Posts

ಬಡತನ ಮತ್ತು ಅಂಗವಿಕಲತೆ ನಡುವೆ ಶ್ರೀಮಂತ ಸಾಧನೆ(SSLC\PUC)

Image

ಕಣಜ » » ಕನ್ನಡ ಶಾಲಾ ಪಠ್ಯ ಪುಸ್ತಕಗಳು

* 1ರಿಂದ 10ನೇ ತರಗತಿ ವರೆಗಿನ ಪಠ್ಯ ಲಭ್ಯ * ಪಠ್ಯ ಪುಸ್ತಕ ವಿತರಣೆ ವಿಳಂಬ ಆದರೂ ಪಾಠಕ್ಕಿಲ್ಲ ತೊಂದರೆ * ವೆಬ್ಸೈಟ್ನಿಂದ ಪಠ್ಯ ಡೌನ್ಲೋಡ್ ಮಾಡಿಕೊಳ್ಳಬಹುದು * ಪ್ರೊಜೆಕ್ಟರ್ ಬಳಸಿ ಶಿಕ್ಷಕರು ಪಾಠ ಮಾಡಲು ಅವಕಾಶ ಬಿ.ಎಸ್.ಜಯಪ್ರಕಾಶ್ ನಾರಾಯಣ ಬೆಂಗಳೂರು ಶಾಲೆ ಆರಂಭವಾಗಿ ತಿಂಗಳುಗಳೇ ಉರುಳಿದರೂ ಪುಸ್ತಕ ಬಂದಿಲ್ಲ ಎಂಬ ಗೊಣಗಾಟ ಇನ್ನು ಮಕ್ಕಳಿಗಿಲ್ಲ. ಯಾಕೆಂದರೆ ಶಾಲೆಗಳ ಅರಂಭದಿಂದಲೇ 1 ರಿಂದ 10 ನೇ ತರಗತಿವರೆಗಿನ ಪಠ್ಯ ಪುಸ್ತಕಗಳ 'ಕಣಜ' ಕಂಪ್ಯೂಟರ್ ಪರದೆ ಮೇಲೆಯೇ ಮೂಡಲಿದೆ. ಹೌದು!. ಟೆಂಡರ್, ಮುದ್ರಣ ವಿಳಂಬ ಮುಂತಾದ ಸಬೂಬುಗಳಿಂದ ಪ್ರತೀ ವರ್ಷ ವಿದ್ಯಾರ್ಥಿಗಳಿಗೆ ತೊಂದರೆ ತಪ್ಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಸರಕಾರ ಪೂರೈಸುವ ಪಠ್ಯ ಪುಸ್ತಕಗಳನ್ನು ಇಲಾಖೆ ನಡೆಸುತ್ತಿರುವ ಮಾಹಿತಿ ಕೋಶ 'ಕಣಜ'ದಲ್ಲಿ (ಘ್ಕಿಡಿಡಿಡಿ.ka್ಞa್ಜa.್ಚಟಞ) ಸೇರಿಸಲಿದೆ. ಕಳೆದ ಕೆಲವು ದಿನಗಳಿಂದ ಪ್ರಾಯೋಗಿಕ ಹಂತದಲ್ಲಿದ್ದ ಈ ಯೋಜನೆ ಮೇ 26ರಿಂದ (ಗುರುವಾರ) ವಿಧ್ಯುಕ್ತವಾಗಿ 'ಕಣಜ'ವನ್ನು ಸೇರಲಿದ್ದು, ಶಾಲೆ ಪುನಾರಂಭವಾಗುತ್ತಿದ್ದಂತೆ, ಸರಕಾರಿ ಶಾಲೆ ಶಿಕ್ಷಕರು ಕುಂಟು ನೆಪ ಹೇಳದೆ ಕಣಜದಿಂದ ಪಠ್ಯ ಡೌನ್ ಲೋಡ್ ಮಾಡಿಕೊಂಡು ಪಾಠ ಆರಂಭಿಸಬಹುದು.ಸರಕಾರವು ಬಹಳ ಹಿಂದಿನಿಂದಲೂ ತನ್ನ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾ

ಬಾಳೆ ಹಣ್ಣು ಮಾರುವಾತನ ಮಗಳು ಅನಿತಾ ಬಸಪ್ಪ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್

Image
Navigat  Suvarna News: ಕಡುಬಡತನದಲ್ಲಿ ಹುಟ್ಟಿ ಬೆಳೆದ ಅನಿತಾ ಬಸಪ್ಪ ಕಲಾ ವಿಭಾಗದಲ್ಲಿ 585 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಟ್ಯೂಷನ್'ಗೆ ಹೋಗಿ ಅತಿ ಹೆಚ್ಚು ಅಂಕ ಪಡೆಯುವುದು ದೊಡ್ಡ ಸಾಧನೆಯೇನಲ್ಲ. ಆದರೆ ತನ್ನ ಸ್ವಂತ ಪರಿಶ್ರಮದಿಂದಲೇ ಓದಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ಅನಿತಾ ಬಸಪ್ಪ ಸಾಧನೆ ಎಂಥವರಲ್ಲೂ ಸ್ಪೂರ್ತಿ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ. ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಎದ್ದು ತನ್ನ ತಾಯಿಯ ದಿನನಿತ್ಯದ ಕೆಲಸಗಳಿಗೆ ನೆರವಾಗುತ್ತಿದ್ದ ಅನಿತಾ ಇಂದು ಎಲ್ಲರು ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾಳೆ. ಈ ಕುರಿತಂತೆ ಸುವರ್ಣ ನ್ಯೂಸ್-ಕನ್ನಡ ಪ್ರಭದೊಂದಿಗೆ ತನ್ನ ಸಂತೊಷವನ್ನು ಹಂಚಿಕೊಂಡಿದ್ದಾಳೆ. ನಾನು   ಇಡೀ   ರಾಜ್ಯಕ್ಕೆ   ಕಲಾ   ವಿಭಾಗದಲ್ಲಿ   ಟಾಪರ್ ಆಗಿರುವ   ವಿಷಯ   ತಿಳಿದು   ಖುಷಿ   ಆಗ್ತಾ   ಇದೆ .  ಹೆಚ್ಚು ಅಂಕ   ಬರುತ್ತೆ   ಎಂದು   ಅಂದುಕೊಂಡಿದ್ದೆ   ಆದರೆ ರಾಜ್ಯಕ್ಕೆ   ಮೊದಲು   ಬರುತ್ತೇನೆಂದು   ನಿರೀಕ್ಷಿಸಿರಲಿಲ್ಲ . ನನ್ನ   ಅಣ್ಣ   ನನಗೆ   ತುಂಬಾ   ಓದೋಕೆ   ತುಂಬಾ   ಹೆಲ್ಪ್ ಮಾಡ್ತಾ   ಇದ್ದ .  ಕೆಎಎಸ್   ಪರೀಕ್ಷೆ   ಪಾಸ್   ಮಾಡಿ ತಹಶೀಲ್ದಾರ್   ಆಗಬೇಕೆಂದಿದ್ದೇನೆ   ಎಂದು   ಅನಿತಾ ಬಸಪ್ಪ   ತನ್ನ   ಮುಂದಿನ   ಗುರಿಯನ್ನು   ನಮ್ಮೊಂದಿಗೆ ಹಂಚಿಕೊಂಡಿದ್ದಾಳೆ . ದಿನನಿತ್ಯ   ಗುರುಗಳು   ಮಾಡಿದ   ಪಾಠವನ್ನು ಮನೆಯಲ

ಪಿಯು ಫಲಿತಾಂಶ ಪ್ರಕಟ; ಬಾಳೆಹಣ್ಣು ವ್ಯಾಪಾರಿ ಮಗಳು ರಾಜ್ಯಕ್ಕೆ ಟಾಪರ್

Image
ಉದಯವಾಣಿ, May 25, 2016, 10:40 AM IST ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ, ಉಡುಪಿ ದ್ವಿತೀಯ, ಕೊಡಗು ತೃತೀಯ ಹಾಗೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ. 91 ಕಾಲೇಜುಗಳು ಶೂನ್ಯ ಫಲಿತಾಂಶ ಬಂದಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 11 ಗಂಟೆ ವೇಳೆಗೆ ಸರ್ಕಾರದ ಎರಡು ವೆಬ್ಸೈಟ್ಗಳಲ್ಲಿ ಫಲಿತಾಂಶ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಗುರುವಾರ ಆಯಾ ಪಿಯು ಕಾಲೇಜುಗಳಲ್ಲಿ ಫಲಿತಾಂಶ ದೊರೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇ.90.48ರಷ್ಟು ವಿದ್ಯಾರ್ಥಿಗಳು ತೇರ್ಗಡೆ, ಉಡುಪಿ ಜಿಲ್ಲೆಯಲ್ಲಿ ಶೇ.90.35ರಷ್ಟು ವಿದ್ಯಾರ್ಥಿಗಳು ಪಾಸ್. ಕೊಡಗು ಜಿಲ್ಲೆಯಲ್ಲಿ ಶೇ.79.35ರಷ್ಟು ವಿದ್ಯಾರ್ಥಿಗಳು ಪಾಸ್. ಯಾದಗಿರಿ ಜಿಲ್ಲೆಯಲ್ಲಿ ಶೇ.44.16ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.60.54ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು. ಪ್ರಸಕ್ತ ವರ್ಷ 57.28ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶಕ್ಕೆ ಈ ವೆಬ್ ಸೈಟ್ ನೋಡಿ: ಸರ್ಕಾರದ www.karresults.nic.in ಮತ್ತು www.puc.kar.nic.in ವೆಬ್ಸೈಟ್ಗಳಲ್ಲಿ ಫಲಿತಾಂಶ ಬಾಳೆಹಣ್ಣ

ಪಿಯುಸಿ ಫಲಿತಾಂಶ ೨೦೧೬ ಮೇ 25ಕ್ಕೆ ಜಾಲತಾಣಗಳಲ್ಲಿ, ಮೇ 26ಕ್ಕೆ ಕಾಲೇಜುಗಳಲ್ಲಿ

ಬೆಂಗಳೂರು: ಕಳೆದ ಮಾರ್ಚ್ ತಿಂಗಳಲ್ಲಿ ನಡೆಸಲಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇದೇ ಬುಧವಾರ ಪ್ರಕಟಗೊಳ್ಳಲಿದೆ. ಆಯಾ ಪದವಿ ಪೂರ್ವ ಕಾಲೇಜುಗಳಲ್ಲಿ ಮೇ 26ರಂದು ಫಲಿತಾಂಶ ಲಭ್ಯವಾಗಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಫಲಿತಾಂಶ ದಿನಾಂಕವನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿದ ಇಲಾಖೆ ನಿರ್ದೇಶಕ ಡಾ.ರಾಮೇಗೌಡ, ಮೇ 25ರಂದು ಬೆಳಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು, ಮಧ್ಯಾಹ್ನ 12 ಗಂಟೆ ನಂತರ ಜಾಲತಾಣಗಳಲ್ಲಿ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು www.karresults.nic.in ಮತ್ತು www.puc.kar.nic.in ನಲ್ಲಿ ನೋಡಬಹುದು. ಈ ವರ್ಷ ಮೊದಲ ಬಾರಿಗೆ, ಇಲಾಖೆ ಉತ್ತರ ಪತ್ರಿಕೆಗಳನ್ನು ಅಂಚೆ ಮೂಲಕ ಕಳುಹಿಸುವ ಬದಲು ಆನ್ ಲೈನ್ ನಲ್ಲಿ ಜೆರಾಕ್ಸ್ ಪ್ರತಿಯನ್ನು ಪ್ರಕಟಿಸಲಿದೆ. ಇದೇ ಸಂದರ್ಭದಲ್ಲಿ ಖಾಸಗಿ ವೆಬ್ ಸೈಟ್ ಗಳು ಫಲಿತಾಂಶ ಪ್ರಕಟಿಸುವುದನ್ನು ಕೂಡ ಇಲಾಖೆ ನಿಷೇಧಿಸಿದೆ.

ಸ್ನೂಕರ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಪಂಕಜ್

Image
ಮುಂಬೈ, ಮೇ ೨೩- ಭಾರತದ ಖ್ಯಾತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಪಟು ಪಂಕಜ್ ಆಡ್ವಾಣಿ ಅಬುಧಾಬಿಯಲ್ಲಿ ನಡೆದ ಏಷ್ಯನ್ 6- ರೆಡ್ ಸ್ನೂಕರ್ ಪ್ರಶಸ್ತಿಯನ್ನು ಗೆದ್ದುಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಒಂದೇ ಋತುವಿನಲ್ಲಿ ವಿಶ್ವ ಮತ್ತು ಏಷ್ಯಾ ಖಂಡ ಪ್ರಶಸ್ತಿಗೆ ಭಾಜನರಾದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ರಾತ್ರಿ ನಡೆದ ಕಾದಾಟದಲ್ಲಿ ಅಗ್ರ ಸೀಡ್ ಆಟಗಾರ ಮಲೇಷ್ಯಾದ ಕೀನ್ ಹಾಹ್ಹ್ ಅವರನ್ನು 7-5 ಅಂತರದಲ್ಲಿ ಮಣಿಸಿ ಈ ಸಾಧನೆ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂಕಜ್ ಆಡ್ವಾಣಿ, 'ಇದು ನನ್ನ ಮೊದಲ ಏಷ್ಯನ್ ಸ್ನೂಕರ್ ಚಾಂಪಿಯನ್ ಶಿಪ್. ಹೀಗಾಗಿ ಸಹಜವಾಗಿಯೇ ಖುಷಿ ಕೊಟ್ಟಿದೆ. ಕಳೆದ ತಿಂಗಳಲ್ಲಿ 15-ರೆಡ್ ಏಷ್ಯನ್ ಸ್ನೂಕರ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಒಂದೇ ವರ್ಷದಲ್ಲಿ 6-ರೆಡ್ ವಿಶ್ವ ಮತ್ತು ಏಷ್ಯನ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರುವುದು ಸಂತಸ ತಂದಿದೆ ಎಂದಿದ್ದಾರೆ. ಪಂಕಜ್ ಆಡ್ವಾಣಿ ಟೀಮ್ ಈವೆಂಟ್ನಲ್ಲಿ ಆದಿತ್ಯಾ ಮೆಹ್ತಾ, ಮನನ್ ಚಂದ್ರ ಮತ್ತು ಕಮಲ್ ಚಾವ್ಲ ಜತೆಗೂಡಿ ಆಡಲಿದ್ದಾರೆ.

ಹೆಂಡ ಇಳಿಸುವವನ ಮಗ ಈಗ ಕೇರಳ ಸಿಎಂ

Image
ಉದಯವಾಣಿ, May 21, 2016, 3:30 AM IST ತಿರುವನಂತಪುರ: ಕೇರಳ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಪಿಣರಾಯಿ ವಿಜಯನ್ ಹೆಂಡ ಇಳಿಸುವ ವೃತ್ತಿಯಲ್ಲಿ ತೊಡಗಿದ್ದ ಬಡ ಕುಟುಂಬಕ್ಕೆ ಸೇರಿದವರು. ಕರ್ನಾಟಕಕ್ಕೆ ಸಮೀಪದ ಕಣ್ಣೂರು ಜಿಲ್ಲೆಯವರು. ಪ್ರಭಾವಿಯಾಗಿರುವ ಈಳವ ಸಮುದಾಯದವರು. ಅತ್ಯುತ್ತಮ ಸಂಘಟಕ ಎಂಬ ಕೀರ್ತಿಯನ್ನು ಕೇರಳದಲ್ಲಿ ಗಳಿಸಿದ್ದಾರೆ. ಸದ್ಯ ಸಿಪಿಎಂ ಪಾಲಿಟ್ಬ್ಯೂರೋ ಸದಸ್ಯರಾಗಿರುವ ಪಿಣರಾಯಿ, 16 ವರ್ಷ ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿಯಾಗಿದ್ದರು. ಹೆಚ್ಚು ಮಾತನಾಡುವುದಿಲ್ಲ. ಪಿಣರಾಯಿ ನಗುವುದೂ ಇಲ್ಲ ಎಂದು ಅವರ ವಿರೋಧಿಗಳು ಗೇಲಿ ಮಾಡುತ್ತಾರೆ. 1996-98ರವರೆಗೆ ಇಂಧನ ಸಚಿವರಾಗಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದ್ದರೂ, ಕೆನಡಾ ಕಂಪನಿ ಎಸ್ಎನ್ಸಿ- ಲಾವಲಿನ್ಗೆ ಜಲವಿದ್ಯುತ್ ಘಟಕಗಳ ಆಧುನೀಕರಣ ಗುತ್ತಿಗೆ ನೀಡುವಾಗ ಭ್ರಷ್ಟಾಚಾರ ನಡೆಸಿದ ಆರೋಪ ಅವರನ್ನು ಕಾಡುತ್ತಿದೆ. ಅಚ್ಚುತಾನಂದನ್ ಗರಡಿಯಲ್ಲೇ ಪಳಗಿದ್ದರೂ, ಅವರ ಬದ್ಧ ವೈರಿಯಾಗಿ ಪರಿವರ್ತನೆಗೊಂಡಿದ್ದಾರೆ. ಸಾರ್ವಜನಿಕ ನಿಂದನೆ ಹಿನ್ನೆಲೆಯಲ್ಲಿ 2007ರಲ್ಲಿ ಪಿಣರಾಯಿ ಹಾಗೂ ಅಚ್ಚುತಾನಂದನ್ ಅವರನ್ನು ಪಾಲಿಟ್ ಬ್ಯೂರೋದಿಂದಲೇ ಅಮಾನತುಗೊಳಿಸಲಾಗಿತ್ತು. ಬಳಿಕ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. 1970ರಲ್ಲಿ 26ನೇ ವಯಸ್ಸಿಗೇ ಶಾಸಕರಾಗಿ ಆಯ್ಕೆಯಾಗಿದ್ದ ಪಿಣರಾಯಿ 1977, 1991, 1996ರಲ್ಲೂ ಗೆ

೧೦ನೇ ತರಗತಿ ಯಲ್ಲಿ ೯೦% ಅಂಕ ಪಡೆದ ವಿದ್ಯಾರ್ಥಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

Image

- ಮೇ 25ರಂದು ಪಿಯುಸಿ ಫಲಿತಾಂಶ.

Image
Public TV - ಮೇ 25ರಂದು ಪಿಯುಸಿ ಫಲಿತಾಂಶ. - ಈ ಬಾರಿ ಉತ್ತರ ಪತ್ರಿಕೆ ಸ್ಕ್ಯಾನ್ ಕಾಪಿ ಕೊಡುವ ಉದ್ದೇಶವಿದೆ - ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ - ಇದು ಅಂತಿಮವಾದ ತಕ್ಷಣ ಫಲಿತಾಂಶ ಪ್ರಕಟಿಸುತ್ತೇವೆ - 25ರಂದು ಫಲಿತಾಂಶ ಪ್ರಕಟಿಸಲು ಇಲಾಖೆ ಸಜ್ಜಾಗಿದೆ - ಭದ್ರಾವತಿಯಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿಕೆ http://www.karresults.nic.in

KPSC_FDA_DOCUMENT_ VERIFICATION_date_announced . 25/05/2016 ರಿಂದ 04/06/2016 ರವರೆಗೆ ...

http://kpsc.kar.nic.in/document%20verification%20for%20fda.htm

ಕೊರಿಯಾದ ಹಾನ್ ಕಾಂಗ್ ಗ ೨೦೧೬ರೆ ‘ಬುಕರ್’ ಪ್ರಶಸ್ತಿ"

Image
18 May, 2016 ಲಂಡನ್ (ಪಿಟಿಐ): ದಕ್ಷಿಣ ಕೊರಿಯಾದ ಬರಹಗಾರ್ತಿ ಹಾನ್ ಕಾಂಗ್ (45) ಅವರು ಈ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾನವನ ಕ್ರೌರ್ಯದೆಡೆಗಿನ ಮಹಿಳೆಯ ತಿರಸ್ಕಾರ ಮತ್ತು ಮಾಂಸಾಹಾರವನ್ನು ತ್ಯಜಿಸುವುದರ ಕುರಿತಾದ ಅವರ 'ದಿ ವೆಜಿಟೇರಿಯನ್' ಕೃತಿಗೆ ಈ ಗೌರವ ಲಭಿಸಿದೆ. ನೊಬೆಲ್ ಪುರಸ್ಕೃತ ಒರ್ಹಾನ್ ಪಾಮುಕ್ ಮತ್ತು ಅಂತರರಾಷ್ಟ್ರೀಯ ಖ್ಯಾತಿ ಗಳಿಸಿರುವ ಎಲೆನಾ ಫೆರಂಟೆ ಅವರನ್ನು ಹಿಂದಿಕ್ಕಿ ಕಾಂಗ್ ಈ ಪ್ರಶಸ್ತಿ ಪಡೆದಿದ್ದಾರೆ. ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ 50 ಸಾವಿರ ಪೌಂಡ್ (₹48.38 ಲಕ್ಷ) ಮೊತ್ತದ ಬಹುಮಾನದ ಹಣವನ್ನು ಅವರು ಅನುವಾದಕಿ ಡೆಬೊರಾ ಸ್ಮಿತ್ ಅವರೊಂದಿಗೆ ಹಂಚಿಕೊಂಡರು. ವಿಮರ್ಶಕ, ಸಂಪಾದಕ ಬಾಯ್ಡ್ ಟಾಂಕಿನ್ ಅವರು ಅಧ್ಯಕ್ಷರಾಗಿರುವ, ಐವರು ತೀರ್ಪುಗಾರರ ಸಮಿತಿಯು ಅಂತಿಮ ಸುತ್ತಿನಲ್ಲಿದ್ದ 155 ಕೃತಿಗಳ ಪೈಕಿ 'ದಿ ವೆಜಿಟೇರಿಯನ್' ಕೃತಿಯನ್ನು ಅವಿರೋಧವಾಗಿ ಆಯ್ಕೆ ಮಾಡಿತು. ಸೋಲ್ನ ಕಲಾ ಸಂಸ್ಥೆಯಲ್ಲಿ ಸೃಜನಶೀಲ ಬರವಣಿಗೆ ಪ್ರಕಾರವನ್ನು ಬೋಧಿಸುತ್ತಿರುವ ಕಾಂಗ್ ಅವರು, ದಕ್ಷಿಣ ಕೊರಿಯಾದ ಪ್ರತಿಷ್ಠಿತ ಯಿ ಸಾಂಗ್ ಸಾಹಿತ್ಯಿಕ ಪ್ರಶಸ್ತಿ, ಯಂಗ್ ಆರ್ಟಿಸ್ಟ್ ಪ್ರಶಸ್ತಿ ಮತ್ತು ಕೊರಿಯನ್ ಸಾಹಿತ್ಯ ಕಾದಂಬರಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಸಂಪ್ರದಾಯ ಧಿಕ್ಕರಿಸು

ಪೃಥ್ವಿ -2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಹೊಸದಿಲ್ಲಿ: ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಹಾಗೂ ನೆಲದಿಂದ-ನೆಲಕ್ಕೆ ಚಿಮ್ಮುವ ಕಡಿಮೆ ಅಂತರದ 'ಪೃಥ್ವಿ-2' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ಬುಧವಾರ ಒಡಿಶಾದ ಚಾಂಡಿಪುರದಲ್ಲಿ ನಡೆಯಿತು. 2003ರಲ್ಲೇ ಭಾರತದ ಸೇನೆ ಸೇರಿರುವ ಪೃಥ್ವಿ -2 ಅನ್ನು ಡಿಆರ್ಡಿಒ ಅಭಿವೃದ್ಧಿ ಪಡಿಸಿತ್ತು. 2 ಇಂಜಿನ್ಗಳನ್ನು ಹೊಂದಿರುವ 'ಪೃಥ್ವಿ-2' ಕ್ಷಿಪಣಿ 8.56 ಮೀಟರ್ ಉದ್ದ ಇದ್ದು, 1.1 ಮೀಟರ್ ಸುತ್ತಳತೆ ಹೊಂದಿದೆ. 4,600 ಕೆ.ಜಿ. ತೂಕವಿದ್ದು, 500 ರಿಂದ 1000 ಕೆ.ಜಿ. ಸ್ಫೋಟಕಗಳನ್ನು ಹೊತ್ತು 350 ಕಿ.ಮೀ. ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಜತೆಗೆ ವೈರಿ ಪಡೆಯ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿಯು ಗರಿಷ್ಠ 43.5 ಕಿ.ಮಿ. ಎತ್ತರದಲ್ಲಿ 483 ಸೆಕೆಂಡ್ಗಳ ವರೆಗೆ ಹಾರಾಟ ನಡೆಸಿ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಪೃಥ್ವಿ-2 ಕ್ಷಿಪಣಿ ಘನ ಮತ್ತು ದ್ರವ ಇಂಧನ ಗಳನ್ನು ಬಳಕೆ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತದೆ. ಈ ಕ್ಷಿಪಣಿಯು ಸ್ಫೋಟಕಗಳನ್ನು ಮತ್ತು ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಬನಹಟ್ಟಿಯ ತರಕಾರಿ ಮಾರುವ ಹುಡುಗಿಗೆ ಶೇ . 96 . 64 ಅಂಕ

Image
ಬನಹಟ್ಟಿ : ಮನೆಯಲ್ಲಿ ಕಿತ್ತು ತಿನ್ನುವ ಬಡತನ . ತಂದೆ ನಿಧನರಾಗಿ 10 ವರ್ಷಗಳೇ ಕಳೆದಿವೆ . ತಾಯಿ ಸಂತೆಯಲ್ಲಿ ತರಕಾರಿ ಮಾರುತ್ತ ಅಷ್ಟೋ - ಇಷ್ಟೋ ಬಂದ ದುಡ್ಡಿನಲ್ಲಿ ತನ್ನ ಮಗಳ ವಿದ್ಯಾಭ್ಯಾಸದ ವೆಚ್ಚ ತೂಗಿಸುತ್ತಿದ್ದರೆ , ತಾಯಿಯೊಂದಿಗೆ ತರಕಾರಿ ಮಾರುತ್ತ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಳು . 604 ಅಂಕಗಳೊಂದಿಗೆ ಶೇ . 96 . 64 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮೆರೆದಳು ಇದು ಬನಹಟ್ಟಿಯ ಎಸ್ಆರ್ಎ ಪ್ರೌಢಶಾಲೆಯ ವಿದ್ಯಾರ್ಥಿನಿ ಸೌಮ್ಯ ಮುರಿಗೆಪ್ಪ ಸಗರಿಯ ಸಾಹಸಗಾಥೆ . ಬನಹಟ್ಟಿಯ ಎಸ್ಆರ್ಎ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಸೌಮ್ಯ , ಶಾಲೆಗೆ ಬರಬೇಕಾದರೆ ಮೊದಲು ತಾಯಿಯೊಂದಿಗೆ ತರಕಾರಿ ವ್ಯಾಪಾರ ಮಾಡಲೇಬೇಕು . ನಂತರ ಶಿಕ್ಷಣ. ಹೀಗಿದ್ದರೂ ಶಿಕ್ಷಣವನ್ನು ಶ್ರದ್ಧೆಯಿಂದ ಕಲಿತು ಯಾರಿಗೂ ಕಡಿಮೆಯಿಲ್ಲವೆಂಬಂತೆ ಮಹತ್ವದ ಸಾಧನೆ ಮಾಡಿ ಎಸ್ಆರ್ಎ ಪ್ರೌಢಶಾಲೆಗೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ . ಕನ್ನಡದಲ್ಲಿ 124, ಗಣಿತ 98 , ಹಿಂದಿ 97 , ವಿಜ್ಞಾನ, ಸಾಮಾನ್ಯ ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ತಲಾ 95 ಅಂಕ ಪಡೆದಿರುವ ಸೌಮ್ಯಾ, ಮುಂದೆ ವೈದ್ಯೆ ಆಗುವ ಕನಸು ಹೊಂದಿದ್ದಾಳೆ . ಮುಂದಿನ ಶಿಕ್ಷಣಕ್ಕೆ ಇವರ ಕುಟುಂಬಕ್ಕೆ ಬಡತನವೆಂಬುದು ಕಂಟಕವಾಗಿದೆ . ಆದರೂ ಇವಳ ತಾಯಿ ಸಾಧ್ಯವಾದಷ್ಟು ದುಡಿದು ಶಿಕ್ಷಣ ಒದಗಿಸುವುದಾಗಿ ಹುಮ್ಮಸ್ಸಿನಿಂದ ಹೇಳುತ್ತಾರೆ

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ; ತಿಥಿ ಅತ್ಯುತ್ತಮ ಚಿತ್ರ

ಉದಯವಾಣಿ, May 17, 2016, 4:54 PM IST ಬೆಂಗಳೂರು : 2015 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದ್ದು , ಕನ್ನಡದ ತಿಥಿ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ , ದ್ವಿತೀಯ ಅತ್ಯುತ್ತಮ ಚಿತ್ರ " ಮಾರಿಕೊಂಡವರು" . ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಮೈತ್ರಿ , ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಕೃಷ್ಣಲೀಲಾಕ್ಕೆ ಲಭಿಸಿದೆ. ಮನೆ ಮೊದಲ ಪಾಠ ಶಾಲೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ . ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಸಚಿವ ರೋಶನ್ ಬೇಗ್ ಪ್ರಶಸ್ತಿಯ ವಿವರ ಪ್ರಕಟಿಸಿದರು . ಅನುಪ್ ಭಂಡಾರಿ ಅವರ ರಂಗಿತರಂಗ ಚೊಚ್ಚಲ ನಿರ್ದೆಶನದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ . ಅತ್ಯುತ್ತಮ ನಿರ್ದೇಶಕ ಅನೂಪ್ ಭಂಡಾರಿ ( ರಂಗಿತರಂಗ ) , ಅತ್ಯುತ್ತಮ ನಾಯಕ ನಟ ವಿಜಯ್ ರಾಘವೇಂದ್ರ ( ಶಿವಯೋಗಿ ಪುಟ್ಟಯ್ಯಜ್ಜ ), ಅತ್ಯುತ್ತಮ ನಟಿ ಮಾಲಾಶ್ರೀ ( ಗಂಗಾ ) , ಅತ್ಯುತ್ತಮ ಸಂಭಾಷಣೆ ಈರೇಗೌಡ (ತಿಥಿ ), ಅತ್ಯುತ್ತಮ ಪೋಷಕ ನಟ ರಮೇಶ್ , ಭಟ್ ( ಮನಮಂಥನ ). ಅತ್ಯುತ್ತಮ ಛಾಯಾಗ್ರಹಣ ಅನಂತ್ ಅರಸು( ಲಾಸ್ಟ್ ಬಸ್ ) , ಅತ್ಯುತ್ತಮ ಹಿನ್ನೆಲೆ ಗಾಯಕ ಸಂತೋಷ್ ವೆಂಕಿ , ಅತ್ಯುತ್ತಮ ಸಂಕಲನ ಸೃಜತ್ ನಾಯಕ್ , ಅತ್ಯುತ್ತಮ ಬಾಲನಟಿ ಮೇವಿಷ್, ಅತ್ಯುತ್ತಮ ಗೀ

ಎಸ್ ಎಸ್ ಎಲ್ ಸಿ ಫಲಿತಾಂಶ; ಬೆಂಗಳೂರು ಗ್ರಾಮಾಂತರ ಪ್ರಥಮ

ಬೆಂಗಳೂರು: ಬಹು ನಿರೀಕ್ಷಿತ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿದ್ದರೆ, ಉಡುಪಿ ಹಾಗೂ ಮಂಗಳೂರು ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿದೆ. ರಾಜ್ಯದ 3,082 ಪರೀಕ್ಷಾ ಕೇಂದ್ರಗಳಲ್ಲಿ ಕಳೆದ ಮಾರ್ಚ್- ಏಪ್ರಿಲ್'ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ರಾಜ್ಯದ ಒಟ್ಟು 13,993 ಶಾಲೆಗಳಲ್ಲಿ 8,49,233 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 617235 ಪಾಸಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಪೂರ್ಣ ಪ್ರಜ್ಞಾ ಶಾಲೆಯ ರಂಜನ್ ಕುಮಾರ್ 625/625 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ, ಹೋಲಿ ಚೈಲ್ಡ್ ಸ್ಕೂಲ್ ವಿದ್ಯಾರ್ಥಿನಿ ಸುಪ್ರೀತಾ 624/625, ಹಾಗೂ ಮೈಸೂರಿನ ಮರಿಮಲ್ಲಪ್ಪ ಶಾಲೆಯ ಈಶು 624/625 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಸ್ವಾತಿ ಎಂ ಬೆಂಗಳೂರು ಗ್ರಾಮಂತರ ರಾಜಾಜಿನಗರ ಶ್ರೀವಾಣಿ ಬಾಲಕೀಯರ ಪ್ರೌಡಶಾಲಾ ವಿದ್ಯಾರ್ಥಿನಿ 98.56% (616/625) ಪಡೆದಿದ್ದಾರೆ. ಈ ಬಾರಿ ಬೆಂಗಳೂರು ಗ್ರಾಮಾಂತರ 89.63 % ಫಲಿತಾಂಶ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡರೆ, ಉಡುಪಿ ಜಿಲ್ಲೆಗೆ 89.52% ಮಂಗಳೂರು 88.01% ಹಾಗೂ ಬಳ್ಳಾರಿ ಕೊನೇ ಸ್ಥಾನ 56.68% ಪಡೆದುಕೊಂಡಿದೆ. ರಾಜ್ಯದಲ್ಲಿ ಒಟ್ಟಾರೆ 79.16% ಫಲಿತಾಂಶ ಬಂದಿದ್ದು ಕಳೆದ ವರುಷಕ್ಕಿಂತ 2% ಕಡಿಮೆ ಬಂದಿದೆ. ಸರಕಾರಿ ಶಾಲೆಗಳ

ಬೆಂಗಳೂರು ನಗರ ರೈಲ್ವೆ ನಿಲ್ದಾಣ ಇನ್ನು ಮುಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ

ಬೆಂಗಳೂರು: ಬೆಂಗಳೂರು ನಗರ ರೈಲ್ವೆ ನಿಲ್ದಾಣಕ್ಕೆ ಅಧಿಕೃತವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಎಂದು ಮರುನಾಮ ಮಾಡಲಾಗಿದೆ. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಇಂದು ಹೆಸರನ್ನು ಅಧಿಕೃತವಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವರಾದ ಅನಂತ್ ಕುಮಾರ್, ವೆಂಕಯ್ಯ ನಾಯ್ಡು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಚಿವರು ಯಲಹಂಕ-ಪೆನುಕೊಂಡ, ಅರಸೀಕೆರೆ-ತುಮಕೂರು ಮತ್ತು ಹುಬ್ಬಳ್ಳಿ-ಚಿಕ್ಜಾಜೂರು ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಕಿರಾಣಿ ವ್ಯಾಪಾರಿ ಮಗ ಯುಪಿಎಸ್ಸಿ ಸಾಧಕ ಕಿಶೋರ್

Image
ಬಾಗಲಕೋಟೆ, ಮೇ 12: ಜಮಖಂಡಿ ತಾಲೂಕಿನ ಬನಹಟ್ಟಿ- ರಬಕವಿ ನಗರದ ಕಿರಾಣಿ ವ್ಯಾಪಾರಸ್ಥ ಬದ್ರಿನಾರಾಯಣ ಭಟ್ಟಡ ಹಾಗು ಉಮಾ ದಂಪತಿ ಮಗ ಕಿಶೋರ ಈಗ ಬಾಗಲಕೋಟೆ ಜಿಲ್ಲೆಯ ಹೆಮ್ಮೆಯ ಪುತ್ರನಾಗಿ ಹೆಸರು ಗಳಿಸಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ವು ಮಂಗಳವಾರ ಪ್ರಕಟಿಸಿದ ಫಲಿತಾಂಶದಲ್ಲಿ ರಾಷ್ಟ್ರಕ್ಕೆ 808ನೇ rank ಪಡೆಯುವದರ ಮೂಲಕ ಸಾಧನೆ ಮಾಡಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಜತೆ ಮಾತನಾಡಿದ ಕಿಶೋರ, ಕಳೆದ ವರ್ಷವು ಈ ಪರೀಕ್ಷೆಯನ್ನು ಎದುರಿಸಿದ್ದೆ, ಇದು ನನ್ನ ಎರಡನೇಯ ಪ್ರಯತ್ನ ಈ ಭಾರಿ 808 ನೇ ಸ್ಥಾನ ಪಡೆದುಕೊಂಡಿದ್ದೇನೆ. ಫಲಿತಾಂಶವನ್ನು ಕೇಳಿ ತುಂಬಾ ಸಂತೋಷವಾಗಿದೆ. ಇದು ನನಗೆ ತೃಪ್ತಿ ನೀಡಿದೆ ಮುಂದಿನ ಸಲ ಹೆಚ್ಚಿನ ಶ್ರೇಯಾಂಕ ಸ್ಥಾನ ಇನ್ನಷ್ಟು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಪ್ರತಿ ದಿನ 10 ಗಂಟೆಗಳ ಕಾಲ ಓದುತ್ತಿದ್ದೆ, ಭೂಗೋಳ ಶಾಸ್ತ್ರ ನನ್ನ ವಿಷಯವಾಗಿತ್ತು ಎಂದು ತಿಳಿಸಿದರು. ಕಿಶೋರ ಪ್ರತಿಭಾವಂತ: ಇವರು ಆರಂಭದಿಂದಲೂ ಪ್ರತಿಭಾವಂತ ವಿದ್ಯಾರ್ಥಿ, ಎಸ್‍ಎಸ್‍ಎಲ್ಸಿ ಪರೀಕ್ಷೆಯಲ್ಲಿ ಶೇ.95.2 ಅಂಕಗಳೊಂದಿಗೆ ರಾಮಪೂರದ ಪೂರ್ಣಪ್ರಜ್ಞ ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದರು. ಕಿಶೋರ ಭಟ್ಟಡ ಬನಹಟ್ಟಿಯ ಎಸ್‍ಆರ್‍ಎ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದು ದ್ವಿತೀಯ ಪರೀಕ್ಷೆಯಲ್ಲಿ ಶೇ.91.83 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದರು. ನಂತರ ಸಿಇಟಿ ಪರೀಕ್ಷೆಯಲ್ಲಿ

ಯುಪಿಎಸ್ಸಿ ಫಲಿತಾಂಶ : ಕರ್ನಾಟಕದ ಗೌಡಗೆ 105ನೇ ಸ್ಥಾನ!;-

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ಪರೀಕ್ಷೆ 2015ಯ ಅಂತಿಮ ಫಲಿತಾಂಶ ಮಂಗಳವಾರ (ಮೇ 10) ಅಂದರೆ      ನಿನ್ನೆ ಸಂಜೆ ಪ್ರಕಟವಾಗಿದೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗಲು ಬಯಸಿರುವ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಿದೆ. ಟೀನಾ ಡಬಿ(0256747) ಪ್ರಥಮ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಅತಾರ್ ಉಲ್ ಶಫಿ ಖಾನ್(ರೋಲ್ ನಂಬರ್ 0058239), ಜಸ್ಮೀರ್ ಸಿಂಗ್ ಸಂಧು (0010512), ಆರ್ತಿಕಾ ಶುಕ್ಲಾ(0000123), ಶಶಾಂಕ್ ತ್ರಿಪಾಠಿ(0015876) ಮೊದಲ 5 ಸ್ಥಾನ ಗಳಿಸಿದ್ದಾರೆ. ಕರ್ನಾಟಕದ ಶ್ರೀನಿವಾಸ್ ಗೌಡ ಎ. ಆರ್ (0535527) ಅವರು 105ನೇ ಸ್ಥಾನ ಗಳಿಸಿದ್ದಾರೆ. ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಗಾಗಿ ನಡೆಯುವ ಈ ಪರೀಕ್ಷೆಗಳು ಪ್ರಿಮಿಲಿನರಿ, ಅಂತಿಮ ಹಾಗೂ ಸಂದರ್ಶನ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಸುಮಾರು 15.008 ಅಭ್ಯರ್ಥಿಗಳು ಅಂತಿಮ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದರು. ಅಂತಿಮ ಪರೀಕ್ಷಾ ಫಲಿತಾಂಶ www.upsc.gov.in ನಲ್ಲಿ ಪಡೆದುಕೊಳ್ಳಬಹುದು. ಕರ್ನಾಟಕದ ಅಭ್ಯರ್ಥಿಗಳ ಫಲಿತಾಂಶ; * ಶ್ರೀನಿವಾಸಗೌಡ 105 * ನಿವ್ಯಾ ಶೆಟ್ಟಿ 274 * ಪವನ್ ಕುಮಾರ್ ಗಿರಿಯಪ್ಪ 420 * ಪ್ರಮೋದ್ ನಾಯಕ್ 779 * ಡಿಎಲ್ ನಾಗೇಶ್ 782 * ಆಕಾಶ್ ಎಸ್ 959 * ಭೈರಪ್ಪ 1035

Linking Procedure: Adhar No. to Ration Card via SMS

Image

101 ಸರ್ವಜ್ಞನ ವಚನಗಳು:-

🌺 ಅಂತಿಕ್ಕು ಇಂತಿಕ್ಕು ಎಂತಿಕ್ಕು ಎನಬೇಡ ಚಿಂತೆಯಲಿ ದೇಹ ಬಡವಕ್ಕು ಶಿವ ತೋರಿದಂತಿಹುದೇ ಲೇಸು ಸರ್ವಜ್ಞ. 🌺 ಆದಿ ದೈವವನು ತಾ ಭೇದಿಸಲಿಕರಿಯದಲೆ ಹಾದಿಯಾ ಕಲ್ಲಿಗೆಡೆ ಮಾಡಿ ನಮಿಸುವಾ ಮಾದಿಗರ ನೋಡು ಸರ್ವಜ್ಞ. 🌺 ತನ್ನಲಿಹ ಲಿಂಗವನು ಮನ್ನಿಸಲಿಕರಿಯದಲೆ ಬಿನ್ನಣದಿ ಕಟೆದ ಪ್ರತಿಮೆಗಳಿಗೆರಗುವಾ ಅನ್ಯಾಯ ನೋಡು ಸರ್ವಜ್ಞ. 🌺 ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ ಉಣದಿಪ್ಪ ಲಿಂಗಕುಣಬಡಿಸಿ ಕೈ ಮುಗಿವ ಬಣಗುಗಳ ನೋಡು ಸರ್ವಜ್ಞ. 🌺 ಕಲ್ಲು ಕಲ್ಲನೆ ಒಟ್ಟಿ ಕಲ್ಲಿನಲೆ ಮನೆಕಟ್ಟಿ ಕಲ್ಲ ಮೇಲ್ಕಲ್ಲ ಕೊಳುವ ಮಾನವರೆಲ್ಲ ಕಲ್ಲಿನಂತಿಹರು ಸರ್ವಜ್ಞ. 🌺 ಇಂದ್ರನಾನೆಯನೇರಿ ಒಂದನೂ ಕೊಡಲರಿಯ ಚಂದ್ರಶೇಖರನು ಮುದಿಯೆತ್ತನೇರಿ ಬೇಕೆಂದುದನು ಕೊಡುವ ಸರ್ವಜ್ಞ. 🌺 ಲಿಂಗಕ್ಕೆ ಕಡೆ ಎಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ? ಲಿಂಗದೊಳು ಜಗವು ಅಡಗಿಹುದು ಲಿಂಗವನು ಹಿಂಗಿದವರುಂಟೇ ? ಸರ್ವಜ್ಞ. 🌺 ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ ತಾಗಿಲ್ಲ ತಪ್ಪು ತಡೆಯಿಲ್ಲ, ಲಿಂಗಕ್ಕೆ ದೇಗುಲವೇ ಇಲ್ಲ ಸರ್ವಜ್ಞ. 🌺 ಕಾಯ ಕಮಲವೇ ಸಜ್ಜೆ ಜೀವರತುನವೇ ಲಿಂಗ ಭಾವ ಪುಷ್ಪದಿಂ ಶಿವಪೂಜೆ ಮಾಡುವವನ ದೇವನೆಂದೆಂಬೆ ಸರ್ವಜ್ಞ. 🌺 ಓದು ವಾದಗಳೇಕೆ ? ಗಾದೆಯಾ ಮಾತೇಕೆ ? ವೇದ ಪುರಾಣ ತನಗೇಕೆ ? ಲಿಂಗದಾ ಹಾದಿಯರಿಯದವಗೆ ಸರ್ವಜ್ಞ. 🌺 ಊರಿಂಗೆ ದಾರಿಯನು ಆರು ತೋರಿದರೇನು ? ಸಾರಾಯದಾ