗಪಡಿಸಲಾಗಿದೆ. ₹ 150 ದಂಡಶುಲ್ಕ ಪಾವತಿಸಿ ನ. 4ರ ವರೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಸ್ವವಿವರ ಮತ್ತು ಶೈಕ್ಷಣಿಕ ಮಾಹಿತಿ ನೋಂದಣಿ ಮಾಡಿದ ನಂತರ, ಕೆನರಾ ಬ್ಯಾಂಕ್‌ ಶಾಖೆಗಳಲ್ಲಿ ಅಥವಾ ಡೆಬಿಟ್‌, ಕ್ರೆಡಿಟ್‌, ನೆಟ್‌ಬ್ಯಾಂಕಿಂಗ್‌, ನೆಫ್ಟ್‌ ಮೂಲಕ ಶುಲ್ಕ ಪಾವತಿಸಬಹುದು. ಶುಲ್ಕ ಪಾವತಿಸಿದ ನಂತರ ಅರ್ಜಿ ಮತ್ತು ರಸೀತಿ, ಚಲನ್‌, ಹಾಜರಾತಿ ಪ್ರತಿಗಳನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅರ್ಜಿ ಪ್ರತಿ, ಹಾಜರಾತಿ ಪತ್ರ, ಅಂಕಪಟ್ಟಿ, ಇತರ ದಾಖಲೆಗಳನ್ನು ಎ–4 ಲಕೋಟೆಯಲ್ಲಿ ನ. 10ರ ಒಳಗೆ ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ನೋಡೆಲ್‌ ಅಧಿಕಾರಿಗೆ ಸಲ್ಲಿಸಬೇಕು. ವಿವಿಧ 39 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ,

*ವಿಜಯಪುರ ಮಹಿಳಾ ವಿಶ್ವವಿದ್ಯಾನಿಲಯಕ್ಕೆ "ಅಕ್ಕಮಹಾದೇವಿ ವಿಶ್ವವಿದ್ಯಾಲಯ" ಎಂದು ಸರ್ಕಾರ ನಾಮಕರಣ ಮಾಡಿದೆ*☝

Image

5,311 ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕ

Image
Sep 21, 2016, 04.00 AM IST police-costables A A A ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ / ಈ ಬಾರಿ ಲಿಖಿತ ಪರೀಕ್ಷೆ ಮೊದಲು * ನಾಗರಿಕ ಪೊಲೀಸ್‌ ಕನ್ಸ್‌ಟೇಬಲ್‌ -3477 * ಸಶಸ್ತ್ರ ಪೊಲೀಸ್‌ ಕನ್ಸ್‌ಟೇಬಲ್‌- 1834 ರಾಜ್ಯ ಪೊಲೀಸ್‌ ಇಲಾಖೆಯಲ್ಲೀಗ ಉದ್ಯೋಗ ಸುಗ್ಗಿ. ಎರಡು ದಿನಗಳ ಹಿಂದೆ 544 ಸಬ್‌ಇನ್ಸ್‌ ಪೆಕ್ಟರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದ ಇಲಾಖೆಯು ಇದೀಗ ಬರೋಬ್ಬರಿ 5,311 ಪೊಲೀಸ್‌ ಕಾನ್ಸ್‌ಟೇಬಲ್‌ಗಳ ನೇಮಕಕ್ಕೆ ಪ್ರಕಟಣೆ ಹೊರಡಿಸಿದೆ. ಸೆಪ್ಟೆಂಬರ್‌ 21ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅಕ್ಟೋಬರ್‌ 17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಹತೆಗಳೇನು? ನಾಗರಿಕ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಹೊಂದಿರುವ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 19ರಿಂದ 27 ವರ್ಷ. ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗೆ ಪುರುಷರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ರಿಂದ 27 ವರ್ಷ. ಎಸ್‌ಎ/ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 2 ವರ್ಷ ಹಾಗೂ ಬುಡಕಟ್ಟು ಜ

Breaking News - *SSA TO NONPLAN POST ಗೆ ಹೋಗಲು ಕೆ ಎ ಟಿ ಆದೇಶ*: KAT ಗೆ ಹೋಗಿ *ಮಧ್ಯಂತರ ಆದೇಶ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾತ್ರ* ಸೀಮಿತಗೊಳಿಸಿ ಇಲಾಖೆ ಅನುಮತಿ ನೀಡಿದೆ.

Image

1999 ರೂ.ಗೆ ಜಿಯೊ 4G ಹಾಟ್ ಸ್ಪಾಟ್ ಡಿವೈಸ್ September 18, 2016

Image
ಮುಂಬೈ. ಸೆ.18 :  ರಿಲಾಯನ್ಸ್ ಜಿಯೋ 4ಜಿ ಉಚಿತ ಸಿಮ್ ಖರೀದಿ ಕಷ್ಟದ ಕೆಲಸ. ನಿರೀಕ್ಷೆಗಿಂತ ಹೆಚ್ಚು ಬೇಡಿಕೆ ಇರುವುದರಿಂದ ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಸಿಮ್ ನೀಡಲಾಗುತ್ತಿಲ್ಲ. ಈ ನಡುವೆ ರಿಲಾಯನ್ಸ್ ತನ್ನ ಹೊಸ ಸಾಧನ Jiofai 4G ಹಾಟ್ ಸ್ಪಾಟ್ ಪ್ರಾರಂಭಿಸಿದೆ. ಭಾರತದ ರಿಲಾಯನ್ಸ್ ಸ್ಟೋರ್ ನಲ್ಲಿ Jiofai 4G ಹಾಟ್ ಸ್ಪಾಟ್ 1999 ರೂಪಾಯಿಗೆ ಸಿಗ್ತಾ ಇದೆ. ಈ ಡಿವೈಸ್ ನಲ್ಲಿ Oled ಡಿಸ್ ಪ್ಲೇ ಹಾಗೂ 2600 mAh ಬ್ಯಾಟರಿ ಇದೆ. ಈ ಹಿಂದಿನ Jiofai ನಲ್ಲಿ 2300 mAh ಬ್ಯಾಟರಿ ನೀಡಲಾಗಿತ್ತು. ಮನೆಯಲ್ಲಿ ಅನೇಕರು ನೆಟ್ ಬಳಸುತ್ತಿದ್ದರೆ ಈ Jiofai 4G ಬಹಳ ಉಪಯೋಗಕಾರಿ. ಈ Jiofai 4G ನಲ್ಲಿ 10 ಡಿವೈಸ್ ಕನೆಕ್ಟ್ ಮಾಡಿ ನೆಟ್ ಬಳಸಬಹುದಾಗಿದೆ.  ರಿಲಾಯನ್ಸ್ ಮಳಿಗೆಯಲ್ಲಿ Jiofai 4G ಡಿವೈಸ್ ಖರೀದಿಸಿದರೆ. ಇದರ ಜೊತೆ ನಿಮಗೊಂದು ಜಿಯೋ ಸಿಮ್ ಸಿಗಲಿದೆ.

Job ನ್ಯೂಸ್‌: ದೆಹಲಿ ಮೆಟ್ರೊದಲ್ಲಿ ಭರ್ಜರಿ ಉದ್ಯೋಗ :-

ಅಸಿಸ್ಟೆಂಟ್‌ ಮ್ಯಾನೇಜರ್‌, ಸ್ಟೇಷನ್‌ ಕಂಟ್ರೋಲರ್‌, ಕಸ್ಟಮರ್‌ ರಿಲೇಷನ್ಸ್‌ ಆಫೀಸರ್‌, ಜೂನಿಯರ್‌ ಎಂಜಿನಿಯರ್‌, ಅಕೌಂಟ್‌ ಅಸಿಸ್ಟೆಂಟ್‌ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. *ಖಾಲಿ ಹುದ್ದೆಗಳು 3431 ದೆಹಲಿ ಮೆಟ್ರೊ ರೈಲು ಕಾರ್ಪೋರೇಷನ್‌ ಭರ್ಜರಿ ಉದ್ಯೋಗಾವಕಾಶದ ಆಫರ್‌ ನೀಡಿದೆ. ಅಸಿಸ್ಟೆಂಟ್‌ ಮ್ಯಾನೇಜರ್‌, ಸ್ಟೇಷನ್‌ ಕಂಟ್ರೋಲರ್‌, ಕಸ್ಟಮರ್‌ ರಿಲೇಷನ್ಸ್‌ ಆಫೀಸರ್‌, ಜೂನಿಯರ್‌ ಎಂಜಿನಿಯರ್‌, ಅಕೌಂಟ್‌ ಅಸಿಸ್ಟೆಂಟ್‌ ಮತ್ತು ಮೆಂಟೇನರ್‌ ಸೇರಿದಂತೆ ಒಟ್ಟು 3431 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸೆಪ್ಟೆಂಬರ್‌ 15ರಿಂದಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಕ್ಟೋಬರ್‌ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅಕ್ಟೋಬರ್‌ 18ರೊಳಗೆ ನಿಗದಿತ ಅರ್ಜಿ ಶುಲ್ಕವನ್ನೂ ಪಾವತಿಸುವಂತೆ ಡಿಎಂಆರ್‌ಸಿ ಸೂಚಿಸಿದೆ. ಕಾರ್ಯಕ್ಷೇತ್ರ ದೆಹಲಿಯಾಗಿದ್ದರೂ, ನಿಗದಿತ ವಿದ್ಯಾರ್ಹತೆ ಹೊಂದಿರುವ ಯಾವುದೇ ರಾಜ್ಯದ ಅಭ್ಯರ್ಥಿಗಳಾಗಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಸಿಸ್ಟೆಂಟ್‌ ಮ್ಯಾನೇಜರ್‌: ಎಲೆಕ್ಟ್ರಿಕಲ್‌, ಸಿವಿಲ್‌, ಆಪರೇಷನ್ಸ್‌, ಎಚ್‌ಆರ್‌, ಫೈನಾನ್ಸ್‌ ಮತ್ತು ಟ್ರೈನ್‌ ಆಪರೇಟರ್‌ ವಿಭಾಗದಲ್ಲಿ ಒಟ್ಟು 44 ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗಳಿಗೆ ನೇಮಕ ನಡೆಯಲಿದೆ. ಬಿಇ/ಬಿಟೆಕ್‌/ಐಸಿಡಬ್ಲ್ಯೂಎ/ಎಂಬಿಎಯನ್ನು ಪ

ಪತ್ರಿಕಾ ಪ್ರಕಟಣೆ: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ - 2016*

Image
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 14,000 ಹುದ್ದೆಗಳ ಪೈಕಿ  ಈ ಕೆಳಕಂಡ ಹುದ್ದೆಗಳಿಗೆ ನೇಮಕಾತಿ ಕೈಗೊಳ್ಳಲು ಸರ್ಕಾರವು ಅನುಮೋದನೆಯನ್ನು ನೀಡಿದೆ. ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ 👉🏻 19-09-2016 ಹಾಗೂ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 👉🏻13-10-2016 🚦 ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) :- 398 ಹುದ್ದೆಗಳು [ ಕಮೀಷನರೇಟ್ ವಾರು] 🚦ಸಶಸ್ತ್ರ ಮೀಸಲು ಸಬ್ ಇನ್ಸ್‌ಪೆಕ್ಟರ್ (CAR, RSI):- 90 ಹುದ್ದೆಗಳು 🚦 ನಿಸ್ತಂತು ಸಬ್ ಇನ್ಸ್‌ಪೆಕ್ಟರ್ (Wireless, PSI) :- 28 ಹುದ್ದೆಗಳು. 🚦ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್ (KSRP, RSI) :-28 ಹುದ್ದೆಗಳು.

*ಉತ್ತರ ಕನ್ನಡ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 53 ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿ ಅಧಿಸೂಚನೆ*

ಅರ್ಜಿ ಸಲ್ಲಿಸುವ ದಿನಾಂಕ 15/9/2016 ರಿಂದ 14/10/2016. ವಿದ್ಯಾರ್ಹತೆ :: Puc ಹೆಚ್ಚಿನ ಮಾಹಿತಿಗಾಗಿ http://uttarakannada.nic.in/recruitment/docs/VANotification2016.pdf ಆನ್ ಲೈನ್ ಅರ್ಜಿಗಾಗಿ http://karwar-va.kar.nic.in/

"ವಿಶ್ವ ಓಝೋನ್ ದಿನ".(ಸಪ್ಟಂಬರ 16)

"ವಿಶ್ವ ಓಝೋನ್ ದಿನ". ಈ ಸಂದಭ೯ದಲ್ಲಿ ಓಝೋನ್ ದಿನದ ಮಹತ್ವವನ್ನು ಅರಿಯೋಣ ಬನ್ನಿ....... ಎ.ಪಿ.ಜೆ ಅಬ್ದುಲ್ ಕಲಾಂರು ಹೇಳಿದಂತೆ "ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ. ಹೀಗಾಗಿ ಕಷ್ಟ-ಸಂಕಷ್ಟ, ಕೀಟ-ಕೋಟಲೆಗಳ ಭಯವೇಕೆ? ಸಂಕಷ್ಟ ಬಂದರೆ ಅದರ ಹಿನ್ನೆಲೆಯನ್ನು ಅರಿತುಕೊಳ್ಳಬೇಕು." ಎಂಬ ಮಾತಿನಂತೆ ಈ ಭೂಮಂಡಲದ ಸಕಲ ಜೀವಿಗಳ ರಕ್ಷಣೆ ಮಾಡುವ ಓಜೋನ್ ಎಂಬ ಕವಚ ವಾಯುಮಂಡಲದಲ್ಲಿದೆ. ಆ ಪದರವೀಗ ಅಪಾಯದ ಹಂತದಲ್ಲಿದೆ. ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ವಿಶ್ವ ಓಜೋನ್ ದಿನವನ್ನು(ಸೆ.16) ಆಚರಿಸಲಾಗುತ್ತಿದೆ. "If earth is our mother, then Ozone is our father" ಪ್ರಾಣಿಗಳು ಜೀವಿಸಲು ಮುಖ್ಯವಾದದ್ದು ಭೂಮಿ, ಆದ್ದರಿಂದ ಭೂಮಿಯನ್ನು (ಭೂ)ತಾಯಿಗೆ ಹೊಲಿಸುತ್ತೇವೆ. ಅದೇ ರೀತಿ ಓಝೋನ್ ಪದರು ಸಹ ಜೀವಿಸಲು ಅಷ್ಟೇ ಮುಖ್ಯ ಆದ್ದರಿಂದ ಅದನ್ನು ತಂದೆಗೆ ಹೋಲಿಸಿದರೆ ತಪ್ಪಾಗದು. ಜೀವಿಗಳು ಬದುಕಿ ಬಾಳಲು ಭೂಮಿ ಬೇಕು, ಆದರೆ!! ಭೂಮಿ ಬದುಕಲು ಓಝೋನ್ ಬೇಕೇ-ಬೇಕು. ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ, ಓಝೋನ್ ಪದರು ನಮ್ಮನ್ನು ಸೂರ್ಯನಿಂದ ಬರುವ ನೇರಳಾತೀತ(UV-Rays) ಕಿರಣಗಳಿಂದ ರಕ್ಷಿಸುತ್ತದೆ. ಇತಿಹಾಸ: ರಾಸಾಯನಿಕ ಧಾತುವೊಂದರ ಭಿನ್ನರೂಪವಾಗಿ ಮೊಟ್ಟಮೊದಲಬಾರಿಗೆ ಗುರುತಿಸಲ್ಪಟ್ಟ ಓಝೋನ್

ಶಿಕ್ಷಣ ಕ್ಷೇತ್ರದಲ್ಲಿ ಜನಪ್ರಿಯವಾದ ಮೊಬೈಲ್ APPಗಳು::

ಇದು ಡಿಜಿಟಲ್ ಯುಗ . ನಮ್ಮ ಎಲ್ಲ ಸಂವೇದನಾ ಶಕ್ತಿಯು ಟೆಕ್ನಾಲಜಿಯ ಮೇಲೆ ಅವಲಂಭಿತವಾಗಿದೆ. ಮೆಸೇಜಿಂಗ್, ಚಾಟಿಂಗ್ , ಗೇಮಿಂಗ್ ನಿಂದ ಹಿಡಿದು ದೊಡ್ಡ ದೊಡ್ಡ ಮಟ್ಟದ ತಾಂತ್ರಿಕ ಸಂಶೋಧನೆ , ಕಾರ್ಯಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಹಭಾಗಿತ್ವ ಟೆಕ್ನಾಲಜಿಯದ್ದಾಗಿದೆ. ಟೆಕ್ನಾಲಜಿ ಯಿಲ್ಲದ ಬದುಕನ್ನು ಇಂದು ಮಾನವ ಕ್ಷಣದ ಮಟ್ಟಿಗೂ ಊಹಿಸಲಾರ. ದಿನ ನಿತ್ಯವೂ ಹೊಸ ಅವಿಷ್ಕಾರದೊಂದಿಗೆ ನೂತನ ತಂತ್ರಾಂಶಗಳನ್ನು ಕಂಡು ಹಿಡಿದು ತನ್ನ ಕಾರ್ಯಕ್ಷಮತೆಯನ್ನು ಅಲ್ಪ ಸಮಯದಲ್ಲಿ ವಿಶಾಲವಾಗಿ ಪ್ರಕಟಿಸುತ್ತ ಅವಿನಾಭಾವ ಸಾಧನೆ ಮಾಡುತ್ತಿರುವ ಮಾನವ ಮಿದುಳಿಗೆ ಎಷ್ಟು ಸಲಾಂ ಹೇಳಿದರೂ ಸಾಲದು. ಇಂದು ಸ್ಮಾರ್ಟ್ ಪೋನ್ ಎಂಬ ಸಣ್ಣ ವಸ್ತುವಿನಲ್ಲಿ ಇಡೀ ಜಗತ್ತಿನ ಎಲ್ಲ ವಿಚಾರಗಳನ್ನು ಬಚ್ಚಿಟ್ಟುಕೊಳ್ಳ ಬಹುದು . ಹೆಬ್ಬೆರಳಿನ ತುತ್ತ ತುದಿಯಿಂದ ಟ್ಯಾಪ್ ಮಾಡುವ ಮೂಲಕ ಊಹೆಗೂ ನಿಲುಕದ ಹೊಸ ವಿಶ್ವವನ್ನೇ ನಾವು ಕಾಣಬಹುದು. ಟೆಕ್ನಿಕಲ್ ಆಗಿ ಹೇಳಿದರೆ "ಇದು ಸ್ಮಾರ್ಟ್ ಜನರ ಸ್ಮಾರ್ಟ್ ಯುಗ" . ವಿದ್ಯಾರ್ಥಿಯಿಂದ ಹಿಡಿದು ಮುಪ್ಪಿನ ದಿನಗಳನ್ನು ಕಳೆಯುವ ವೃದ್ಧರು ಸಹ ತಮ್ಮ ದೈನಂದಿನ ಜೀವನಕ್ಕೆ ಸ್ಮಾರ್ಟ್ ಮೆರಗು ನೀಡಲು ದಿನ ನಿತ್ಯವೂ ಕಸರತ್ತು ಮಾಡುತ್ತಾರೆ . ಸಾಮಾನ್ಯವಾಗಿ ಹಿರಿಯರು "ನಿಮ್ಮ ಮನೆಯಲ್ಲಿ ಫೋನ್ ಇದೆಯಾ ?" ಎಂಬ ಪ್ರಶ್ನೆ ಕೇಳುತಿದ್ದ ಕಾಲ ಒಂದಿತ್ತು . ಆದರೆ ಇಂದು ಕಿರಿಯರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಶೈಲಿ

Additional increment for high school teachers ana HeadMasters option now avilable in hrms.

Image

"ದ್ವಿತೀಯ ಪಿಯುಸಿ ಯಲ್ಲಿ 80% ಗಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ MHRD ವಿದ್ಯಾರ್ಥಿ ವೇತನ" (ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24.09.2016)

www.pue.kar.nic.in/PUE/PDF_files/scholarship/mhrd_16/Inst_16_Guide.pdf

*ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ – 1921 ಹುದ್ದೆಗಳ ನೇಮಕಾತಿ*

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿಯಮಿತದಿಂದ ಕೆಳಕಂಡ ಹುದ್ದೆಗಳ ಭರ್ತಿಗಾಗಿ ಆಸಕ್ತರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿದ್ಯುತ್) : 52 ಸಹಾಯಕ ಇಂಜಿನಿಯರ್ (ವಿದ್ಯತ್) :416 ಸಹಾಯಕ ಇಂಜಿನಿಯರ್ (ಸಿವಿಲ್ ) : 24 ಸಹಾಯಕ ಲೆಕ್ಕಾಧಿಕಾರಿ : 296 ಕಿರಿಯ ಇಂಜಿನಿಯರ್ (ವಿದ್ಯುತ್) : 409 ಕಿರಿಯ ಇಂಜಿನಿಯರ್ (ಸಿವಿಲ್) : 12 ಸಹಾಯಕ  : 422 ಕಿರಿಯ ಸಹಾಯಕ : 290 ವಿದ್ಯಾರ್ಹತೆ , ವಯೋಮಿತಿ ಆಯ್ಕೆ ವಿಧಾನ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿclick ಮಾಡಿರಿ http://nebula.wsimg.com/b9e35bb22ed5b8c341ab8a9da17a32e7?AccessKeyId=1262C70BB86294F06778&disposition=0&alloworigin=1 ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ  28-09-2016 ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ click ಮಾಡಿರಿ (ಹೆಸ್ಕಾಂ ವಿಭಾಗ) http://www.hescom.co.in/aee-recruitment.html nebula.wsimg.com/ced6babd837f8de7c7008ed1525f9817?AccessKeyId=1262C70BB86294F06778&disposition=0&alloworigin=1

Press Note: 815 posts of PDO in RPDR

Commencement of entry of online Application-16-09-2016 Last Date to enter online Application 15-10-2016 kea.kar.nic.in/cet2016/notification_kan.pdf

KPTCL 1921 ಸಹಾಯಕ, ಕಿರಿಯ ಎಂಜಿನಿಯರ್ ಮತ್ತು ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ:-

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಎಂಜಿನಿಯರ್ (ವಿದ್ಯುತ್/ಸಿವಿಲ್), ಕಿರಿಯ ಎಂಜಿನಿಯರ್ (ಸಿವಿಲ್) ಮತ್ತು ಕಿರಿಯ ಸಹಾಯಕ, ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಒಟ್ಟು 1921 ಹುದ್ದೆಗಳು ಖಾಲಿ ಇವೆ. ಈ ಎಲ್ಲ ಹುದ್ದೆಗಳು ಮೀಸಲಾತಿಯನ್ವಯ ಹಂಚಿಕೆಯಾಗಿದ್ದು, ಹೈ.ಕ. ಭಾಗದ ಅಭ್ಯರ್ಥಿಗಳಿಗೂ ಮೀಸಲಾತಿ ನೀಡಲಾಗಿದೆ. ಇದೇ ಸೆಪ್ಟೆಂಬರ್ 8ರಂದು ಕಂಪನಿಗಳ ವೆಬ್ಸೈಟ್ನಲ್ಲಿ ಹುದ್ದೆಗಳ ಕುರಿತಾದ ಸಂಪೂರ್ಣ ವಿವರಗಳನ್ನು ಪ್ರಕಟಿಸಲಾಗುತ್ತದೆ. *ಯಾವ ಹುದ್ದೆ ಎಷ್ಟು?* ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್-52, ಸಹಾಯಕ ಎಂಜಿನಿಯರ್ (ವಿದ್ಯುತ್/ಸಿವಿಲ್)-440, ಕಿರಿಯ ಎಂಜಿನಿಯರ್ (ವಿದ್ಯುತ್/ಸಿವಿಲ್): 421, ಸಹಾಯಕ ಲೆಕ್ಕಾಧಿಕಾರಿ-296, ಸಹಾಯಕ-422 ಮತ್ತು ಕಿರಿಯ ಸಹಾಯಕ-290 *ಅರ್ಹತೆಗಳೇನು?* ಸಹಾಯಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ಅಂಗೀಕೃತ ವಿವಿಯಿಂದ ಬಿ.ಇ ಪದವಿ ಅಥವಾ ಎಎಂಐಇ (ಭಾರತ) ನಡೆಸುವ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು. ಅಂತೆಯೇ ಸಿವಿಲ್ ವಿಭಾಗದಲ್ಲಿ ಸಹಾ

ಭಾಗ್ಯಗಳಿಲ್ಲದ ಹೊತ್ತಲ್ಲಿ ಮೇಷ್ಟ್ರೇ ಭಾಗ್ಯದೇವತೆ*

Image
_01 Sep 2016_ ಗುರು-ಶಿಷ್ಯರ ನಡುವೆ ತಾದಾತ್ಮ್ಯ ಏರ್ಪಡುವುದು ಇಬ್ಬರ ದೃಷ್ಟಿಯಿಂದಲೂ ಒಳ್ಳೆಯದು. ಗುರುವಿಗೆ ತನ್ನ ಶಿಷ್ಯ ತನ್ನನ್ನು ಮೀರಿದಾಗ ಆಗುವ ಖುಶಿಯೇ ಬೇರೆ.ಗುರುದೃಷ್ಟಿಗೆ ಇರುವ ಕಾರುಣ್ಯದಿಂದಾಗಿ 'ಹರ ಮುನಿಯಲ್, ಗುರು ಕಾಯ್ವನ್' ಎಂಬ ಮಾತು ಹುಟ್ಟಿದೆ.  ನಮ್ಮ ನಾಡಿನಲ್ಲಿ ಆಗಿಹೋದ ಮಹಾನ್ ಚೇತನಗಳಲ್ಲಿ ಅಂತರ್ಗತವಾಗಿದ್ದ ಅಗಾಧ ಪ್ರತಿಭೆಗಳನ್ನು ಗುರುತಿಸಿ ಪೋಷಿಸಿ ಬೆಳೆಸಿದ ಮೂಲಗಳನ್ನು ಹುಡುಕುತ್ತಾ ಹೋದರೆ ಖಂಡಿತವಾಗಿ ಆ ಮೂಲದಲ್ಲಿ ಗೋಚರಿಸುವವರು -ಳ-ಳನೆ ಹೊಳೆಯುವ ಅವರ ಗುರುಗಳು! ಟೀಚರು, ಮೇಷ್ಟ್ರು, ಲೆಕ್ಚರರು, ಸರ್ರು, ಪ್ರೊ-ಸರು.... ಯಾವುದೇ ಹಂತದಲ್ಲಿಯೂ ಈ ಗುರು ತನ್ನ ಶಿಷ್ಯನನ್ನು ಪ್ರಭಾವಿಸಿ ತನ್ನ ಪ್ರಭಾವಲಯದಲ್ಲಿ ಬೆಳೆಸಿ ಆ ಶಿಷ್ಯ ಏರಿದ ಎತ್ತರವನ್ನು ಕಂಡು ಹೆಮ್ಮೆ ಪಡುವ ಅಪರೂಪದ ಸಹೃದಯಿ. ಎಲೆಮರೆಯ ಕಾಯಿಯ ಹಾಗೆ ಹಳ್ಳಿಯ ಮೂಲೆ ಮೂಲೆಗಳಲ್ಲಿದ್ದ 'ಕನ್ನಡ ಶಾಲೆಯ' ಮೇಷ್ಟ್ರುಗಳಿಗೆ ಕನ್ನಡ ನಾಡಿನ ಒಂದು ಸಭ್ಯ, ಶಿಷ್ಟ, ಸುಸಂಸ್ಕೃತ ತಲೆಮಾರನ್ನೇ ಕಟ್ಟಿ ನಿಲ್ಲಿಸಿದ ಕೀರ್ತಿ ಸಲ್ಲಬೇಕು. ನಾನೀ ವಾರದ ಅಂಕಣಕ್ಕೆ ಪೆನ್ನು ಕೈಗೆತ್ತಿಕೊಂಡಾಕ್ಷಣ ನೆನಪಿಗೆ ಬಂದವರು ನನ್ನ ಕನ್ನಡ ಶಾಲೆಯಲ್ಲಿ ನಮಗೆ ಅಕ್ಷರ ಕಲಿಸಿದ ಮೇಷ್ಟ್ರು. ನಮ್ಮ 'ಕಾಗೆ ಕಾಲು ಗುಬ್ಬಿ ಕಾಲು' ಲಿಪಿಯನ್ನು ಅದು ಹೇಗೆ ಓದಿ ಅರ್ಥೈಸಿಕೊಳ್ಳುತ್ತಿದ್ದರೋ, ಇವತ್ತು ನಿನ್ನೆಗಿಂತ ಚಂದವಾಗಿದೆ ಅಕ್ಷರ ಎನ್ನುತ್ತಲೇ

ಅಭಿಮತ:- 30 ವರ್ಷಗಳ ನಂತರ ಸರ್ಕಾರಿ ಶಾಲೆಗಳು ಹೇಗಿರಬಹುದು?

ಮೈಸೂರು ದಸರಾ. ತೇರಲ್ಲಿ ಅಂಬಾರಿ. ಅದರ ಮುಂದೆ ಸ್ತಬ್ಧ ಚಿತ್ರಗಳ ಸಾಲು. ಜನಪದವಂತೂ ಸಂಪೂರ್ಣ ಕಣ್ಮರೆ. ಎಲ್ಲದರಲ್ಲೂ ಆಧುನಿಕತೆ ಕಾಣಿಸುತ್ತಿತ್ತು. ನಾನು, ನನ್ನ ಮಗ ಕುಳಿತು ನೋಡುತ್ತಿದ್ದೆವು. ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿದ್ದ ಸ್ತಬ್ಧ ಚಿತ್ರ ನನ್ನ ಮಗನಿಗೆ ಆ ಕರ್ಷಕವಾಗಿ ಕಾಣಿಸಿತು. ಒತ್ತೂತ್ತಾಗಿ ಕಟ್ಟಿದ ಮೂರು ಕಟ್ಟಡಗಳು, ಅದರಲ್ಲಿ ಒಂದು ಹೆಂಚಿನ ಕಟ್ಟಡ. ಗೊಡೆಯ ಹೊರಭಾಗದಲ್ಲಿ ಗಾಂಧೀಜಿ, ಸುಭಾಷ್ಚಂದ್ರ ಬೋಸ್, ನೆಹರು, ಪಟೇಲರು ಮುಂತಾದ ಗಣ್ಯರ ಚಿತ್ರಗಳು, ಒಂದು ಕಡೆ ಮಗ್ಗಿ, ಕಾಗುಣಿತ, ಮುರಿದ ಕಿಟಕಿಗಳು. ಕಟ್ಟಡದ ಮುಂದೆ ಕುರುಚಲು ಗಿಡದಂತಹ ನಾಲ್ಕಾರು ಗಿಡಗಳು... ಅಪ್ಪ ಏನದು! ನಾನು ತಣ್ಣಗೆ ಹೇಳಿದೆ ಸರ್ಕಾರಿ ಶಾಲೆ ಮಗಾ! ಸರ್ಕಾರಿ ಶಾಲೆನಾ, ಹಾಗಂದ್ರೇನು? ಈಗ ನಿನ್ನ ಶಾಲೆ ಇದೆಯಲ್ವಾ? ಅದೇ ರೀತಿ ಹಿಂದೆ ಸರ್ಕಾರ ಶಾಲೆಗಳನ್ನು ನಡೆಸ್ತಿತ್ತು. "ಹೌದಾ? ಹಾಗಾದರೆ ಈಗ ಯಾಕಿಲ್ಲ' ಅಂದ. ಇಲ್ಲಪ್ಪ ಎಲ್ಲ ಮುಚ್ಚಿಬಿಟ್ರಾ. 2-3 ಶಾಲೆ ಇದಾವೆ ಅಂತ ಕೇಳಿದೀನಿ. ಒಂದು ಮೈಸೂರು, ಇನ್ನೆರಡು ಕಾರವಾರ ಮತ್ತು ಕಲಬುರಗಿಯಲ್ಲಿವೆಯಂತೆ. ನನ್ನ ಮಗನಿಗೆ ಕಾತುರ ಜಾಸ್ತಿಯಾಯಿತು. "ಹಾಗಾದರೆ ಆವಾಗ ಇವು ಎಲ್ಲಾ ಕಡೆ ಇದ್ವಾ ಅಪ್ಪ' ಅಂದ. ಹೂಂ ಅಂದೆ. ನಮ್ಮೂರ ಹೊರಗೆ ದನದ ಆಸ್ಪತ್ರೆ, ಗ್ರಾಮ ಲೆಕ್ಕಿಗರ ಆಫೀಸ್ ಇದೆಯಲ್ಲಾ, ಅದೇ ನಮ್ಮೂರ ಶಾಲೆ. ನಾನೂ

BRC Examination 2016 II Batch Tentative Result/Priority List

schooleducation.kar.nic.in/Officers/Pdfdocuments/BRC_TenPRL_260816.pdf

Great Lines:

🌺 ಒಂದು ದಿನ ಸಾಕ್ರಟಿಸ್ ಏಕಾಂಗಿಯಾಗಿ ತಮ್ಮ ಮನೆ ಅಂಗಳದಲ್ಲಿ ನಡೆದಾಡುತ್ತಿದ್ದಾಗ ಅವನಿಗೆ ಸ್ನೇಹಿತನೊಬ್ಬ, 'ಸಾಕ್ರಟಿಸ್, ನಿಮ್ಮ ಶಿಷ್ಯನೊಬ್ಬನ ಬಗ್ಗೆ ನಾನೊಂದು ವಿಷಯ ಕೇಳಿದೆ, ಆ ಸಂಗತಿ ನಿನಗೆ ಗೊತ್ತಿದೆಯಾ?' ಎಂದು ಕೇಳಿದ. ಅದಕ್ಕೆ ಸಾಕ್ರಟಿಸ್, "ಒಂದು ನಿಮಿಷ ತಾಳು, ನೀನು ಆ ವಿಷಯ ಹೇಳುವ ಮೊದಲು ನಿನಗೊಂದು ಮೂರು ಹಂತದ ಪರೀಕ್ಷೆಯೊಡ್ಡುತ್ತೇನೆ. ನನ್ನ ಶಿಷ್ಯನ ಬಗ್ಗೆ ಹೇಳುವ ಮೊದಲು ಈ ಪರೀಕ್ಷೆಗೆ ನಿನ್ನನ್ನು ಒಳಪಡಿಸುವೆ" ಎಂದ. ಅದಕ್ಕೆ ಆತ ಒಪ್ಪಿಕೊಂಡ. 'ಮೊದಲ ಹಂತ ಅಂದ್ರೆ ಸತ್ಯ. ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳುವ ಸಂಗತಿ ಸತ್ಯ ಎಂಬುದು ನಿನಗೆ ಮನವರಿಕೆಯಾಗಿರಬೇಕು, ಆಯಿತಾ?' ಎಂದ ಸಾಕ್ರಟೀಸ್. ಅದಕ್ಕೆ ಸ್ನೇಹಿತ 'ಅದು ಸತ್ಯ ಹೌದೋ, ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ. ನನಗೆ ಯಾರೋ ಹೇಳಿದರು. ನಾನು ಅದನ್ನು ಕೇಳಿದೆ ಅಷ್ಟೆ' ಎಂದ. ಅವನ ಮಾತಿಗೆ ಸಾಕ್ರಟಿಸ್, 'ಹೌದಾ? ಆದರೆ ನೀನು ಹೇಳೋದು ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ ಅಂತಾಯಿತು. ಪರವಾಗಿಲ್ಲ ಬಿಡು. ಹಾಗಾದರೆ ಈಗ ಎರಡನೆ ಹಂತದ ಪರೀಕ್ಷೆ. ಇದು goodness ಪರೀಕ್ಷೆ. ಅಂದರೆ ನನ್ನ ಶಿಷ್ಯನ ಬಗ್ಗೆ ನೀನು ಹೇಳಲಿರುವ ಮಾತು ಒಳ್ಳೆಯದೋ, ಕೆಟ್ಟದ್ದೋ?' ಎಂದು ಕೇಳಿದ. ಅದಕ್ಕೆ ಸ್ನೇಹಿತ, 'ಇಲ್ಲ…ಇಲ್ಲ… ಅದು ಒಳ್ಳೆಯ ವಿಷಯವಲ್ಲ' ಎಂದ. &

ಹೊಸ ಇತಿಹಾಸ.! ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್'ಗೆ ರಿಯೋ ಒಲಿಂಪಿಕ್ಸ್ (೨೦೧೬)ನಲ್ಲಿ ಕಂಚಿನ ಪದಕ"

(ವರದಿ: ರವಿ ಎಸ್., ಸುವರ್ಣನ್ಯೂಸ್) ರಿಯೋ ಡೀ ಜನೈರೋ(ಆಗಸ್ಟ್ 18): ಒಂದೂಕಾಲು ಶತಕೋಟಿ ಜನರಿರುವ ಭಾರತಕ್ಕೆ ಈ ಬಾರಿಯ ಒಲಿಂಪಿಕ್ಸ್'ನಲ್ಲಿ ಕಡೆಗೂ ಪದಕ ಲಭಿಸಿತು. ಹರಿಯಾಣ ಪ್ರತಿಭಾನ್ವಿತ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. 58 ಕಿಲೋ ವಿಭಾಗದ ರಿಪಚೇಜ್ ಸ್ಪರ್ಧೆಯಲ್ಲಿ ಕಿರ್ಗಿಸ್ತಾನದ ಐಸುಲು ಟೈನಿಬೋಕೋವಾ ಅವರನ್ನು ಸಾಕ್ಷಿ 8-5 ಅಂಕಗಳಿಂದ ಸೋಲಿಸಿ ಕಂಚಿನ ಪದಕ ಜಯಿಸಿದರು. ಸಾಕ್ಷಿ ಮಲಿಕ್ ಕ್ವಾರ್ಟರ್'ಫೈನಲ್'ನಲ್ಲಿ ರಷ್ಯಾದ ವಲೆರಿಯಾ ಕೊಬ್ಲೊವಾ ವಿರುದ್ಧ ಸೋಲುಂಡಾಗ ಭಾರತೀಯರಿಗೆ ಅತೀವ ನಿರಾಶೆಯಾಗಿತ್ತು. ಆದರೆ ಅದೃಷ್ಟವೆಂಬಂತೆ ರಷ್ಯಾದ ಸ್ಪರ್ಧಿ ಫೈನಲ್ ಪ್ರವೇಶಿಸಿದ್ದರಿಂದ ಸಾಕ್ಷಿಗೆ ರಿಪೆಚೇಜ್ ಮೂಲಕ ಕಂಚಿನ ಪದಕ ಗೆಲ್ಲುವ ಅವಕಾಶ ಲಭಿಸಿತು. * ರಿಪಚೇಜ್ ಅಂದರೇನು?: ರಿಪೆಚೇಜ್ ಅಂದರೆ ಫೈನಲ್ ತಲುಪಿದ ಸ್ಪರ್ಧಿಗಳ ವಿರುದ್ಧ  ಸೋತವರ ನಡುವೆ ಈ ಪಂದ್ಯಗಳು ನಡೆಯುತ್ತವೆ. ಅವರಿಗೆ ಕನಿಷ್ಠ ಕಂಚಿನ ಪದಕ ಗೆಲ್ಲುವ ಅವಕಾಶ ಕಲ್ಪಿಸಲಾಗುತ್ತದೆ. ಅದಕ್ಕಾಗಿ ಅವರು ಆಡುವ ಎರಡು ಪಂದ್ಯದಲ್ಲಿ ಗೆಲ್ಲಬೇಕು. ಸುಶೀಲ್ ಕುಮಾರ್ ಬೀಜಿಂಗ್ ಒಲಿಂಪಿಕ್ಸ್'�ನಲ್ಲಿ ಇದೇ ರೀತಿ ರಿಪೆಚೇಜ್ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದರು. * ರೋಚಕ ಹಣಾಹಣಿ: ಮೊದಲ ರಿಪೆಚೇಜ್� ಪಂದ್ಯವಾಡಿದ ಸಾಕ್ಷಿ ಮಂಗೋಲಿಯಾದ  ಓರ್ಕಾನ್� ಪುರ್ವೆಡೊರ್ಜ್� ವಿರುದ್ಧ  ಸೆಣಸಿದ್ರ

Revised Time Table for Online Primary School Teachers Transfers:2016 dwnld...

http://schooleducation.kar.nic.in/pdffiles/Trans1617/PryTrsModGuidelines1617_170816.pdf

ಕನ್ನಡ ಇ-ಬುಕ್ ಗಳು ದೊರೆಯುವ ತಾಣಗಳ ಪಟ್ಟಿ :-

*ಡೈಲಿ ಹಂಟ್*  (Dailyhunt): ಖರೀದಿ ಮಾಡಿ  DailyHunt app ಮೂಲಕ ಓದಬಹುದು.ಫ್ಲಿಪ್ ಕಾರ್ಟ್ ಇ ಬುಕ್ಸ್:  *Flipkart ebook* App ಅಳವಡಿಸಿಕೊಂಡು ಓದಬಹುದು ಅಥವಾ ವೆಬ್ ಬ್ರೌಸರಲ್ಲಿ ಓದಬಹುದು. (No more available)ಪುಸ್ತಕ : (Pustaka) ಖರೀದಿಸಿ ಆನ್ ಲೈನ್ ಓದಬಹುದು ಮತ್ತು *pustaka android app* ಮೂಲಕ ಓದಬಹುದು.ಗೂಗಲ್ ಬುಕ್ಸ್:  Google Play store ಮೂಲಕ ಖರೀದಿಸಿ ಓದಬಹುದು. ಸ್ವಿಫ್ಟ್ ಬುಕ್ಸ್ (Swiftboox):  ಖರೀದಿಸಿ ಹಲವು ತಂತ್ರಾಂಶಗಳ ಮೂಲಕ ಓದಬಹುದು: ಪಟ್ಟಿ ಇಲ್ಲಿದೆ  (ಸದ್ಯಕ್ಕೆ ಇಲ್ಲಿ ಕನ್ನಡ ಪುಸ್ತಕಗಳಿಲ್ಲ)ಕ್ವಿಲ್ ಬುಕ್ಸ್  (Quillbooks.in): ಖರೀದಿಸಿ ಕ್ವಿಲ್ ಬುಕ್ಸ್ ತಂತ್ರಾಂಶದ ಮೂಲಕ ಆನ್ ಲೈನ್/ಆಫ್ ಲೈನ್ ಓದಬಹುದು.  ಇತ್ತೀಚಿನ/ಹೊಸಕಾಲದ ಪುಸ್ತಕಗಳಿವೆ. (ಈಗ ಈ ವೆಬ್ಸೈಟ್ ಇಲ್ಲ!)ನನ್ನ ಲೈಬ್ರರಿ (nannalibrary): ಬಾಡಿಗೆಗೆ ಪಡೆದು Meralibrary app ಮೂಲಕ ಓದಬಹುದು.ಇಶಾ ಶಾಪಿ (ishashoppe): ಪಿ ಡಿ ಎಫ್ ಮಾದರಿ ಪುಸ್ತಕಗಳು ಖರೀದಿಗಿವೆ.ರೀಡ್ ವೇರ್ (Readwhere): ಖರೀದಿ ಮಾಡಿ  Readwhere app ಮೂಲಕ ಓದಬಹುದು.ಸ್ಮ್ಯಾಶ್ ವರ್ಡ್ಸ್ (Smashwords): epub, mobi, ಮುಂತಾದ ಇಬುಕ್ format ಹಾಗೂ iOSಗೆ ಆಗುವಂತಹ ಕೆಲವು ಪುಸ್ತಕಗಳಿವೆ. ಖರೀದಿಸಿ ಓದಬಹುದು. ಕೈ ಬುಕ್ಸ್ (Kai Books): ಇದು ಒಂದು ಆಂಡ್ರಾಯ್ಡ್ ಕಿರುತಂತ್ರಾಂಶವಾಗಿದ್ದು ಇದರಲ್ಲಿ ಅನೇಕ ಪುಸ್ತಕಗಳನ್ನು ಉಚಿತವಾಗಿ/

ವಂದೇ ಮಾತರಂ ಪೂರ್ಣ ಸಾಹಿತ್ಯ :

ವಂದೇ ಮಾತರಂ || ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ || ವಂದೇ ಮಾತರಂ || ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ ಸುಹಾಸಿನೀಂ ಸುಮಧುರ ಭಾಷಿಣೀಂ ಸುಖದಾಂ ವರದಾಂ ಮಾತರಂ || ವಂದೇ ಮಾತರಂ || ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ ಕೋಟಿ ಕೋಟಿ ಭುಜೈರ್ಧೃತ ಖರಕರವಾಲೇ ಅಬಲಾ ಕೆನೋ ಮಾ ಎತೋ ಬಲೇ ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ || ವಂದೇ ಮಾತರಂ ||  ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದಿ ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕ್ತಿ ಹೃದಯೇ ತುಮಿ ಮಾ ಭಕ್ತಿ ತೋಮಾರ ಈ ಪ್ರತಿಮಾ ಗಡೀ ಮಂದಿರೇ ಮಂದಿರೇ || ವಂದೇ ಮಾತರಂ || ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀಂ ಕಮಲಾ ಕಮಲದಲ ವಿಹಾರಿಣೀಂ ವಾಣೀಂ ವಿದ್ಯಾದಾಯಿನೀ ನಮಾಮಿ ತ್ವಾಂ ನಮಾಮಿ ಕಮಲಾಂ ಅಮಲಾಂ ಅತುಲಾಂ ಸುಜಲಾಂ ಸುಫಲಾಂ ಮಾತರಂ || ವಂದೇ ಮಾತರಂ || ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ ಧರಣೀಂ ಭರಣೀಂ ಮಾತರಂ || ವಂದೇ ಮಾತರಂ || ಅರ್ಥ : ತಾಯೇ ವಂದಿಸುವೆ. ತಾಯಿ ಭಾರತಿ ಪವಿತ್ರವಾದ, ಶೀತಲವಾದ ಝರಿ - ತೊರೆಗಳಿಂದ ಒಳ್ಳೆಯ ಮಾಗಿದ ಫಲಗಳಿಂದ, ಗುಡ್ಡ - ಪರ್ವತಗಳಿಂದ, ಸಸ್ಯ - ಗಿಡ - ಮರಗಳಿಂದ ಶ್ಯಾಮಲೆಯಾಗಿ ಕಂಗೊಳಿಸುತ್ತಿದ್ದಾಳೆ. ಶ್ವೇತ ವಸ್ತ್ರಧಾರಿಯಾಗಿ, ಸುವಾಸನಾಭರಿತ ಹೂಗಳಿಂದ ಅಲಂಕೃತಳಾದ ನೀನು ಮಧುರವಾ

ಕ.ವಿ.ಪ್ರ.ನಿ.ನಿ ಕಿರಿಯ ಮಾರ್ಗದಾಳು(JUNIOR LINEMAN) 6010 ಹುದ್ದೆಗಳ ನೇಮಕಾತಿ ಪ್ರಕಟಣೆ

Image
ವಿದ್ಯಾರ್ಹತೆ:-ಎಸ್.ಎಸ್.ಎಲ್.ಸಿ KPTCL-350 BESCOM-2550 CHECOM-1705 HESCOM-1405 Total:- 6010 http://web5.kar.nic.in/jlm_hescom/

Application for NTSE 2016 & NMMS 2016 exam:

>NTSE application 2016: http://dsert.kar.nic.in/applications/16-17/NTSE_Application_2016.pdf >instruction for filling NTSE application: http://dsert.kar.nic.in/applications/16-17/NTSE-instruction.pdf >NMMS application 2016: http://dsert.kar.nic.in/applications/16-17/NMMS_Application-2016.pdf   >Instruction for filling NMMS application: http://dsert.kar.nic.in/applications/16-17/NMMS-Instruction.pdf

ಕರ್ನಾಟಕ ಮೂಲದ ಡಾ.ಮಾಧುರಿ ಆನಂದ್ ಅವರಿಗೆ ಗ್ರೇಟ್ ಬ್ರಿಟನ್ನ ಬ್ರಿಟಿಷ್ ವೈದ್ಯಕೀಯ ಅಸೋಸಿಯೇಷನ್ "ಅತ್ಯುತ್ತಮ ವೈದ್ಯಕೀಯ ಪ್ರಶಸ್ತಿ' ನೀಡಿ ಗೌರವಿಸಿದೆ.

ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕರ್ನಾಟಕ ಮೂಲದ ಡಾ.ಮಾಧುರಿ ಆನಂದ್ ಅವರಿಗೆ ಗ್ರೇಟ್ ಬ್ರಿಟನ್ನ ಬ್ರಿಟಿಷ್ ವೈದ್ಯಕೀಯ ಅಸೋಸಿಯೇಷನ್ "ಅತ್ಯುತ್ತಮ ವೈದ್ಯಕೀಯ ಪ್ರಶಸ್ತಿ' ನೀಡಿ ಗೌರವಿಸಿದೆ. ಬ್ರಿಟನ್ನಲ್ಲಿನ ಕರ¾ಥೆìನ್ನಲ್ಲಿರುವ ವೆಸ್ಟ್ವೆಲ್ಸ್ ಜನರಲ್ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮಾಧುರಿ ಆನಂದ್ ಅವರು ವೈದ್ಯಕೀಯ ಸೇವೆಯಲ್ಲಿ ಹಲವು ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಅವರ ಅತ್ಯುತ್ತಮ ಸೇವೆ ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಡಾ.ಮಾಧುರಿ ಆನಂದ್, ಕಳೆದ 12 ವರ್ಷಗಳಿಂದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ವೆಸ್ಟ್ ವೆಲ್ಸ್ ಜನರಲ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಯ ಸಹಕಾರದಿಂದ ಪ್ರಶಸ್ತಿಗೆ ಭಾಜನವಾಗಿದ್ದೇನೆ. ಪ್ರಶಸ್ತಿಯಿಂದ ಮತ್ತಷ್ಟು ಉತ್ತಮ ಸೇವೆ ಸಲ್ಲಿಸಲು ಉತ್ತೇಜನ ನೀಡಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನದಲ್ಲಿ ಮಾತೃಭೂಮಿ ಭಾರತಕ್ಕೆ ತೆರಳಿ ಇಲ್ಲಿನ ಜನರಿಗೆ ಸೇವೆ ಸಲ್ಲಿಸಲು ಆಸಕ್ತಿ ಹೊಂದಿದ್ದೇನೆ. ಬ್ರಿಟನ್ನಲ್ಲಿ ಪಡೆದ ಜ್ಞಾನ, ಸೇವೆಯ ಅನುಭವವನ್ನು ಬೆಂಗಳೂರಿಗೆ ಧಾರೆ ಎರೆಯುವ ಬಗ್ಗೆ ನಿರ್ಧರಿಸಿದ್ದ

☝🏽 "ಯಾದ ಕರೋ ಕುರಬಾನಿ" ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ 9/8/16ರಿಂದ 23/8/16 ರ ವರೆಗೆ "ಸ್ವಾತಂತ್ರ್ಯ ಪಾಕ್ಷಿಕ " ಆಚರಿಸಲು ಆದೇಶ

Image

Notification for Transfer Online Counselling for the year 2016-17 -

schooleducation.kar.nic.in/pdffiles/Trans1617/PryTrsTrans2016_Notification.pdf

🏼2016-17ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ / ತಾಲ್ಲೂಕು/ ಕ್ಲಸ್ಟರ್ ಕೇಂದ್ರಗಳಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಬಗ್ಗೆ.

  http://www.schooleducation.kar.nic.in/Secpdfs/circulars/Prathibhakaranji1617_290716.pdf

ಕೋಲಾರದ ಕರ್ಮಚಾರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ೨೦೧೬:-

Image
ನವದೆಹಲಿ, ಜುಲೈ, 27: ಕರ್ನಾಟಕದ ಒಬ್ಬರು ಸೇರಿದಂತೆ ಭಾರತದ ಇಬ್ಬರು ಸಾಧಕರಿಗೆ 2016ನೇ ಸಾಲಿನ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಸಂದಿದೆ. ಸಾಮಾಜಿಕ ಕಾರ್ಯಕರ್ತ ಕರ್ನಾಟಕದ ಬೇಜವಾಡಾ ವಿಲ್ಸನ್, ಸಂಗೀತ ಸಾಧಕ ಟಿ ಎಂ ಕೃಷ್ಣ ಗೌರವಕ್ಕೆ ಪಾತ್ರರಾಗಿದ್ದಾರೆ. ಕರ್ನಾಟದಕದ ಕೋಲಾರದ ಸಾಧಕ: ಬೇಜವಾಡಾ ವಿಲ್ಸನ್ ಕರ್ನಾಟಕದ ಕೋಲಾರದ ದಲಿತ ಕುಟುಂಬದಲ್ಲಿ 1966ರಲ್ಲಿ ಜನಿಸಿದವರು. ಸಫಾಯಿ ಕರ್ಮಚಾರಿಗಳ ಪರವಾಗಿ ಆಂದೋಲನದಲ್ಲಿ ತೊಡಗಿಕೊಂಡು ಅವರ ಹಕ್ಕುಗಳಿಗೆ ಹೋರಾಟ ಮಾಡುತ್ತ ಬಂದಿದ್ದಾರೆ. ಬೇಜವಾಡಾ ವಿಲ್ಸನ್ ಆಂಧ್ರಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರ ಮಾಡುಕೊಂಡ ವಿಲ್ಸನ್ ಇಡೀ ದೇಶಾದ್ಯಂತ ಸಫಾಯಿ ಕರ್ಮಚಾರಿಗಳ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಟಿಎಂ ಕೃಷ್ಣ ಅವರು ಚೆನ್ನೈಅನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡವರು. ಕರ್ನಾಟಕ ಸಂಗೀತದಲ್ಲಿ ಸಾಧನೆ ಮಾಡಿರುವ ಕೃಷ್ಣ ಅವರಿಗೂ ಗೌರವ ಸಂದಿದೆ. ವಿವಿಧ ವಿಶ್ವವಿದ್ಯಾಲಯಗಳಿಗೆ ತೆರಳುವ ಕೃಷ್ಣ ಸಂಗೀತ ಸಾಧನೆ ಬಗ್ಗೆ ಉಪನ್ಯಾಸ ನೀಡುತ್ತಾರೆ. ಮದ್ರಾಸ್ ಮ್ಯೂಸಿಕ್ ಸ್ಕೂಲ್ ಮೂಲಕ ನೂರಾರು ಜನರಿಗೆ ಸಂಗೀತ ತರಬೇತಿ ಹೇಳಿಕೊಡುತ್ತಿದ್ದಾರೆ. ಮ್ಯಾಗ್ಸೆಸೆ ಪಡೆದ ಇತರ ಕನ್ನಡಿಗರು : ಕರ್ನಾಟಕದ ಹರೀಶ್ ಹಂದೆ (2011), ಆರ್ ಕೆ ಲಕ್ಷ್ಮಣ (1984), ಕೆ ವಿ ಸುಬ್ಬಣ್ಣ (1991) ಅವರಿಗೂ ಮ್ಯಾಗ್ಸೆಸೆ

ನವೋದಯ ಶಾಲೆಗಳ ಆಯ್ಕೆಗೆ ಪ್ರವೇಶ ಪರೀಕ್ಷೆ-2017"

      * ಕೊನೆಯ ದಿನಾಂಕ: 16.09.2016. * ಪ್ರವೇಶ ಪರೀಕ್ಷೆ: 08.01.2017. * ನವೋದಯ ಪ್ರವೇಶ ಪರೀಕ್ಷೆ-2017 ರ 'PROSPECTUS' ಗಾಗಿ ಈ ಕೆಳಗಿನ 'ಲಿಂಕ್' CLICK ಮಾಡಿ. http://www.nvshq.org/uploads/1notice/JNVST_2017.pdf

Job News :ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ದಲ್ಲಿ ವಿವಿಧ ಹುದ್ದೆಗಳು ಭರ್ತಿ ಕುರಿತು

Image

ಬೆಳಗಾವಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 90 ಗ್ರಾಮ ಲೆಕ್ಕಿಗ ಹುದ್ದೆಗಳ ನೇಮಕಾತಿ ಅಧಿಸೂಚನೆ

Image
http://belgaum-va.kar.nic.in/helpMain.aspx

ನವೋದಯ ಶಾಲೆಗಳ ಆಯ್ಕೆಗೆ ಪ್ರವೇಶ ಪರೀಕ್ಷೆ-2017

* ಕೊನೆಯ ದಿನಾಂಕ: 16.09.2016. * ಪ್ರವೇಶ ಪರೀಕ್ಷೆ: 08.01.2017. * ನವೋದಯ ಪ್ರವೇಶ ಪರೀಕ್ಷೆ-2017 ರ 'PROSPECTUS' ಗಾಗಿ ಈ ಕೆಳಗಿನ 'ಲಿಂಕ್' CLICK ಮಾಡಿ. http://www.nvshq.org/uploads/1notice/JNVST_2017.pdf

ಕನ್ನಡ ಪದ್ಯಗಳ ತಿಜೋರಿ

[ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕನ್ನಡ ಪಠ್ಯಪುಸ್ತಕದಲ್ಲಿದ್ದ ಪದ್ಯಗಳ ಸಂಗ್ರಹ. ಇವೆಲ್ಲವೂ ಶ್ರೀವತ್ಸ ಜೋಶಿ ಫೇಸ್‌ಬುಕ್ ಪೋಸ್ಟುಗಳ ಲಿಂಕುಗಳು. ಫೇಸ್‌ಬುಕ್ ಎಕೌಂಟ್ ಇದ್ದವರಿಗೆ ಮಾತ್ರ (ಫ್ರೆಂಡ್ ಆಗಿರ್ಬೇಕು ಅಂತ ಇಲ್ಲ) ತೆರೆದುಕೊಳ್ಳುತ್ತವೆ.] 01. ಸೋಮೇಶ್ವರ ಶತಕದಿಂದಾಯ್ದ ಪದ್ಯಗಳು http://tinyurl.com/sjfbreqpost01 02. ಲೋಹಿತಾಶ್ವನ ಸಾವು http://tinyurl.com/sjfbreqpost02 03. ಸಂತೆಗೆ ಹೋದನು ಭೀಮಣ್ಣ... http://tinyurl.com/sjfbreqpost03 04. ಗಿಳಿಯ ಮರಿಯನು ತಂದು... http://tinyurl.com/sjfbreqpost04 05. ತಿರುಕನೋರ್ವನೂರ ಮುಂದೆ.... http://tinyurl.com/sjfbreqpost05 06. ಬಕಾಸುರ ವಧೆ http://tinyurl.com/sjfbreqpost06 07. ಸ್ತ್ರೀ ಎಂದರೆ ಅಷ್ಟೇ ಸಾಕೇ... http://tinyurl.com/sjfbreqpost07 08. ವಿದ್ಯುದಾಲಿಂಗನಕೆ ಸಿಕ್ಕಿ ಸತ್ತಿದೆ ಕಾಗೆ... http://tinyurl.com/sjfbreqpost08 09. ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ http://tinyurl.com/sjfbreqpost09 10. ಇವನೆ ನೋಡು ಅನ್ನದಾತ... http://tinyurl.com/sjfbreqpost10 11. ಸ್ವಾಮಿದೇವನೇ ಲೋಕಪಾಲನೇ http://tinyurl.com/sjfbreqpost11 12. ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ htt