Posts

ಬ್ಯಾಂಕ್ ಹುದ್ದೆ ಆಕಾಂಕ್ಷಿಗಳಿಗೆ ಸೈಕೊಮೆಟ್ರಿಕ್ ಪರೀಕ್ಷೆ

ಬ್ಯಾಂಕ್ ಹುದ್ದೆ ಆಕಾಂಕ್ಷಿಗಳಿಗೆ ಸೈಕೊಮೆಟ್ರಿಕ್ ಪರೀಕ್ಷೆ May 26,2015, 04.59am ಹೊಸದಿಲ್ಲಿ: ಸಾರ್ವಜನಿಕ ಬ್ಯಾಂಕ್ಗಳ ಉನ್ನತ ಮಟ್ಟದ ಹುದ್ದೆಗಳ ಆಕಾಂಕ್ಷಿಗಳಿಗೆ ಎರಡು ವಿಧದ ಸೈಕೊ ಮೆಟ್ರಿಕ್ ಪರೀಕ್ಷೆಗಳನ್ನು ನಡೆಸಲು ಸರಕಾರ ನಿರ್ಧರಿಸಿದೆ. ವಸೂಲಾಗದ ಸಾಲಗಳ (ಅನುತ್ಪಾದಕ ಸಾಲ) ಹೊರೆಯಿಂದ ಬಳಲುತ್ತಿರುವ ಬ್ಯಾಂಕ್ಗಳ ನಾಯಕತ್ವವನ್ನು ಅಭ್ಯರ್ಥಿಗಳು ವಹಿಸಲು ಶಕ್ತರೇ ಎಂಬುದನ್ನು ಪರಿಶೀಲಿಸುವುದು ಇದರ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಅಭ್ಯರ್ಥಿಯ ಹಿನ್ನೆಲೆ ತಪಾಸಣೆ, ವೈಯಕ್ತಿಕ ಸಂದರ್ಶನ, ವಿಷಯ ಪರಿಣತಿಯ ಪರೀಕ್ಷೆಯ ಭಾಗವಾಗಿ ಸೈಕೊಮೆಟ್ರಿಕ್ ಕೂಡ ಇರಲಿದೆ. ಪಂಜಾಬ್ ನ್ಯಾಶನಲ್ ಬ್ಯಾಂಕಚ ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ 5 ಪಿಎಸ್ಯು ಬ್ಯಾಂಕ್ಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು 50 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸೈಕೊಮೆಟ್ರಿಕ್ ಪರೀಕ್ಷೆಯಲ್ಲಿ ಅಭ್ಯರ್ಥಿಯ ನಾಯಕತ್ವ ಗುಣ, ಸಾಂದರ್ಭಿಕ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ, ಒಟ್ಟಾರೆ ವ್ಯಕ್ತಿತ್ವದ ಪರೀಕ್ಷೆ ನಡೆಯಲಿದೆ.

Sad news. John F. Nash Jr., awarded the 1994 Prize in Economic Sciences, dies in car crash.(86yrs)

Image
By ERICA GOODE MAY 24, 2015 John F. Nash Jr., a mathematician who shared a Nobel Prize in 1994 for work that greatly extended the reach and power of modern economic theory and whose decades-long descent into severe mental illness and eventual recovery were the subject of a book and a 2001 film, both titled “A Beautiful Mind,” was killed, along with his wife, in a car crash on Saturday in New Jersey. He was 86. Dr. Nash, and his wife, Alicia, 82, were in a taxi on the New Jersey Turnpike when the driver lost control while trying to pass another car and hit a guard rail and another vehicle, said Sgt. Gregory Williams of the New Jersey State Police. The couple were ejected from the cab and pronounced dead at the scene. The taxi driver and the driver of the other car were treated for non-life threatening injuries. No criminal charges have been filed. Dr. Nash was widely regarded as one of the great mathematicians of the 20th century, known for th

ಜಾರಿದ ಶಿರ ಜೋಡಿಸಿದ ಡಾ|| ಅನಂತ ಕಾಮತ್

Image
ಲಂಡನ್: ಬೆನ್ನಹುರಿಯಿಂದ ಶಿರ (ತಲೆಬುರುಡೆ) ಜಾರಿ ಸಂಪರ್ಕ ಕಳೆದುಕೊಂಡರೆ ವ್ಯಕ್ತಿ ಬದುಕಿ ಉಳಿಯಲು ಸಾಧ್ಯವೇ? ಆದರೆ ಜಾರಿದ ಶಿರವನ್ನು ಮತ್ತೆ ಸ್ವಸ್ಥಾನದಲ್ಲಿ ಕೂರಿಸಿ ವ್ಯಕ್ತಿಯನ್ನು ಬದುಕಿಸಿದ ಅಪರೂಪದ ಸಾಧನೆಯನ್ನು ಭಾರತೀಯ ವೈದ್ಯರೊಬ್ಬರು ಮಾಡಿದ್ದಾರೆ. ಕಾರು ಅಪಘಾತದಲ್ಲಿ ಬೆನ್ನ ಹುರಿಯ ತುದಿಯಿಂದ ಜಾರಿದ ಬ್ರಿಟಿಷ್ ವ್ಯಕ್ತಿಯೊಬ್ಬನ ಶಿರವನ್ನು ಮತ್ತೆ ಸ್ವಸ್ಥಾನದಲ್ಲಿ ಕೂರಿಸಿ ಬದುಕಿಸಿದ ಸಾಧನೆಯನ್ನು ಮಿರರ್ ಆನ್​ಲೈನ್ ವರದಿ ಭಾನುವಾರ ಮಾಡಿದೆ. ಭಾರತೀಯ ಮೂಲದ ನರ ಶಸ್ತ್ರಚಿಕಿತ್ಸಕ (ನ್ಯೂರೋ ಸರ್ಜನ್) ಡಾ. ಅನಂತ ಕಾಮತ್ ಅವರು ಟೋನಿ ಕೋವನ್ ಅವರ ತಲೆಬುರುಡೆಯನ್ನು ಲೋಹದ ತಟ್ಟೆ ಮತ್ತು ಬೋಲ್ಟ್ ಬಳಸಿ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಬೆನ್ನ ಹುರಿ ಮೇಲಿನ ಸ್ವಸ್ಥಾನದಲ್ಲಿ ಕೂರಿಸಿದ್ದಾರೆ. ಗುಣಮುಖರಾಗುತ್ತಿರುವ ಕೋವನ್ ಶೀಘ್ರ ಮನೆಗೆ ತೆರಳುವ ಭರವಸೆಯಿಂದಿದ್ದಾರೆ. ನ್ಯೂಕ್ಯಾಸಲ್ ನಗರದ ನಿವಾಸಿ ಟೋನಿ ಕೋವನ್ ಕಳೆದ ವರ್ಷ ಸೆಪ್ಟೆಂಬರ್ 9ರಂದು ಅಪಘಾತಕ್ಕೆ ಈಡಾಗಿದ್ದರು. ಅವರ ಕಾರು ಸ್ಪೀಡ್ ಬಂಪ್​ಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಟೆಲಿಫೋನ್ ಕಂಬವೊಂದಕ್ಕೆ ಗುದ್ದಿತ್ತು. ಅಪಘಾತದಲ್ಲಿ ಗಾಯಗೊಂಡ ಟೋನಿ ಅವರ ಹೃದಯ ಬಡಿತ ನಿಂತು ಹೋಗಿತ್ತು. ಆಸ್ಪತ್ರೆಗೆ ಒಯ್ಯುವ ಮೊದಲು ಅವರಿಗೆ ಕೃತಕ ಶ್ವಾಸೋಚ್ಛಾಸ ಮಾಡಿಸಲಾಗಿತ್ತು. ಟೋವನ್ ಅ

Pry School Teacher for the 6-8 Classes Computer Literacy Ppr keys

126. Temporary 127. Semiconductor 128. 11 129. IBM 130. 1984 131. Second Generation computer 132. IBM 1401 133. Binary codes 134. Fetch 135. Application software 136. Paper tape 137. Execution time 138. Overlapped processing 139. Memory 140. Power PC 141. Input 142. Magnetic or Optical 143. CU, ALU & primary storage 144. 256 145. All the above 146. Data 147. Super computer 148. 1024MB 149. Monitor 150. Kannada Ganaka Parishat -(Siddu Sajjan, Vijayapur)

1129 posts callformed by UPSC

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) 2015ನೇ ಸಾಲಿನ ಸಿವಿಲ್ ಸರ್ವೀಸ್ ಮತ್ತು ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಪರೀಕ್ಷೆಗಳಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 1129 ಸ್ಥಾನಗಳ ಭರ್ತಿಗಾಗಿ ಪರೀಕ್ಷೆ ನಡೆಸಲಾಗುತ್ತದೆ. ನಾಗರಿಕ ಸೇವಾ ಪ್ರಿಲಿಮ್ಸ ಪರೀಕ್ಷೆಯಲ್ಲಿ ಸಿವಿಲ್ ಸರ್ವೀಸ್ ಆಪ್ಟಿಟ್ಯೂಡ್ ಟೆಸ್ಟ್(ಸಿಸ್ಯಾಟ್) ಮುಂದುವರಿಸಲಾಗುವುದು ಹಾಗೂ ಉತ್ತೀರ್ಣವಾಗಲು ಶೇ.33 ಅಂಕಗಳನ್ನು ಪಡೆಯಬೇಕೆಂದು ಸರ್ಕಾರ ಮೇ 13ರಂದು ಪ್ರಕಟಣೆ ಹೊರಡಿಸಿತ್ತು. 2011ರಲ್ಲಿ ಪ್ರಿಲಿಮ್ಸ್ ಪರೀಕ್ಷೆ ಬರೆದಿದ್ದವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಸಿಸ್ಯಾಟ್ಗೆ ಸಂಬಂಧಿಸಿದಂತೆ ಉಂಟಾದ ಗೊಂದಲಗಳ ಕಾರಣದಿಂದಾಗಿ ಮೇ 16ರಂದು ಪ್ರಕಟವಾಗಬೇಕಿದ್ದ ಪರೀಕ್ಷಾ ಪ್ರಕಟಣೆಯನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿತ್ತು. ಮೂರು ಹಂತಗಳಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ನಡೆಸಲಾಗುತ್ತದೆ. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನಗಳಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ರ್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಈ ಮೂಲಕ ಐಎಎಸ್, ಐಪಿಎಸ್, ಐಎಫ್ಎಸ್ ಹಾಗೂ ಇತರೆ ಸೇವೆಗಳ ಸ್ಥಾನಗಳಿಗೆ ನೇಮಕಾತಿ ನಡೆಯುತ್ತದೆ. *** ಒಟ್ಟು ಸ್ಥಾನ: 1129 ಅರ್ಜಿ ಸಲ್ಲಿಕೆಗೆ ಕೊನೇ ದಿನ: ಜೂನ್ 19 ಪ್ರಿಲಿಮ್ಸ್ ಪರೀಕ್ಷೆ: ಆಗಸ್ಟ್ 23 ವೆಬ್ಸೈಟ್: www.upsc.gov.in *** ಅರ್ಜಿ ಶು

ವಿಶ್ವದ ದೊಡ್ಡ ಹೋಟೆಲ್ ಮೆಕ್ಕಾದಲ್ಲಿ ನಿರ್ಮಾಣವಾಗಲಿರುವ ‘ಅರ್ಬಾಜ್ ಕುದಾಯ್’ ಹೋಟೆಲ್ ರಿಯಾದ್ (ಸೌದಿ ಅರೇಬಿಯಾ):

Image
ಪವಿತ್ರ ಮೆಕ್ಕಾಗೆ ಬರುವ ಲಕ್ಷಾಂತರ ಪ್ರವಾ ಸಿಗರ ಅನುಕೂಲಕ್ಕಾಗಿ ಸೌದಿ ಅರೇಬಿಯಾ ಸರ್ಕಾರ ₹22, 300 ಕೋಟಿ ವೆಚ್ಚದಲ್ಲಿ ವಿಶ್ವದಲ್ಲಿಯೇ ಅತಿದೊಡ್ಡ ಹೋಟೆಲ್ ನಿರ್ಮಿಸಲು ಮುಂದಡಿ ಇಟ್ಟಿದೆ. 4 ಹೆಲಿಪ್ಯಾಡ್, 10 ಸಾವಿರ ಕೊಠಡಿ, 70 ರೆಸ್ಟೋರೆಂಟ್ ಉಳ್ಳ 'ಅರ್ಬಾಜ್ ಕುದಾಯ್' ಹೋಟೆಲ್ ನಿರ್ಮಾಣ ಕಾರ್ಯವು ಮೆಕ್ಕಾದಲ್ಲಿ ಆರಂಭವಾಗಿದ್ದು, 2017ರ ಸುಮಾರಿಗೆ ಬಳಕೆಗೆ ಸಿಗುವ ಅಂದಾಜು ಇದೆ. ವಿಶ್ವದ ಅತ್ಯಂತ ಎತ್ತರದ ಕಟ್ಟಡಗಳ ಪೈಕಿ ಮೊದಲನೇ ಸ್ಥಾನದಲ್ಲಿರುವ ಬುರ್ಜ್ ಖಲೀಫಾವನ್ನು ಈ ಹೋಟೆಲ್ ಮೀರಿಸಲಿರುವುದು ಇದರ ವಿಶೇಷ. 14 ಲಕ್ಷ ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಈ ಹೋಟೆಲ್ನಲ್ಲಿ 44 ಅಂತಸ್ತುಗಳು ಇದ್ದು, 12 ಗೋಪುರಗಳನ್ನು ಒಳಗೊಳ್ಳಲಿದೆ. ಸೌದಿಯ ರಾಜಮನೆತನಕ್ಕಾಗಿಯೇ ವಿಶೇಷ ಕೊಠಡಿಗಳನ್ನು ವಿನ್ಯಾಸ ಮಾಡಲಾಗುತ್ತಿದ್ದು, ಪ್ರಧಾನ ಗೋಪುರದ ಗುಮ್ಮಟವು ವಿಶ್ವದಲ್ಲಿಯೇ ದೊಡ್ಡದು ಎನ್ನಲಾಗುತ್ತಿದೆ. ಇದು ಕೇವಲ ಹೋಟೆಲ್ಗೆ ಮಾತ್ರ ಸೀಮಿತವಾಗಿಲ್ಲ. ವಿಶಾಲ ವೇದಿಕೆ ಒಳ ಗೊಂಡ ವಾಣಿಜ್ಯ ಸಂಕೀರ್ಣ, ಬಸ್ ನಿಲ್ದಾಣ, ಶಾಪಿಂಗ್ ಮಾಲ್ ಹಾಗೂ ಪುಡ್ ಕೋರ್ಟ್ಗಳೂ 'ಅರ್ಬಾಜ್ ಕುದಾಯ್'ನಲ್ಲಿರುತ್ತದೆ. ಲಾಸ್ ವೆಗಾಸ್ ನಲ್ಲಿರುವ ದಿ ವೆನಿಷಿಯನ್ ಹಾಗೂ ದಿ ಪಲಾಝೊ ಹೋಟೆಲ್ಗಳು ವಿಶ್ವದಲ್ಲೇ ದೊಡ್ಡವು ಎಂದು ಹೆಗ್ಗಳಿಗೆ ಕಾರಣವಾಗಿದ್ದವು. ಈಗಾಗಲೇ ಸೌದಿ ಸರ್ಕಾರದ ಹಣ

ಗ್ರಾ.ಪಂ.ಚುನಾವಣೆಯಲ್ಲಿ ಎಡಗೈ ಹೆಬ್ಬೆರಳಗೆ ಶಾಯಿ ಹಾಕಲು ರಾಜ್ಯ ಚುನಾವಣೆ ಆಯೋಗ ಸೂಚನೆ.

Image
ಗ್ರಾ.ಪಂ.ಚುನಾವಣೆಯಲ್ಲಿ ಎಡಗೈ ಹೆಬ್ಬೆರಳಗೆ ಶಾಯಿ ಹಾಕಲು ರಾಜ್ಯ ಚುನಾವಣೆ ಆಯೋಗ ಸೂಚನೆ.

ಬೆಂಗಳೂರಿನ ಛಾಯಾಚಿತ್ರಗಾರ ಹ ಸ ಬ್ಯಾಕೋಡರಿಗೆ ರಾಷ್ಟ್ರೀಯ ಪ್ರಶಸ್ತಿ

Image
ಕೆ.ಆರ್.ಪುರ,ಮೇ23-ಪಶ್ಚಿಮ ಬಂಗಾಳದ ಬರೊಬಿಶಾದಲ್ಲಿನ ನಡೆದ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಬೆಂಗಳೂರಿನ ಹ.ಸ. ಬ್ಯಾಕೋಡ ಅವರಿಗೆ ಎರಡು ಪ್ರಶಸ್ತಿಗಳು ಲಭಿಸಿವೆ. ವನ್ಯಜೀವಿ ವಿಭಾಗದಲ್ಲಿ ಬೆಸ್ಟ್ ಬರ್ಡ್ ಅವಾರ್ಡ್ ಜೇನುಕುಟುಕ ಹಕ್ಕಿಗಳ ಮಿಲನ ಚಿತ್ರಕ್ಕೆ ವಿಶೇಷ ಪ್ರಶಸ್ತಿ ಲಭಿಸಿದೆ. ಕಪ್ಪುಬಿಳುಪು (ಬ್ಲ್ಯಾಕ್ ಆಂಡ್ ವೈಟ್) ವಿಭಾಗದ ಮತ್ತೊಂದು ಸ್ಪರ್ಧೆಯಲ್ಲಿ ಅಂತಿಮ ಸ್ಪರ್ಶ ಶೀರ್ಷಿಕೆಯ ಚಿತ್ರಕ್ಕೆ ಸರ್ಟಿಫಿಕೇಟ್ ಆಫ್ ಮೆರಿಟ್ ಪ್ರಶಸ್ತಿ ಲಭಿಸಿದೆ. ಬರೊಬಿಶಾದ ಷಟರ್ ಸ್ಪೀಡ್ ಫೋಟೋ ಕ್ಲಬ್ ಸಂಸ್ಥೆ ಏರ್ಪಡಿಸಿದ್ದ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗೆ ಎರಡು ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳು ಬಂದಿದ್ದವು. ಅದರಲ್ಲಿ ಹ.ಸ. ಬ್ಯಾಕೋಡ ಅವರ ಒಟ್ಟು ಹತ್ತು ಛಾಯಾಚಿತ್ರಗಳು ರಾಷ್ಟ್ರೀಯ ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಮುಂದಿನ ಜೂನ್ ತಿಂಗಳ ಮೊದಲ ವಾರದಲ್ಲಿ ಬರೊಬಿಶಾದಲ್ಲಿ ಪ್ರಶಸ್ತಿ ವಿಜೇತ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಅಂತಾರಾಷ್ಟ್ರೀಯ ಛಾಯಾಗ್ರಾಹಕರಾದ ಸುಬ್ರತಾ ದಾಸ್, ಅಭಿಜೀತ್ ದೇ, ಸಂತೋಷ ಕುಮಾರ್ ಜಾನಾ ಹಾಗೂ ಅಮಿಥಾಬ್ ಸಿಲ್ ಸ್ಪರ್ಧೆಯ ನಿರ್ಣಾಯಕರಾಗಿದ್ದರು.

ದೀಪಾ ಕುಮಾರಿ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿಯಾಗಿ ಬಡ್ತಿ

Image
ಅಂತರರಾಷ್ಟ್ರೀಯ ಹಾಕಿ ಅಂಪೈರ್ ನವದೆಹಲಿ (ಐಎಎನ್ಎಸ್): ಭಾರತದ ಹಾಕಿ ಅಂಪೈರ್ ದೀಪಾ ಕುಮಾರಿ ಅವರಿಗೆ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿಯಾಗಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್ಐಎಚ್) ಅಂಪೈರ್ ಸಮಿತಿ ಬಡ್ತಿ ನೀಡಿದೆ. ಈ ಬೆನ್ನಲ್ಲೇ ದೀಪಾ ಅವರಿಗೆ ಹಾಕಿ ಇಂಡಿಯಾ ಅಭಿನಂದನೆ ತಿಳಿಸಿದೆ. 'ಭಾರತದ ಹಾಕಿಗೆ ಇದೊಂದು ಹೆಮ್ಮೆಯ ದಿನವಾಗಿದೆ. ದೀಪಾ ಅವರ ಈ ಸಾಧನೆಗೆ ಹಾಕಿ ಇಂಡಿಯಾ ಅವರನ್ನು ಅಭಿನಂದಿಸಲು ಬಯಸುತ್ತದೆ' ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮುಷ್ತಾಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾರಿವರು ದೀಪಾ ಕುಮಾರಿ: ದೀಪಾ ಅವರು ದೆಹಲಿಯವರು. 2010ರಿಂದ ವೃತ್ತಿ ಜೀವನ ಆರಂಭಿಸಿದ್ದ ದೀಪಾ, ಸಾಕಷ್ಟು ದೇಶಿ ಟೂರ್ನಿಗಳಲ್ಲಿ ತೀರ್ಪುಗಾರ್ತಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಭಾರತೀಯ ಬಾಲಕನಿಗೆ ಸಿಕ್ತು 11 ವರ್ಷಕ್ಕೆ ಪದವಿ !

Image
ಭಾರತೀಯ ಬಾಲಕನಿಗೆ ಸಿಕ್ತು 11 ವರ್ಷಕ್ಕೆ ಪದವಿ ! (PSGadyal Teacher Vijayapur) ಲಾಸ್‌ ಎಂಜಲೀಸ್ (ಪಿಟಿಐ): ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ 11 ವರ್ಷದ ಬಾಲಕ ಅಮೆರಿಕದ ವಿಶ್ವವಿದ್ಯಾಲಯವೊಂದರಿಂದ ಪದವಿ ಪಡೆದಿದ್ದಾರೆ. ಕ್ಯಾಲಿಪೊರ್ನಿಯಾದ ತಾನಿಷ್ಕ್‌ ಅಬ್ರಹಾಂ ಅತಿ ಕಿರಿಯ ವಯಸ್ಸಿಗೆ ಪದವಿ ಪಡೆದ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿನ ಅಮೆರಿಕನ್‌ ರಿವರ್‌ ಕಾಲೇಜಿನಲ್ಲಿ ಅಬ್ರಹಾಂ ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 1800 ವಿದ್ಯಾರ್ಥಿಗಳ ಜತೆ ಅಬ್ರಹಾಂ ತೇರ್ಗಡೆಯಾಗಿದ್ದಾರೆ. ಓದಿನಲ್ಲಿ ಸದಾ ಮುಂದಿರುವ ಅಬ್ರಹಾಂ ಗಣಿತ, ವಿಜ್ಞಾನ ಮತ್ತು ವಿದೇಶಿ ಭಾಷೆಗಳ ಅಧ್ಯಯನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕನ್‌ ರಿವರ್‌ ಕಾಲೇಜಿನ ಇತಿಹಾಸದಲ್ಲೇ ಅಬ್ರಹಾಂ ಅತಿ ಕಿರಿಯ ವಯಸ್ಸಿಗೆ ಪದವಿ ಪಡೆದಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಅಬ್ರಹಾಂ ಅವರ ಸಾಧನೆಗೆ  ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈದ್ಯ ಅಥವಾ ವೈದ್ಯಕೀಯ ಸಂಶೋಧಕನಾಗುವ ಗುರಿಯನ್ನು ಹೊಂದಿರುವ ಅಬ್ರಹಾಂ ಅಮೆರಿಕದ ಅಧ್ಯಕ್ಷನಾಗುವ ಕನಸು ಕಟ್ಟಿಕೊಂಡಿದ್ದಾರೆ.

ಶತಮಾನದ ಬಳಿಕ ಸಿಂಧದುರ್ಗ ಬಳಿ ಕಂಡ ನೀಲಿ ತಿಮಿಂಗಿಲ(1914-2015)

Image
ಮುಂಬೈ (ಪಿಟಿಐ): ಮಹಾರಾಷ್ಟ್ರದ ಸಿಂಧದುರ್ಗ ಕರಾವಳಿಯಲ್ಲಿ ಅಪರೂಪದ ಜೋಡಿ ನೀಲಿ ತಿಮಿಂಗಿಲಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಕಳೆದೊಂದು ಶತಮಾನದಲ್ಲಿ ಇದೇ ಮೊದಲ ಬಾರಿಗೆ ಈ ಬಗೆಯ ತಿಮಿಂಗಿಲಗಳು ಇಲ್ಲಿ ಕಂಡುಬಂದಿವೆ. ಇದು ತಾಯಿ ಮತ್ತು ಮರಿ ಇರುವ ನೀಲಿ ತಿಮಿಂಗಿಲಗಳಾಗಿವೆ ಎಂದು ಅರಣ್ಯ ಮುಖ್ಯ ಸಂರಕ್ಷಕ ಎನ್. ವಾಸುದೇವನ್ ತಿಳಿಸಿದ್ದಾರೆ. ಮಹಾರಾಷ್ಟ್ರ ಕರಾವಳಿಯಲ್ಲಿ ಕಳೆದ ನೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಜಾತಿ ತಿಮಿಂಗಿಲ ಪತ್ತೆಯಾಗಿವೆ. 1914ರಲ್ಲಿ ನೀಲಿ ತಿಮಿಂಗಿಲಗಳು ಈ ಪ್ರದೇಶದಲ್ಲಿ ಕೊನೆಯ ಬಾರಿ ಕಂಡುಬಂದಿದ್ದವು. ಮಾರ್ಚ್ನಿಂದ ಮೇ ತಿಂಗಳ ಅವಧಿಯಲ್ಲಿ ಸಿಂಧುದುರ್ಗ ಕರಾವಳಿಯ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಸಂಶೋಧಕರ ತಂಡಕ್ಕೆ ತಿಮಿಂಗಿಲಗಳು ಗೋಚರಿಸಿವೆ. ಈ ಸಮಯದಲ್ಲಿ ನಾಲ್ಕು ಬ್ರೂಡಸ್ ಜಾತಿಯ ತಿಮಿಂಗಿಲಗಳೂ ಪತ್ತೆಯಾಗಿವೆ. ಸಿಂಧುದುರ್ಗ ಕರಾವಳಿಯಲ್ಲಿ ಆರು ತಿಂಗಳಿನಿಂದ ತಿಮಿಂಗಿಲ ಸಂಖ್ಯೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ತಂಡವು ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸಂಶೋಧನೆ ನಡೆಸುತ್ತಿದೆ.

ಪರಿಸರ ಪ್ರಜಾಪ್ರಭುತ್ವ ಸೂಚ್ಯಂಕ: ಭಾರತಕ್ಕೆ 24ನೇ ಸ್ಥಾನ

ವಾಷಿಂಗ್ಟನ್ (ಪಿಟಿಐ): ಪರಿಸರ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 70 ರಾಷ್ಟ್ರಗಳ ಪೈಕಿ ಭಾರತ 24ನೇ ಸ್ಥಾನ ಪಡೆದಿದೆ. ಲಿಥುವಿನಿಯಾ ಅಗ್ರಸ್ಥಾನದಲ್ಲಿದೆ. ಪರಿಸರ ಸಂಬಂಧಿತ ನಿರ್ಧಾರಕ ವಿಷಯಗಳಲ್ಲಿ ಪಾದರ್ಶಕತೆ, ಉತ್ತರದಾಯಿತ್ವ ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆ ಉತ್ತೇಜಿಸುವ ಕಾಯ್ದೆಗಳ ಅನುಷ್ಠಾನದಲ್ಲಿನ ರಾಷ್ಟ್ರಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡಿದೆ. ವಾಷಿಂಗ್ಟನ್ ಮೂಲದ ವರ್ಲ್ಡ್ ರಿಸೋರ್ಸಿಸ್ ಇನ್ಸ್ಟಿಟ್ಯೂಟ್ (ಡಬ್ಲ್ಯುಆರ್ಐ) ಹಾಗೂ ಎಕ್ಸೆಸ್ ಇನಿಶಿಯೇಷಿಟಿವ್ ಈ ಪಟ್ಟಿ ಬಿಡುಗಡೆಗೊಳಿಸಿದೆ. ಅಮೆರಿಕ, ದಕ್ಷಿಣ ಆಫ್ರಿಕಾ ಹಾಗು ಇಂಗ್ಲೆಂಡ್ ಮೊದಲ ಹತ್ತರಲ್ಲಿ ಸ್ಥಾನ ಪಡೆದಿವೆ. 70 ರಾಷ್ಟ್ರಗಳಲ್ಲಿ ಪರಿಸರ ಪ್ರಜಾಪ್ರಭುತ್ವವು 75 ಕಾನೂನು ಬದ್ಧ ಹಾಗೂ 24 ಅಭ್ಯಾಸ ಸೂಚನೆಗಳು ಸೇರಿದಂತೆ ಅಂತರರಾಷ್ಟ್ರೀಯ ಗುಣಮಟ್ಟಗಳಿಗೆ ಅನುಗುಣವಾಗಿದೆ ಎಂದು ವರದಿ ತಿಳಿಸಿದೆ. ಅಲ್ಲದೇ, ಶೇಕಡ 93ರಷ್ಟು ರಾಷ್ಟ್ರಗಳು ಪರಿಸರ ಮಾಹಿತಿ ಹಕ್ಕಿನ ಅವಕಾಶ ಕಲ್ಪಿಸಿವೆ

ಬ್ಯಾಡ್ಮಿಂಟನ್: ಅಗ್ರಸ್ಥಾನಕ್ಕೆ ಮರಳಿದ ಸೈನಾ

ಹೈದರಾಬಾದ್ (ಪಿಟಿಐ): ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಗುರುವಾರ ಬಿಡುಗಡೆಗೊಳಿಸಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಹೈದರಾಬಾದ್ನ ಈ ಆಟಗಾರ್ತಿ ಕಳೆದ ತಿಂಗಳು ಮೊದಲ ಬಾರಿಗೆ ಅಗ್ರ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಅವರ ರ್ಯಾಂಕ್ನಲ್ಲಿ ಕುಸಿತ ಕಂಡಿತ್ತು. ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ, ಗುರುವಾರ ಮತ್ತೆ ಮೊದಲ ಸ್ಥಾನಕ್ಕೆ ಮರಳಿದ್ದಾರೆ. ಕಳೆದ ವಾರ ನಡೆದ ಸುದೀರಮನ್ ಕಪ್ನಲ್ಲಿ ತೋರಿದ ಉತ್ತಮ ಪ್ರದರ್ಶನ ಅಗ್ರಸ್ಥಾನಕ್ಕೆ ಮರಳುವಲ್ಲಿ ಸೈನಾ ಅವರಿಗೆ ನೆರವಾಗಿದೆ. ಇದೇ ತಿಂಗಳ 26ರಿಂದ ಆಸ್ಟ್ರೇಲಿಯಾ ಓಪನ್ ಟೂರ್ನಿ ಆರಂಭಗೊಳ್ಳಲಿದ್ದು, ಅಗ್ರಪಟ್ಟವು ಸೈನಾ ಅವರ ವಿಶ್ವಾಸ ಹೆಚ್ಚಿಸಿದೆ. ಈ ನಡುವೆ, ಉದಯೋನ್ಮುಖ ಆಟಗಾರ್ತಿ ಪಿ.ವಿ.ಸಿಂಧು ಅವರು ಒಂದು ಸ್ಥಾನ ಕುಸಿದು 12ನೇ ಸ್ಥಾನದಲ್ಲಿದ್ದಾರೆ. ಇನ್ನು, ಪುರುಷರ ವಿಭಾಗದಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಗಿನ್ನಿಸ್ ದಾಖಲೆ ಮುರಿದ ಒಬಾಮಾ ಟ್ವಿಟರ್ ಖಾತೆ

ಏಜೆನ್ಸೀಸ್ | May 20, 2015, 12.52Pm ವಾಷಿಂಗ್ಟನ್: ಅತಿ ಕಡಿಮೆ ಅವಧಿಯಲ್ಲಿ ಟ್ವಿಟರ್ನಲ್ಲಿ 10ಲಕ್ಷಕ್ಕೂ ಹೆಚ್ಚು ಫಾಲೋಯರ್ಗಳನ್ನು ಹೊಂದುವ ಮೂಲಕ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ. ಸ್ವಂತ ಟ್ವಿಟರ್ ಖಾತೆ ತೆರೆದ ಐದು ತಾಸಿನೊಳಗೆ ಅವರ ಫಾಲೋಯರ್ಗಳ ಸಂಖ್ಯೆ 10 ಲಕ್ಷ ದಾಟಿದ್ದು, ಪ್ರೆಸಿಡೆಂಟ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಬರಾಕ್ ಒಬಾಮಾ ಅಥವಾ @POTUS ಖಾತೆ ಮೂಲಕ ಒಬಾಮಾ ಜನರೊಂದಿಗೆ ನೇರವಾಗಿ ಸಂಪರ್ಕದಲ್ಲಿರಲಿದ್ದಾರೆ ಎಂದು ಗಿನ್ನಿಸ್ ವಿಶ್ವ ದಾಖಲೆ ತಿಳಿಸಿದೆ. 2016ರಲ್ಲಿ ಮುಂದಿನ ಅಧ್ಯಕ್ಷರಿಗೆ ಈ ಖಾತೆ ವರ್ಗಾವಣೆ ಆಗಲಿದೆ. ಟ್ವಿಟರ್ ಖಾತೆ ತೆರೆದ ಕೆಲವೇ ತಾಸುಗಳಲ್ಲಿ ವಿಶ್ವದ ನಾನಾ ಭಾಗಗಳ ಜನರು ಒಬಾಮಾ ಅವರನ್ನು ಫಾಲೋ ಮಾಡಲು ಆರಂಭಿಸಿದ ಗ್ರಾಫಿಕ್ಅನ್ನು ಟ್ವಿಟರ್ ಬಿಡುಗಡೆ ಮಾಡಿದೆ. 2014 ಏಪ್ರಿಲ್ನಲ್ಲಿ ಟ್ವಿಟರ್ಗೆ ಎಂಟ್ರಿ ನೀಡಿದ ನಟ ರಾಬರ್ಟ್ ಡೌನಿ ಜೂನಿಯರ್ 24 ತಾಸಿಗೂ ಕಡಿಮೆ ಅವಧಿಯಲ್ಲಿ 10 ಲಕ್ಷ ಫಾಲೋಯರ್ಗಳನ್ನು ಹೊಂದುವ ಮೂಲಕ ಈ ಮೊದಲು ಗಿನ್ನಿಸ್ ದಾಖಲೆ ಮಾಡಿದ್ದರು. ಒಬಾಮಾ ಈಗ ಹಿಂದಿನ ದಾಖಲೆ ಮುರಿದಿದ್ದಾರೆ.

ಗ್ರಾಮ ಪಂಚಾಯತ ಚುನಾವಣೆ ನಿಮಿತ್ತ ಗುಲಬರ್ಗಾ ವಿಶ್ವ ವಿದ್ಯಾಲಯದ ಪದವಿ ಪರೀಕ್ಷೆಗಳ ಮುಂದುಡಿದ ಕುರಿತು. ಸೂತ್ತೊಲೆ. 26/05/15 ರ ಬದಲು 08/06/15ಕ್ಕೆ ಪ್ರಾರಂಭ.

Image
ಗ್ರಾಮ ಪಂಚಾಯತ ಚುನಾವಣೆ ನಿಮಿತ್ತ ಗುಲಬರ್ಗಾ ವಿಶ್ವ ವಿದ್ಯಾಲಯದ ಪದವಿ ಪರೀಕ್ಷೆಗಳ ಮುಂದುಡಿದ ಕುರಿತು. ಸೂತ್ತೊಲೆ. 26/05/15 ರ ಬದಲು 08/06/15ಕ್ಕೆ ಪ್ರಾರಂಭ.

Admission Notification : First Year Diploma (2015-16 )of Dpt of Technical Edn

Image

New service tax rate of 14% to come into effect from June 1

PTI | May 19, 2015, 10.56PM IST -------------------------------- The new rate of 14 per cent announced by finance minister Arun Jaitley in his Budget for 2015-16 would come into effect from June 1. Text resize:A A A NEW DELHI: The new service tax rate of 14 per cent will come into effect from June 1, government on Tuesday said, in a move that will make eating out in restaurants, insurance and phone bills expensive, among many other things. The service tax is currently levied at the rate 12.36 per cent including education cess. Top official sources said that the new rate of 14 per cent announced by finance minister Arun Jaitley in his Budget for 2015-16 would come into effect from June 1. In his Budget speech, Jaitley had said that to facilitate a smooth transition to levy of tax on services by both the Centre and the States, "it is proposed to increase the present rate" of service tax plus education cess from 12.36 per cent to a c

ಬಡತನದಲ್ಲಿಯೂ ಅರಳಿದ ಹೂವು: SSLC 2015 : ವಿನಾಯಕ ಈಶ್ವರ ಕರಲಟ್ಟಿ SRA HIGHSCHOOL BANAHATTI (Dist : Bagalkot) ಗೆ ಪ್ರಥಮ(606/625)

Image

World's first underwater tennis court to be built in Dubai

Image
UdayavaniEnglish.com, May 19, 2015, 6:48 PM IST Dubai:  Dubai, which boasts of the world's highest tennis court, may also become home to the first underwater tennis centre where spectators can watch games from below or above the sea life through a massive glass dome.   Krzysztof Kotala, a Polish architect who owns a studio in Warsaw, is currently seeking investment from local players to make the ambitious project a reality.   Interestingly, the proposed location for the project (arguably one of the world's lowest tennis courts) is just next door to the highest tennis court atop the Burj al Arab skyscraper in Dubai.   "There is not an investor but I would like to get interest (from them) as I think it is a good idea," Kotala, 30, was quoted as saying by a local magazine.   When asked why he chose Dubai for his project, Kotala said the Gulf city had a rich tradition of tennis.   "This will be something original. This should be somewhere wher

ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ 2015 ಮತದಾನ ದಿನದಂದು ಚುನಾವಣೆ ನಡೆಯುವ ಗ್ರಾಮೀಣ ಪ್ರದೇಶಗಳಲ್ಲಿ ರಜೆ ಘೋಷಿಸುವ ಬಗ್ಗೆ.

Image
 ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ 2015 ಮತದಾನ ದಿನದಂದು ಚುನಾವಣೆ ನಡೆಯುವ ಗ್ರಾಮೀಣ ಪ್ರದೇಶಗಳಲ್ಲಿ ರಜೆ ಘೋಷಿಸುವ ಬಗ್ಗೆ.